Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಪ್ರೈವೆಟ್ ಲಿ. ತನ್ನ ಸಿ.ಎಸ್.ಆರ್. 5ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿದ್ದು, ನಾಳೆ ದಿ.25 ಶನಿವಾರ ಸಚಿವ ಎಂ.ಬಿ.ಪಾಟೀಲ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಮಮದಾಪುರ ಗ್ರಾಮದಲ್ಲಿ ರೂ. 3.5 ಕೋಟಿ ಅನುದಾನದಲ್ಲಿ ಸರಕಾರಿ ಪದವಿ ಕಾಲೇಜು ಕಟ್ಟಡವು ಒಟ್ಟು 12 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ 8 ತರಗತಿ ಕೊಠಡಿಗಳು, ಸಿಬ್ಬಂದಿಗೆ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಪ್ರಾಚಾರ್ಯರ ಮತ್ತು ಶಿಕ್ಷಕರ ಕೋಣೆಗಳನ್ನು ಹೊಂದಿವೆ ಹಾಗೂ ಕಣಮುಚನಾಳ ಗ್ರಾಮದಲ್ಲಿ ರೂ. 1.5 ಕೋಟಿ ಅನುದಾನದಲ್ಲಿ ನಿರ್ಮಾಣವಾಗುವ ಸರಕಾರಿ ಪ್ರೌಢ ಶಾಲೆ ನೂತನ ಕಟ್ಟಡವು ಎರಡು ತರಗತಿ ಕೋಣೆಗಳು, ಸಿಬ್ಬಂದಿ ಕೋಣೆ, ಊಟದ ಕೊಠಡಿ, ಅಡುಗೆ ಕೋಣೆ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡಿವೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಇತ್ತೀಚೆಗೆ ನಿವೃತ್ತಿಯಾಗಿ ಸಂತಸದ ನಿವೃತ್ತಿ ಜೀವನವನ್ನು ಕಳೆಯುತ್ತಿರುವ ಚಿಕ್ಕಮ್ಮನಂತಿರುವ ಹಿರಿಯ ಸ್ನೇಹಿತರಿಗೆ ಕರೆ ಮಾಡಿ ಹೇಗಿದೆ ನಿವೃತ್ತಿಯ ಜೀವನ? ಎಂದು ಕೇಳಿದೆ.ಇದುವರೆಗೂ ತಂದೆ ತಾಯಿಗಾಗಿ, ಒಡಹುಟ್ಟಿದವರಿಗಾಗಿ, ಗಂಡನಿಗಾಗಿ,ಮಕ್ಕಳಿಗಾಗಿ ಮತ್ತು ಸ್ನೇಹಿತರಿಗಾಗಿ ನನ್ನ ಬದುಕನ್ನು ಮುಡುಪಾಗಿಟ್ಟ ನಾನು ಪ್ರಯತ್ನಪೂರ್ವಕವಾಗಿ ನನ್ನನ್ನು ಪ್ರೀತಿಸಲು ಆರಂಭಿಸಿರುವೆ. ಕುಟುಂಬದ ಸದಸ್ಯರೆಲ್ಲರ ಬೇಕು ಬೇಡಗಳ ಹೊರೆಯನ್ನು ನನ್ನ ಹೆಗಲ ಮೇಲೆ ಹೊರಲುನಾನೇನು ಗೋವರ್ಧನಧಾರಿಯೇ? ಎಂಬ ಅರಿವು ನನಗೆ ಇತ್ತೀಚೆಗೆ ಆಗಿದೆ.ಹೇಳಿದ್ದನ್ನೇ ಪದೇ ಪದೇ ಹೇಳುವ ಅಪ್ಪ, ಅಮ್ಮ, ಅತ್ತೆಯರಿಗೆ ಈ ಕಥೆಯನ್ನು ಈ ಮೊದಲೇ ಹೇಳಿದ್ರಿ ಎಂದು ಹೇಳಿ ಅವರ ನೆನಪುಗಳ ಮೆರವಣಿಗೆಗೆ ರಸಭಂಗ ಮಾಡುವುದಿಲ್ಲ.. ಇಷ್ಟು ವಯಸ್ಸಾದರೂ ನನ್ನೊಂದಿಗೆ ಅವರು ಇದ್ದಾರಲ್ಲ ಎಂಬ ತೃಪ್ತಿಯೇ ಸಾಕು ನನಗೆ. ಅವರ ನೆನಪಿನ ಕೋಣೆಯೊಳಗೆ ಇನ್ನೆಷ್ಟು ಮುತ್ತು ರತ್ನಗಳು ಇವೆಯೋ ಎಂಬುದು ನನಗೆ ಗೊತ್ತಿಲ್ಲ.. ಧಾವಂತದಿಂದ ಓಡಿ ಹೋಗಲು ನನಗೇನು ಆಫೀಸು ಕಾದು ಕುಳಿತಿಲ್ಲ ಅಲ್ಲವೇ!?ಮನೆಯ ಮುಂದೆ ತರಕಾರಿ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿಶ್ಚಿತ ಪಿಂಚಣಿ (OPS) ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಗಳಿಗೆ ಪತ್ರರಾಜ್ಯ ಸರ್ಕಾರಿ NPS ನೌಕರರ ಸಂಘ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ನೀಡುವಂತೆ ಆಗ್ರಹಿಸಿ ತಾಲೂಕಿನ ನೌಕರರು ಮುಖ್ಯ ಮಂತ್ರಿಗಳಿಗೆ ಪತ್ರ ಚಳುವಳಿ ಪ್ರಾರಂಭಿಸಿದ್ದಾರೆ.ಈ ವೇಳೆ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಓಪಿಎಸ್ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ಎರಡೂ ವರ್ಷಗಳು ಕಳೆದರೂ ಇನ್ನೂ ಕೊಟ್ಟ ಮಾತಿನಂತೆ ನಡೇದಕೊಳ್ಳದ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ಇಡೀ ರಾಜ್ಯಾದ್ಯಂತ ಓಪಿಎಸ್ ಜಾರಿ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಅಂಚೆ ಪತ್ರಗಳನ್ನು ಹಾಕುವುದರ ಮುಖಾಂತರ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬರುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಖ್ಯಾತ ಸಮಾಜ ಸೇವಕ ಸಿದ್ಧರಾಮಪ್ಪ ಉಪ್ಪಿನ ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಮಾಜಿ ಸಚಿವ ಡಾ.ಶ್ಯಾಮನೂರ ಶಿವಶಂಕರಪ್ಪ ಅವರು ಅಧ್ಯಕ್ಷರಾಗಿರುವ ಈ ಮಹಾಸಭೆಯ ಉಪಾಧ್ಯಕ್ಷರಾಗಿ ಸಿದ್ಧರಾಮಪ್ಪ ಉಪ್ಪಿನ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಶಾಲೆಯಿಂದ ಶಾಲಾ ಮಕ್ಕಳನ್ನು ಇಳಿಸಲು ಹೊರಟಿದ್ದ ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಸೇರಿದ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಆಲಮಟ್ಟಿ ಡ್ಯಾಂಸೈಟ್ – ನಿಡಗುಂದಿ ರಸ್ತೆಯ ಮಧ್ಯದ ಮರಿಮಟ್ಟಿಯ ಹನುಮಂತ ದೇವಸ್ಥಾನದ ಬಳಿ ಗುರುವಾರ ಸಂಜೆ ಜರುಗಿದೆ.ಮೃತ ಬೈಕ್ ಸವಾರ ಅಂಗಡಗೇರಿ ಗ್ರಾಮದ ಭೀಮಪ್ಪ ಪರಸಪ್ಪ ತಳವಾರ (೨೭) .ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಆಲಮಟ್ಟಿ ಡ್ಯಾಂಸೈಟ್ ನತ್ತ ತೆರಳುತ್ತಿದ್ದ ಬಸ್ ಗೆ ಆಲಮಟ್ಟಿಯಿಂದ ನಿಡಗುಂದಿ ಕಡೆಗೆ ಹೊರಟಿದ್ದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲಾ ಮಕ್ಕಳಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಸುಭಾಷಚಂದ್ರ ಬೋಸರವರ ಜಯಂತ್ಯುತ್ಸವವನ್ನು ಆಚರಿಸಲಾಯಿತು.ಈ ವೇಳೆ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಸಲಹಾ ಸಮಿತಿಯ ಸದಸ್ಯ ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಭಟ್ಟ, ಶಿಕ್ಷಕರುಗಳಾದ ಮಂಜುನಾಥ ಪಡದಾಳಿ, ಕಿರಣ ಕಡಿ, ಬಿ.ಟಿ.ಭಜಂತ್ರಿ, ಲೋಹಿತ ಜೈನಾಪೂರ, ಎಸ್.ಎಸ್.ಹಂಜಗಿ, ರಾಧಾ ಕೋಲಕಾರ, ಗುರುಬಾಯಿ ತಂಗಡಗಿ, ಆರ್.ಜೆ.ಸಾಗರ, ಅನ್ನಪೂರ್ಣ ಹೊಸಮನಿ, ತ್ರಿವೇಣಿ ಕುಲಕರ್ಣಿ, ಮೀನಾಕ್ಷಿ ಗಣಾಚಾರಿ, ಶಿವಶಂಕರಯ್ಯ ಮಠ, ರೂಪಾ ನಾಟೇಕರ, ವಿನಾಯಕ ನಾಗರಾಳ, ಶಾಹಿನ ನಾಲತವಾಡ ಸೇರಿದಂತೆ ಹಲವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯ ಈರಣ್ಣ ಶಂಕರಗೌಡ ವಡವಡಗಿ(ಗುಳಬಾಳ) ಅವರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಸ್ಥಳೀಯ ನ್ಯಾಯಾಲಯದ ಕಲಾಪಗಳಿಂದ ನ್ಯಾಯವಾದಿಗಳು ಗುರುವಾರ ದೂರ ಉಳಿಯುವ ಮೂಲಕ ಘಟನೆಯನ್ನು ಖಂಡಿಸಿದರು.ಈ ವಿಷಯದ ಕುರಿತು ನ್ಯಾಯವಾದಿಗಳ ಸಂಘದ ಕಚೇರಿಯಲ್ಲಿ ತುರ್ತು ಸಭೆ ಕರೆದು ಸಭೆಯಲ್ಲಿ ಸಂಘದ ಸದಸ್ಯ ಈರಣ್ಣ ವಡವಡಗಿ ಅವರ ಮೇಲೆ ಜ.೨೨ ರಂದು ಸಂಜೆ ಮಾರಣಾಂತಿಕ ಹಲ್ಲೆಯಾಗಿರುವದನ್ನು ತೀವ್ರವಾಗಿ ಖಂಡಿಸಲಾಯಿತು. ಹಲ್ಲೆಗೊಳಾಗದ ನ್ಯಾಯವಾದಿಗಳು ಮುಂಚಿತವಾಗಿ ಆರೋಪಿಗಳಿಂದ ನನಗೆ ಜೀವ ಬೆದರಿಕೆಯಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಲಿಖಿತ ರೂಪದಲ್ಲಿ ನೀಡಿದ್ದರು. ಈ ಕುರಿತು ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವದನ್ನು ಸಭೆಯು ತೀವ್ರವಾಗಿ ಖಂಡಿಸಿತು. ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳನ್ನು ಬಂಽಸುವವರೆಗೂ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುಲು ಸಭೆ ನಿರ್ಧರಿಸಿತು. ಈ ಆರೋಪಿತರ ಪರ ಸಂಘದ ಯಾವ ಸದಸ್ಯರು ವಕಾಲತ್ತು ವಹಿಸಬಾರದು. ಅಲ್ಲದೇ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಲೋಕಸಭಾ ಸದಸ್ಯೆ ಪ್ರಿಯಾಂಕಾ ವಾದ್ರಾ ಅವರನ್ನು ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ಅಸ್ಮಿತೆಯ ಪ್ರತೀಕ ವೀರ ರಾಣಿ ಚೆನ್ನಮ್ಮನವರೊಂದಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಸರಿಯಾದ ಕ್ರಮವಲ್ಲ. ವೀರರಾಣಿ ಕಿತ್ತೂರು ಚೆನ್ನಮ್ಮ ನವರು ಸ್ವತಂತ್ರ ಹೋರಾಟಕ್ಕಾಗಿ ಬ್ರಿಟಿಷರೊಂದಿಗೆ ಹೋರಾಟ ಮಾಡಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಧರ್ಮದ ಬಗ್ಗೆ ಅಪಾರ ಕಳಕಳಿಯನ್ನು ಹೊಂದಿದವರಾಗಿದ್ದರು. ಅವರು ದೇಶದ ಎಲ್ಲ ಜನರಿಗೆ ಮಾದರಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಕಿತ್ತೂರು ಚನ್ನಮ್ಮನವರ ವ್ಯಕ್ತಿತ್ವದ ಮುಂದೆ ಪ್ರಿಯಾಂಕ ವಾದ್ರಾ ಅವರು ಏನು ಅಲ್ಲ ಎನ್ನುವ ಸತ್ಯವನ್ನು ಮಲ್ಲಿಕಾರ್ಜುನ ಖರ್ಗೆ ತಿಳಿದುಕೊಳ್ಳಬೇಕು. ಅವರು ಪ್ರಿಯಾಂಕ ವಾದ್ರಾ ಅವರನ್ನು ಹೊಗಳಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಜೊತೆಗೆ ಹೋಲಿಸುವುದು ಸರ್ವತಾ ಒಪ್ಪುವ ಮಾತಲ್ಲ. ಈ ರೀತಿ ಮಾತನಾಡುವ ಮೂಲಕ ಕನ್ನಡ ನಾಡಿಗೆ ಅವಮಾನ ಮಾಡಿದ್ದೀರಿ. ಇನ್ನು ಮುಂದೆ ಈ ರೀತಿ ಮಾತನಾಡಬಾರದು. ಇದು ದೇಶದ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿಜಯಪುರ ನಗರದ ಹತ್ತಿರ ಇರುವ ಇಟ್ಟಂಗಿ ಬಟ್ಟಿಯಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಕೂಲಿ ಕಾರ್ಮಿಕರ ಮೇಲೆ ಇಟ್ಟಂಗಿ ಬಟ್ಟಿ ಮಾಲೀಕ ಒಂದು ಚಿಕ್ಕ ಕಾರಣಕ್ಕೆ ಅಮಾನವೀಯ ಹಾಗೆ ಹಲ್ಲೆ ಮಾಡಿರುವುದು ಖಂಡನೀಯ.ತಮ್ಮ ಹೊಟ್ಟೆ ಪಾಡಿಗೆ ಕೂಲಿ ಕೆಲಸವನ್ನು ಮಾಡುವ ಬಡವರ ಮೇಲೆ ಅಮಾನವೀಯ ರಾಕ್ಷಸ ಪ್ರವೃತ್ತಿಯಿಂದ ಮನಸಾ ಇಚ್ಛೆ ಹಲ್ಲೆ ಮಾಡಿರುವ ವಿಡಿಯೋವನ್ನು ನೋಡಿದರೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಗೆ ಸ್ವಲ್ಪವೂ ಕರುಣೆನೆ ಇಲ್ಲದ ಹಾಗೆ ಕಾಣಿಸುತ್ತದೆ. ಹಲ್ಲೆಗೊಳಗಾದ ಕೂಲಿ ಕಾರ್ಮಿಕರು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸ್ವಲ್ಪವೂ ಕರುಣೆ ತೋರಿಸದೇ ಹಲ್ಲೆ ಮಾಡಿರುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದುಷ್ಕರ್ಮಿಗಳ ಪರ ಯಾವ ನ್ಯಾಯವಾದಿಗಳು ಜಾಮೀನು ಕೊಡಿಸಲು ಮುಂದಾಗಬಾರದು ಎಂದು ನ್ಯಾಯವಾದಿಗಳಲ್ಲಿ ಮನವಿ ಮಾಡುತ್ತೇನೆ. ಹಲ್ಲೆಗೊಳಗಾದ ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವುದಾಗಿ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಬಂಜಾರ ಸಮಾಜ ಬಾಂಧವರು ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಮಾಡುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ನ್ಯಾ.ನಾಗಮೋಹನದಾಸ್ ಅವರಿಗೆ ಬರೆದ ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಗುರುವಾರ ಹಾಕಿದರು.ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕುವ ಮುನ್ನ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೇರಿದ ಸಭೆಯಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ,ಬಂಜಾರ ನಿಗಮ ಮಂಡಳಿ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸರು ಒಳಮೀಸಲಾತಿ ಪ್ರಕಟಿಸುವ ಮೊದಲು ೨೦೧೨ ರ ಜನಸಂಖ್ಯೆಯನ್ನು ಪರಿಗಣಿಸದೇ ಸಧ್ಯದಲ್ಲಿಯೇ ಕೇಂದ್ರ ಸರ್ಕಾರ ನಡೆಸುವ ೨೦೨೫ರ ಜನಗಣತಿ ಪರಿಗಣಿಸಬೇಕು. ಆಗ ಮಾತ್ರ ಎಲ್ಲರಿಗೂ ನ್ಯಾಯ ಸಿಗಲು ಸಾಧ್ಯವಿದೆ ಎಂದರು.ಪ್ರತಿ ತಾಂಡಾಗಳಿಗೆ ಭೇಟಿ ನೀಡಿ ವಾಸ್ತವಿಕ ದತ್ತಾಂಶ ಸಂಗ್ರಹಿಸಬೇಕು. ಬಂಜಾರ ಸಮಾಜ ಬಾಂಧವರ ಕುರಿತು ಹಿಂದೆ ನೀಡಿದ ವರದಿಯನ್ನು ವರದಿ ಪರಿಗಣಿಸಬೇಕು. ಒಳಮೀಸಲಾತಿ ಪ್ರಕಟಿಸುವ ಮೊದಲು ಇದನ್ನು ಪರಿಗಣಿಸಬೇಕಾದ ಅಗತ್ಯವಿದೆ ಎಂದರು.ಸಭೆಯಲ್ಲಿ ಮುಖಂಡರಾದ ಹರಿಲಾಲ ನಾಯಕ, ಕೃಷ್ಣ ನಾಯಕ, ಗುರಪ್ಪ…

Read More