Author: editor.udayarashmi@gmail.com

ಶಿರಾಡೋಣ: ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಉದಯರಶ್ಮಿ ದಿನಪತ್ರಿಕೆ ಚಡಚಣ: ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ವ್ಯವಹಾರಿಕ ಜ್ಞಾನ ಬೆಳೆಯಬೇಕು. ಮಕ್ಕಳ ಸಂತೆಯ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದ್ದು ಅದರ ಒಂದು ಭಾಗವೇ ಮಕ್ಕಳ ಸಂತೆ ಎಂದು ರೇವತಗಾಂವ ಗ್ರಾಪಂ ಉಪಾಧ್ಯಕ್ಷರಾದ ಸುರೇಶ ಬನಸೋಡೆಯವರು ಹೇಳಿದರು.ಶನಿವಾರದಂದು ಶಿರಾಡೋಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಸಂತೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಮಕ್ಕಳನ್ನು ಅಂಗಡಿಗೆ ಕಳುಹಿಸಿದಾಗ ಅಗತ್ಯ ವಸ್ತುಗಳನ್ನು ಕೊಳ್ಳುವ ಸಾಮರ್ಥ್ಯವನ್ನು ಮಕ್ಕಳು ಹೆಚ್ಚಿಸಿಕೊಳ್ಳಬೇಕು. ಇಂತಹ ಮಕ್ಕಳ ಸಂತೆಗಳು ಪ್ರಾಯೋಗಿಕ ತರಬೇತಿಗಾಗಿ ಉತ್ತಮ ವೇದಿಕೆಯಾಗಿವೆ ಎಂದರು.ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ವಿಜಯಕುಮಾರ ಸಾತಪುತೆಯವರು ಮಾತನಾಡುತ್ತ. ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಪಠ್ಯೇತರ ಚಟುವಟಿಕೆಯಾಗಿ ಶಾಲೆಯಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ, ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷರಾದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರೂಪಾಯಿಗೆ ೮೦ ರೂಪಾಯಿ ನೀಡುವ ಕರಾರಿನ ಮೇರೆಗೆ ಅಂಕಿ ಸಂಖ್ಯೆಗಳ ಸಹಾಯದಿಂದ ಓಸಿ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ತಾಲೂಕಿನ ಕೊಳೂರು ತಾಂಡಾದ ಮುತ್ತು ಚೌವ್ಹಾಣ ಮತ್ತು ಕೊಟ್ರೆಪ್ಪ ಚವ್ಹಾಣ ಮೇಲೆ ಪ್ರಕರಣ ದಾಖಲಾಗಿದ್ದು, ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜೂಜಾಟವಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರಿಂದ ಕೆಲ ಹಣ, ಓಸಿ ಚೀಟಿ ಮತ್ತು ಬಾಲಪೆನ್ನು ವಶಕ್ಕೆ ಪಡೆಯಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸಲು ಆಧಾರ್ ತಿದ್ದುಪಡಿ ಹಾಗೂ ಬ್ಯಾಂಕಿಗೆ ಆಧಾರ್ ಸೀಡಿಂಗ್ ಮಾಡಿಸುವದು ಕಡ್ಡಾಯವಾಗಿದೆ ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.ಬಬಲೇಶ್ವರ ತಾಲ್ಲೂಕಿನ ಅರ್ಜುನಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಧಾರ ಸಂಬಂದಿಸಿದಂತೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಪ್ರಭಾತ ಪೇರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.ವಿಜಯಪುರ ಗ್ರಾಮೀಣ ತಾಲ್ಲೂಕಿನಲ್ಲಿ 28 ಸಾವಿರ ಮಕ್ಕಳ ಆಧಾರ್ ತಿದ್ದುಪಡಿ ಇರುವದರಿಂದ ಸರಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸುವದು ತೊಂದರೆಯಾಗಿರುವದರಿಂದ ತಾಲೂಕಿನ ಎಲ್ಲ ಶಾಲೆಗಳಲ್ಲಿ ತುರ್ತಾಗಿ ಮುಖ್ಯಗುರುಗಳು, ಸಹಶಿಕ್ಷಕರು ಪಾಲಕರ ಸಹಕಾರದಿಂದ ಮಕ್ಕಳ ಆಧಾರ ಕಾರ್ಡ ಮಾಡಿಸುವದು. ಮಕ್ಕಳು ಹೆಸರು ತಪ್ಪಾದ ಆಧಾರ ಕಾರ್ಡ ತಿದ್ದುಪಡಿ ಮಾಡಿಸುವದು. ಎಸ್ಎಟಿಎಸ್ ದಲ್ಲಿ ಅಪಡೇಟ್ ಮಾಡಿ ಅಫಾರ ಐಡಿ ಮಾಡಬೇಕು. ಎಲ್ಲ ಶಾಲೆಗಳಲ್ಲಿ ಈ ಕಾರ್ಯ ಶೇ.100 ರಷ್ಟು ಕಡ್ಡಾಯವಾಗಿ ಬೇಗನೆ ಮಾಡಬೇಕು ಎಂದು ಹೇಳಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ರಫೀಕ್ ಸೋನಾರ್,ರಮೇಶ ತಂಬಾಕೆ, ಎ. ಎಸ್.ಬಿರಾದಾರ, ಪ್ರಭು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ದೇಶದ ರಾಜದಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣೆ ಹಿಡಿದಿರುವದು ಅತ್ಯಂತ ಹರ್ಷದಾಯಕ ದಿನವಾಗಿದೆ ಎಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹೇಳಿದರು.ಬಿಜೆಪಿ ಪಕ್ಷ ಜಯಭೇರಿ ಗಳಿಸಿದ ಪ್ರಯುಕ್ತ ಪಟ್ಟಣದಲ್ಲಿ ಕಾರ್ಯಕರ್ತರು ಏರ್ಪಡಿಸಿದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.ಆಮ್ ಆದ್ಮಿ ಪಕ್ಷದ ಆಡಳಿತ ಶೈಲಿಯನ್ನು ನೋಡಿ ಬೇಸತ್ತ ದೇಹಲಿ ಜನತೆ ಈ ಭಾರಿ ಬಿಜೆಪಿ ಪಕ್ಷವನ್ನು ಬೆಂಬಲ ಕೊಡಲು ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಪ್ರಾಮಾಣಿಕ ಆಡಳಿತವೇ ಕಾರಣ ಜನಪರವಾದ ಬಡವರ ದೀನದಲಿತರ ಸರ್ವಜನರ ಏಳ್ಗೆಗಾಗಿ ಬಿಜೆಪಿ ಪಕ್ಷ ಶ್ರಮಿಸುತ್ತದೆ ಎಂದರು.ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿಕೆ ಮಾಡಿಕೊಂಡು ಸಂಭ್ರಮ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಚಂದ್ರಶೇಖರಯ್ಯ ಗಣಕುಮಾರ, ಪಟ್ಟಣ ಪಂಚಾಯತ ಸದ್ಯಸ್ಯರಾದ ಅಪ್ಪಶಿ ಮಟ್ಟಿಹಾಳ ಬಾಬು ಭಜಂತ್ರಿ ಕಲ್ಲಪ್ಪ ಸೂನ್ನದ ಈರಯ್ಯ ಮಠಪತಿ ಸಗರೆಪ್ಪ ಮುರನಾಳ ಸಭಾಷ ಭಜಂತ್ರಿ ಸೋಮಯ್ಯ ಮಠ ಪುಂಡಲೀಕ ಬಾಟಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಲ್ಪಸಂಖ್ಯಾತರ ಕಾಲೊನಿಗಳ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗಾಗಿ 2024-25ನೇ ಸಾಲಿನ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ ಯೋಜನೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ರೂ.5 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲ ಕಂತು ರೂ.1.5 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಾ.ನಂ.29ರ ಸುಹಾಗ ಕಾಲೊನಿಯ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.21ರ ತ್ರೀಮೂರ್ತಿ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.21ರ ಗಣೇಶ ನಗರ ಮುಖ್ಯ ರಸ್ತೆಯ ವಿ.ಆರ್.ಎಲ್ ಆಪೀಸ್ ದಿಂದ ರಿಂಗ್ ರಸ್ತೆವರೆಗಿನ ರಸ್ತೆ ಅಭಿವೃದ್ಧಿ, ವಾ.ನಂ.29 ಹಾಗೂ 34 ರ ಕನ್ನನ ನಗರ ಹತ್ತಿರದ ಪೂರ್ವಭಾಗ ಹಾಗೂ ಪಶ್ಚಿಮ ಭಾಗದ ಜಯಲಕ್ಷ್ಮೀ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.13ರ ಬಾರಾಕಮಾನ್ ಹಿಂದಿನ ಭಾಗದ ರಸ್ತೆ ಅಭಿವೃದ್ಧಿ, ವಾ.ನಂ.13ರ ಕಲಾಲ ಗಲ್ಲಿಯ ಆಂತರಿಕ ರಸ್ತೆಗಳು ಹಾಗೂ ವಾ.ನಂ.11ರ ಕುಲ್ಲೋಳ್ಳಿ ಪೆಟ್ರೋಲ್…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಭಾರತ ಹುಣ್ಣಿಮೆಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸುಕ್ಷೇತ್ರ ನಿವರಗಿ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ನಿಮಿತ್ಯ ಶ್ರೀ ಮಹಾಲಕ್ಷ್ಮೀದೇವಿ ಜಾತ್ರೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ .ದಿನಾಂಕ : 11-02-2025 ರಂದು ಮಂಗಳವಾರ ನಸುಕಿನ ಜಾವ 5-00 ಗಂಟೆಗೆ ಅಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುವುದು, ರಾತ್ರಿ 8-00 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗುವುದು ಹಾಗೂ ಶ್ರೀ ಘೋಳೆಶ್ವರರಿಂದ ನುಡಿಮುತ್ತುಗಳು ಜರುಗುವವು,ದಿನಾಂಕ : 12-02-2025 ರಂದು ಬುಧವಾರ ಮುಂಜಾನೆ 08.00 ಗಂಟೆಗೆ ರಂಗೋಲಿ ಸ್ಪರ್ಧೆ ಇದ್ದು ವೀಜೆತರಿಗೆ ಬಹುಮಾನ ಇರುವುದು. ಮುಂಜಾನೆ 11 ಗಂಟೆಗೆ ಜಾನುವಾರಗಳ ಜಾತ್ರಾಮೇಳ ಜರುಗುವುದು ಇದೇ ದಿವಸ ಮಧ್ಯಾಹ್ನ 3-30 ಗಂಟೆಗೆ ಟಗರಿನ ಕಾಳಗ ಇರುತ್ತದೆ.ಅದೇ ದಿನ ರಾತ್ರಿ 9.30 ಗಂಟೆಗೆ ಅಣ್ಣ ಅಧಿಕಾರಿ ತಂಗಿ ಭಿಕಾರಿ ಎಂಬ ನಾಟಕ ಜರುಗುವುದು.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕಮೀಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ನಿವರಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಿರಗಣ್ಣ ಪೂಜಾರಿ‌ ಹಾಗೂ ಉಪಾಧ್ಯಕ್ಷರಾಗಿ ರವಿ ಚಿದಾನಂದ ಕಾರಾಜನಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ನಿವರಗಿ ಮತ್ತು ಸಂಖ ಗ್ರಾಮಸ್ಥರು ನೂತನ ಅಧ್ಯಕ್ಷ , ಉಪಾಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯನ್ನು ಸತ್ಕರಿಸಿದರು.ಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ದುಂಡಪ್ಪ ಪೋಲಾದಿ, ಚಂದ್ರಕಾಂತ ಡೊಳ್ಳಿ, ಉಮೇಶ ಹುನ್ನೂರ, ರಮೇಶ ಉಮರಾಣಿ, ರಮೇಶ ಮಲಾಬಾದಿ, ಬಸವರಾಜ ಕೋಳಿ,ಶ್ರವಣಕುಮಾರ ಕಾಂಬಳೆ, ಪ್ರಕಾಶ ಹಳದಕ್ಕಿ, ರತ್ನಾಬಾಯಿ ಶೇಜಾಳೆ, ಮಮತಾಜ ಮುಲ್ಲಾ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಮತ್ತು ನಿವರಗಿ ಮತ್ತು ಸಂಖ ಉರಿನ ಗ್ರಾಮಸ್ಥರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿ ಸಮೀಪದ ಬೇನಾಳ ಆರ್ ಎಸ್ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ನಿಮಿತ್ಯ , ವಿವಿಧ ನಾನಾ ಕಾರ್ಯಕ್ರಮಗಳು ಜರುಗಲಿವೆ .ರವಿವಾರ ಮುಂ 8 ಘಂ ಶ್ರೀ ಭೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ” ಜರಗುವುದು.ಅದೇ ದಿನ ಸಾಯಂಕಾಲ 5ಕ್ಕೆ ಬುದ್ದಿ, ವಂದಾಲ, ಅರಷಣಗಿ, ಬೇನಾಳ ಶ್ರೀ ಗದ್ದೆಮ್ಮದೇವಿ ಹಾಗೂ ಶ್ರೀ ಭೀರಲಿಂಗೇಶ್ವರ ಪಂಚಗ್ರಾಮ ಪಲ್ಲಕ್ಕಿಗಳ ಸ್ವಾಗತ ಮಾಡಿಕೊಳ್ಳಲಾಗುವುದು.ಅಂದೇ ರಾತ್ರಿ 10-00ಕ್ಕೆ ಅದ್ವಿಕಾ ಮೆಲೋಡಿಸ್, ಮುದ್ದೇಬಿಹಾಳ ಇವರಿಂದ ನೃತ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗುವುದು.ಡ್ಯಾನ್ಸರ್: ವಿಷ್ಣು ಸಾರಥ್ಯದಲ್ಲಿ ಬೆಂಕಿ ಲತಾ. ಗಾಯಕರು: ಮ್ಯೂಜಿಕ್ ಮೈಲಾರಿ, ರಾಕ್ ಸ್ಟಾರ್ ಜ್ಯೋತಿ, ಬೀರು ಜಮಖಂಡಿ, ಲಕ್ಷ್ಮೀ ಬಿಜಾಪುರ, ವಿಷ್ಣು ಲಮಾಣಿ ಉಪಸ್ಥಿತರಿರುವರು.ಸ್ವಾನದ ಓಟದ ಸ್ಪರ್ಧೆಪ್ರಥಮ ಬಹುಮಾನ, ಎಚ್ ಎಫ್, ಬೈಕ್, ದ್ವೀತಿಯ ಬಹುಮಾನ ,21,000, ತೃತೀಯ ಬಹುಮಾನ , 11,101, ಚತುರ್ಥ ಬಹುಮಾನ , 5001, ಪಂಚಮಿ ಬಹುಮಾನ, 3001, ಆರನೇ ಬಹುಮಾನ,2001, ಏಳನೇ ಬಹುಮಾನ,1501, ಎಂಟನೇ ಬಹುಮಾನ 1001, ಬಹುಮಾನಗಳನ್ನು ನೀಡಲಾಗಿದೆ. (ಪ್ರವೇಶ…

Read More

ಉದಯರಶ್ಮಿ ದಿನಪತ್ರಿಕೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ವತಿಯಿಂದ ವಿಜಯಪುರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಂತಹದರಲ್ಲಿ “ನಿಮ್ಮೊಂದಿಗೆ ನಾವು” ಕಾರ್ಯಕ್ರಮವು ಒಂದು ವಿಶೇಷ.2024/25 ನೇ ಸಾಲಿನಲ್ಲಿ ಇದೇ ಪ್ರಥಮ ಬಾರಿಗೆ ಪ್ರೌಢಶಾಲಾ ವಿಭಾಗದ ಮಕ್ಕಳಿಗಾಗಿ ಚಿತ್ರಕಲಾ ಶಿಬಿರವನ್ನು ದಿನಾಂಕ 10 ಫೆಬ್ರವರಿ 2025 ಸೋಮವಾರ ಬೆಳಿಗ್ಗೆ 11-00 ರಿಂದ ಸಂಜೆ 5-00 ರ ವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ, ಕಲೆಯನ್ನು ಜನಪರವಾಗಿಸಬೇಕು, ಜನರಲ್ಲಿ ಕಲೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು, ಕಲಾಭಿಮಾನಿಗಳ ದೊಡ್ಡ ಸಮೂಹ ಸೃಷ್ಟಿಯಾಗಬೇಕೆನ್ನುವುದೇ ನಮ್ಮ ಆಶಯ.ಈ ಕಾರ್ಯಕ್ರಮದಲ್ಲಿ ಕಲಾವಿದರ ಚಿತ್ರ ಪ್ರದರ್ಶನವೂ ಇರುತ್ತದೆ. ಕಲಾವಿದರು ರಚಿಸಿದ ಕಲಾಕೃತಿಗಳನ್ನು ನೋಡಿದ ಮಕ್ಕಳ ಮನಸ್ಸಿನ ಆಲೋಚನಾ ಲಹರಿ ವಿಸ್ತಾರವಾಗುವುದಂತೂ ಖಂಡಿತ. ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವೆಂದರೆ “ಪ್ರಾತ್ಯಕ್ಷಿಕೆ” ಮತ್ತು “ಉಪನ್ಯಾಸ” ನೀಡಲು ನಮ್ಮ ಕಲಾವಿದರು ಜೊತೆಗಿರುತ್ತಾರೆ. ಚಿತ್ರರಚನೆಯ ಕ್ರಮವನ್ನು ಬಣ್ಣ ಬಳಸುವ ವಿಧಾನವನ್ನು ಮಕ್ಕಳಿಗೆ ತಿಳಿಸಿ ಕೊಡುತ್ತಾರೆ. ಮಕ್ಕಳು ಅವರೊಂದಿಗೆ ಮುಕ್ತವಾಗಿ ಚರ್ಚಿಸಬಹುದು. “ನಿಮ್ಮೊಂದಿಗೆ ನಾವು” ಒಂದು ವಿಶಿಷ್ಟ ಪ್ರಯೋಗವೆಂದರೆ, ಈ…

Read More

ಲೇಖನ- ಪರಶುರಾಮ ಮಡಿವಾಳರನಿವೃತ್ತ ಉಪನ್ಯಾಸಕರುಸಿಂದಗಿಮೊ:೯೬೦೬೫೬೨೪೮೮ ಉದಯರಶ್ಮಿ ದಿನಪತ್ರಿಕೆ ಪರೀಕ್ಷಾ ಹಾಲಿಗೆ ೧೫ ರಿಂದ ೨೦ ನಿಮಿಷ ಮುಂಚಿತವಾಗಿ ಹಾಜರಾಗಬೇಕು.ಹಾಲ್ ಟಿಕೇಟ ನಕಲು ಪ್ರತಿ ಮನೆಯಲ್ಲಿಟ್ಟು ಅಸಲಿ ಪ್ರತಿಯನ್ನು ಪರೀಕ್ಷೆಗೆ ತಪ್ಪದೇ ತರಬೇಕು.ಗುರುತಿನ ಚೀಟಿ ಕೊರಳಲ್ಲಿ ಹಾಕಿಕೊಳ್ಳಬೇಕು.ಎಲೆಕ್ಟ್ರಾನಿಕ್ ವಸ್ತುಗಳು, ವಾಚ್, ಮೊಬೈಲ್‌ಫೋನ್ ಹಾಗೂ ಬ್ಲೂಟೂತ್‌ಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಬಾರದು.ಪರೀಕ್ಷಾ ಕೊಠಡಿಯಲ್ಲಿ ವಿಷಯಕ್ಕೆ ಸಂಬಂಧಿಸಿದ ಚೀಟಿ, ಝರಾಕ್ಸ ಕಾಫಿ, ನೋಟ್ಸ ಒಯ್ಯಕೂಡದು.ಹಾಲ್ ಟಿಕೆಟ್‌ನಲ್ಲಿರುವ ಸೀಟ್ ನಂಬರ್ ತಾವು ಕುಳಿತುಕೊಳ್ಳುವ ಸೀಟ್ ಸರಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಗಮನಿಸಬೇಕು. ಮುಂಚಿತವಾಗಿ ನೀಡುವ ಪ್ರಶ್ನೆಪತ್ರಿಕೆಯ ಎಲ್ಲಾ ಪ್ರಶ್ನೆಗಳನ್ನು ಶಾಂತಚಿತ್ತದಿಂದ ಓದಬೇಕು.ತಮಗೆ ಸರಳವಾದ ಪ್ರಶ್ನೆಗಳಿಗೆ ಉತ್ತರಿಸಿದಂತೆ ನಿಮ್ಮ ಬುದ್ಧಿಶಕ್ತಿಯ ಸುರುಳಿ ಬಿಚ್ಚುತ್ತಾ ಹೋಗುತ್ತದೆ.ಪರೀಕ್ಷಾ ವೇಳೆಯಲ್ಲಿ ತಾವು ತಾವಾಗಿರದೇ ಪ್ರಶ್ನೆ ಉತ್ತರ ಬರೆಯುವದರಲ್ಲಿ ತನ್ಮಯರಾಗಿರಬೇಕು.ವಿಚಕ್ಷಕದಳ – ಇನ್ನಿತರ ಪರೀಕ್ಷಾ ಅಧಿಕಾರಿಗಳ ಬಗ್ಗೆ ಗಮನ ಹರಿಸಬಾರದು.ವಿದ್ಯಾರ್ಥಿಗಳೇ, ತಮಗೆ ಉತ್ತರ ಪತ್ರಿಕೆಗಳನ್ನು ಕೊಟ್ಟ ನಂತರ ತಮ್ಮ ಹಾಲ್ ಟಿಕೆಟ್ ನಂಬರನ್ನು ಬಾಕ್ಸನಲ್ಲಿ ಸ್ಪಷ್ಟವಾಗಿ ಕಾಣುವಂತೆ ಬರೆಯಬೇಕು. ಒಂದು ಪ್ರಶ್ನೆ ಪತ್ರಿಕೆಯು ಸರಳತೆ ಹಾಗೂ…

Read More