Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿಯೊಬ್ಬ ಮಹಿಳೆ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಂಡು ಸ್ವಸ್ಥ ಸಮಾಜದ ನಿರ್ಮಾಣ ಮಾಡುವತ್ತ ಯೋಚಿಸಬೇಕು. ಕುಟುಂಬದ ಆಧಾರ ಸ್ತಂಭವೇ ಸ್ತ್ರೀಯಾಗಿದ್ದಾಳೆ ಎಂದು ರಾಷ್ಟ್ರ ಸೇವಿಕಾ ಸಮಿತಿ ವಿಜಯಪುರ ವಿಭಾಗದ ವಿಭಾಗ ಕಾರ್ಯವಾಹಿಕಾಭುವನೇಶ್ವರಿ ಕೋರವಾರ ಹೇಳಿದರು.ನಗರದ ಶ್ರೀ ಐಶ್ವರ್ಯ ವಿಕಲಚೇತನ ಮಹಿಳಾ ವಸತಿ ನಿಲಯದಲ್ಲಿ ಸೇವಾ ದಿನ ನಿಮಿತ್ತ ಜರುಗಿದ ಮಹಿಳೆಯರ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತ ರೋಗ ಬರುವ ಮುಂಚೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಇರಬೇಕು. ಇಂದು ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಬದುಕು ನಡೆಸಲು ಶಿಕ್ಷಣ, ಜಾಗೃತಿ ಜೊತೆಗೆ ಸಂಘಟಿತವಾಗಿ ಇರುವುದು ತುಂಬಾ ಮುಖ್ಯ ವಾಗಿದೆ ಎಂದರು.ಡಾ. ಸವಿತಾ ಬಿರಾದಾರ ಅವರು ವಸತಿ ನಿಲಯದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಿದರು.ವಸತಿ ನಿಲಯದ ಅಧ್ಯಕ್ಷೆ ಡಾ. ರಶ್ಮಿ ಚಿತ್ತವಾಡಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಗರ ಕಾರ್ಯವಾಹಿಕಾ ದಾಕ್ಷಾಯಿಣಿ ಹೀರಾಪೂರ ಸೇವಾ ಗೀತೆ ಹಾಡಿ ವಂದಿಸಿದರು.
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ (ಬೆಳಗಾವಿ)ಇಂಗ್ಲೀಷ್ ಉಪನ್ಯಾಸಕರುಸ ಪ ಪೂ ಕಾಲೇಜು ಹಿರೇಬಾಗೇವಾಡಿತಾ: ಜಿ: ಬೆಳಗಾವಿಮೊ: 9449234142 ಉದಯರಶ್ಮಿ ದಿನಪತ್ರಿಕೆ ಭಯ ಎಂದರೇನು?ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.ಭಯ ಉಂಟಾಗೋದು ಯಾವಾಗ?ನಾಳೆ ಏನಾಗುತ್ತದೆಯೋ ಏನೊ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆಯಲ್ಲಿ ದಿನಗೂಲಿ ಮೇಲೆ ನೇಮಕವಾಗಿರುವ ಶಮಶುದ್ಧಿನ್ ಮೂಲಿಮನಿ ಇವರ ನೇಮಕದಲ್ಲಿ ಅವ್ಯವಹಾರವಾಗಿದ್ದು ಇಲಾಖಾ ಅಧಿಕಾರಿಗಳು ಭಾಗಿಯಾಗಿ ಉಚ್ಛ ನ್ಯಾಯಾಲಯದ ಆದೇಶವನ್ನೇ ತಿರುಚಿದ್ದಾರೆ. ಈ ನೇಮಕದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಇಲ್ಲಿನ ಪುರಸಭೆ ಸದಸ್ಯ ಶಿವು ಶಿವಪೂರ ಅವರು ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯಕ್ಕೆ, ಲೋಕಾಯುಕ್ತರಿಗೆ, ಯೋಜನಾ ನಿರ್ದೇಶಕರಿಗೆ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರಿದ್ದಾರೆ.ದೂರಿನ ಪ್ರತಿಯನ್ನು ಪತ್ರಿಕೆಗೆ ನೀಡಿ ಮಾತನಾಡಿದ ಶಿವಪುರ ಅವರು ಮೂಲಿಮನಿ ಅವರು ಪುರಸಭೆಯಲ್ಲಿ ಬೇ ಕಾಯ್ದೇಶಿರವಾಗಿ ನೇಮಕವಾಗಿದ್ದಾರೆ. ನಿಯಮಗಳ ಪ್ರಕಾರ ಇವರನ್ನು ನೇಮಕ ಮಾಡಿಕೊಳ್ಳಲು ಬರುವದಿಲ್ಲ. ನೇಮಕದ ವೇಳೆ ಇಲಾಖಾ ಅಧಿಕಾರಿಗಳು ಕಾರ್ಮಿಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಹೇಗಾದರೂ ಮಾಡಿ ಸರಕಾರದಿಂದ ಅಕ್ರಮವಾಗಿ ಕೆಲಸ ಪಡೆದುಕೊಳ್ಳುವ ದುರುದ್ದೇಶವನ್ನು ಹೊಂದಿರುವ ಬಗ್ಗೆ ದಾಖಲೆಗಳ ಪರೀಶಿಲಿಸಲಾಗಿ ಕಂಡುಬಂದಿದೆ. ಇವರ ನೇಮಕದಿಂದ ಸರ್ಕಾರದ ಖಜಾನೆಗೆ ಲುಕ್ಸಾನು ಆಗಿದೆ. ಅಲ್ಲದೇ ಇವರು ಸೇವೆಗೆ ಹಾಜರಾದಾಗಿನಿಂದ ನಕಲಿ ಬಿಲ್ಗಳನ್ನು ಪಾವತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ಪುರಸಭೆಯ ೨೦೨೫-೨೬ನೇ ಸಾಲಿನ ಬಜೆಟ್ ಅನುಮೋದನೆ ನೀಡುವ ಕುರಿತು ತುರ್ತು ಸಾಮಾನ್ಯ ಸಭೆಯನ್ನು ಮಾ.೨೭ರಂದು ಕರೆಯಲಾಗಿತ್ತು. ಏಕಾಏಕಿ ಸಭೆಯನ್ನು ರದ್ದು ಮಾಡಿರುತ್ತಾರೆ. ಆದರೆ ರದ್ದು ಮಾಡುವ ಅಧಿಕಾರ ಏನಿದ್ದರೂ ಅಧ್ಯಕ್ಷರಿಗಿರುತ್ತದೆ. ಆದರೆ ಇವರೇಕೆ ಮಾಡಿದರು.ಸುಮಾರು ಒಂದು ತಿಂಗಳಿಂದ ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ನನ್ನ ಗಮನಕ್ಕೆ ಬಾರದೇ ಪುರಸಭೆಯಲ್ಲಿ ಹಾಜರಾತಿಯಿಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳು ಕುಠಿಂತಗೊಂಡಿರುತ್ತವೆ. ಬಳಿಕ ಯಾರಿಗಾದರೂ ಮುಖ್ಯಾಧಿಕಾರಿಯಾಗಿ ವಿನಂತಿಸಿಕೊಂಡಿರುವ ಪ್ರಕಾರ ದತ್ತಾತ್ರೆಯ ಹಳ್ಳಿ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು.ಮಾ.೨೬ರಂದು ನನ್ನ ಅಧ್ಯಕ್ಷತೆಯಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಬೇಸಿಗೆ ನೀರಿನ ಸಮಸ್ಯೆ ಬಾರದೇ ಹಾಗೆ ಅತಿಮುಖ್ಯವಾದ ಸಭೆ ಕರೆದಿದ್ದು, ಸಭೆಗೆ ಗೈರಾಗಿ ಮಧ್ಯಾಹ್ನದ ಮೇಲೆ ಪುರಸಭೆಗೆ ಬಂದು ನೇರವಾಗಿ ಕರೆದಿರುವ ಬಜೆಟ ಸಭೆ ರದ್ದುಮಾಡಿ ಆದೇಶಿಸಿರುತ್ತಾರೆ. ಆದರೆ ಇದರ ಪರಿಣಾಮವಾಗಿ ಮುಂಬರುವ ವಾರ್ಷಿಕ ಹಣಕಾಸಿನಲ್ಲಿ ಸಾಕಷ್ಟು ಸಮಸ್ಯೆಗಳಾಗಲಿದ್ದು, ಪುರಸಭೆಯ ಯಾವುದೇ ಅಭಿವೃದ್ಧಿ ಮಾಡಲು ಸಾದ್ಯವಾಗಿರುವುದಿಲ್ಲ. ಇದರ ಹಿಂದೆ ಯಾವುದೋ ಕಾಣದ ಕೈಗಳು ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದು ಅಲ್ಲದೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬಿಜೆಪಿ ಹಿರಿಯ ನಾಯಕ ಪಂಚಮಸಾಲಿ ಸಮಾಜದ ನಾಯಕ, ಕೇಂದ್ರದ ಮಾಜಿ ಸಚಿವರು ಹಾಗೂ ವಿಜಯಪುರ ನಗರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಹೈ ಕಮಾಂಡ್ ಉಚ್ಚಾಟನೆ ಮಾಡಿದ್ದು. ಕೂಡಲೇ ಈ ಕ್ರಮವನ್ನು ಮರು ಪರಿಶೀಲಿಸಬೇಕು ಎಂದು ಬಿಜೆಪಿ ಯುವ ಮುಖಂಡ ಚೇತನ.ಎಸ್.ರಾಂಪೂರ ಕೋರಹಳ್ಳಿ ತಿಳಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ, ಭ್ರಷ್ಟಾಚಾರ ವಿರೋಧ, ವಂಶವಾದ ರಾಜಕಾರಣದ ವಿರೋಧ ಸರ್ವ ಸಮುದಾಯದ ಹಿತ ಬಯಸುವ ಯತ್ನಾಳ ಗೌಡ್ರು ಯುವಕರ ಆಶಾಕಿರಣವಾಗಿದ್ದು, ಹಾಗಾಗಿ ಪಕ್ಷದ ವರಿಷ್ಠರು ಕೂಡಲೇ ಈ ಉಚ್ಚಾಟನೆ ಕ್ರಮವನ್ನು ರದ್ದುಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಸಕ್ತ ಸಾಲಿನ ೬ನೆಯ ವರ್ಗದ ಪ್ರವೇಶಕ್ಕಾಗಿ ಜ.೧೮ರಂದು ನಡೆದ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಸಿಂದಗಿ ನಗರದ ಪ್ರತಿಷ್ಠಿತ ಆರ್.ಡಿ.ಕುಲಕರ್ಣಿ ಕೋಚಿಂಗ್ ಕ್ಲಾಸ್ನ ೨೩ ವಿದ್ಯಾರ್ಥಿಗಳು ಜವಾಹರ ನವೋದಯ ಶಾಲೆಗಳಿಗೆ ಆಯ್ಕೆಯಾಗುವ ಮೂಲಕ ಕೋಚಿಂಗ್ ಕ್ಲಾಸ್ಗೆ ಕೀರ್ತಿ ತಂದಿದ್ದಾರೆ ಎಂದು ಆರ್.ಡಿ.ಕುಲಕರ್ಣಿ ಹೇಳಿದರು.ವಿದ್ಯಾರ್ಥಿಗಳಾದ ಸತೀಶ ಗಡ್ಡಿ, ಪ್ರಮೋದ ತಾಳಕೇರಿ, ಜೀವನ ಯಂಕಂಚಿ, ಆರ್ಯನ ಕಲಶೆಟ್ಟಿ, ಸಾಮ್ರಾಟ ಪೂಜಾರಿ, ಪ್ರೀತಮ ಬೋಸಲೆ, ಸುದನರಾಜ ಪವಾರ, ಆದರ್ಶ ಕಲ್ಮನಿ, ಅಭಯ ಕಲ್ಮನಿ, ಗುರುರಾಜ ಬಡದಾಳ, ರಾಜು ಇಂಗಳೆ, ಶರಣು ಪೂಜಾರಿ, ಶರಣಗೌಡ ಕೊಣಸಿರಸಗಿ, ಹರ್ಷ ಪೋಲಿಸಪಾಟೀಲ, ಸಮರ್ಥ ಚನ್ನಾ, ಮಾಯಾವತಿ ಚವ್ಹಾಣ, ನಮ್ರತಾ ಕತ್ತಿ, ಚೈತನ್ಯ ತೊರವಿ, ವೇದಾ ಕರ್ಕಳ್ಳಿಮಠ, ಅನುಷ್ಕಾ ಸೋಮನಕಟ್ಟಿ, ಸ್ವಾತಿ ಕೊಳಕೂರ, ಶ್ರಾವಣಿ ಹಿರೇಮಠ, ತನುಜಾ ಚವ್ಹಾಣ ಆಯ್ಕೆಯಾಗಿದ್ದಾರೆ.ಮಕ್ಕಳ ಈ ಸಾಧನೆಗೆ ಕೋಚಿಂಗ ಶಾಲಾ ಸಂಚಾಲಕ ಆರ್.ಡಿ.ಕುಲಕರ್ಣಿ, ಪಿ.ಡಿ.ಕುಲಕರ್ಣಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ ಮತ್ತು ಎಂ.ಪಿ.ಬುಕ್ಕಾ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಯುಗಾದಿ ಅಮವಾಸ್ಯೆ ದಿನದಿಂದ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಿಂದ ಲಕ್ಷಾಂತರ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನಕ್ಕೆ ತೆರಳುತ್ತಾರೆ ಎಂದು ಸಿಂದಗಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಸಿಂದಗಿ ಪಟ್ಟಣದ ಸ್ನೇಹಿತರ ಬಳಗದ ವತಿಯಿಂದ ಆಂದ್ರ ಪ್ರದೇಶದ ಶ್ರೀಶೈಲದಲ್ಲಿ ಅನ್ನಪ್ರಸಾದ ನೆರವೇರಿಸುವುದಕ್ಕಾಗಿ ಸ್ನೇಹಿತರ ಬಳಗದಿಂದ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಮಾತನಾಡಿದರು.ವಿಶೇಷವಾಗಿ ಉತ್ತರ ಕರ್ನಾಟಕದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹೋಗುವುದು ವಾಡಿಕೆಯಾಗಿದೆ. ಹೀಗಾಗಿ ಪ್ರತಿ ವರ್ಷ ನಮ್ಮ ಸ್ನೇಹಿತರ ಬಳಗದಿಂದ ಶ್ರೀಶೈಲಕ್ಕೆ ಆಗಮಿಸುವ ಭಕ್ತರಿಗೆ ಅನ್ನ ಪ್ರಸಾದ ಸೇವೆಯನ್ನು ನೆರವೇರಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಶ್ರೀಶೈಲಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.ಈ ವೇಳೆ ಗುರುಸಂಗಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಮುಂಡೇವಾಡಗಿ, ರವಿ ಬಿರಾದಾರ, ದವಲತರಾಯಗೌಡ ಮನ್ನಾಪೂರ, ವಿಜು ಪಟ್ಟಣಶೆಟ್ಟಿ, ಚನ್ನು ಮುಂಡೇವಾಡಗಿ, ಉಮೇಶ ಜೋಗೂರ, ಮಲ್ಲೇಶಪ್ಪ ಕುಂಬಾರ, ರುದ್ರಯ್ಯ ಮಠ, ಗುರುಪ್ಪ ಬಡಿಗೇರ,…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜಯಪುರ ಶಾಸಕ ಕಟ್ಟ ಹಿಂದೂತ್ವವಾದಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರವನ್ನು ಹೈಕಮಾಂಡ ವಾಪಸ ಪಡೆದುಕೊಳ್ಳಬೇಕು ಇಲ್ಲದಿಂದ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಆಲಮೇಲ ಬಿಜೆಪಿ ಹಾಗೂ ಹಿಂದೂ ಯುವ ಕಾರ್ಯಕರ್ತರು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಗುರುವಾರ ಪಟ್ಟಣದ ಬಿಜೆಪಿ ಹಾಗೂ ಹಿಂದೂ ಯುವ ಕಾರ್ಯಕರ್ತರು ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವದನ್ನು ಖಂಡಿಸಿ ಪಟ್ಟಣದ ಮೇನ ಬಜಾರದಿಂದ ಬಸ್ ನಿಲ್ದಾರಣದ ಹತ್ತರದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಯಡಿಯುರಪ್ಪ ಹಾಗೂ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಇಬ್ಬರ ಭಾವಚಿತ್ರ ನೆನಕ್ಕೆ ಒಗೆದು ಕಾಲಿಂದ ತಿಳಿದು ಆಕ್ರೋಶ ವ್ಯೆಕ್ತಪಡಿಸಿದರು.ಯುವ ಮುಖಂಡ ಕಮಲಾಕರ ಪತ್ತಾ ಮಾತನಾಡಿ ಬಸನಗೌಡ ಪಾಟೀಲ ಯತ್ನಾಳ ಅವರು ಸದಾ ಪಕ್ಷದ ಪರವಾಗಿ ಕೆಸಲ ಮಾಡಿದವರು ವೈಯಕ್ತಿಕವಾಗಿ ವಿರೋದಿಸಿದ್ದಾರೆ ಹೊರತು ಪಕ್ಷದ ವಿರುದ್ದ ಯಾವುದೆ ಚಟುವಟಿಕೆ ಮಾಡದಿರುವರನ್ನು ಉಚ್ಚಾಟಿಸಿರುವದು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಡವರ ಹಿಂದುಪರ ಹೋರಾಟಗಾರರಾದ ಶಾಸಕ ಬಸನಗೌಡ ಪಾಟೀಲ ಯತ್ನಳ ಇವರ ಉಚ್ಚಾಟನೆ ಖಂಡಿಸಿ ಇಂಡಿಯಲ್ಲಿ ಅಭಿಮಾನಿ ಗಳು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು.ಪ್ರತಿಭಟನೆ ಬಸವೇಶ್ವರ ವೃತ್ತದಲ್ಲಿ ನಡೆದು ಅಲ್ಲಿ ರಸ್ತೆ ತಡೆ ಕೂಡ ಮಾಡಿದರು.ಅಲ್ಲಿ ಮಾತನಾಡಿದ ಶ್ರೀಧರ ಕ್ಷತ್ರಿ ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳರನ್ನುಆರು ವರ್ಷ ಉಚ್ಚಾಟನೆ ಮಾಡಿರುವ ಕ್ರಮ ಸರಿಯಲ್ಲ.ವಂಶಾಡಳಿತ, ಭ್ರಷ್ಟಾಚಾರ, ಪಕ್ಷದೊಳಗೆ ಸುಧಾರಣೆ, ಏಕ ವ್ಯಕ್ತಿ ಶ್ರೇಷ್ಠ ಭಾವ, ಹಾಗೂ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದ್ದಕ್ಕೆ ಅವರನ್ನು ಉಚ್ಚಾಟಿಸಲಾಗಿದೆ. ಅವರು ಹಿಂದು ಫೈರ ಬ್ರಾಂಡ ಆಗಿದ್ದಾರೆ ಎಂದರು.ಅಭಿಮಾನಿ ಬಳಗದ ವಿನೋದ ಹದಗಲ್ಲ, ಅಕ್ಷಯ ಪಾಟೀಲ, ಆನಂದ ದೇವರ, ರತನ ಹಲವಾಯಿ, ಶರಣಗೌಡ ಬಂಡಿ, ನಾಗರಾಜ ದಶವಂತ, ಅಂಬಣ್ಣ ಕವಟಗಿ, ಅಂಬಣ್ಣ ಕೌಟಗಿ, ರವಿಗೌಡ ಪಾಟೀಲ, ಶಿವು ತಾಂಬೆ, ಚಂದ್ರಶೇಖರ ದೇವರ, ಶಾಂತೇಶ ಕ್ಷತ್ರಿ, ಶಾಂತು ಪಾಸೋಡಿ, ಹರೀಶ ಆಳಂದಿಕರ, ಮಹೇಶ ಕುಂಬಾರ ಮತ್ತಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಯಾದಗಿರಿ: ನಾರಾಯಣಪುರ ಬಲ, ಎಡದಂಡೆ ಕಾಲುವೆಗೆ ಏ. 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ, ಬುಧವಾರ ನಾರಾಯಣಪುರ ಕೆಬಿಜೆಎನ್ ಎಲ್ ಮುಖ್ಯ ಅಭಿಯಂತರ ಕಚೇರಿ ಮುಂಭಾಗ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರು, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆ ಮುಖಂ ಡರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.ಬೆಳಗ್ಗೆ ಹುಣಸಗಿ ಪಟ್ಟಣದಿಂದ ಹೊರಟ ನೂರಾರು ಟ್ರ್ಯಾಕ್ಟರ್ಗಳು ನಾರಾಯಣಪುರ ಜಲಾಶಯದವರೆಗೆ ಬಂದು ತಲುಪಿದವು. ದಾರಿಯುದ್ದಕ್ಕೂ ರೈತರು ಟ್ರ್ಯಾಕ್ಟರ್ಗಳಲ್ಲಿ ನಿಂತುಕೊಂಡು ಹಸಿರು ಟವೆಲ್ ಬೀಸುವ ಮೂಲಕ ಹೋರಾಟ ನಿರತರಿಗೆ ಸ್ಫೂರ್ತಿ ತುಂಬಿದರು. ರಾತೋರಾತ್ರಿ ತೆಲಂಗಾಣಾಕ್ಕೆ ನೀರು ಹರಿಸಿರುವ ರಾಜ್ಯ ಸರಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ನಂತರ ಕೆಬಿಜೆಎನ್ ಎಲ್ ಕಚೇರಿ ಮುಂಭಾಗ ನಡೆದ ಧರಣಿ ವೇಳೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಮಾತನಾಡಿ, ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರಿಗೆ…
