Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸ್ಥಳೀಯ ಮಾತೋಶ್ರೀ ಗಂಗಾ ಶಿಕ್ಷಣ ಸಂಸ್ಥೆ ಹಾಗೂ ಮಾಸ್ಟರ್ಸ್ ಅಕಾಡೆಮಿ ಸಹಯೋಗದಲ್ಲಿನ ಜ್ಞಾನ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ನಿರಂಜನ ಬೆನಕನವರ ಶೇ.94.60 ಪೂಜಾ ದಾನಗೌಡ ಶೇ.91.17 ಪ್ರವೀಣ ಇಟ್ನಾಳ ಶೇ.88.58 ಹಾಗೂ ರವಿ ವಾಲಿ 88.58 ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಪನಾಳಕರ, ಪ್ರಾಚಾರ್ಯ ಚಂದ್ರಶೇಖರ ಆಶಿ, ಮಾಸ್ಟರ್ಸ್ ಅಕಾಡೆಮಿ ನಿರ್ದೇಶಕರಾದ ಪ್ರದೀಪ ದೇಶಪಾಂಡೆ, ಶೀತಲ್ ಆಸ್ಕಿ, ಯಾಸಿನ್ ಮುಲ್ಲಾ, ರಂಗನಾಯಕ ನಾಯಕ, ಗುರು ಚುಳಚಿಗ್ಯಾರ, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಎಕ್ಸೆಲ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆ ಬಸ್ ಜಮಖಂಡಿ ತಾಲೂಕಿನ ಹಿಪ್ಪರಗಿ ಬ್ಯಾರೇಜ್ ಸಮೀಪದ ತಗ್ಗು ಪ್ರದೇಶದಲ್ಲಿ ಮಂಗಳವಾರ ಉರುಳಿ ಬಿದ್ದಿದೆ.ಜಮಖಂಡಿಯಿಂದ ಹಿಪ್ಪರಗಿ ಮಾರ್ಗವಾಗಿ ಅಥಣಿಗೆ ಹೋಗುತ್ತಿದ್ದ ಬಸ್ ಬೆಳಗ್ಗೆ 11.30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಸ್ಥಳೀಯರುಬಸ್ ಕಿಟಕಿ ಹಾಗೂ ಹಿಂಬದಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಚಾಲಕ, ನಿರ್ವಾಹಕ ಹಾಗೂ ಏಳೆಂಟು ಜನ ಪ್ರಯಾಣಿಕರು ಮಾತ್ರ ಬಸ್ ನಲ್ಲಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಮಖಂಡಿ ಘಟಕ ವ್ಯವಸ್ಥಾಪಕ ಡಿˌ ಬಿˌ ಗಸ್ತಿ “ಉದಯರಶ್ಮಿ” ಪತ್ರಿಕೆಗೆ ತಿಳಿಸಿದ್ದಾರೆ.ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಶಾಂತಾ ಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಲೇಖನ- ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ವ್ಯಕ್ತಿ ತನ್ನ ಜಾತಿ ಶ್ರೇಷ್ಠತೆ ತೊರೆದು ಬ್ರಾಹ್ಮಣ ತೊರೆದು ದಲಿತರಿಗಾಗಿ ಶ್ರಮಿಸಿದ ಅಪ್ರತಿಮ ಸಾಮಾಜಿಕ ಚಳುವಳಿಯ ನಾಯಕರು.29-06-1859 – ರಂಗರಾಯರ ಜನನಅದು 1880 ರ ಆಸುಪಾಸಿನ ದಿನಗಳು, ಸೌತ್ ಕೆನರಾ ಜಿಲ್ಲೆಯ ಅಂದರೆ ಈಗಿನ ದಕ್ಷಿಣ ಕನ್ನಡ ಜಿಲ್ಲೆಯ ಬ್ರಿಟೀಷ್ ನ್ಯಾಯಾಧೀಶರು ಸಿಡಿಮಿಡಿಗೊಂಡಿದ್ದರು. ಕಾರಣ ಆ ನ್ಯಾಯಾಲಯಕ್ಕೆ ಹೊಸತಾಗಿ ಒಬ್ಬ ದಲಿತ ವ್ಯಕ್ತಿ ಬೆಂಚ್ ಕ್ಲರ್ಕ್ ಆಗಿ ನೇಮಕಗೊಂಡಿದ್ದರು. ಅವರ್ಣೀಯನೊಬ್ಬ ಮುಟ್ಟಿದ ಕಡತಗಳನ್ನು ತಾವು ಮುಟ್ಟುವುದಿಲ್ಲ ವೆಂದು ಕಚೇರಿಯಲ್ಲಿದ್ದ ಸವರ್ಣೀಯರು, ಹಾಗೆಯೇ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವ ಮಟ್ಟಿಗೆ ಹೋಗಿದ್ದರು. ಸೆಷನ್ಸ್ ನ್ಯಾಯಾಧೀಶರಿಗೆ ಭಾರತವನ್ನು ಪ್ಲೇಗಿನಂತೆ ಕಾಡುತ್ತಿದ್ದ ಅಸ್ಪೃಷ್ಯತೆಯ ಸಮಸ್ಯೆಯ ಅರಿವಿತ್ತಾದರೂ ಅದು ವಿದ್ಯಾವಂತ ಸಮಾಜದಲ್ಲಿಯೂ ಇಷ್ಟು ಹಾಸುಹೊಕ್ಕಾಗಿರುವುದನ್ನು ನೋಡಿ ರೇಜಿಗೆಯಾಗಿತ್ತು. ಅಂದು ಕೋರ್ಟಿಗೆ ಹಾಜರಾಗಿದ್ದ ಯುವ ವಕೀಲ ಕುದ್ಮಲ್ ರಂಗರಾಯರನ್ನು ಆ ಬ್ರಿಟೀಷ್ ಜಡ್ಜ್ ತರಾಟೆಗೆ ತೆಗೆದುಕೊಂಡಿದ್ದರಂತೆ. ‘ಏನ್ರಿ ಇದು ಮಿ. ರಾವ್, ಅದ್ಯಾವ ಕಾಲದಲ್ಲಿ ಬದುಕುತ್ತಿದೇರಿ ನಿಮ್ಮ ಜಿಲ್ಲೇ…
ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ” ಅರಿವೆಂಬುದು ಬಿಡುಗಡೆ ” ಎಂಬ ಆಶಯದೊಂದಿಗೆ ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಕೆಲವು ಕವಿಯತ್ರಿಗಳ ಕವನದ ಸಾಲುಗಳು ಒಂದಷ್ಟು ಸಾಮಾಜಿಕ ಜಾಲತಾಣಗಳ ಟ್ರೋಲ್ ಎಂಬ ಸಾಂಕ್ರಾಮಿಕ ಖಾಯಿಲೆಯ ಚರ್ಚಾ ವಸ್ತುವಾದ ಕಾರಣ ಆ ರೋಗಕ್ಕೆ ತುತ್ತಾದ ನನ್ನದೂ ಒಂದು ಅನಿಸಿಕೆ..ಇದನ್ನು ಕೆಲವರು ಅಪಹಸ್ಯವಾಗಿ, ವ್ಯಂಗ್ಯವಾಗಿ, ತಮಾಷೆಯಾಗಿ, ವಿಚಿತ್ರವಾಗಿ ಇರುವಂತೆ, ಇನ್ನೂ ಕೆಲವರು ಇದೊಂದು ಮಹಿಳಾ ಶೋಷಣೆಯ ಅತ್ಯಂತ ಮುಕ್ತ, ಪರಿಣಾಮಕಾರಿ ಮತ್ತು ಸಹಜ ಅಭಿವ್ಯಕ್ತಿ ಎಂಬಂತೆ ಮತ್ತೆ ಮತ್ತೆ ಶೇರ್ ಮಾಡುತ್ತಿದ್ದಾರೆ. ಅದರಲ್ಲಿ ಬಹು ಮುಖ್ಯವಾಗಿ ಮಮತಾ ಸಾಗರ್ ಅವರ ಮೊಲೆ, ಯೋನಿ, ಕತ್ತಲಕೋಶ ಎಂಬ ಕೆಲವು ಕಾವ್ಯದ ಸಾಲುಗಳು ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಬಹುತೇಕ ಪರ ಮತ್ತು ವಿರೋಧದ ಎರಡು ವಾದಗಳು ಸಮ ಪ್ರಮಾಣದಲ್ಲಿಯೇ ನಡೆಯುತ್ತಿರುವಂತೆ ಕಾಣುತ್ತಿದೆ.ಇದಕ್ಕೆ ನನ್ನದೊಂದು ಕವಿತೆ..ಬುದ್ಧ, ಮಹಾವೀರರ ಕಾಲದಲ್ಲಿ ಅಹಿಂಸೆಯ ಬಗ್ಗೆ ಹೆಚ್ಚು ಒತ್ತುಕೊಡಲು ಕಾರಣ…
ಚಿಂತನೆ- ಡಾ.ಸುಮಂಗಲಾ ಮೇಟಿಸಹಾಯಕ ಪ್ರಾಧ್ಯಾಪಕರುಬಾಗಲಕೋಟೆ ಉದಯರಶ್ಮಿ ದಿನಪತ್ರಿಕೆ 12ನೇ ಶತಮಾನದಲ್ಲಿ ಬಲವಾಗಿ ಶಿವಶರಣರು ನಡೆಸಿದ ಚಳುವಳಿಯಲ್ಲಿ ಸಮರ್ಪಣ ಮನೋಭಾವದಿಂದ ದುಡಿದ ಶಿವಶರಣರಲ್ಲಿ ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವರಾದ ಇವರು ಹಿರಿಯರನ್ನು ಬೆರಗಾಗಿಸುವಂಥ ಜ್ಞಾನ ಪಡೆದವರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಅಭೂತಪೂರ್ವ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಗೆ ಒಂದು ಬಗೆಯ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು ಚೆನ್ನಬಸವಣ್ಣನವರು. ಅವರ ವಚನಗಳಲ್ಲಿ ಕಂಡುಬರುವಷ್ಟು ತಾತ್ವಿಕ ವಿವೇಚನೆ ಸಮಕಾಲೀನ ವಚನಕಾರರಲ್ಲಿ ಕಂಡು ಬರುವುದಿಲ್ಲ.ವಚನಅರ್ಪಿತ ಅನರ್ಪಿತವೆಂಬ ಉಭಯಕುಳದ ಶಂಕೆವುಳ್ನಕ್ಕರಅಚ್ಚ ಸಂಸಾರಿಯೆಂಬೆ ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾಗಿ ಅಚ್ಚಲಿಂಗವಂತನೆಂಬೆ, ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸುತ್ತಿತ್ತು ವಾಙ್ಮನಾತೀತನೆಂಬೆ, ಅರ್ಪಿತವಿಲ್ಲ ಅರ್ಪಿತವಿಲ್ಲ, ಅಕಲ್ಪಿತವಯ್ಯಾ ಕೂಡಲಚೆನ್ನಸಂಗಮದೇವಾ ವಿಶ್ಲೇಷಣೆ ಅರ್ಪಣ ವಿಧಾನದ ಮೂಲಕ ಪದಾರ್ಥವನ್ನು ಪ್ರಸಾದವಾಗಿಸುವ, ಅಂಗಭೋಗವನ್ನು ಲಿಂಗರೂಪಿಯಾಗಿ ವಿನೂತನ ವಿಧಾನವನ್ನು ಅಳವಡಿಸಿದರು.ಚೆನ್ನಬಸವಣ್ಣನವರ ಮುಖ್ಯ ಉದ್ದೇಶ ಲಿಂಗಾಯತ ಸಿದ್ಧಾಂತವನ್ನು ಯುಗಧರ್ಮಕ್ಕೆ ಹೊಂದಿಕೊಳ್ಳುವಂತೆ ಸಾಮಾನ್ಯ ಜನರಿಗೆ ವಿವರಿಸುವದಾಗಿತ್ತು.ಅರ್ಪಿತ ಎಂಬ ಸಮರ್ಪಣ ಭಾವ ಮತ್ತು ಅನರ್ಪಿತ ಎಂಬ ಅಸಮರ್ಪಣ ಭಾವಗಳ ಮಹತ್ವವನ್ನು ಈ ವಚನದ ಮೂಲಕ ತಿಳಿಸಿದ್ದಾರೆ.ಸಮರ್ಪಣ ಮತ್ತು…
ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಚನ್ನಪ್ಪ ಯರಂತೇಲಿ (ಮಸೂತಿ) ಪುತ್ರ ರಾಹುಲ್ ಯರಂತೇಲಿ ಅಗಾಧ ಸಾಧನೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಹಲವು ರಂಗಗಳಲ್ಲಿ ತನ್ನದೆ ಆದ ಛಾಪು ಮೂಡಿಸಿದ್ದ ಮಸೂತಿ ಗ್ರಾಮ ಪ್ರಸ್ತುತ ಯುಪಿಎಸ್ಸಿ (ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್) ಪರೀಕ್ಷೆಯಲ್ಲಿ ತಮ್ಮೂರಿನ ಮಗ ರಾಹುಲ್ ಯರಂತೇಲಿ 462 ನೇ ರ್ಯಾಂಕ್ ತಂದು ಕೊಡುವ ಮೂಲಕ ಮತ್ತೊಮ್ಮೆ ಹೆಸರುವಾಸಿಯಾಗಿದೆ. ಮಸೂತಿ ಗ್ರಾಮದ ಒಂದು ಬಡ ರೈತ ಕುಟುಂಬದಲ್ಲಿ ಜನಿಸಿದ್ದ ಚನ್ನಪ್ಪ ಯರಂತೇಲಿ ತಮ್ಮ ಸ್ವಪ್ರಯತ್ನದಿಂದ ಶಿಕ್ಷಕರಾಗಿ ಪ್ರಸ್ತುತ ಮುದ್ದೇಬಿಹಾಳ ತಾಲೂಕಿನ ಗೋನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗಿರುವ ಮೂವರು ಮಕ್ಕಳಲ್ಲಿ ಚೊಚ್ಚಲ ಪುತ್ರ ರಾಹುಲ್ ಯರಂತೇಲಿ ಪ್ರಸ್ತುತ ಯುಪಿಎಸ್ಸಿ ಪರೀಕ್ಷೆಯಲ್ಲಿ462 ನೇ ರ್ಯಾಂಕ್ ಪಡೆಯುವ ಮೂಲಕ ಹೆತ್ತವರ, ಹುಟ್ಟಿ ಬೆಳೆದ ಮಸೂತಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ರಾಹುಲ್ ಶಿಕ್ಷಣದ ಹೆಜ್ಜೆಒಂದರಿಂದ ಐದನೇ ತರಗತಿಯನ್ನು ಮುದ್ದೇಬಿಹಾಳ ತಾಲೂಕಿನ ಇನಚಗಲ್ ಗ್ರಾಮದಲ್ಲಿ ಪೂರೈಸಿದ ರಾಹುಲ್ ೬ ರಿಂದ ಪಿಯೂಸಿವರೆಗೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಗರ್ಭಿಣಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದರಿಂದ ಮಗುವಿನ ಬೆಳವಣಿಗೆ ಮತ್ತು ತಾಯಿಯ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಎಂದು ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಹೇಳಿದರು.ತಾಲೂಕಿನ ಕೂಡಗಿ ಎನ್ಟಿಪಿಸಿ ವ್ಯಾಪ್ತಿಯ ಮಹಾಶಕ್ತಿನಗರದಲ್ಲಿ ಪ್ರಸಕ್ತ ಸಾಲಿನ ಎನ್ಟಿಪಿಸಿ ಸಿಎಸ್ಆರ್ ಯೋಜನೆಯಡಿ ಇತ್ತೀಚೆಗೆ ನಡೆದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ರೋಗಕ್ಕೆ ಔಷಧಿ ನೀಡುವ ಬದಲಾಗಿ ರೋಗ ಬರದಂತೆ ನೋಡಿಕೊಳ್ಳುವುದು ಜಾಣತನ. ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರಗಳ ಕಿಟ್ ವಿತರಣೆ ಆ ಒಂದು ಪ್ರಯತ್ನವಾಗಿದೆ. ಗರ್ಭಿಣಿಯರು ಪಡೆದಂತ ಈ ಕಿಟ್ನಲ್ಲಿ ಹೆಸರುಕಾಳು, ಮಾತ್ ದಾಲ್, ಬೆಲ್ಲ, ಕಡಲೆಕಾಳು, ಫೋಲಿಕ್ ಆ್ಯಸಿಡ್ ಸಿರಫ್ ಮತ್ತು ಪ್ರೋಟಿನ್ ಪೌಡರ್ ಇದ್ದು ಗರ್ಭಿಣಿಯರು ತಮ್ಮ ಗರ್ಭಧಾರಣೆಯ ೫ ರಿಂದ ೮ ನೇ ತಿಂಗಳಿನಲ್ಲಿ ಇದನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಸಹಕಾರಿಯಾಗಲಿದೆ ಎಂದರು.ಎನ್ಟಿಪಿಸಿ ಮಿತಾಲಿ ಮಹಿಳಾ ಮಂಡಳಿ ಅಧ್ಯಕ್ಷೆ ಅಂಜು ಝಾ ಮಾತನಾಡಿ, ಪ್ರಸ್ತುತ ೧೬೦ ಜನ…
ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅದೆಷ್ಟೋ ಜೀವ ಸಂಕುಲಗಳಿಗೆ ಆಶ್ರಯ ನೀಡಿರುವ ಭೂಮಿಗೆ ತೊಂದರೆಯಾಗದಂತೆ ನೋಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಪರಿಸರದ ಮೇಲೆ ಮನುಷ್ಯನ ಪ್ರಹಾರ ಹೆಚ್ಚುತ್ತಿರುವದರಿಂದ ಸಧ್ಯದ ದಿನಗಳಲ್ಲಿ ಪರಿಸರವನ್ನು ರಕ್ಷಿಸುವ ತೀವ್ರ ಅಗತ್ಯತೆ ಇದೆ. ಸಾರ್ವಜನಿಕರ ಸಹಭಾಗಿತ್ವ ಮತ್ತು ದೈನಂದಿನ ಜೀವನದಲ್ಲಿ ಸಕಾರಾತ್ಮಕ ಕ್ರಮಗಳ ಅಳವಡಿಕೆಯಿಂದ ಮಾತ್ರ ಪರಿಸರವನ್ನು ಸ್ವಚ್ಛವಾಗಿಡಲು ಸಾಧ್ಯ. ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಭೂಮಿಯನ್ನು ರಕ್ಷಿಸಲು ಸಾಧ್ಯ. ಹಾಗಾಗಿ ಇವತ್ತಿನಿಂದಲೇ ಭೂಮಿಗೆ ಮಾರಕವಾದ ವಸ್ತುಗಳ ಬಳಕೆಯನ್ನು ಪ್ರತಿಯೊಬ್ಬರೂ ಕೈಬಿಡೋಣ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಮುದ್ದೇಬಿಹಾಳ ರಸ್ತೆಯಲ್ಲಿರುವ ಇವಣಗಿ ಕೂಡು ರಸ್ತೆ ಹತ್ತಿರ ಇರುವ ಟೀ ಜೋನ್ ಅಂಗಡಿ ಮುಂಭಾಗ ಬೀದಿ ವ್ಯಾಪಾರಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಎಸಗುವ ಪುರಸಭೆ ಆಡಳಿತ ಹಾಗೂ ಮುಖ್ಯಾಧಿಕಾರಿಗಳ ದುರಾಡಳಿತವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಕ್ಕೂಟ ಶಾಖೆಯ ಮುಖಂಡರು ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.ಪ್ರತಿಭಟನೆ ಉದ್ದೇಶಿಸಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಗುರುರಾಜ ಗೂಡಿಮನಿ ಮಾತನಾಡಿ, ಪಟ್ಟಣದಲ್ಲಿ ಕೆಲ ಗಣ್ಯ ವರ್ತಕರು ಕಾನೂನು ಬಾಹಿರವಾಗಿ ಪಾದಚಾರಿ ರಸ್ತೆ ಮೇಲೆ ತಮ್ಮ ಅಂಗಡಿಗಳ ಮೆಟ್ಟಿಲು ಮಾಡಿಕೊಂಡಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳು ಇದನ್ನು ಬಿಟ್ಟು ಬಡ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಪಾದಚಾರಿ ರಸ್ತೆ ಬಿಟ್ಟು ಇದರ ಹಿಂದೆ ಇಂರುವ ಅಂಗಡಿಗಳನ್ನು ತೆರವು ಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಬಡವರಿಗೆ ನ್ಯಾಯ ಒದಗಿಸಬೇಕು. ಒಂದು ವೇಳೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಿಂದ ಇವಣಗಿ ಗ್ರಾಮದ ಕೂಡುರಸ್ತೆಯವರೆಗೂ ರಸ್ತೆ ಎರಡು ಬದಿಯಿರುವ ಪಾದಚಾರಿ ರಸ್ತೆಯಲ್ಲಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಮಂಗಳವಾರ ಪುರಸಭೆಯಿಂದ ಬೆಳಗ್ಗೆ ೬.೩೦ ಗಂಟೆಯಿಂದ ಆರಂಭವಾಗಿ ಮಧ್ಯಾನ್ಹ ೧೨ ಗಂಟೆಯವರೆಗೂ ನಡೆಯಿತು.ಪಾದಚಾರಿ ರಸ್ತೆಗೆ ಹೊಂದಿಕೊಂಡಂತೆ ಇದ್ದ ವಿವಿಧ ಹಣ್ಣಿನ ಅಂಗಡಿ, ಹೊಟೇಲ್, ಚಹಾದಂಗಡಿ, ಎಗ್ಗರೈಸ್ ಅಂಗಡಿ ಸೇರಿದಂತೆ ವಿವಿಧ ಗೂಡಂಗಡಿಗಳನ್ನು ಈಗಾಗಲೇ ಈ ಹಿಂದೆ ಪುರಸಭೆಯಿಂದ ಎರಡು-ಮೂರು ಸಲ ಕಾರ್ಯಾಚರಣೆ ಮಾಡಿ ತೆರವು ಮಾಡಲಾಗಿತ್ತು. ಮತ್ತೆ ಗೂಡಂಗಡಿಗಳು ತಲೆ ಎತ್ತಿದ್ದ ಪರಿಣಾಮ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ನೇತೃತ್ವದಲ್ಲಿ ಮಂಗಳವಾರ ಮತ್ತೆ ಗೂಡಂಗಡಿಗಳ ತೆರವು ಕಾರ್ಯಾಚರಣೆ ಜರುಗಿತು. ಗೂಡಂಗಡಿಗಳ ಮಾಲೀಕರು ಇಲ್ಲದೇ ಇರುವ ಗೂಡಂಗಡಿಗಳನ್ನು ತೆರವುಗೊಳಿಸಿ ಮೆಗಾಮಾರುಕಟ್ಟೆಯಲ್ಲಿ ಪುರಸಭೆ ಸಿಬ್ಬಂದಿ ತೆಗೆದುಇಟ್ಟರು. ಸ್ಥಳದಲ್ಲಿದ್ದ ಗೂಡಂಗಡಿ ಮಾಲೀಕರು ತಮ್ಮ ತಮ್ಮ ಅಂಗಡಿಗಳನ್ನು ತೆರವು ಮಾಡಿಕೊಳ್ಳುವದು ಕಂಡುಬಂದಿತ್ತು. ಪಿಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಪುರಸಭೆಯಿಂದ…
