Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಏಳನೇ ಸುತ್ತಿನ ಕಾಲು ಮತ್ತು ಬಾಯಿ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಏ. ೨೬ ರಿಂದ ಜೂನ್ ೬ ರವರೆಗೆ ಸತತವಾಗಿ ನಡೆಯಲಿರುವ ಈ ಲಸಿಕಾ ಅಭಿಯಾನದಲ್ಲಿ ಚಿಮ್ಮಡ ಹಾಗೂ ಯರಗಟ್ಟಿ ಗ್ರಾಮಗಳ ಸುಮಾರು ೬೫೦೦ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ರೋಗನಿರೋಧಕ ಲಸಿಕೆಗಳನ್ನು ನೀಡುವ ಗುರಿ ನಿಗದಿಪಡಿಸಿಕೊಳ್ಳಲಾಗಿದ್ದು ಗ್ರಾಮದ ರೈತರು, ಸಾರ್ವಜನಿಕರು ಪಶು ಚಿಕಿತ್ಸಾಲಯಕ್ಕೆ ಬಂದು ತಮ್ಮ ಸಾಕುಪ್ರಾಣಿ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ವೈದ್ಯಾಧಿಕಾರಿ ಡಾ. ರೂಪಾ ಕಡಸಾನಿ ಮನವಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ಕಾರ್ಯಕ್ರಮದ ಭಿತ್ತಿಪತ್ರ ಪ್ರದರ್ಶೀಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಭು ಮುಧೋಳ, ಬಾಳು ಬ್ಯಾಕೋಡ, ಸುರೇಶ ಪೂಜಾರಿ, ತುಕಾರಾಮ ದೊಡಮನಿ, ಪಶು ವೈದ್ಯ ಪರೀಕ್ಷಕ ಎಸ್.ಕೆ. ಕೋರಿ, ಉಮೇಶ ಸವದಿ, ಪಶು ಸಖಿ ಸುನಿತಾ…

Read More

ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಬಸವಣ್ಣನವರು ಜಗವು ಕಂಡ ಶ್ರೇಷ್ಠ ದಾರ್ಶನಿಕರು. ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ, ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದ ಶ್ರೇಷ್ಠ ಸಾಧಕರು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಮತ್ತು ಶರಣರು ಕಲ್ಯಾಣದಲ್ಲಿ ವಿಶ್ವದ ಮೊದಲ ಸಂಸತ್ತನ್ನು ನಿರ್ಮಿಸಿದರು. ಅನುಭವ ಮಂಟಪ (ಅಥವಾ, “ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ 770 ಅಮರಗಣಂಗಳು ಇದ್ದರೆಂದು ಮತ್ತು 196000 ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.ಕಲ್ಯಾಣದಲ್ಲಿ ಈಗ…

Read More

ಚಿಂತನೆಡಾ.ಪ್ರಿಯಂವದಾ ಹುಲಗಬಾಳಿಅಥಣಿ ಉದಯರಶ್ಮಿ ದಿನಪತ್ರಿಕೆ ಕರುಳಕೇತಯ್ಯನವರ ವಚನ”ಅರ್ಪಿತವಲ್ಲದುದ ಕಲಸಿದ ಕೈ,ಉಂಡ ಬಾಯಿ.ತುಂಬಿದ ಘಟ ಅರಿದುಕೊಂಡ ಆತ್ಮ ಇವ ಹಿಡಿದಡೆ ಭಂಗ ಸಡಗರಿಸಿ ತುಂಬಿದ ಗರಳಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನರಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರಲಿಂಗವೆ ಬೇಡಿ” ವಚನ ವಿಶ್ಲೇಷಣೆ ಶರಣ ಕರುಳಕೇತಯ್ಯ ಅಪ್ಪಕಾಯಕ, ಭಕ್ತಿ, ಸಾಮಾಜಿಕ ಸಮಾನತೆ ಹಾಗೂ ಬದುಕಿನ ಸರಳತೆಯ ಸೂತ್ರಗಳ ಪ್ರಭಾವಕ್ಕೊಳಗಾದವರು. ಇವರ ಕುರಿತಾಗಿ ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಈತನ ಎಂಟು ವಚನಗಳು ಮಾತ್ರ ‘ಸಮಗ್ರ ವಚನ ಸಂಪುಟ-೭’ ರಲ್ಲಿ(ಸಂಕೀರ್ಣ ವಚನ ಸಂಪುಟ-೨)ರಲ್ಲಿ ಇವೆ.ಲೌಕಿಕ ಬದುಕಿನ ಆಶೆ ಆಮಿಷೆಗಳನ್ನು ತ್ಯಜಿಸಿ ನಿರ್ಲಿಪ್ತತೆಯ ನಿರಾಂತಕ ಬದುಕು ಸಾಗಿಸಬೇಕು. ಈ ವಚನದಲ್ಲಿ ಭೌತಿಕ ವಸ್ತುಗಳ ಮೇಲಿನ ನಿರ್ಮೋಹವನ್ನು ಅವುಗಳ ನಿರರ್ಥಕತೆಯನ್ನು ರೂಪಕಗಳ ಮೂಲಕ ಕರುಳಕೇತಯ್ಯನವರು ಹೇಳಿದ್ದನ್ನು ಕಾಣುತ್ತೇವೆ. ಅರ್ಪಿತವಲ್ಲದ ಅಂದರೆ ಸಲ್ಲದ, ಲಿಂಗಾರ್ಪಿತವಲ್ಲದ, ಲಿಂಗಕ್ಕೆ ಅರ್ಪಿಸಲು ಯೋಗ್ಯವಲ್ಲದ ವಸ್ತುಗಳನ್ನು ಮುಟ್ಟಿದವರು ಹಾಗೂ ಅನುಭವಿಸಿದವರು ಲಿಂಗಭಕ್ತಿಗೆ ಹೇಗೆ ಯೋಗ್ಯರು? ಜೀವನದಲ್ಲಿ…

Read More

ಮಕ್ಕಳ ಅನುಪಾತದಂತೆ ಶಿಕ್ಷಕರ ಹೆಚ್ಚುವರಿ ಮತ್ತು ವರ್ಗಾವಣೆ ವ್ಯವಸ್ಥೆಗೆ ಚಿತ್ರಕಲಾ ಶಿಕ್ಷಕರ ವಿರೋಧ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಮಕ್ಕಳ ಅನುಪಾತದಂತೆ ವೃಂದ ಬಲವನ್ನು ಜಾರಿಗೆ ತಂದಿರುವುದರಲ್ಲಿ ಶಿಕ್ಷಣದ ಎಲ್ಲಾ ಆಶಯಗಳನ್ನು ಬದಿಗೊತ್ತಿ ಖಾಲಿ ಹುದ್ದೆಗಳನ್ನು ಮರು ಭರ್ತಿ ಮಾಡದೆ ಅಳಿದುಳಿದ ಶಿಕ್ಷಕರುಗಳಲ್ಲೇ ಬಲವಂತದಿಂದ ಹುದ್ದೆ ಮರ್ಜ್ ಅಥವಾ ರದ್ದು ಗೊಳಿಸುತ್ತಾ ಹೆಚ್ಚುವರಿ ನೆಪದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಸೃಜನಶೀಲತೆಯಿಂದ ತೊಡಗಿಕೊಂಡು ಉಲ್ಲಸಿತವಾಗಿ ಚೈತನ್ಯದಿಂದ ತೊಡಗಿಕೊಂಡು ತನ್ನ ಮನೋವೃದ್ದಿ ಹೊಂದುವಂತಿದ್ದ ಜೈವಿಕವಾದ ವಿಷಯ “ಚಿತ್ರಕಲೆಯನ್ನು” ಮೊಟಕುಗೊಳಿಸುವುದು ಸರಿಯಲ್ಲ ಎಂದು ಚಿತ್ರಕಲಾ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಯಾಂತ್ರಿಕ ಶಿಕ್ಷಣವನ್ನು ಅಂದರೆ ವಸ್ತುನಿಷ್ಠ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ಉದಾಹರಣೆ : ಕ್ಯಾಲ್ಕುಲೇಟರ್ ಒಟ್ಟಾರೆಯಾಗಿ ಹೇಳುವುದಂದರೆ ಪರ್ಸೆಂಟೇಜ್ ಫಲಿತಾಂಶ ಶಿಕ್ಷಣಕ್ಕೆ ಇಲಾಖೆ ಮತ್ತು ಪಾಲಕರು ವ್ಯಾಮೋಹ ಹೊಂದಿ,ಅನುಭವಿಸಿ ಜೀವಿಸುವ ನಮ್ಮ ಕೌಶಲ್ಯ ಮತ್ತು ಸಂಸ್ಕೃತಿಗಳಿಂದ ದೂರಗೊಳಿಸುತ್ತಾ ಮಕ್ಕಳನ್ನು ಮಾನಸಿಕ ಅಶ್ವಸ್ಥರನ್ನಾಗಿಸುವುದರಿಂದ ಮಕ್ಕಳಲ್ಲಿ…

Read More

ಎಸ್ಪಿ ಲಕ್ಷ್ಮಣ ನಿಂಬರಗಿ ನೇತೃತ್ವ | ಅಪರಾಧದ ವಿರುದ್ಧ ಆರಕ್ಷಕರ ಕಾರ್ಯಾಚರಣೆ | ವರ್ಷದಲ್ಲಿ ೩೪೫ ಆರೋಪಿಗಳ ಬಂಧನ | ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳು ವಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಪರಾಧಿಕ ಪ್ರಕರಣಗಳ ಕಡಿವಾಣಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಟೊಂಕಕಟ್ಟಿ ನಿಂತಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ಆರೋಪಿಗಳನ್ನು ಬಂಧಿಸಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.ಕಳ್ಳತನ ಮೊದಲಾದ ಪ್ರಕರಣಗಳಲ್ಲಿ ತಮ್ಮ ಸ್ವೊತ್ತನ್ನು ಕಳೆದುಕೊಂಡಿರುವ ನೈಜ ವಾರಸುದಾರರಿಗೆ ಶುಕ್ರವಾರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಸ್ವೊತ್ತನ್ನು ಹಸ್ತಾಂತರಿಸಿದರು.ಒಟ್ಟು ೭,೦೨,೨೯,೭೬೪ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವಾರಸುದಾರರಿಗೆ ೩,೪೬,೦೮,೧೦೦ ರೂ. ಮೌಲ್ಯದ ವಸ್ತುಗಳನ್ನು ಹಿಂದಿರುಗಿಸಲಾಗುತ್ತಿದೆ. ಬಾಕಿ ಉಳಿದ ೩,೫೬,೨೧,೬೬೪ ರೂ. ಮೌಲ್ಯದ ವಸ್ತುಗಳನ್ನು ನ್ಯಾಯಾಲಯದಿಂದ ಅನುಮತಿ ಆಧರಿಸಿ ವಾರಸುದಾರರಿಗೆ ನೀಡುವ ವ್ಯವಸ್ಥೆ ಮಾಡಲಿದೆ.ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ…

Read More

ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಯುವ ಕ್ರಾಂತಿ’ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು: ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ. ಈಗವರು ದೇಶಭಕ್ತಿ ಬಗ್ಗೆ ಮಾತಾಡುತ್ತಾರೆ. ಸಾವರ್ಕರ್ ಮತ್ತು ಗೋಲ್ವಾಲ್ಕರರು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧ ಇದ್ದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದರು.ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಯುವ ಕ್ರಾಂತಿ’ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಮುಖ್ಯಮಂತ್ರಿ, ಸ್ವಾತಂತ್ರ್ಯ ಹೋರಾಟ ಮತ್ತು‌ ಆಧುನಿಕ ಭಾರತ ನಿರ್ಮಾಣದಲ್ಲಿ ಕಾಂಗ್ರೆಸ್ ನ ತ್ಯಾಗ-ಬಲಿದಾನ ಮಹತ್ವದ ಪಾತ್ರ ನಿರ್ವಹಿಸಿದೆ. ದೇಶಕ್ಕೆ ನಾಗರಿಕ ಹಕ್ಕು ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಹುಟ್ಟಿದ ಪಕ್ಷ ಕಾಂಗ್ರೆಸ್. ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟಕ್ಕೆ ಬರಲೇ ಇಲ್ಲ.ಆದರೆ ಈಗ ಇವರು ನಮಗೆ ದೇಶ ಭಕ್ತಿ ಬಗ್ಗೆ ಮಾತನಾಡುತ್ತಾರೆ ಎಂದರು.ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದಂತೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಭದ್ರ ಬುನಾದಿ ಹಾಕಿದವರು ನೆಹರೂರವರು. ಬಹುತ್ವ ಭಾರತದ ನೆಲದಲ್ಲಿ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಏಳಿಗೆಯೇ ನಮ್ಮ ಮೂಲ ಧ್ಯೇಯ. ಅದಕ್ಕೆ ಪೂರಕವಾಗಿ ಎಂದೆಂದಿಗೂ ಪೋಷಕರ ಸೂಕ್ತ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ಪೋಷಕ-ಶಿಕ್ಷಕರ’ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಟ್ಟಿ ಬೆಳಸಿದ ಶ್ರೀ ಬಂಥನಾಳ ಶಿವಯೋಗಿಗಳು, ಡಾ.ಫ ಗು ಹಳಕಟ್ಟಿಯವರು ಮತ್ತು ಡಾ.ಬಿ.ಎಂ ಪಾಟೀಲ ಮಹಾನ್ ಚೇತನರು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.ಮೊದಲು ನೂತನ ಆವರಣದಲ್ಲಿ ಯಾವುದೇ ಗಿಡಮರಗಳಿಲ್ಲದೆ ಒಣ ಭೂಮಿ ಇತ್ತು. ಆದರೆ ಇಂದು ಸಂಸ್ಥೆಯ ಅಧ್ಯಕ್ಷರಿಂದ ಉದ್ಘಾಟಿತ ‘ಹಸಿರು ಸಿರಿ’ ಸೆಲ್‌ನಿಂದಾಗಿ ಹಸಿರುಮಯವಾಗಿದೆ. ಒಟ್ಟು ೨೦೦ ಕ್ಕಿಂತ ಅಧಿಕ ಗಿಡಗಳನ್ನು ನೆಟ್ಟು ಪೋಷಿಸಿ ಆವರಣ ಸಂಪೂರ್ಣ ಹಸಿರುಮಯಗೊಳಿಸಲಾಗಿದೆ.ಅದಕ್ಕೆ ಮಹಾವಿದ್ಯಾಲಯದ ಬೋಧಕ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಧರ್ಮಸ್ಥಳ ಸಂಘವು ಕೇವಲ ಸಾಲ ಕೊಡುವದಷ್ಟೇ ಅಲ್ಲದೆ ನೂರಾರು ಜನಪಯೋಗಿ ಯೋಜನೆ ಕೈಗೆತ್ತಿ ಕೊಂಡಿದೆ. ವಯೋವೃದ್ದರಿಗೆ ಮಾಶಾಸನವನ್ನು ನೀಡಿ ಸಹಕರಿಸುತ್ತಿದೆ ಎಂದು ನಟರಾಜ ಎಂ.ಎಲ್ ಹೇಳಿದರು.ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹೊಸದಾಗಿ ಮಂಜುರಾದ ಮಾಶಾಸನ ಪತ್ರ ವಿತರಿಸಿ ಮಾತನಾಡಿದರು.ತಾಲೂಕಿನಲ್ಲಿ ೯೩ ನಿರ್ಗತಿಕ ವೃದ್ದ ಮಹಿಳೆಯರು ಮಾಶಾಸನ ನೀಡಿದ್ದು ಅಂಜುಟಗಿ ಗ್ರಾಮದಲ್ಲಿ ಇಂದು ಐದು ಮಹಿಳೆಯರಿಗೆ ನೀಡಿದೆ. ಇದರಿಂದ ಅವರಿಗೆ ಪ್ರತಿ ತಿಂಗಳು ರೂ ಒಂದು ಸಾವಿರ ಜೀವಿತ ಅವಧಿಯ ವರೆಗೂ ಬರುತ್ತದೆ ಎಂದರು.ಗುರುಬಾಯಿ ಇಚ್ಚೂರ್, ಕಾಂತಬಾಯಿ ಅಗಸನಾಳ, ಮರೆಂಬು ಬಳಿಗಾರ, ಪಾರ್ವತಿ ವಾಲಿ ಇವರಿಗೆ ಮಾಶಾಸನ ಪತ್ರ ವಿತರಿಸಲಾಯಿತು.ಅಣ್ಣಾರಾಯ ರೇವಪ್ಪ ಬಬಲಾದಿ, ವಿಜಯಕುಮಾರ ಪೈಗೊಂಡ, ಶಂಕರ ದಡ್ಡಣ್ಣವರ್, ಸಾಯಿಕುಮಾರ ಬನಪಟ್ಟಿ, ಸುರೇಸ ಮಾದರ, ಬಂಡೆಪ್ಪ ಅಲ್ಲಬಗೊಂಡ,ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ ಎಸ್.ಎಂ, ವಲಯ ಮೇಲ್ವಿಚಾರಕಿ ಅಶ್ವಿನಿ ಸಂಗೋಳಿ, ಸೇವಾ ಪ್ರತಿನಿಧಿ ಸೇವಾ ಸಾಬ್ಳೆ,ಸಿದ್ದಲಿಂಗ ಮಡಿವಾಳ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು ಮತ್ತು ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಅವರ ವ್ಯಕ್ತಿತ್ವ ಹಾಗೂ ನಡೆದು ಬಂದ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಮಾದಿಗ ಯುವ ಸೇನೆಯ ಅಧ್ಯಕ್ಷ ನಂದಕುಮಾರ್ ಬಾಂಬೆಕರ್ ಹೇಳಿದರು.ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್, ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಮತ್ತು ಮಾದಿಗ ಯುವ ಸೈನ್ಯ ಶಾಖೆ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾದಿಗ ಸಮಾಜವು ಶತಮಾನಗಳಿಂದಲೂ, ಶೋಷಣೆ ದಬ್ಬಾಳಿಕೆಯಿಂದ ನಲುಗಿದೆ. ಆದರೆ ಯಾರೂ ಮಾದಿಗರ ನ್ಯಾಯಯುತ ಬೇಡಿಕೆಯಾದ ಒಳ ಮೀಸಲಾತಿ ಕೊಡಿಸಲು ವಿಫಲರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾದಿಗ ಯುವ ಮುಖಂಡ ಸಾಯಬಣ್ಣ ಪುರದಾಳ, ಬಾಬು ಜಗಜೀವನ್ ರಾಮ್ ಅವರು ಸ್ವಾತಂತ್ರ್ಯ ನಂತರ ಕೃಷಿ ಸಚಿವರಾಗಿ ಬಡ ರೈತರ ಬಾಳಿಗೆ ಬೆಳಕಾಗಿ ಹಸಿರು ಕ್ರಾಂತಿಯನ್ನೇ ಮಾಡಿ ಈ ದೇಶಕ್ಕೆ ಆಹಾರ ಭದ್ರತೆಯನ್ನು ನೀಡಿದವರು. ಅವರ ಸಾಮಾಜಿಕ ಕಳಕಳಿ ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಯೋಜನೆಗಳು ಅನುಕೂಲಕರವಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.ತಾಲೂಕಿನ ಡೋಣೂರು ಗ್ರಾಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಜನರು ಪಂಚಗ್ಯಾರಂಟಿ ಯೋಜನೆಗಳ ಪ್ರಯೋಜನ ಮಾಡಿಕೊಳ್ಳಬೇಕೆಂದರು.ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಮಹಿಬೂಬ್ ನಾಯ್ಕೋಡಿ ಮಾತನಾಡಿ, ಎಲ್ಲ ಫಲಾನುಭವಿಗಳಿಗೆ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳು ಮುಟ್ಟಿಸುವಂತೆ ಕ್ರಮವಹಿಸಬೇಕು. ಯೋಜನೆಗಳು ಅರ್ಹರ ಮನೆ ತಲುಪದಿದ್ದಲ್ಲಿ ಅದಕ್ಕೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು.ಸಭೆಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರುಕ್ಮಿಣಿ ರಾಥೋಡ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ದೇಸಾಯಿ, ಡೋಣೂರು ಗ್ರಾಮದ ಪಿಡಿಒ ರಾಜೇಶ್ವರಿ ಪಾಟೀಲ, ಡೋಣೂರು ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪಡಗಾನೂರ, ಯುವರಾಜ ಪಡಗಾನೂರ, ಬಸವರಾಜ ಮಸಳಿ, ಪರಶುರಾಮ ಜ್ಯೋತಿ, ಮಹಿಬೂಬ್ ಹಿಪ್ಪರಗಿ, ಶಂಕ್ರಪ್ಪ ಹುಲ್ಲೂರ, ಗ್ಯಾರಂಟಿ ಯೋಜನೆಯ…

Read More