ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪುಸ್ತಕಗಳು ವಿದ್ಯಾರ್ಥಿ ಜೀವನಕ್ಕೆ ಮುಖ್ಯ ಪಾತ್ರವನ್ನು ವಹಿಸುತ್ತವೆ. ವರ್ಗಗಳ ಜೊತೆ ಜೊತೆಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಹವ್ಯಾಸ ಆಸಕ್ತಿ ರೂಡಿಸಿಕೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಬಿ.ಹೊಸಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಂತರ ಓದುವಿಕೆ ವಿದ್ಯಾರ್ಥಿ ಜೀವನಕ್ಕೆ ವಿಕಾಸಕ್ಕೆ ದಾರಿ ದೀಪವಾಗುತ್ತದೆ. ಇಂದಿನ ಹೊಸ ಯುಗಕ್ಕೆ ಉತ್ತಮ ರೀತಿಯ ಕೌಶಲ್ಯ ವೃದ್ಧಿಯಾಗುತ್ತದೆ ಎಂದರು.
ಗ್ರಂಥಾಲಯದ ಮುಖ್ಯಸ್ಥ ರೇಣುಕಾ ಅಂಬಲಿ ಅವರು ಮಾತನಾಡಿ, ಪುಸ್ತಕಗಳು ಓದುವುದರಿಂದ ನಮ್ಮ ಸಂಸ್ಕೃತಿಯು ಬೆಳವಣಿಗೆಯ ಸಹಾಯಕಾರಿಯಾಗುತ್ತದೆ ಎಂದು ವಿವರಿಸಿದರು.
ಗ್ರಂಥಪಾಲಕ ಪಿ.ಎಮ್. ಮಠ ಅವರು, ಪುಸ್ತಕದ ದಿನಾಚರಣೆಯನ್ನು ಯುನೆಸ್ಕೊ 1995 ಏಪ್ರಿಲ್ 23 ರ0ದು ಅಂತಾರಾಷ್ಟ್ರೀಯ ಪುಸ್ತಕ ದಿನಾಚರಣೆಯನ್ನು ಪ್ರಸಿದ್ಧ ಲೇಖಕರಾದ ಅಂಟಿಗೋವಾ, ಷೇಕ್ಸಪಿಯರ್ ಜನ್ಮ ದಿನದ ಮರಣದ ದಿನದ ನೆನಪಿಗಾಗಿ ಆಚರಣೆ ಮಾಡಿ ಪ್ರತಿ ವರ್ಷ ಒಂದು ಪುಸ್ತಕದ ನಗರವೆಂದು ಘೋಷಣೆ ಮಾಡುತ್ತಾರೆ ಎಂದು ಈ ಮಹತ್ವದ ದಿನದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ವಿಷಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.

