ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿಜಯಪುರ ಶಾಸಕ ಕಟ್ಟ ಹಿಂದೂತ್ವವಾದಿ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವ ನಿರ್ಧಾರವನ್ನು ಹೈಕಮಾಂಡ ವಾಪಸ ಪಡೆದುಕೊಳ್ಳಬೇಕು ಇಲ್ಲದಿಂದ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಆಲಮೇಲ ಬಿಜೆಪಿ ಹಾಗೂ ಹಿಂದೂ ಯುವ ಕಾರ್ಯಕರ್ತರು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಬಿಜೆಪಿ ಹಾಗೂ ಹಿಂದೂ ಯುವ ಕಾರ್ಯಕರ್ತರು ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿರುವದನ್ನು ಖಂಡಿಸಿ ಪಟ್ಟಣದ ಮೇನ ಬಜಾರದಿಂದ ಬಸ್ ನಿಲ್ದಾರಣದ ಹತ್ತರದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡು ಯಡಿಯುರಪ್ಪ ಹಾಗೂ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಇಬ್ಬರ ಭಾವಚಿತ್ರ ನೆನಕ್ಕೆ ಒಗೆದು ಕಾಲಿಂದ ತಿಳಿದು ಆಕ್ರೋಶ ವ್ಯೆಕ್ತಪಡಿಸಿದರು.
ಯುವ ಮುಖಂಡ ಕಮಲಾಕರ ಪತ್ತಾ ಮಾತನಾಡಿ ಬಸನಗೌಡ ಪಾಟೀಲ ಯತ್ನಾಳ ಅವರು ಸದಾ ಪಕ್ಷದ ಪರವಾಗಿ ಕೆಸಲ ಮಾಡಿದವರು ವೈಯಕ್ತಿಕವಾಗಿ ವಿರೋದಿಸಿದ್ದಾರೆ ಹೊರತು ಪಕ್ಷದ ವಿರುದ್ದ ಯಾವುದೆ ಚಟುವಟಿಕೆ ಮಾಡದಿರುವರನ್ನು ಉಚ್ಚಾಟಿಸಿರುವದು ಸರಿಯಲ್ಲ. ಯತ್ನಾಳ ಗೌಡರು ಹಿಂದೂತ್ವ ಹಾಗೂ ಉತ್ತರ ಕರ್ನಾಟಕದ ಅಭಿವೃದ್ದಿ ಪರವಾಗಿ ದ್ವನಿ ಯತ್ತುವವರು ಅವರಿಂದ ಬಿಜೆಪಿಗೆ ಆನೇ ಬಲ ಇದ್ದಂತೆ. ತಕ್ಷಣವೆ ಬಿಜೆಪಿ ಹೈಕಮಾಂಡ ಉಚ್ಚಾಟನೆಯನ್ನು ವಾಪಸ ಪಡೆದುಕೊಳ್ಳಬೇಕು ಇಲ್ಲದಿಂದರೆ ಕಟ್ಟಾ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಬಿಜೆಪಿ ಪಕ್ಷದಿಂದ ದೂರ ಉಳಿಯಲಾಗುವದು ಹಾಗೂ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರ ನೀಡಲಾಗುವದು. ಕಟ್ಟಾ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಬಸನಗೌಡ ಪಾಟೀಲ ಯತ್ನಾಳ ಪರವಾಗಿ ನಿಲ್ಲುತ್ತೆವೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಹಣಮಂತ ರಜಪೂತ ಮಾತನಾಡಿ ಬಿಜೆಪಿಯಲ್ಲಿ ಹಿಂದೂತ್ವವಾದಿಗಳಿಗೆ ಬೆಲೆ ಇಲ್ಲ, ನಕಲಿ ಹಿಂದೂಗಳಿಗೆ ಬೆಲೆಯಿದೆ ನಿಜವಾದ ಪಕ್ಷದ ಅಭಿಮಾನಿ ಹಿಂದುತ್ವವಾದಿ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ವಾಪಸ ಪಡೆಯಬೇಕು ಎಂದು ಆಗ್ರಹಿಸಿದರು.
ಶ್ರೀಶೈಲ ಕಲ್ಲೂರ, ರಮೇಶ ಕತ್ರಾಬಾದಿ, ರತನ ಒಣಕುದರಿ, ಬಸವರಾಜ ಬಡಿಗೇರ, ಮಾದೇವರ ಬುರಡ, ಉಮೇಶ ತಳವಾರ, ನಿಂಗರಾಜ ಬಂಟನೂರ, ಅನೀಲ ಸುತಾರ, ರಾಹಲ ಬಡಿಗೇರ, ಅಶ್ವತ ಪತ್ತಾರ, ವಿನಾಕ ಭೋವಿ, ರಾಹುಲ ಕುಮಸಗಿ, ಯುವರಾಜ ರಜಪೂತ, ವಿಠ್ಠಲ ದೇವಕತೆ, ರಾಹುಲ ಬಗಲಿ, ಕಿಟ್ಟು ರಜಪೂತ, ಗೀರಿಸ ಪಾಟೀಲ, ರಾಜು ಗುರಕಾರ, ಆನಂದ ಕೊಟ್ಟಲಗಿ, ಸತ್ಯವಾನ ತಳವಾರ ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.

