Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ ನೇ ಸಾಲಿನ ಜವಾಹರ ನವೋದಯ ಶಾಲೆಗಳಲ್ಲಿ ೬ನೇ ವರ್ಗದ ಪ್ರವೇಶಕ್ಕಾಗಿ ಜನೇವರಿ ೧೮ ರಂದು ಜರುಗಿದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು ವಿಜಯಪುರ ನಗರದ ಪ್ರತಿಷ್ಠಿತ ಎಕ್ಸಲಂಟ್ ಕೋಚಿಂಗ್ ಕ್ಲಾಸ್ನ ೩೫ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಎಕ್ಸಲಂಟ್ ಕೋಚಿಂಗ್ ಕ್ಲಾಸ್ಗೆ ಕೀರ್ತಿ ತಂದಿದ್ದಾರೆ.ಸ್ವರೂಪ ಶಿವೂರ, ಪಣ್ಯಶ್ರೀ ಪಾಟೀಲ, ರಾಹುಲ್ ಪಾಟೀಲ, ಶ್ರೇಯಸ್ ಡಂಬಳಿ, ಸಂಗಮೇಶ ನಾಗರಾಳ, ಅಜೇಯಕುಮಾರ ಹೊಸಮನಿ, ಅಯಾನ ನಾಗೂರೆ, ಅಭಿಷೇಕ್ ಜಗದಾಳ, ಮನೋಜ ಅಮೆತಪ್ಪನವರ, ಪ್ರತೀಕ ಜಿಡ್ಡಿಮನಿ, ಸುಹಾಸಗೌಡ ಎಸ್, ಸಂಪ್ರೀತ ಪರ್ವತಿಮಠ, ಅರ್ಚಿತ ಶೆಂದಗಿ, ದಿಶಾ ಪಾಟೀಲ, ಪೂಜಾ ಹೂಗಾರ, ರುಕ್ಮಿಣಿ ಹಳೆಗೌಡರ, ಅಭಿಶೇಕ್ ಮಳಗಿ, ಅಭಿಷೇಕ್ ಬಿಡಾರಿ, ನಿತಿನ ಬುರ್ಲಿ, ಶಿವಕುಮಾರ ಬೆಳ್ಮಗಿ, ವಿಹಾನ್ಕುಮಾರ ಪಿ, ಕಾರ್ತಿಕ್ ಬಳೂರಗಿ, ಸ್ವರೂಪ್ ಮಹೇಂದ್ರಕರ, ಹೃತಿಕ್ ಕೋಟಿಮನಿ, ಪಿಯುಶ ಎಮ್ಮೆ, ಉದಯಕಿರಣ ಕೆ, ಗಿರೀಶ ರಾಠೋಡ, ಸುಬ್ರಮಣ್ಯ ಗೊಂಡಿ, ಆದೀಶ ರಾಠೋಡ, ಆರ್ಯನ್ ರಾಠೋಡ, ಭುವನ ಆರ್, ಪೃಥ್ವಿರಾಜ್ ಲಮಾಣಿ, ಸಮರ್ಥ ನಾಯ್ಕೋಡಿ, ಶ್ರೇಯಾ…
ಮೋರಟಗಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ | ಶಾಸಕ ಅಶೋಕ ಮನಗೂಳಿ ಮನವಿ ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಅಧಿಕಾರ ಶಾಶ್ವವಲ್ಲ ನಮ್ಮ ಅಧಿಕಾರದ ಅವಧಿಯಲ್ಲಿ ಜಾತ್ಯತೀತವಾಗಿ ಮಾಡಿದಂತ ಅಭಿವೃದ್ಧಿ ಕಾರ್ಯಗಳು ಶಾಶ್ವತ, ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಅಶೋಕ ಮನಗೂಳಿ ಮನವಿ ಮಾಡಿದರು.ಮಂಗಳವಾರ ಗ್ರಾಮದ ಜನತಾ ಕಾಲೋನಿಯಲ್ಲಿ ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿಯಲ್ಲಿ ಮಂಜೂರಾದ ೪೦ ಲಕ್ಷ ರೂ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಗ್ರಾಮದಲ್ಲಿ ಈಗಾಗಲೇ ಕೆರೆ ಅಭಿವೃದ್ಧಿಗಾಗಿ ೧.೫೦ ಕೋಟಿ, ಶಾದಿ ಮಹಲ್ ನಿರ್ಮಾಣಕ್ಕಾಗಿ ೧ ಕೋಟಿ, ಮಂಜೂರಾಗಿದ್ದು ಕಾರ್ಯ ಪ್ರಗತಿಯಲ್ಲಿವೆ ಸದ್ಯಕ್ಕೆ ಜನತಾ ಕಾಲೋನಿಗೆ ಹೋಗುವ ಸಿಸಿ ರಸ್ತೆಗೆ ೪೦ ಲಕ್ಷ ರೂ, ಸಮುದಾಯ ಅರೋಗ್ಯ ಕೇಂದ್ರಕ್ಕೆ ಹೋಗುವ ಮುಖ್ಯ ರಸ್ತೆಗೆ ೧೫ ಲಕ್ಷ ರೂ ಹಾಗೂ ಶ್ರೀ ಸಿದ್ದರಾಮೇಶ್ವ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ಮಂಜುರು ಮಾಡಿಸಿದ್ದು ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿಯ ಉದ್ಯಾನದ ಹೊರಬಾಜು ಪ್ರಿವೆಡ್ಡಿಂಗ್ ಸೇರಿದಂತೆ ನಾನಾ ಫೋಟೋಶೂಟ್ ಗೆ ೧೦೦೦ ರೂ ಶುಲ್ಕ ನಿಗದಿಪಡಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬುಧವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.ಆಲಮಟ್ಟಿಯ ಡ್ಯಾಂ ಸರ್ಕಲ್ ನಿಂದ ಆಲಮಟ್ಟಿಯ ಪೆಟ್ರೋಲ್ ಪಂಪ್ ವರೆಗೆ ರಸ್ತೆಯುದ್ದಕ್ಕೂ ಹಚ್ಚಿರುವ ವಿವಿಧ ಗಿಡಗಳ ಸುಂದರ ಜಾಗವಿದೆ. ಸುಮಾರು ಒಂದೂವರೆ ಕಿ.ಮೀವರೆಗೂ ಈ ನೋಟ ಅದ್ಭುತವಾಗಿದೆ. ಇಲ್ಲಿ ಫೋಟೋಶೂಟ್ ಗೆ ಹೇಳಿ ಮಾಡಿಸಿದ ತಾಣ ಇದಾಗಿದೆ. ಅದಕ್ಕಾಗಿ ನಿತ್ಯ ಹಲವಾರು ಜೋಡಿಗಳ ಪ್ರಿವೆಡ್ಡಿಂಗ್ ಫೋಟೋ ಶೂಟ್ ನಡೆಯುತ್ತವೆ.ಉದ್ಯಾನದ ಹೊರಗಡೆ ಇದ್ದದ್ದರಿಂದ ಇಲ್ಲಿಯವರೆಗೆ ಫೋಟೋ ಶೂಟ್ ಗೆ ಶುಲ್ಕ ಇರಲಿಲ್ಲ. ಆದರೆ ಕಳೆದ ಫೆ.೧೫ ರಿಂದ ಪ್ರಿವೆಡ್ಡಿಂಗ್ ಶೂಟಿಂಗ್ ಗೆ ಒಂದು ಜೋಡಿ ಒಂದು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ, ಉದ್ಯಾನದ ಹೊರಗಡೆಯ ಸೌಂದಯ್ಯಕ್ಕೆ ಶುಲ್ಕ ಯಾಕೆ? ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.ಆಲಮಟ್ಟಿಯ ಫೋಟೋಶೂಟ್ ನಿಂದ ಆಲಮಟ್ಟಿಯ ಉದ್ಯಾನಗಳ ಬಗ್ಗೆ ಪ್ರಚಾರ ಆಗುತ್ತದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಬಿಜೆಪಿ ನಾಯಕ ವಿಕ್ರಮ ಗಾಯಕವಾಡ ಅವರು ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.ಇತ್ತಿಚೆಗೆ ಪೂನಾದಲ್ಲಿ ಜರುಗಿದ ರಾಷ್ಟ್ರೀಯ ಮಾಂಗ ಗಾರುಡಿ ಕ್ರಾಂತಿ ಸೇನಾ ಸಭೆಯಲ್ಲಿ ಸೇನಾದ ರಾಷ್ಟ್ರೀಯ ಸಂಸ್ಥಾಪಕರಾದ ಉತ್ತಮ ಶಂಕರ ಮಾನಕರ ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಾಳಾಸಾಹೇಬ್ ಕಾಂತಾ ರಾಖಪಸರೆ ಅವರು ವಿಕ್ರಮ ಗಾಯಕವಾಡ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಪ್ರಮಾಣಪತ್ರ ವಿತರಿಸಿದರು ಎಂದು ವಿಕ್ರಮ ಗಾಯಕವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಚನೆಗುರಾನಿಜಿ.ಆರ್.ನಿಂಗೋಜಿ ರಾವ್2000/35, ಮಾತೃಚಾಯತರಳಬಾಳು ಬಡಾವಣೆ11ನೇ ಕ್ರಾಸ್ದಾವಣಗೆರೆ-577005ಮೋ 9036389240 ಉದಯರಶ್ಮಿ ದಿನಪತ್ರಿಕೆ ದಟ್ಟಡವೀಯನಡುವೆದುಂಡನೆ ಮಲ್ಲಿಗೆಜಾಜಿ ಸಂಪಿಗೆಹೊಂಗೆ ಬೇವಿನಗಿಡಗಳ ಸಾಲು ಸಾಲುಎಲ್ಲೆಡೆ ಸೂಸಿಹುದುಕಂಪು ಕಂಪು ನಲಿದಾಡಿನರ್ತಿಸಿಸುವ ನವಿಲುಗಳುಝೆಂಕರಿಸಿಮಕರಂದ ಹೀರುವ ದುಂಬಿಗಳುಸುವಾಸನೆ ಸ್ವಾದಿಸಲುಸುಯ್ಗುಡುವ ಸುಳಿಗಾಳಿಭೂ ಒಡಲ ಗರ್ಭಕೆ ಮಳೆಯ ಸಿಂಚನಟಿಸಿಲೊಡೆವ ಪರ್ವಕಾಲ ಪಸರಿಸುವಬೇರು ಬೀಜಕೆಪಕ್ಷಿಗಳ ಕಲರವತುತ್ತು ಕೊಡುವ ತಾಯಿಗೆನಲಿವ ಮರಿಗಳುರೆಕ್ಕೆ ಬಿಚ್ಚುವುದನೋಡುವ ಸಂಭ್ರಮ ವೃಕ್ಷ ರಾಜನನಲಿವು, ವರುಷಕಳೆದ ಹುಟ್ಟು ಹಬ್ಬದನೆನಪು, ಹೊಸ ಚಿಗುರುಹಳೇ ಬೇರು ಕೂಡಿರಲುಹೊಸ ಸೊಗಡುಕಾದಿಹುದು ನೀಡಲುಹೊಸ ವರುಷದಹೊನಲು ಬೇವು ಬೆಲ್ಲವಸವಿಯಲುಕಹಿ ಸಿಹಿಗಳ ನೆನಹುಮರೆತರೆ ಮರೆತೇನುಕಹಿಯ ನೆನಪುಗಳನೆನೆದರೆ ನೆನೆದೇನುಸಿಹಿಯ ಸೊಬಗನುಬಾ ಯುಗಾದಿಯೇಯುಗದ ಆದಿಯೇಮನು ಕುಲದಕಷ್ಟವ ನೀಗಿಸು ಬಾ
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಧಿಕಾರಿಗಳಿಗೆ ಖಡಕ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೌಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಂತ್ರಸ್ತರ ಮನೆಗಳಿಗೆ ಭೇಟಿ ಮಾಡಿ, ಮಾಹಿತಿ ಕ್ರೋಡೀಕರಿಸಿ, ಕಾಲಮಿತಿಯೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತಿ ಪ್ರಕರಣಗಳನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ದೌರ್ಜನ್ಯ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ಆದ್ಯತೆ ನೀಡಬೇಕು. ದೌರ್ಜನ್ಯ ಪ್ರಕರಣಗಳ ಪರಿಹಾರ ಧನವನ್ನು ಆದ್ಯತೆ ಮೇಲೆ ಸಂತ್ರಸ್ತರಿಗೆ ಬಿಡುಗಡೆ ಮಾಡಲು ಕ್ರಮ ವಹಿಸಬೇಕು. ನಿಯಮಾನುಸಾರ ಹಾಗೂ ಪ್ರಕರಣಾನುಸಾರ ಕಾಲಮಿತಿಯೊಳಗೆ ಪರಿಹಾರ ಧನ ಒದಗಿಸಬೇಕು. ಯಾವುದೇ ಬಾಕಿ ಉಳಿಸಿಕೊಳ್ಳದಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯ ವಿವಿಧ ನಿಗಮಗಳು ಭೂ ಒಡೆತನ ಯೋಜನೆಯಡಿಯ ಫಲಾನುಭವಿಗಳ ಮಾಹಿತಿಯನ್ನು ಇಂದೀಕರಣ ಮಾಡಿ, ಆದ್ಯತೆಯ ಮೇಲೆ ಅನುಪಾಲನಾ ವರದಿ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪತ್ನಿಯನ್ನು ಹತ್ಯೆಗೈದ ಪತಿ ನೇಣಿಗೆ ಶರಣಾದ ಘಟನೆ ತಾಲೂಕಿನ ಗೆದ್ದಲಮರಿ ಗ್ರಾಮದ ಜಮೀನಿನಲ್ಲಿ ನಡೆದಿದೆ.ಮೃತ ದುರ್ದೈವಿಗಳನ್ನು ಸಿದ್ದಪ್ಪ ಹರನಾಳ(೩೩) ಮತ್ತು ಮೇಘಾ ಹರನಾಳ(೨೮) ಎಂದು ಗುರುತಿಸಲಾಗಿದೆ. ಮೃತರ ಜಮೀನಿನಲ್ಲಿಯೇ ಈ ಘಟನೆ ಸಂಭವಿಸಿದ್ದು ಪ್ರಕರಣದ ಹಿಂದೆ ಸಿದ್ದಪ್ಪನ ಸಂಬಂಧಿಕರ ಕಿರುಕುಳ ಇತ್ತು ಎನ್ನಲಾಗಿದೆ. ಮೃತ ದಂಪತಿಗಳು ೮ವರ್ಷಗಳ ಹಿಂದೆ ಮದುವೆಯಾಗಿದ್ದು ನಾಲ್ಕು ಜನ ಮಕ್ಕಳಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವಾಯ್ಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮೊಹಮ್ಮದ ಫಸಿಯುದ್ದಿನ, ಪಿಎಸ್ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಕಾನೂನು ಕ್ರಮ ಕೈಗೊಂಡಿದ್ದಾರೆ.ಘಟನೆಯ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಧ್ಯಮದವರ ಜೊತೆ ಮಾತನಾಡಿ, ಘಟನೆಯಲ್ಲಿ ಮೇಘಾಳನ್ನು ಆಕೆಯ ಸೀರೆಯಿಂದ ಆಕೆಯ ಕುತ್ತಿಗೆ ಬಿಗಿದು ಹತ್ತೆಗೈದ ಸಿದ್ದಪ್ಪನು ತಾನು ನೇಣು ಹಾಕಿಕೊಂಡ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ತನಿಖೆಯ ನಂತರವೇ ಘಟನೆಯ ಹಿನ್ನೆಲೆ ತಿಳಿದು ಬರಲಿದೆ ಎಂದರು. ಪ್ರಕರಣ ದಾಖಲು ಘಟನೆಯ ಹಿನ್ನೆಲೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬ್ರಹ್ಮಾಂಡದಲ್ಲಿ ಶೇ೭೫ ರಷ್ಟು ನೀರಿದ್ದರೂ ನಾವು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಮೂಲಕ ನೀರಿನ ಸಮಸ್ಯೆಯನ್ನು ತಡೆಯಲು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಕರೆ ನೀಡಿದರು.ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪುರಸಭೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ನೀರಿಲ್ಲದೇ ನಮ್ಮ ಜೀವನವಿಲ್ಲ. ನೀರಿನ ಅಭಾವ ಉಂಟಾದಲ್ಲಿ ಮುಂದಿನ ಪೀಳಿಗೆಗೆ ಸಾಕಷ್ಟು ಹೊಡೆತ ಬೀಳಲಿದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಮೂಡಬೇಕು ಎಂಬ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀರಿನ ಪ್ರಾಮುಖ್ಯತೆ ಮತ್ತು ಸಂರಕ್ಷಣೆಗಾಗಿ ಕೃಷಿ ಹೊಂಡದಂತಹ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರದಾರ ಮಾತನಾಡಿ ನೀರನ್ನು…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು,ದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಪ್ರತೀ ವರ್ಷ ಅಕ್ಟೋಬರ್ ೮ ನ್ನು ಭಾರತೀಯ ವಾಯುಸೇನಾ ದಿವಸ್ ಎಂಬುದಾಗಿ ಆಚರಿಸಲಾಗುತ್ತದೆ. ಈ ದಿವಸವನ್ನು ಭಾರತೀಯ ವಾಯು ಸೇನೆಯು ದೇಶ ರಕ್ಷಣೆಯ ಮತ್ತು ಯುದ್ಧದ ಸಂದರ್ಭದಲ್ಲಿ ತೋರಿದ ಅಪ್ರತಿಮ ಸಾಹಸ ಮತ್ತು ತ್ಯಾಗದ ಧ್ಯೋತಕವಾಗಿ ಆಚರಿಸಲಾಗುತ್ತದೆ.೧೯೬೫ರ ಭಾರತ ಪಾಕ್ ಯುದ್ಧದ ಸಮಯದಲ್ಲಿ ದೇಶದ ವಾಯುಸೇನೆಯ ಅತ್ಯಂತ ಹಳೆಯ ಡಕೋಟಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಸೂಪರ್ ಸಾನಿಕ್ ಎಫ್-೧೦೪ ಸ್ಟಾರ್ ಫೈಟರ್ ವಿಮಾನದೊಂದಿಗೆ ಡಾಗ್ ಫೈಟ್ ನಡೆಸಿ ಅದನ್ನು ಹೊಡೆದು ಉರುಳಿಸಿ ತಾವೂ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ತ್ಯಾಗ ರೋಮಾಂಚನ ಉಂಟುಮಾಡುತ್ತದೆ.ಅಂದಿನ ಭಾರತದ ವಾಯುಪಡೆಯ ಶಕ್ತಿಯು ಈಗಿನ ವಾಯುಪಡೆಯಷ್ಟು ಬಲಿಷ್ಠವಾಗಿ ಇರಲಿಲ್ಲ. ಇಂದು ಭಾರತೀಯ ವಾಯುಪಡೆಯಲ್ಲಿ ಪ್ರಪಂಚದ ವಿವಿಧ ದೇಶಗಳ ಅತ್ಯಾಧುನಿಕ ಯುದ್ಧ ವಿಮಾನಗಳು ಇವೆ. ೧೯೬೫ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಸೇನೆಯು ಭಾರತೀಯ…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದತ್ತಿ ಸ್ಮರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಚನಗಳಲ್ಲಿ ಆಧ್ಯಾತ್ಮ ಮತ್ತು ತಾತ್ವಿಕ ವಿಚಾರಗಳಿಗೆ ಹೆಚ್ಚಿನ ಮಹತ್ವವಿದೆ ಮತ್ತು ಅವು ಇಂದಿಗೂ ಸರ್ವಕಾಲಿಕ ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಜ್ಞಾನಾನಂದ ಸ್ವಾಮೀಜಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಹಾಗೂ ಕನ್ನಡ ವಿಭಾಗದ ಸಯುಕ್ತಾಶ್ರಯದಲ್ಲಿ ಅಲ್ಲಮಪ್ರಭುದೇವರ ಜಯಂತಿಯ ಅಂಗವಾಗಿ ಹಾಗೂ ದಿವಂಗತ ಕೃಷ್ಣಾಭಾಯಿ ಹನುಮಂತ ಬಿದರಿ, ಲಿಂ. ಶಿವಲಿಂಗಮ್ಮ ಪರಪ್ಪ ಸಜ್ಜನ, ಲಿಂ ಶಾಂತಾಬಾಯಿ ಮಲ್ಲೇಶಪ್ಪ ಸಜ್ಜನ, ಕೋರವಾರ ಶಂಕರಗೌಡ ಶರಣಪ್ಪಗೌಡ ಪಾಟೀಲ ಇವರ ದತ್ತಿ ಸ್ಮರಣೆ ಕಾರ್ಯಕ್ರಮ ದತ್ತಿ ದಾಸೋಹಿಗಳಾದ ಪ್ರೊ ಆರ್ ಎಚ್ ಬಿದರಿ ಮತ್ತು ಪ್ರೊ ಜಯಶ್ರೀ ಸಜ್ಜನ ಅವರ ದತ್ತಿ ಕಾರ್ಯಕ್ರಮದಲ್ಲಿ “ಅಲ್ಲಮಪ್ರಭು ಅನುಭಾವ” ವಿಷಯದ ಕುರಿತು ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು…
