Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಬರದ ಬಿಸಿಲು ನಾಡಿಗೆ ಒಕ್ಕರಿಸಿದ ಅಕಾಲಿಕ ಮಳೆ, ಗಾಳಿ, ಸಿಡಿಲಿನ ಹೊಡೆತಕ್ಕೆ ಸಾವು ನೋವುಗಳು ಮತ್ತು ಅಪಾರ ನಷ್ಟಗಳು ಸಂಭವಿಸಿದ್ದು, ಗಿಡ ಮರಗಳು ನೆಲಕ್ಕುರುಳಿದ ಪರಿಣಾಮ ಜನ ಜಾನುವಾರಳಿಗೆ ತೊಂದರೆಯುಂಟಾಗಿ ಜನಜೀವನ ಅಸ್ತವ್ಯಸ್ತವಾದ ಘಟನೆ ಕಲಕೇರಿ ಸಮೀಪದ ಹುಣಶ್ಯಾಳ, ಆಲಗೂರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಿ.೨೪ ರ ಸಾಯಂಕಾಲ ಜೋರಾದ ಬಿರುಗಾಳಿ ಸಮೇತ ಸುರಿದ ಮಳೆಗೆ ಸಾಕಷ್ಟು ಗಿಡಮರಗಳು ನೆಲಕ್ಕುರುಳಿದ್ದು, ಜೀವಹಾನಿಯೂ ಸಂಭವಿಸಿದ ಘಟನೆಗಳು ನಡೆದಿವೆ.ಸಾಯಂಕಾಲ ಒಮ್ಮಿಂದೊಮ್ಮೆಲೆ ಬಿರುಗಾಳಿ ಸಮೇತ ಗುಡುಗು, ಮಿಂಚಿನೊಡನೆ ಪ್ರಾರಂಭವಾದ ಮಳೆಯಿಂದ ಸಾಕಷ್ಟು ಅವಘಡಗಳು ಸಂಭವಿಸಿದ್ದು, ಕಲಕೇರಿ ಸಮೀಪದ ಆಲಗೂರ ಗ್ರಾಮದಲ್ಲಿ ಇದೇ ವೇಳೆ ಕುರಿ ಕಾಯಲು ಹೋಗಿದ್ದ ಸುಮಾರು ೧೮ ವರ್ಷದ ಆಕಾಶ ಹೈಯಾಳದಪ್ಪ ಯಂಕಂಚಿ ಎಂಬ ಯುವಕ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ. ಈ ಕುರಿತು ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೇ ವೇಳೆ ಪಕ್ಕದ ಗ್ರಾಮವಾದ ಹುಣಶ್ಯಾಳದಲ್ಲಿ ಮಳೆ ಮತ್ತು ಸಿಡಿಲಿನ ಅವಘಡಕ್ಕೆ ಪ್ರಭುಗೌಡ ನಂದಪ್ಪ ದೇವರಗುಡಿ ಅವರ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶ ಆಹೋರಾತ್ರಿ ಧರಣಿ ಹಿಂಪಡೆದ ರೈತರು.ಸಂಕನಾಳ ಶಾಖಾ ಕಾಲುವೆ ಮುಖಾಂತರ ನಿರ್ಮಾಣಗೊಂಡ ವಿತರಣಾ ಕಾಲುವೆ ಕಾಮಗಾರಿ ೨ ಕಿ.ಮೀ ಬಾಕಿ ಉಳಿದ ಕಾರಣ ಕಳೆದ ಮೂರು ದಿನಗಳಿಂದ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶವಾದ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಛೇರಿಯ ಮುಂಬಾಗದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆಎAದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ ಧರಣಿ ಸ್ಥಳಕ್ಕೆ ಕೆ.ಬಿ.ಜೆ.ಎನ್.ಎಲ್ ಉಪ ಮುಖ್ಯ ಅಭಿಯಂತರರಾದ ಆಯ್.ಎಲ್.ಕಳಸದ ಇವರು ಆಗಮಿಸಿ ಸರ್ಕಾರದ ಆದೇಶದ ಪ್ರತಿಯನ್ನು ಧರಣಿ ನಿರತ ರೈತರಿಗೆ ಹಸ್ಥಾಂತರಿಸಿದರು ಈ ಸಂದರ್ಭದಲ್ಲಿ ಆಯ್.ಎಲ್.ಕಳಸದ ಮಾತನಾಡಿ ಬಾಕಿ ಉಳಿದ ಕಾಮಗಾರಿ ಹತ್ತು ದಿನಗಳಲ್ಲಿ ಪ್ರಾರಂಬಿಸಲಾಗುವದೆAದು ಭರವಸೆ ನೀಡಿದರು ಆದ್ದರಿಂದ ಧರಣಿಯನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸಂತಾಪ ಸಂದೇಶ ನೀಡಿರುವ ಸಚಿವ ಶಿವಾನಂದ ಪಾಟೀಲ ಅವರು, ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಸಮಯದಲ್ಲಿ ಸಚಿವರಾಗಿದ್ದ ರಾಮಯ್ಯ ಅವರು, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದಾಗ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದ್ದರು. ಇದೇ ಕಾರಣಕ್ಕೆ ಜನತೆ ರಾಮಯ್ಯ ಅವರನ್ನು ನೀರಿನ ರಾಮಯ್ಯ ಎಂದು ಅಭಿಮಾನದಿಂದ ಕರೆಯುತ್ತಿದ್ದರು.ರಾಮಯ್ಯ ಪ್ರಸ್ತುತ ಸಂದರ್ಭದಲ್ಲಿ ಅವರೊಬ್ಬ ಮಾದರಿ ರಾಜಕಾರಣಿ ಯಾಗಿದ್ದರು ಎಂದು ಸ್ಮರಿಸಿರುವ ಸಚಿವ ಶಿವಾನಂದ ಪಾಟೀಲ ಅವರು, ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ಕುಟುಂಬ ವರ್ಗದವರ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪುಸ್ತಕಗಳು ವಿದ್ಯಾರ್ಥಿ ಜೀವನಕ್ಕೆ ಮುಖ್ಯ ಪಾತ್ರವನ್ನು ವಹಿಸುತ್ತವೆ. ವರ್ಗಗಳ ಜೊತೆ ಜೊತೆಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಹವ್ಯಾಸ ಆಸಕ್ತಿ ರೂಡಿಸಿಕೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಬಿ.ಹೊಸಮನಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಓದುವಿಕೆ ವಿದ್ಯಾರ್ಥಿ ಜೀವನಕ್ಕೆ ವಿಕಾಸಕ್ಕೆ ದಾರಿ ದೀಪವಾಗುತ್ತದೆ. ಇಂದಿನ ಹೊಸ ಯುಗಕ್ಕೆ ಉತ್ತಮ ರೀತಿಯ ಕೌಶಲ್ಯ ವೃದ್ಧಿಯಾಗುತ್ತದೆ ಎಂದರು.ಗ್ರಂಥಾಲಯದ ಮುಖ್ಯಸ್ಥ ರೇಣುಕಾ ಅಂಬಲಿ ಅವರು ಮಾತನಾಡಿ, ಪುಸ್ತಕಗಳು ಓದುವುದರಿಂದ ನಮ್ಮ ಸಂಸ್ಕೃತಿಯು ಬೆಳವಣಿಗೆಯ ಸಹಾಯಕಾರಿಯಾಗುತ್ತದೆ ಎಂದು ವಿವರಿಸಿದರು.ಗ್ರಂಥಪಾಲಕ ಪಿ.ಎಮ್. ಮಠ ಅವರು, ಪುಸ್ತಕದ ದಿನಾಚರಣೆಯನ್ನು ಯುನೆಸ್ಕೊ 1995 ಏಪ್ರಿಲ್ 23 ರ0ದು ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆಯನ್ನು ಪ್ರಸಿದ್ಧ ಲೇಖಕರಾದ ಅಂಟಿಗೋವಾ, ಷೇಕ್ಸಪಿಯರ್ ಜನ್ಮ ದಿನದ ಮರಣದ ದಿನದ ನೆನಪಿಗಾಗಿ ಆಚರಣೆ ಮಾಡಿ ಪ್ರತಿ ವರ್ಷ ಒಂದು ಪುಸ್ತಕದ ನಗರವೆಂದು ಘೋಷಣೆ ಮಾಡುತ್ತಾರೆ ಎಂದು ಈ…

Read More

ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದಲಿಂಗ ಸ್ವಾಮೀಜಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಜೀಣೋದ್ಧಾರದಲ್ಲಿ ಲಿಂ. ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಸದಾ ಸ್ಮರಣೀಯವಾಗಿದೆ. ಬಸವನಬಾಗೇವಾಡಿಗೆ ಕೊಡುಗೆ ನೀಡಿದ ಮಹನೀಯರನ್ನು ಸದಾ ಸ್ಮರಣೆ ಮಾಡುವದು ಅಗತ್ಯವಿದೆ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಅಕ್ಕನಾಗಮ್ಮ ಬಾಲಕಿಯರ ಪದವಿ ಪೂರ್ವ ವಿದ್ಯಾಲಯದಲ್ಲಿ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರವು ಗುರುವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ಬಸವೇಶ್ವರ ದೇವಾಲಯ ಸಂಸ್ಥೆಯ ಮೂಲ ಸಂಸ್ಥಾಪಕ, ಜೀಣೋದ್ಧಾರಕ ಲಿಂ.ಮಲ್ಲಪ್ಪ ಶಂಕ್ರೆಪ್ಪ ಸಿಂಹಾಸನ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಲಿಂ.ಸಿಂಹಾಸನರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಅಗತ್ಯ ಸಿದ್ಧತೆ ಕೈಗೊಂಡಾಗ ಮಾತ್ರ ಇದನ್ನು ಔಚಿತ್ಯಪೂರ್ವವಾಗಿ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚು ಜನತೆ ಭಾಗವಹಿಸುವಂತಾಗಬೇಕು. ಅಭಿವೃದ್ಧಿ ಪ್ರಾಧಿಕಾರವು ಮುಂಬರುವ ದಿನಗಳಲ್ಲಿ ಶ್ರಮಿ ಜೀವಿಗಳನ್ನು ಗುರುತಿಸಿ ಲಿಂ.ಸಿಂಹಾಸನ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವಂತಾಗಬೇಕು. ಮುಂಬರುವ ದಿನಗಳಲ್ಲಿ ಲಿಂ.ಸಿಂಹಾಸನ ಅವರ ಪ್ರತಿಮೆ ಇರುವ ಜಾಗೆಯನ್ನು ಇನ್ನಷ್ಟು ಮೆರಗು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವೇಕ ಬ್ರಿಗೇಡ್ ಸಂಸ್ಥೆಯ ಬುಧವಾರ ಸಂಜೆ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಪ್ರಜೆಗಳಿಗೆ ಮತ್ತು ಪ್ರಜಾರಕ್ಷಕರಿಗೆ ಮೊಂಬತ್ತಿ ಹಚ್ಚುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಉಗ್ರರ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು.ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹಿಂದುಗಳ ಮೇಲೆ ನಡೆದ ಈ ದಾಳಿಯು ಮಾನವ ಕುಲಕ್ಕೆ ಮಾರಕವಾಗಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ. ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹತ್ಯೆಗೈದಿರುವ ಉಗ್ರಗಾಮಿಗಳು ಎಲ್ಲೇ ಅಡಗಿಕುಳಿತುಕೊಂಡರೂ ಅವರನ್ನು ಹತ್ತಿಕ್ಕುವ ಕಾರ್ಯ ನಡೆಯಬೇಕು. ದೇಶದ ಹಿತಕ್ಕಾಗಿ ಎಲ್ಲ ಪ್ರಜೆಗಳು ಒಂದಾಗಿ ಉಗ್ರರನ್ನು ಸದೆಬಡಿಯಬೇಕು. ದೇಶದ ಸಂರಕ್ಷಣೆಗೆ ಎಲ್ಲ ಪ್ರಜೆಗಳು ಒಂದಾಗಿ ಉಗ್ರಗಾಮಿಗಳ ಶಕ್ತಿಯನ್ನು ದಮನ ಮಾಡುವದು ತುಂಬಾ ಅಗತ್ಯವಿದೆ ಎಂದರು.ಮುಖಂಡರಾದ ಬಸವರಾಜ ಹಾರಿವಾಳ, ಶಿವರುದ್ರಯ್ಯ ಹಿರೇಮಠ, ವಿನುತ ಕಲ್ಲೂರ, ಪ್ರಭಾಕರ ಖೇಡದ, ವಿಜಯ ರೆಡ್ಡಿ, ರವಿಗೌಡ ಚಿಕ್ಕೊಂಡ, ಕಾಶೀನಾಥ ಅವಟಿ,, ಸಾವಿತ್ರಿ ಕಲ್ಯಾಣಶೆಟ್ಟಿ ಇತರರು ಮಾತನಾಡಿ, ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಂದಿರುವ ಖಂಡನೆ ಹೇಯ…

Read More

ಡಿವೈಎಸ್‌ಪಿ ಶರಣಬಸು ಕೊಳಾರಿ ಅವರ ಪೌರಸನ್ಮಾನ ಸಮಾರಂಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಇಂದಿನ ತಂತ್ರಜ್ಞಾನ ಸ್ಪರ್ದಾಯುಗದಲ್ಲಿ ಪಠ್ಯಪುಸ್ತಕದಂತೆ ಜೀವನ ನಿರ್ವಹಣೆಯ ಶಿಕ್ಷಣಕ್ಕು ಹೆಚ್ಚಿನ ಆದ್ಯತೆ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದುಕೊಂಡ ಪಟ್ಟಣದ ನಿವಾಸಿ ಕಲಬುರಗಿಯಲ್ಲಿ ಡಿವೈಎಸ್‌ಪಿಯಾಗಿ ಕೆಲಸ ನಿರ್ವಹಿಸುತ್ತಿರುವ ಶರಣಬಸು ಕೊಳಾರಿ ಅವರಿಗೆ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಪೌರಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ವಿಜಯಪುರ ಜಿಲ್ಲೆ ಕೃಷಿ ಪ್ರಧಾನವಾಗಿ ಆರ್ಥಿಕವಾಗಿ ಪ್ರಗತಿಹೊಂದುತ್ತಿದ್ದು ಹಾಗೆ ಶಿಕ್ಷಣದಲ್ಲೂ ಪ್ರಗತಿ ಹೊಂದುವ ಜಿಲ್ಲೆಯಾಗಬೇಕು ಅದು ಪಠ್ಯಪುಸ್ತಕದ ಶಿಕ್ಷಣದ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಬರುವ ಸವಾಲುಗಳು ಎದುರಿಸುವ ಶಿಕ್ಷಣ ಕಲಿಸಬೇಕಾಗಿದೆ ಎಂದರು.ಹುಟ್ಟೂರಿನಲ್ಲಿ ನಾಗರಿಕ ಸನ್ಮಾನ ಸ್ವೀಕರಿಸುವ ಭಾಗ್ಯ ಎಲ್ಲರಿಗೂ ಸಿಗುವಂಥದಲ್ಲ, ಶರಣಬಸು ಕೊಳಾರಿ ಅವರ ಪ್ರಾಮಾಣಿಕ, ನಿಸ್ವಾರ್ಥ ಸೇವೆಗೆ ಸಿಕ್ಕ ಫಲ. ಯಾವುದೆ ಹುದ್ದೆಯಲ್ಲಿದ್ದರು ಅವಕಾಶ ಸಿಕ್ಕಾಗ ಉತ್ತಮ ಕೆಲಸ ಮಾಡಿದೆ ಸರ್ಕಾರ ಸಮಾಜ ತಾನಾಗಿಯೆ ಗುರ್ತಿಸುತ್ತದೆ,…

Read More

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಗ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ | ರಾಜ್ಯದ ನಾಲ್ಕು ಪ್ರದೇಶಗಳಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಲು ಸಂಪುಟ ಸಭೆ ತೀರ್ಮಾನ | ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೈಸೂರು ಪ್ರಾದೇಶಿಕ ವಿಭಾಗದಲ್ಲಿ 3,647 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ನಾಲ್ಕು ಪ್ರದೇಶಗಳಲ್ಲಿ ಸಚಿವ ಸಂಪುಟ ಸಭೆಗಳನ್ನು ನಡೆಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಹೇಳಿದರು.ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಸಂಪುಟ ಸಭೆ ಖಂಡಿಸಿದೆ ಮತ್ತು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದೆ ಎಂದು ಸಿಎಂ ತಿಳಿಸಿದರು.ಸಭೆಯಲ್ಲಿ 78 ವಿಷಯಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.”ಇಂದು, ನಾನು ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುತ್ವದ ಫೈಯರ ಬ್ರ್ಯಾಂಡ್, ಗೋ ರಕ್ಷಕರು ಹಾಗೂ ನಗರ ಶಾಸಕ ಬಸನಗೌಡ ಆರ್ ಪಾಟೀಲ (ಯತ್ನಾಳ) ಅವರಿಗೆ ಇತ್ತೀಚೆಗೆ “ಸರ್ ತನ್ ಸೆ ಜುದಾ’ ಮಾಡುವುದಾಗಿ ಹಾಗೂ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿರುವ ೨:೦೯ ನಿಮಿಷದ ವಾಟ್ಸಪ್ ರೆಕಾರ್ಡಿಂಗ ಸಾರ್ವಜನಿಕ ವಲಯದಲ್ಲಿ ಹರಿದಾಡಿ ನಗರದ ಜನತೆ ಹಾಗೂ ರಾಜ್ಯಾದ್ಯಂತ ಇರುವ ಮಾನ್ಯ ಶಾಸಕರ ಅಸಂಖ್ಯಾತ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ತೀವ್ರ ಕಳವಳವನ್ನುಂಟು ಮಾಡಿದೆ ಕಾರಣ ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಗೃಹ ಮಂತ್ರಿಗಳಿಗೆ ಹಾಗೂ ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ಪತ್ರದ ಮುಖಾಂತರ ಮಾನ್ಯ ಶಾಸಕರಿಗೆ ಜೀವ ಬೆದರಿಕೆ ಇರುವ ಕಾರಣ ಬಸನಗೌಡ ಆರ್ ಪಾಟೀಲ (ಯತ್ನಾಳ) ಇವರಿಗೆ ವಾಯ್+ ದರ್ಜೆಯ ಭದ್ರತೆ ಒದಗಿಸುವಂತೆ ಹಾಗೂ ಈಗಾಗಲೇ ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ದೂರು ಸಹ ದಾಖಲಿಸಲಾಗಿದೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಎನ್‌ಆಯ್‌ಎ ಮುಖಾಂತರ ದೂರು ದಾಖಲಿಸಿ ತನಿಖೆ ನಡೆಸುವಂತೆ ಮಹನಗರ…

Read More

ಶ್ರೀನಗರದ ಫಾಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಹಾಗೂ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದಕ್ಕೆ ಖಂಡನೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀನಗರದ ಫಾಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಹಾಗೂ ಬೀದರ ಮತ್ತು ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬ್ರಾಹ್ಮಣ, ಬಡಿಗೇರ, ಪತ್ತಾರ, ಮರಾಠಾ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ ಬಿ.ಎಸ್. ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.ಆಧ್ಯಾ ಜಾಗೀರದಾರ, ಬಾಳು ಮುಳಜಿ, ಯಮನಾಜಿ ಸಾಳುಂಕೆ, ಗುರುನಾಥ ಜೋಶಿ, ರಮೇಶ ಪೋದ್ದಾರ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಖಂಡನೀಯವಾದದ್ದು, ಉಗ್ರರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಲು ಸರಕಾರ ಮುಂದಾಗಬೇಕು. ಬೀದರ್, ಶಿವಮೊಗ್ಗದಲ್ಲಿ ಜನಿವಾರ ತೆಗೆದ ಪ್ರಕರಣದ ಹಿಂದಿನ ವ್ಯಕ್ತಿಗಳನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವುಡೆ, ಜಗದೀಶ ಕ್ಷತ್ರಿ, ಸಂತೋಶ ಪಾಟೀಲ, ವಿಜಯಲಕ್ಷ್ಮಿ ರೂಗಿಮಠ, ಶಾಂತು ಧನಶೆಟ್ಟಿ, ದೇವೆಂದ್ರ ಕುಂಬಾರ, ಚೇತನ್ ಧನಶೆಟ್ಟಿ, ಅನಿಲ್ ಜೋಶಿ,…

Read More