Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ವಿವಿಧ 52 ದತ್ತಿ ಪ್ರಶಸ್ತಿಗಾಗಿ ಬರಹಗಾರರಿಂದ 2023 ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಿತ್ತು. ಮಕ್ಕಳ ಸಾಹಿತ್ಯ ವಿಭಾಗದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಬರೆದ ನಲುಗದಿರಲಿ ಪರಿಸರ ಶಿಶುಗೀತೆಗಳ ಸಂಕಲನಕ್ಕೆ “ವಸುದೇವ ಭೂಪಾಲಂ” ದತ್ತಿ ಪುರಸ್ಕಾರ ದೊರೆತಿದೆ. ದೇಶ ವಿದೇಶಗಳಿಂದ 4 ಸಾವಿರಕ್ಕೂ ಅಧಿಕ ಕೃತಿಗಳು ಸಲ್ಲಿಕೆಯಾಗಿದ್ದು, 12 ಜನರ ಪರಿಣಿತರ ಸಮಿತಿ ಆಯ್ಕೆ ಮಾಡಿದ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ನೇತೃತ್ವದ ತಂಡ ಎಲ್ಲ ಕೃತಿಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಬರಹಗಾರರಿಗೂ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು ಎಂದು ಕಸಾಪ ಅಧ್ಯಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೌಲಾಲಿ ಆಲಗೂರ ಇವರಿಗೆ ಪ್ರಶಸ್ತಿ ದೊರೆತಿರುವುದಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಸಿಬ್ಬಂದಿಗಳು ಹಾಗೂ ಸಿಂದಗಿ ಸಾಹಿತ್ಯ ಬಳಗ ಅಭಿನಂದನೆ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದಲ್ಲಿ ಶಿಕ್ಷಣ ರಂಗದ ಇಬ್ಬರೂ ಅಮೋಘ ರತ್ನಗಳು ನಮ್ಮಿಂದ ಕಳಚಿದ ಪ್ರಯುಕ್ತ ಶಿಕ್ಷಣ ಪ್ರೇಮಿಗಳು , ಶ್ರೀ ವಿಶ್ವೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರು ಹಿರಿಯರು ದಿ.ಅಪ್ಪಾಸಾಹೇಬ ಕಲ್ಲೂರ ಹಾಗೂ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಆಡಳಿತ ಮಂಡಳಿಯ ನಿರ್ದೇಶಕರು ದಿ. ಮನೋಹರ ಭಸ್ಮೆ ರವರಿಗೂ ಶ್ರೀ ವಿಶ್ವೇಶ್ವರ ಬಾಲ ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.ಈ ವೇಳೆ ಸಮಿತಿಯ ಅಧ್ಯಕ್ಷ ಎಸ್.ಆಯ್.ಜೋಗೂರ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶಾಲೆಗೆ ಪ್ರಾರಂಭದಲ್ಲಿ ಅಪ್ಪಾಸಾಹೇಬ ಕಲ್ಲೂರ ಹಾಗೂ ಮನೋಹರ ಭಸ್ಮೆ ರವರ ಕೊಡುಗೆ ಅಪಾರವಾದದ್ದು. ಭಸ್ಮೆ ಅವರು ಸದಾಕಾಲವೂ ಶಾಲೆಯ ಅಭಿವೃದ್ಧಿ ಗಾಗಿ ಕೈ ಜೋಡಿಸಿ ಶಾಲೆಯ ಪ್ರಗತಿಗಾಗಿ ದೂರದೃಷ್ಟಿ ಹೊಂದಿದ್ದವರು. ಈರ್ವರೂ ನಮ್ಮಿಂದ ಅಗಲಿದ್ದೂ ಅಪಾರವಾದ ನಷ್ಟವನ್ನು ಉಂಟು ಮಾಡಿದೆ ಎಂದರು.ಈ ವೇಳೆ ಆಡಳಿತ ಮಂಡಳಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಅಶೋಕ ವಾರದ, ಪ್ರಶಾಂತ ಬಡದಾಳ,…
ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್ ಆರ್ ಚೌಧರಿ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಅವೈಜ್ಞಾನಿಕ ನೀತಿ ಮತ್ತು ಮೀನುಗಾರರ ಹಿತಾಸಕ್ತಿಗೆ ವಿರುದ್ಧವಾದ ಕ್ರಮಗಳಿಂದ ಮೀನುಗಾರರ ಬದುಕು ಅತಂತ್ರವಾಗುವ ಭೀತಿ ಹೆಚ್ಚುತ್ತಿದೆ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷಡಾ.ಗೌತಮ್ ಆರ್ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಹೊನ್ನಾವರದ ಕಾಸರಕೋಡ ಟೊಂಕದ ಸೂಕ್ಷ್ಮ ಮತ್ತು ಸುಂದರ ಕಡಲತೀರದಲ್ಲಿ ಮತ್ತೊಂದು ವಾಣಿಜ್ಯ ಬಂದರು ನಿರ್ಮಾಣದ ವಿವಾದ ಭುಗಿಲೆದ್ದಿದೆ. ಈ ಹಿಂದೆ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ, ಕಚ್ಚಾ ರಸ್ತೆ ಸುಧಾರಣೆಯ ನೆಪದಲ್ಲಿ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿ, ಪೊಲೀಸ್ ಬಲ ಪ್ರಯೋಗದ ಮೂಲಕ ಕಾನೂನುಬಾಹಿರವಾಗಿ ಹೊಸ ರಸ್ತೆ ನಿರ್ಮಿಸಲು ಯತ್ನಿಸಲಾಗಿತ್ತು. ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಅಧಿಕಾರಿಗಳು ಮತ್ತು ಪ್ರಭಾವಿಗಳಿಗೆ ಅಲ್ಲ ಎಂಬ ಸತ್ಯ ಸ್ಥಳೀಯರಿಗೆ ಮನವರಿಕೆಯಾಗಿದೆ.ಹೊನ್ನಾವರ ಪೋರ್ಟ್…
ರಚನೆ- ಗುಜ್ಜರ್ಹಿರಿಯ ಪತ್ರಕರ್ತರುದಾವಣಗೆರೆ ಉದಯರಶ್ಮಿ ದಿನಪತ್ರಿಕೆ ಬಗೆದಷ್ಟುಕೌತುಕದ ಆವಿಷ್ಕಾರಜಲ ಸಂಗಮದಜಲಧಾರಪುಳಕಿತಗೊಂಡವರಜೀವನದ ಪ್ರವರ ತ್ರಿವೇಣಿ ಸಂಗಮದತಿರುಳರಿತ ನಾಗಾಘೋರಿಗಳಸಂಗಮಸಾಧು ಸಂತರಸಮಾಗಮಭಕ್ತ ಸಾಗರದಸರಿಗಮ ನಲಿದರುನರ್ತಿಸಿ ಮೆರೆದರುಕಳಚಿ ಕರ್ಮವಧರಿಸಿದರು ಧರ್ಮದಧೋತರವಅಭಿವಂದಿಸಿದರುಗಂಗೆ ಯಮುನೆ ಸರಸ್ವತಿಯರಿಗೆ ಕೊಂಡೊಯ್ದರುಮನುಕುಲದಮನದ, ನೆಲದಕಪ್ಪುಗಳನುಹರಿಸಿದರುಆದರ್ಶ ಜೀವನದಆವಿಷ್ಕಾರವನು ಕೋಟಿ ಕೋಟಿಭಕುತರ ಬವಣೆನೀಗಿಸಿ ಧನ್ಯಳಾಗಿಸಿದಳುಗಂಗೆಮುಕ್ತವಾಗಿಸಿದಳುಮೃತುವಿನಿಂದತಿಳಿ ನೀಲಯಮುನೆಸ್ಥಿತ ಪ್ರಜ್ಞಳಾಗಿಸಿದಳುಗುಪ್ತಗಾಮಿನಿಸರಸ್ವತಿ ಅದೇಕೆ ಈ ಕುಂಭ ಸ್ನಾನನೀಗಿಸುವಳೇ ಜಗದಜನರ ಹಸಿವಲಕುಮಿಯ ಬವಣೆಯಎನುವ ಅಧಮರಅನುಭೂತಿಸಿದಳುತ್ರಿವೇಣಿ ಸಂಗಮದಲಿಸಮಗಮರಾದರುಮೋಕ್ಷ ಪಡೆದುಪುನೀತರಾದರುಪುನರ್ಜನ್ಮದ ಪಥಕೆಸಾಗಿದ ಪುಣ್ಯಾತ್ಮರುನಮಿಸುವುದುಭರತ ಭೂಮಿಅನವರತ ತ್ರಿವೇಣಿಯಲಿಮಿಂದದವರುಮಿಂದವರ ದರುಶನವಪಡೆದು ಪಾವನರಾಗಿರಿಪಡೆಯಿರಿ ಹಿರಿಯರಆಶೀರ್ವಾದಸ್ಪರ್ಶಿಸಿ ಪಾದವ ಇಹುದು ಶಿವರಾತ್ರಿಶಿವನ ಜಟೆಯಲಿದುಮ್ಮಿಕ್ಕುವುದು ಗಂಗೆ ಮನದ ಧರೆಗೆಭಜಿಸಿ ಭುಜಿಸಿಅಹೋರಾತ್ರಿ ಜಪಿಸಿಶಿವ ಸಂಗಮದಲಿಮೇಳೈಸಿಮನವರಳಿಸಿಮನದ ವಿಕೃತಿಯ ಮರೆತುಪಡೆಯಿರಿಶಿವ ಸಿಂಚನ
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಶ್ರೀಕೃಷ್ಣನ ಪರಮಭಕ್ತನಾಗಿದ್ದ ಋಷಿಯೊಬ್ಬ ನದಿಯ ತೀರದಲ್ಲಿ ವಾಸವಾಗಿದ್ದನು. ಸುಮಾರು ವರ್ಷಗಳಿಂದ ನೀರಿನ ಮೇಲೆ ನಡೆಯುವ ಸಾಧನೆಯಲ್ಲಿ ತೊಡಗಿದ್ದನು. ಬಾಲಕಿ ತಂದುಕೊಡುತ್ತಿದ್ದ ಹಸುವಿನ ಹಾಲನ್ನು ಮಾತ್ರ ಸೇವಿಸುತ್ತಿದ್ದನು. ಒಂದು ದಿನ ಹುಡುಗಿಯ ತಾಯಿ ಮೋಡಗಳು ದಟ್ಟವಾಗಿವೆ. ಮಳೆಯಾಗಿ ನದಿ ತುಂಬಿ ಹರಿಯುವ ಸಾಧ್ಯತೆಯಿದೆ. ಹೀಗಾಗಿ ಹಾಲು ತರಲಾಗುವುದಿಲ್ಲವೆಂದು ಋಷಿಗಳಿಗೆ ತಿಳಿಸಲು ಹೇಳಿದಳು. ಬಾಲಕಿಗೆ ಋಷಿ ‘ಪ್ರವಾಹದ ಬಗ್ಗೆ ಯೊಚಿಸಬೇಡ. ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸುತ್ತೇನೆ. ಕಣ್ಮುಚ್ಚಿ ‘ಕೃಷ್ಣ ಕೃಷ್ಣ’ ಅನ್ನು ಆಗ ನೀನು ಆರಾಮವಾಗಿ ನೀರಿನ ಮೇಲೆ ನಡೆಯಬಹುದೆಂದನು. ನಿರೀಕ್ಷಿಸಿದಂತೆ ಮಳೆ ಧಾರಾಕಾರವಾಗಿ ಸುರಿಯಿತು. ನದಿ ತುಂಬಿ ಹರಿಯತೊಡಗಿತು. ಬಾಲಕಿ ಋಷಿಗೆ ಹಾಲನ್ನು ನೀಡಲು ಹೊರಟಳು. ತಾಯಿ ಒಪ್ಪಲಿಲ್ಲ. ಋಷಿಗಳು ತನಗೆ ನೀರಿನ ಮೇಲೆ ನಡೆಯುವ ಮಂತ್ರವನ್ನು ಕಲಿಸಿದ್ದಾರೆಂದು ಒತ್ತಾಯಿಸಿದ ಮೇಲೆ ತಾಯಿ ಒಪ್ಪಿದಳು. ಬಾಲಕಿ ಕೃಷ್ಣ ಕೃಷ್ಣ ಎನ್ನುತ್ತ ನೀರಿನ ಮೇಲೆ ಆರಾಮವಾಗಿ ಬಂದದ್ದನ್ನು ಕಂಡ ಋಷಿ ಆಶ್ಚರ್ಯಗೊಂಡನು. ಅದೇ…
ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಗಮನ ಸೆಳೆದ ದೇವಿಯರ ಬಡಿಗೆ ಆಟ ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ತಾಲೂಕಿನ ಮಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಜಾತ್ರೆಯು ಶುಕ್ರವಾರ ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.ಶಕ್ರವಾರ ಬೆಳಿಗ್ಗೆಯಿಂದ ಭಕ್ತರು ಚೌಡೇಶ್ವರಿ ದೇವಿಯರಿಗೆ ಹರಕೆಗಳನ್ನು ಮುಟ್ಟಿಸಿ, ದೇವಿಯರಿಗೆ ಉಡಿತುಂಬಿ, ನೈವೇದ್ಯ ಅರ್ಪಿಸಿದರು.ಮಧ್ಯಾಹ್ನ ಗ್ರಾಮದ ಮುಖಂಡರು ಬಾಜಾ ಭಜಂತ್ರಿ, ಡೊಳ್ಳು, ಕಳಸದೊಂದಿಗೆ ದೇವಾಲಯಕ್ಕೆ ಹೋಗಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಡಿಗೇರ ಮನೆತನದ ಅರ್ಚಕರು ದೇವಿಯರ ಮುಖಗಳನ್ನು ಧರಿಸಿ ಗ್ರಾಮದ ಹಳೆ ಅಗಸಿಯಲ್ಲಿ ಗ್ರಾಮದ ಎಡ ಮತ್ತು ಬಲ ಸಮುದಾಯದ ಪ್ರಮುಖರಿಗೆ ಗಂಧವನ್ನು ನೀಡಿದರು. ನೂರಾರು ಭಕ್ತರೊಂದಿಗೆ ಬಡಿಗೆಯ ಆಟ ಆಡುತ್ತಾ ಭಕ್ತ ಸಮೂಹಕ್ಕೆ ದರ್ಶನ ನೀಡಿದರು. ಸಾಯಂಕಾಲ ೬ಕ್ಕೆ ಬಡಿಗೆ ಆಟ ಆಡಿ ಹಳ್ಳದ ದಂಡೆಯ ಕಟ್ಟೆಯ ಮೇಲೆ ದೇವಿಯರು ಆಸೀನರಾದರು. ನೋಡುವ ಜನರ ದೃಷ್ಟಿ ದೇವಿಯರಿಗೆ ತಾಕಬಾರದೆಂದು ಹಡಪದ ಸಮಾಜದವರು ಸೆಗಣಿ ಮತ್ತು ತಳವಾರ ಸಮಾಜದವರು ಬಾನ ಎರಚಿದರು. ದೇವಿಯರು ಬಡಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾತೃಭಾಷೆ ಕಲಿಯುವ ಮೊದಲ ಭಾಷೆ. ಅದು ಪ್ರತಿಯೊಂದು ಸಂಸ್ಕೃತಿಯ ಮತ್ತು ಆತ್ಮವಿಶ್ವಾಸದ ಪ್ರತೀಕ. ಅದು ನಮ್ಮ ಕನಸನ್ನು ಅರಳಿಸುವ ಹೃದಯದ ಭಾಷೆಯಾಗಿದೆ. ಮಾತೃಭಾಷೆಯ ಉಳಿವಿಗೆ ಪ್ರತಿ ಕುಟುಂಬ ಶ್ರಮಿಸಬೇಕಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ಶುಕ್ರವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಉದ್ಘಾಟಿಸಿ ಮಾತನಾಡಿದರು.ಮಾತೃಭಾಷೆ ಮನುಷ್ಯನ ಮೌಲ್ಯಗಳ ವಾಹಕ. ಅದುನಮ್ಮನ್ನು ರಾಷ್ಟ್ರೀಯತೆಯೊಂದಿಗೆ ಸಂಪರ್ಕಿಸಿ, ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತದೆ. ಮಾತೃಭಾಷೆ ಆತ್ಮದ ಧ್ವನಿಯಾಗಿದ್ದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಭಾಷಾ ವೈವಿಧ್ಯತೆಯನ್ನು ಉತ್ತೇಜಿಸಲು ಮಾತೃಭಾಷೆಯ ಸಂರಕ್ಷಣೆ ಬಹು ಅಗತ್ಯವಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ,ಮಗುವಿಗೆ ಯೋಚಿಸಲು, ಅರ್ಥಮಾಡಿಕೊಳ್ಳಲು ಮತ್ತು ತಿಳುವಳಿಕೆಯನ್ನು ನೀಡುವದೇ ಮಾತೃಭಾಷೆ. ಮಾತೃಭಾಷಾ ಶಿಕ್ಷಣವು ಮಗುವಿನ ಶೈಕ್ಷಣಿಕ ಕಾರ್ಯಕ್ಷಮತೆ, ಅರಿವಿನ ಬೆಳವಣಿಗೆ ಮತ್ತು ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತ್ರಿಪದಿಗಳ ಮೂಲಕ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನ ಸಾಮಾನ್ಯರನ್ನು ಎಚ್ಚರಿಸಿದ ಸರ್ವಜ್ಞ ಕವಿಯ ಅದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಡಿ.ಪಾಟೀಲ ಹೇಳಿದರು.ಅವರು ತಾಲೂಕಿನ ಮಲ್ಲಾಬಾದ ಗ್ರಾಮದ ಸಿದ್ಧಾರ್ಥ ಪ್ರೌಢ ಶಾಲೆಯಲ್ಲಿ ತ್ರಿಪದಿ ಬ್ರಹ್ಮ ಸರ್ವಜ್ಞ ಕವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ವಜ್ಞ ಕವಿಯಲ್ಲಿರುವ ಅಪಾರ ಪಾಂಡಿತ್ಯ ಹಾಗೂ ಜ್ಞಾನ ಭಂಡಾರದಿಂದ ಜಗತ್ತಿಗೆ ಪರಿಚಯಿಸಿಕೊಂಡಿದ್ದಾನೆ. ಹೀಗಾಗಿ ಸರ್ವಜ್ಞ ಕವಿಯ ಸಾಹಿತ್ಯವನ್ನು ಎಂಥಹವರು ಕೂಡಾ ಓದಿ ಅರ್ಥೈಸಿಕೊಳ್ಳುವ ಜೊತೆಗೆ ಎಂದೆಂದಿಗೂ ಮಾರ್ಗದರ್ಶಿಯಾಗಿರಲಿದೆ ಎಂದ ಅವರು ವಿದ್ಯಾರ್ಥಿಗಳು ಕೂಡಾ ನಿರಂತರ ಓದಿನ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿಗಳು ಸಾಧಕ ಮಹಾನ್ ವ್ಯಕ್ತಿಗಳ ಚರಿತ್ರೆ ಹೇಳಿಕೊಡುವ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಶ್ರೀ ಹರ್ಷವರ್ಧನ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ.ಸಂಗಣ್ಣ ಎಂ.ಸಿಂಗೆ, ಸಿದ್ಧಾರ್ಥ ಪ್ರೌಢ ಶಾಲೆಯ ಮುಖ್ಯಗುರು ಸಿದ್ದರಾಮ ಪಾಟೀಲ ಸಿಬ್ಬಂದಿಗಳಾದ ಸಿದ್ದಯ್ಯ…
ಬರಗಾಲದಿಂದ ತತ್ತರಿಸಿರುವ ರೈತರ ಜೀವನದ ಜೊತೆ ರಾಜ್ಯ ಸರ್ಕಾರ ಚೆಲ್ಲಾಟ | ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ರೈತರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಪೂರೈಸುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಹೆಸ್ಕಾಂನ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರ ಸಿದಣ್ಣ ಬೆಂಜಿಗೇರಿ ಅವರ ಮೂಲಕ ಹುಬ್ಬಳ್ಳಿಯ ಹೆಸ್ಕಾಂ ಎಂ.ಡಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯದ ಇಂಧನ ಸಚಿವರಿಗೆ ಮನವಿ ಸಲ್ಲಿಸಿ ಬೇಸಿಗೆಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಬಿರು ಬಿಸಿನ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ ಈಗ ವಿದ್ಯುತ್ ಇಲಾಖೆಯ ಕಣ್ಣಾಮುಚ್ಚಾಲೆ ಹಾಗೂ ಕಳಪೆಮಟ್ಟದ ವಿದ್ಯುತ್ ವಿತರಣೆಯಿಂದಾಗಿ ಅಡಚಣೆ ಉಂಟಾಗುತ್ತಿದೆ, ತೋಟದ ವಸ್ತಿಗಳಲ್ಲಿ ವಾಸಿಸುವ ರೈತರ ಮಕ್ಕಳಿಗೆ ಪರೀಕ್ಷೆಗಳು ಹತ್ತಿರ ಬಂದಿರುವುದರಿಂದ ಅಭ್ಯಾಸ ಮಾಡುವುದಾದರು ಹೇಗೆ,…
ಉದಯರಶ್ಮಿ ದಿನಪತ್ರಿಕೆ ಚಡಚಣ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಕೇವಲ ಪಠ್ಯ ಪುಸ್ತಕಗಳು ಮಾಡಲಾರವು. ಅದರೊಟ್ಟಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಇದ್ದಾಗ ಮಾತ್ರ ಯಶಸ್ಸಿನ ಜೀವನದತ್ತ ಸಾಗಲು ಸಾಧ್ಯ ಎಂದು ಬಿಇಒ ಸುಜಾತಾ ಹುನ್ನೂರ ಹೇಳಿದರು.ಪಟ್ಟಣದ ಎಂಇಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಕ್ರೀಡಾಭ್ಯಾಸ ಶಿಕ್ಷಣದ ಅವಿಭಾಜ್ಯ ಅಂಗ. ಮಾನಸಿಕ ಮತ್ತು ದೈಹಿಕ, ಸಮತೋಲನ ಬೆಳವಣಿಗೆಗೆ ಅತ್ಯವಶ್ಯ ಎಂದರು.ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಪ್ರಭಾರಿ ಎನ್.ಎಂ.ಬಿರಾದಾರವರು ಮಾತನಾಡುತ್ತ. ಪುಸ್ತಕದ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿ. ದೈಹಿಕ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಪ್ರಗತಿಗೆ ಅನುಕೂಲ ಕಲ್ಪಿಸಲಿದೆ. ಕ್ರೀಡೆ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯ ಹೆಚ್ಚಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪಠ್ಯದ ಮಾಹಿತಿಯನ್ನು ಬೇಗನೆ ಗ್ರಹಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.ದೈಹಿಕ ಶಿಕ್ಷಣ ಶಿಕ್ಷಕ ಎಂ.ಕೆ.ಮಾನೆಯವರು ಮಾತನಾಡುತ್ತ. ಮಕ್ಕಳಲ್ಲಿ ಅದ್ಭುತವಾದ…
