Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ಜಾತ್ರಾಮಹೋತ್ಸವ ಮಾ. ೧೮ ರಿಂದ ೨೨ ರವರೆಗೆ ಐದು ದಿನಗಳ ಕಾಲ ಧಾರ್ಮಿಕ ಪೂಜೆ, ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ಅತಿ ವೈಭವದಿಂದ ನಡೆಯಲಿದೆ ಎಂದು ಮಣ್ಣೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಮುಳವಾಡ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರಾಯಂಗವಾಗಿ ಐದು ದಿನಗಳ ಯಮನೂರೇಶ್ವರ, ಯೋಗಿ ಚಕ್ರವರ್ತಿ, ಚಾಂಗದೇವ(ರಾಜಾ ಬಾಘ ಸವಾರರ) ದೇವರುಗಳಿಗೆ ಅಭಿಷೇಕ, ಮಹಾಪೂಜೆ ನೆರವೇರಲಿದೆ. ಮಾ. ೧೮ ರಂದು ಸಂಜೆ ೫ ಗಂಟೆಗೆ ಚಾಂಗದೇವರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ. ಸಂಜೆ ೧೧೧೧ ದೀಪೋತ್ಸವ ಜರುಗಲಿದೆ. ರಾತ್ರಿ ೯.೩೦ ಗಂಟೆಗೆ ಗಂಧಾಭಿಷೇಕ(ಸಂದಲ್) ಸಕಲ ವಾದ್ಯ-ವೈಭವದೊಂದಿಗೆ ನಡೆಯಲಿದೆ. ರಾತ್ರಿ ೧೦.೩೦ ಗಂಟೆಗೆ ಹರನಾಳದ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ದೇವರನಿಂಬರಗಿಯ ಮಾಳಂಗರಾಯ ಡೊಳ್ಳಿನ ಗಾಯನ ಸಂಘದಿಂದ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಜರುಗಲಿವೆ ಎಂದರು.ಮಾ.೧೯ ರಂದು ಯೋಗಿಚಕ್ರವರ್ತಿ ಚಾಂಗದೇವರ ಪುಣ್ಯದಿನ ಹಾಗೂ ಜಾತ್ರಾಮಹೋತ್ಸವ(ಉರಸ್) ನಡೆಯಲಿದೆ.…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಗ್ರಾಮದ ಗುರುಮರುಳಾರಾಧ್ಯರ ಹಿರೇಮಠದಲ್ಲಿ ಪ್ರತಿಷ್ಠಾಪಿಸಲು ಉದ್ಧೇಶಿಸಿರುವ ಲಿಂ.ಬಸವಲಿಂಗ ಮರುಳಸಿದ್ದ ಶಿವಾಚಾರ್ಯರ ಅಮೃತ ಶಿಲಾಮೂರ್ತಿಯನ್ನು ಶ್ರೀ ಯಲ್ಲಾಲಿಂಗೇಶ್ವರ ಮಹಾಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಗಂಗಸ್ಥಳದೊಂದಿಗೆ ಹಿರೇಮಠಕ್ಕೆ ತರಲಾಯಿತು.ಕಲಕೇರಿಯ ಪಂಚರಂಗಿ ಸಂಸ್ಥಾನ ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು, ನಾವದಗಿ ಪರ್ವತೇಶ್ವರ ಸಂಸ್ಥಾನ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶ್ರೀಗಳು, ದೇವರಹಿಪ್ಪರಗಿ ಆವುಗೇಶ್ವರ ತಪೋಧಾಮದ ಶಿವಯೋಗಿ ಸ್ವಾಮಿಗಳು ಮತ್ತು ಕಲಕೇರಿ ಹಿರೇಮಠದ ಸಿದ್ಧರಾಮ ಶ್ರೀಗಳು ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ ಅಮೃತ ಶಿಲಾಮೂರ್ತಿಗೆ ಪೂಜೆ ಸಲ್ಲಿಸಿ ಧ್ವಜಸಂಕೇತ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ಸುಮಾರು ೧೦೦೧ ಸುಮಂಗಲೆಯರ ಪೂರ್ಣಕುಂಭ, ಕಳಸಾರುತಿಯೊಂದಿಗೆ, ಸಕಲ ವಾದ್ಯಮೇಳ, ಡೊಳ್ಳುಕುಣಿತದೊಂದಿಗೆ ನಡೆದ ಮೆರವಣಿಗೆಯುದ್ಧಕ್ಕೂ ಪಂಚಾಚಾರ್ಯರ, ಬಸವಲಿಂಗ ಮರುಳಸಿದ್ಧರ ಮತ್ತು ಮರುಳಾರಾಧ್ಯರ ಜೈಕಾರ, ಜೈಘೋಷಗಳು ಮೊಳಗಿದವು, ಸುಡುಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುತ್ತಿರುವ ಕುಂಭಹೊತ್ತ ಮಹಿಳೆಯರು ಮತ್ತು ಭಕ್ತ ಸಮೂಹಕ್ಕಾಗಿ ದಾರಿಯುದ್ಧಕ್ಕೂ ಟ್ಯಾಂಕರ್ನಿಂದ ನೀರನ್ನು ಸಿಂಪಡಿಸಲಾಯಿತು. ಮತ್ತು ಭಕ್ತರಿಗೆ ತಂಪಾದ ನೀರು, ಪಾನಕ ಮತ್ತು ಮಜ್ಜಿಗೆಯ ವ್ಯವಸ್ಥೆ ಮಾಡಲಾಯಿತು.ನಂತರ ಶ್ರೀಮಠದಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಸರ್ವೇ ನಂ.೪೮೭ರಲ್ಲಿ ಸಮುದಾಯ ಭವನ ಸಲುವಾಗಿ ತಳವಾರ ಸಮಾಜಕ್ಕೆ ರಾಜ್ಯ ಸರಕಾರದ ವತಿಯಿಂದ ೨೦ಗುಂಟೆ ಸ್ಥಳ ಮಂಜೂರು ಮಾಡಿಸಿರುವ ಶಾಸಕ ಅಶೋಕ ಮನಗೂಳಿ ಅವರಿಗೆ ಯಂಕಂಚಿ ಗ್ರಾಮದ ತಳವಾರ ಸಮಾಜದ ಮುಖಂಡರು, ಕಾರ್ಯಕರ್ತರು ೫೦ಕೆಜಿ ಸೇಬು ಹಣ್ಣಿನ ಹಾರದೊಂದಿಗೆ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಾಯ್.ಪಿ.ನಾಯ್ಕೋಡಿ, ಗುರಪ್ಪ ನಾಯ್ಕೊಡಿ, ಬಸು ನಾಯ್ಕೊಡಿ, ಪರಸು ನಾಯ್ಕೊಡಿ, ಹಣಮಂತ ತೆನ್ನಳ್ಳಿ, ಮಲ್ಲು ನಾಯ್ಕೋಡಿ, ಮಲಕಪ್ಪ ಹೊಸಮನಿ, ಸುರೇಶ ನಾಯಕೊಡಿ, ಲಕ್ಷ್ಮಣ್ ಹೊಸಮನಿ ಸೇರಿದಂತೆ ಪಕ್ಷದ ಮುಖಂಡರಾದ ಷಣ್ಮುಖಯ್ಯ ಹಿರೇಮಠ, ಶಂಕರಗೌಡ ಬಿರಾದಾರ, ಜಗದೀಶ್ ಹೂವಿನಳ್ಳಿ, ಸಂಗನಗೌಡ ಬಿರಾದಾರ, ಕಲ್ಲಪ್ಪ ಬಿಸನಾಳ, ರಮೇಶ್ ತಳಗೇರಿ, ಚೇತನಗೌಡ ಪಾಟೀಲ, ಶರಣು ತಳಗೇರಿ, ಯಮನೂರ ಸುಂಬಡ, ಪ್ರಕಾಶ್ ಮುಜಾವರ, ರಾಜುಸಾಬ ಡೋಣುರ, ದಾವೂದ ಡಂಬಳ, ಬಾಬು ಬಾಳಿಕಾಯಿ, ಮೊದಿನ್ ಮುಲ್ಲಾ, ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪುರಾಣ, ಪ್ರವಚನ, ಹರಿಕಥೆಗಳಂತ ಆಧ್ಯಾತ್ಮಿಕ ವಿಚಾರಧಾರೆಗಳು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಬಸವನಬಾಗೇವಾಡಿ ಒಡೆಯರ್ ಹಿರೇಮಠದ ಶಿವಪ್ರಕಾಶ ಶ್ರೀಗಳು ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀವೀರಸಂಗಮೇಶ್ವರ ಹಾಗೂ ಶ್ರೀಮಹಾಂತೇಶ್ವರ ಮೇಲಿನಮಠದಲ್ಲಿ ಆರಂಭಗೊಂಡ “ವರದಾನಿ ಗುಡ್ಡಾಪೂರ ಶ್ರೀದಾನಮ್ಮದೇವಿ ಮಹಾ ಪುರಾಣಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಇದೇ ದಿ:೧೨ ರಿಂದ ಎಪ್ರೀಲ್ ೧೦ ರವರೆಗೆ ರಾತ್ರಿ ೮ ರಿಂದ ೧೦ ಗಂಟೆಯವರೆಗೆ ಜರುಗುವ ಮಹಾಪುರಾಣದಲ್ಲಿ ಗ್ರಾಮದ ಸದ್ಭಕ್ತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.ಕಾರ್ಯಕ್ರಮದ ಸಾನಿಧ್ಯವನ್ನು ಕೊಕಟನೂರ ಗದ್ದುಗೆಮಠದ ಮಡಿವಾಳೇಶ್ವರಶ್ರೀಗಳು ವಹಿಸಿ ಆಶೀರ್ವಚನ ನೀಡಿದರು.ಗ್ರಾಮದ ಗುರುಬಸಯ್ಯ ಹಿರೇಮಠ, ಸಿದ್ದಯ್ಯ ಜಾಲವಾದಿಮಠ, ಬಸಣ್ಣ ಯತ್ನಾಳ, ಸಂಗನಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಹಣಮಂತ್ರಾಯ ಸಾಲವಾಡಗಿ,ಅಪ್ಪುಗೌಡ ಪೋಲಿಸ್ ಪಾಟೀಲ, ರಾಜಶೇಖರ ಛಾಯಾಗೋಳ, ರಫೀಕ ಬ್ಯಾಕೋಡ, ಎಂ.ಸಿ.ಸುಂಬಡ, ಭೀಮನಗೌಡ ಕುಳೇಕುಮಟಗಿ, ಎಂ.ಡಿ.ಮನಹಳ್ಳಿ , ಪ್ರಭಯ್ಯ ಮೇಲಿನಮಠ, ಬಸಯ್ಯ ಮೇಲಿನಮಠ, ರಾಚಯ್ಯ ಹಿರೇಮಠ(ವರ್ಕಾನಹಳ್ಳಿ), ಚನ್ನಪ್ಪಗೌಡ ಬಿರಾದಾರ, ಸಂಗಯ್ಯ ಮೇಲಿನಮಠ, ಮಡುಗೌಡ ಬಿರಾದಾರ, ಮತ್ತು ಗ್ರಾಮದ ಸಮಸ್ತ…
ಪೀಸ್ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಭೌತಿಕ ಪರಿಸರದ ಕುರಿತು ಪ್ರಾಯೋಗಿಕವಾಗಿ ಅರಿವನ್ನು ಮೂಡಿಸುತ್ತಾ ಅವರ ಬುದ್ಧಿಮಟ್ಟವನ್ನು ಹೆಚ್ಚಿಸಿ ಅವರಲ್ಲಿ ಸೃಜನಶೀಲತೆ ಒಡಮೂಡುವಂತೆ ಮಾಡಬೇಕು ಎಂದು ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ ಹೇಳಿದರು.ಗ್ರಾಮದ ಪೀಸ್ ಇಂಟರ್ನ್ಯಾಷನಲ್ ಪ್ರೌಢಶಾಲೆಯಲ್ಲಿ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ವಿಜ್ಞಾನ ವಸ್ತು ಪ್ರದರ್ಶನದ ನಿರ್ಣಾಯಕರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿವಾನಂದ ಹರಿಜನ ಶಿಕ್ಷಕರು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಯಾಶೀಲರಾಗಿ ಪ್ರತಿಯೊಂದು ಸಂದರ್ಭವನ್ನು ಅರಿತುಕೊಂಡು ಬದುಕುವ ಕಲೆಯನ್ನು ಬೆಳೆಸಬೇಕು ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರೇರೇಪಿಸುವ ಶಿಕ್ಷಣ ನೀಡಲು ಪ್ರತಿಯೊಬ್ಬ ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು.ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾನವನ ದೇಹದ ವಿವಿಧ ಅಂಗಗಳಾದ ಹೃದಯ, ಕಿಡ್ನಿ, ರಕ್ತನಾಳಗಳು, ಮಿದುಳು ಕೆಲಸ ಮಾಡುವ ಬಗೆ ಮತ್ತು ರಾಕೆಟ್ ಉಡಾವಣೆ, ಪರಿಸರ ರಕ್ಷಣೆ, ಭೂಮಿ, ನೀರು, ವಾತಾವರಣ ಕಲುಷಿತವಾಗುವನ್ನು ತಪ್ಪಿಸುವ…
ವಿಜಯಪುರದಲ್ಲಿ ಅಭಾಸಾಪದಿಂದ ಮೂರು ಪುಸ್ತಕಗಳ ಲೋಕಾರ್ಪಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ಇತಿಹಾಸ ಸುಮ್ಮನೆ ಬರೋಲ್ಲ, ಆಳವಾದ ಅಧ್ಯಯನ ಬೇಕು’ ಎಂದು ಖ್ಯಾತ ಇತಿಹಾಸ ಸಂಶೋಧಕ ಡಿ ಎನ್ ಅಕ್ಕಿ ಹೇಳಿದರು.ವಿಜಯಪುರ ನಗರದ ಬಿಡಿಇ ಸೊಸೈಟಿಯಲ್ಲಿ ರವಿವಾರ ನಡೆದ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಆಯೋಜನೆಯ ‘ಉಪನ್ಯಾಸ ಹಾಗೂ ಪುಸ್ತಕಗಳ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ‘ಸೃಜನಶೀಲ ಸಾಹಿತ್ಯ ಆದರೆ ಹೇಗೋ ನಡೆಯುತ್ತದೆ, ಇತಿಹಾಸ ಹಾಗಲ್ಲ, ಹಸಿವು ನೀಡರಿಕೆ ಬಿಟ್ಟು ಕ್ಷೇತ್ರಕಾರ್ಯ ಮಾಡಬೇಕು , ಶಾಸನಗಳ ಬಗ್ಗೆ ತಿಳಿದುಕೊಳ್ಳಬೇಕು, ಸಾಕಷ್ಟು ಅಧ್ಯಯನ ಬೇಕು ಎಂದು ಅವರು ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.ಸಾಹಿತ್ಯ ಎಂದೂ ಸವೆಯಬಾರದು, ಸಾಯಬಾರದು ಅಂತಹ ಸಾಹಿತ್ಯ ರಚನೆಯಾಗಬೇಕು. ಅಂತಹದ್ದೇ ರಚನೆ ಬಿಡುಗಡೆಗೊಂಡ ಪುಸ್ತಕಗಳ ಲೇಖಕರದ್ದಾಗಿದೆ ಎಂದು ಬಿಡುಗಡೆಗೊಂಡ ಪುಸ್ತಕಗಳ ಬಗ್ಗೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎನ್. ಆರ್. ಕುಲಕರ್ಣಿ ವಿವರಿಸಿದರು.ಇದೇ ಸಂದರ್ಭದಲ್ಲಿ ಅಭಾಸಾಪ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಅವರ ‘ಕಾಖಂಡಕಿ ಮಹಿಪತಿದಾಸರ ಮುಂಡಿಗೆಗಳು’ , ಬಳವಂತ ಕುಲಕರ್ಣಿ ಅವರ ‘ ಅರುಣೋದಯ ಕಿರಣ’…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಅಮೆರಿಕಾ ದೇಶದ ಉತ್ತರ ಭಾಗದ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬರ್ಮುಡಾ ಟ್ರಯಾಂಗಲ್ ಎಂಬ ಜಲ ಪ್ರದೇಶವಿದೆ. ಈ ಪ್ರದೇಶದ ಆಸುಪಾಸಿನಲ್ಲಿ ಆಗಸದಲ್ಲಿ ಸುಳಿದಾಡಿದರೂ ಆಯಾ ವಸ್ತುಗಳು ವ್ಯಕ್ತಿಗಳು ಕಣ್ಮರೆಯಾಗುತ್ತವೆ. ಹಲವಾರು ವಸ್ತುಗಳು, ವಿಮಾನಗಳು ಹಡಗುಗಳು ಈ ಪ್ರದೇಶದಲ್ಲಿ ಕಣ್ಮರೆಯಾಗಿವೆ. ಅವುಗಳ ಹುಡುಕಾಟ ಕೂಡ ನಿಷ್ಪಲವಾಗಿದೆ. ಇಲ್ಲಿಯವರೆಗೂ ಕಣ್ಮರೆಯಾಗಿ ಹೋದ ಯಾವುದೇ ವಸ್ತುಗಳು ವ್ಯಕ್ತಿಗಳು, ಹಡಗುಗಳು ಪತ್ತೆಯಾಗಿಲ್ಲ. ಅವಶೇಷಗಳು ಕೂಡ ಸಿಕ್ಕಿಲ್ಲ. ಇದಕ್ಕೆ ಕಾರಣ ಬರ್ಮುಡಾ ಟ್ರಯಾಂಗಲ್ ಎಂಬ ವಿಜ್ಞಾನಿಗಳು ಗುರುತಿಸಿರುವ ಸ್ಥಳ.ಯಾವ ರೀತಿ ಬರ್ಮುಡಾ ಟ್ರಯಾಂಗಲ್ ತನ್ನ ಸನಿಹಕ್ಕೆ ಬಂದ ಎಲ್ಲವನ್ನು ತನ್ನೊಳಗೆ ಹುದುಗಿಸಿಕೊಳ್ಳುತ್ತದೆಯೋ ಹಾಗೆಯೇ ಮೊಬೈಲ್ ಎಂಬ ಮಾಯಾವಿ ತನ್ನ ಸನಿಹಕ್ಕೆ ಬಂದ ಎಲ್ಲರನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿಡುತ್ತದೆ. ದಾಸರು ಹೇಳಿದ ಮಾಯೆಯು ನಿನ್ನೊಳಗೊ.. ನೀನೆ ಮಾಯೆಯೋ ಎಂಬಂತೆ ಮೊಬೈಲ್ನ ಮಾಯೆಯಲ್ಲಿ ನಾವು ಸಿಲುಕಿದ್ದೇವೆಯೋ ಅಥವಾ ಮೊಬೈಲೇ ಒಂದು ಮಾಯೆಯು ಎಂಬುದು ಅರಿಯದ್ದು.ಮೊಬೈಲ್ ಎಂಬ ಬರ್ಮುಡಾ ಟ್ರಯಾಂಗಲ್ ನಮ್ಮ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಈ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದು, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ. ಅವುಗಳಿಗೆ ನೀರು ಒದಗಿಸುವ ಮೂಲಕ ಅವುಗಳ ದಾಹ ತೀರಿಸುವುದು ನಮ್ಮೆಲ್ಲರ ಕರ್ತವ್ಯ. ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಪ್ರಶಿಕ್ಷಣಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯ ಶ್ಲಾಘನೀಯ ಎಂದು ಪ್ರಾಚಾರ್ಯೆ ಜೆ.ಸಿ.ನಂದಿಕೋಲ ಹೇಳಿದರು.ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಪ್ರಶಿಕ್ಷಣಾರ್ಥಿಗಳು ಸುತ್ತಮುತ್ತಿನ ಪ್ರದೇಶಗಳಲ್ಲಿ ಪಕ್ಷಿಗಳಿಗೆ ನೀರಿನ ತೊಟ್ಟಿಗಳನ್ನು ಅಳವಡಿಸಿ ಬಳಿಕ ಮಾತನಾಡಿದ ಅವರು, ಪ್ರಶಿಕ್ಷಣಾರ್ಥಿಗಳು ಮತ್ತು ಉಪನ್ಯಾಸಕರು ಸೇರಿಕೊಂಡು ಕಾಲೇಜಿನ ಆವರಣದಲ್ಲಿ ವಿವಿಧ ಸ್ಥಳಗಳಲ್ಲಿ ನೀರಿನ ತೊಟ್ಟಿಗಳನ್ನು ಇರಿಸಲಾಗಿದ್ದು, ಪಕ್ಷಿಗಳು ಬಾಯಾರಿದಾಗ ಅನುಕೂಲವಾಗುವಂತೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ದಾನ್ಯ ಹಾಕುವ ಕಾರ್ಯದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ಈ ತೊಟ್ಟಿಗಳಿಗೆ ನೀರು ತುಂಬಿಸಿ ಪಕ್ಷಿಗಳ ದಾಹ ತೀರಿಸುತ್ತಿದ್ದಾರೆ ಎಂದರು.ಈ ವೇಳೆ ಉಪನ್ಯಾಸಕರಾದ ಡಿ.ಎಸ್.ಮಠಪತಿ, ಪಿ.ಸಿ.ಕುಲಕರ್ಣಿ, ಸುಧಾಕರ ಚವ್ಹಾಣ, ಆರ್.ಎ.ಹಾಲಕೇರಿ, ಚನ್ನು ಕತ್ತಿ, ಶಿವುಕುಮಾರ ಕತ್ತಿ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಜಾಗತೀಕರಣದ ಭರಾಟೆಯಲ್ಲಿ ಭಾರತವು ಪಾರಂಪರಿಕವಾಗಿ ಆಚರಣೆ ಮಾಡುತ್ತಾ ಬಂದಿರುವ ಹಬ್ಬಗಳು ನಶಿಸಿ ಹೋಗುತ್ತಿವೆ. ಆದರೆ ಹೋಳಿ ಹಬ್ಬ ಮಾತ್ರ ತನ್ನ ಗತ್ತು ಗೈರತ್ತು ಮುಂದುವರೆಸಿಕೊಂಡು ಹೊರಟಿದೆ. ಏಕೆಂದರೆ ಬಣ್ಣದ ಹಬ್ಬವನ್ನು ಹೆಚ್ಚಾಗಿ ಯುವ ಜನಾಂಗವೇ ಆಚರಣೆ ಮಾಡುವುದರಿಂದ ಇನ್ನು ಜೀವಂತವಾಗಿ ಉಳಿದಿದೆ. ಮೇಲಾಗಿ ಈ ಹಬ್ಬವನ್ನು ಜಾತಿ ಮತ ಪಂಥ ಮತ್ತು ಧರ್ಮ ಮೀರಿ ಎಲ್ಲರೂ ಆಚರಿಸುತ್ತಾರೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಈ ಮೊದಲೆಲ್ಲ ಬಣ್ಣದ ಹಬ್ಬದ ದಿನದಂದು ಸಿಂದಗಿ ಪಟ್ಟಣದ ವಿವಿಧ ಬಡವಾಣೆಗಳ ಯುವಕರು ಬಣ್ಣದಾಟದಲ್ಲಿ ಮಿಂದೇಳುತ್ತಿದ್ದರು, ಜೊತೆಗೆ ಗೆಳೆಯರೆಲ್ಲರೂ ಒಂದುಗೂಡಿ ಗಂಡ ಹೆಂಡತಿಯ ಸೋಗನ್ನು ಹಾಕಿ ಕೃತಕ ಶವ ಸಂಸ್ಕಾರದ ರೂಪಕವನ್ನು ಸೃಷ್ಟಿಸಿ, ಪಟ್ಟಣದ ತುಂಬೆಲ್ಲಾ ಶವದ ಮೆರವಣಿಗೆಯನ್ನು ಮಾಡುತ್ತಾ ಜನರನ್ನು ನಗೆಗಡಲಲ್ಲಿ ತೆಲಿಸುತ್ತಿದ್ದರು. ಹಿರಿಯರಾದವರು ಬಡಾವಣೆಗಳ ಅಥವಾ ಓಣಿಗಳ ಪ್ರಮುಖ ಜಾಗದಲ್ಲಿ ಕುಳಿತುಕೊಂಡು ಹೋಳಿ ಹಬ್ಬದ ವಿಶೇಷ ಹಾಡುಗಳನ್ನು ಹಾಡುತ್ತ ಜನರನ್ನು ರಂಜಿಸುತ್ತಿದ್ದರು. ಆದರೆ ಇಂತಹ ಆಚರಣೆಗಳು ಮೆರಯಾಗಿದ್ದು,…
ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ ಹಿರೇರೂಗಿ ಗ್ರಾಮಕ್ಕೆ ಆರೋಗ್ಯ ಅಧಿಕಾರಿ ಡಾ|| ಕೃಷ್ಣಕುಮಾರ ಜಾಧವ ಶುಕ್ರವಾರದಂದು ತಾಂಬಾ ಗ್ರಾಮದ ಡಾ|| ರೂಗಿ ಅವರ ಕ್ಲಿನಿಕ್ ಗೆ ಭೇಟಿ ನೀಡಿ ಕೆ.ಪಿ.ಎಂ.ಇ ನೊಂದಣಿ ಇಲ್ಲದ ಕಾರಣ ನೋಟಿಸ್ ನೀಡಲಾಯಿತು.ಅಲ್ಲದೆ ಹಿರೇರೂಗಿ ಗ್ರಾಮದ ಡಾ|| ನದಾಪ್ರವರ ಕುರಿತು ಸಾರ್ವಜನಿಕರಿಗೆ ವಿಚಾರಿಸಿದಾಗ ಆ ಹೆಸರಿನ ನಕಲಿ ವೈದ್ಯರು ೨ ವರ್ಷದಿಂದ ಗ್ರಾಮದಲ್ಲಿ ಇರುವುದಿಲ್ಲ ಎಂದು ಸಾರ್ವಜನಿಕರು ತಿಳಿಸಿದರು. ತದನಂತರ ಹಿರೇರೂಗಿ ಗ್ರಾಮದ ಆರೋಗ್ಯ ಸಿಬ್ಬಂದಿಯವರನ್ನು ವಿಚಾರಿಸಲಾಗಿ ಅಂತಹ ಹೆಸರಿನ ವ್ಯಕ್ತಿ ಇರುವುದಿಲ್ಲ ಎಂದು ಮಾಹಿತಿ ನೀಡಿದರು. ಹಾಗೂ ಇತರೆ ಖಾಸಗಿ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಕೆ.ಪಿ.ಎಂ.ಇ ಕುರಿತು ಮಾಹಿತಿಯನ್ನು ನೀಡಿಲಾಯಿತು.
