ಡಿವೈಎಸ್ಪಿ ಶರಣಬಸು ಕೊಳಾರಿ ಅವರ ಪೌರಸನ್ಮಾನ ಸಮಾರಂಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಂದಿನ ತಂತ್ರಜ್ಞಾನ ಸ್ಪರ್ದಾಯುಗದಲ್ಲಿ ಪಠ್ಯಪುಸ್ತಕದಂತೆ ಜೀವನ ನಿರ್ವಹಣೆಯ ಶಿಕ್ಷಣಕ್ಕು ಹೆಚ್ಚಿನ ಆದ್ಯತೆ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.
ಮುಖ್ಯಮಂತ್ರಿ ಚಿನ್ನದ ಪದಕವನ್ನು ಪಡೆದುಕೊಂಡ ಪಟ್ಟಣದ ನಿವಾಸಿ ಕಲಬುರಗಿಯಲ್ಲಿ ಡಿವೈಎಸ್ಪಿಯಾಗಿ ಕೆಲಸ ನಿರ್ವಹಿಸುತ್ತಿರುವ ಶರಣಬಸು ಕೊಳಾರಿ ಅವರಿಗೆ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಪೌರಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆ ಕೃಷಿ ಪ್ರಧಾನವಾಗಿ ಆರ್ಥಿಕವಾಗಿ ಪ್ರಗತಿಹೊಂದುತ್ತಿದ್ದು ಹಾಗೆ ಶಿಕ್ಷಣದಲ್ಲೂ ಪ್ರಗತಿ ಹೊಂದುವ ಜಿಲ್ಲೆಯಾಗಬೇಕು ಅದು ಪಠ್ಯಪುಸ್ತಕದ ಶಿಕ್ಷಣದ ಜೊತೆಗೆ ಸಾರ್ವಜನಿಕ ಜೀವನದಲ್ಲಿ ಬರುವ ಸವಾಲುಗಳು ಎದುರಿಸುವ ಶಿಕ್ಷಣ ಕಲಿಸಬೇಕಾಗಿದೆ ಎಂದರು.
ಹುಟ್ಟೂರಿನಲ್ಲಿ ನಾಗರಿಕ ಸನ್ಮಾನ ಸ್ವೀಕರಿಸುವ ಭಾಗ್ಯ ಎಲ್ಲರಿಗೂ ಸಿಗುವಂಥದಲ್ಲ, ಶರಣಬಸು ಕೊಳಾರಿ ಅವರ ಪ್ರಾಮಾಣಿಕ, ನಿಸ್ವಾರ್ಥ ಸೇವೆಗೆ ಸಿಕ್ಕ ಫಲ. ಯಾವುದೆ ಹುದ್ದೆಯಲ್ಲಿದ್ದರು ಅವಕಾಶ ಸಿಕ್ಕಾಗ ಉತ್ತಮ ಕೆಲಸ ಮಾಡಿದೆ ಸರ್ಕಾರ ಸಮಾಜ ತಾನಾಗಿಯೆ ಗುರ್ತಿಸುತ್ತದೆ, ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡು ಪ್ರಾಮಾಣಿಕ, ನಿಸ್ವಾರ್ಥ ಸೇವೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದು ಆಲಮೇಲ ಪಟ್ಟಣದಲ್ಲಿ ಪೌರ ಸನ್ಮಾನ ಸ್ವಿಕರಿಸಿದ ಡಿವೈಎಸ್ಪಿ ಶರಣಬಸು ಕೊಳಾರಿ ಮುಂತಾದವರು ಮಾತನಾಡಿದರು.
ನಂತರ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸನ್ಮಾನಿಸಿದರು.
ಡಾ| ಸಂದೀಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಅಳ್ಳೋಳ್ಳಿಮಠದ ಶ್ರೀಶೈಲಯ್ಯ ಮಹಾಸ್ವಾಮಿಜಿ, ಆಸಂಗಿಹಾಳದ ಶಂಕ್ರಾನಂದ ಮಹಾಸ್ವಾಮಿಜಿ ಸಾನಿದ್ಯ ವಹಿಸಿದರು. ಅಂಜುಮನ ಸಂಸ್ಥೆಯ ಅಧ್ಯಕ್ಷ ರೀಯಾಜ ಬಿಳವಾರ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಶ್ರೀಶೈಲ ಮಠಪತಿ, ಅಶೋಕ ಕೊಳಾರಿ, ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ ಮುಂತಾದವರು ಇದ್ದರು

