ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವೇಕ ಬ್ರಿಗೇಡ್ ಸಂಸ್ಥೆಯ ಬುಧವಾರ ಸಂಜೆ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಪ್ರಜೆಗಳಿಗೆ ಮತ್ತು ಪ್ರಜಾರಕ್ಷಕರಿಗೆ ಮೊಂಬತ್ತಿ ಹಚ್ಚುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿ ಉಗ್ರರ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹಿಂದುಗಳ ಮೇಲೆ ನಡೆದ ಈ ದಾಳಿಯು ಮಾನವ ಕುಲಕ್ಕೆ ಮಾರಕವಾಗಿದೆ. ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕಿದೆ. ಹಿಂದುಗಳನ್ನೇ ಗುರಿಯಾಗಿಸಿಕೊಂಡು ಹತ್ಯೆಗೈದಿರುವ ಉಗ್ರಗಾಮಿಗಳು ಎಲ್ಲೇ ಅಡಗಿಕುಳಿತುಕೊಂಡರೂ ಅವರನ್ನು ಹತ್ತಿಕ್ಕುವ ಕಾರ್ಯ ನಡೆಯಬೇಕು. ದೇಶದ ಹಿತಕ್ಕಾಗಿ ಎಲ್ಲ ಪ್ರಜೆಗಳು ಒಂದಾಗಿ ಉಗ್ರರನ್ನು ಸದೆಬಡಿಯಬೇಕು. ದೇಶದ ಸಂರಕ್ಷಣೆಗೆ ಎಲ್ಲ ಪ್ರಜೆಗಳು ಒಂದಾಗಿ ಉಗ್ರಗಾಮಿಗಳ ಶಕ್ತಿಯನ್ನು ದಮನ ಮಾಡುವದು ತುಂಬಾ ಅಗತ್ಯವಿದೆ ಎಂದರು.
ಮುಖಂಡರಾದ ಬಸವರಾಜ ಹಾರಿವಾಳ, ಶಿವರುದ್ರಯ್ಯ ಹಿರೇಮಠ, ವಿನುತ ಕಲ್ಲೂರ, ಪ್ರಭಾಕರ ಖೇಡದ, ವಿಜಯ ರೆಡ್ಡಿ, ರವಿಗೌಡ ಚಿಕ್ಕೊಂಡ, ಕಾಶೀನಾಥ ಅವಟಿ,, ಸಾವಿತ್ರಿ ಕಲ್ಯಾಣಶೆಟ್ಟಿ ಇತರರು ಮಾತನಾಡಿ, ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಂದಿರುವ ಖಂಡನೆ ಹೇಯ ಕೃತ್ಯವಾಗಿದೆ. ಈ ಘಟನೆ ಖಂಡನೀಯ. ಇಂತಹ ಶಕ್ತಿಯನ್ನು ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳುವ ಮೂಲಕ ಕ್ರಮ ವಹಿಸಬೇಕೆಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಲ್ಯಾಣಶೆಟ್ಟಿ, ಕೊಟ್ರೇಶ ಹೆಗ್ಡಾಳ, ಶ್ರೀಶೈಲ ಮಠಪತಿ, ಶಿವಾನಂದ ತೋಳನೂರ, ಸಂಗಮೇಶ ಹುಜರತಿ, ಬಸವರಾಜ ಹೂಗಾರ ಇತರರು ಇದ್ದರು.

