ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಬಾಕಿ ಉಳಿದ ವಿತರಣಾ ಕಾಲುವೆಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶ ಆಹೋರಾತ್ರಿ ಧರಣಿ ಹಿಂಪಡೆದ ರೈತರು.
ಸಂಕನಾಳ ಶಾಖಾ ಕಾಲುವೆ ಮುಖಾಂತರ ನಿರ್ಮಾಣಗೊಂಡ ವಿತರಣಾ ಕಾಲುವೆ ಕಾಮಗಾರಿ ೨ ಕಿ.ಮೀ ಬಾಕಿ ಉಳಿದ ಕಾರಣ ಕಳೆದ ಮೂರು ದಿನಗಳಿಂದ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಆದೇಶವಾದ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರರ ಕಛೇರಿಯ ಮುಂಬಾಗದಲ್ಲಿ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಹಿಂಪಡೆಯಲಾಗಿದೆ
ಎAದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದ್ದಾರೆ ಧರಣಿ ಸ್ಥಳಕ್ಕೆ ಕೆ.ಬಿ.ಜೆ.ಎನ್.ಎಲ್ ಉಪ ಮುಖ್ಯ ಅಭಿಯಂತರರಾದ ಆಯ್.ಎಲ್.ಕಳಸದ ಇವರು ಆಗಮಿಸಿ ಸರ್ಕಾರದ ಆದೇಶದ ಪ್ರತಿಯನ್ನು ಧರಣಿ ನಿರತ ರೈತರಿಗೆ ಹಸ್ಥಾಂತರಿಸಿದರು ಈ ಸಂದರ್ಭದಲ್ಲಿ ಆಯ್.ಎಲ್.ಕಳಸದ ಮಾತನಾಡಿ ಬಾಕಿ ಉಳಿದ ಕಾಮಗಾರಿ ಹತ್ತು ದಿನಗಳಲ್ಲಿ ಪ್ರಾರಂಬಿಸಲಾಗುವದೆAದು ಭರವಸೆ ನೀಡಿದರು ಆದ್ದರಿಂದ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಅರವಿಂದ ಕುಲಕರ್ಣಿ ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಅಭಿಂರರಾದ ಹೊನ್ನ ಕಸ್ತೂರಿ ಪಿ.ಎಸ್.ಆಯ್ ಇಂಡಿಕರ ತಾಲೂಕಾಧ್ಯಕ್ಷ ಉಮೇಶ ವಾಲಿಕಾರ, ಮಾರುತಿ ಹೂಗಾರ, ಆನಂದ ನಾಗರೆಡ್ಡಿ, ಯಲ್ಲಪ್ಪ ಹಾದಿಮನಿ, ಸಂಗನಗೌಡ ಹಿರೇಗೌಡರ ಸಂಕನಾಳ, ಮಲ್ಲಿಕಾರ್ಜುನ ಸಾಸನೂರ, ಬಸು ಬಜಂತ್ರಿ, ಸಾಹೇಬಗೌಡ ಹೋಸುರ, ಆನಂದ ಹಡಪದ, ಪ್ರವೀಣ ಹೋಸುರ, ಪ್ರಕಾಶ ಮುತ್ತಗಿ, ಪರಶುರಾಮ ಹೋಸುರ, ಅಶೋಕ ಹಡಪದ, ಸೊಮೇಶ ನಾಗರೆಡ್ಡಿ, ಯಮನಪ್ಪ ಸರುರ್, ಸಂದೀಪ ನಾಗರೆಡ್ಡಿ, ಪ್ರಶಾಂತ ನಾಗರೆಡ್ಡಿ, ಸಂತೋಷ ವಾಲಿಕಾರ, ಮಾಳು ಹೋಸುರ ಉಪಸ್ಥಿತರಿದ್ದರು.

