ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬಿಜೆಪಿ ಹಿರಿಯ ನಾಯಕ ಪಂಚಮಸಾಲಿ ಸಮಾಜದ ನಾಯಕ, ಕೇಂದ್ರದ ಮಾಜಿ ಸಚಿವರು ಹಾಗೂ ವಿಜಯಪುರ ನಗರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಹೈ ಕಮಾಂಡ್ ಉಚ್ಚಾಟನೆ ಮಾಡಿದ್ದು. ಕೂಡಲೇ ಈ ಕ್ರಮವನ್ನು ಮರು ಪರಿಶೀಲಿಸಬೇಕು ಎಂದು ಬಿಜೆಪಿ ಯುವ ಮುಖಂಡ ಚೇತನ.ಎಸ್.ರಾಂಪೂರ ಕೋರಹಳ್ಳಿ ತಿಳಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ, ಭ್ರಷ್ಟಾಚಾರ ವಿರೋಧ, ವಂಶವಾದ ರಾಜಕಾರಣದ ವಿರೋಧ ಸರ್ವ ಸಮುದಾಯದ ಹಿತ ಬಯಸುವ ಯತ್ನಾಳ ಗೌಡ್ರು ಯುವಕರ ಆಶಾಕಿರಣವಾಗಿದ್ದು, ಹಾಗಾಗಿ ಪಕ್ಷದ ವರಿಷ್ಠರು ಕೂಡಲೇ ಈ ಉಚ್ಚಾಟನೆ ಕ್ರಮವನ್ನು ರದ್ದುಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

