Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬಸವ ಕಲ್ಯಾಣ ಅಂದು-ಇಂದು ಒಂದು ಅವಲೋಕನ
ವಿಶೇಷ ಲೇಖನ

ಬಸವ ಕಲ್ಯಾಣ ಅಂದು-ಇಂದು ಒಂದು ಅವಲೋಕನ

By Updated:No Comments6 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ.ಶಶಿಕಾಂತ ಪಟ್ಟಣ
ರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಬಸವಣ್ಣನವರು ಜಗವು ಕಂಡ ಶ್ರೇಷ್ಠ ದಾರ್ಶನಿಕರು. ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ, ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದ ಶ್ರೇಷ್ಠ ಸಾಧಕರು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಬಸವಣ್ಣ ಮತ್ತು ಶರಣರು ಕಲ್ಯಾಣದಲ್ಲಿ ವಿಶ್ವದ ಮೊದಲ ಸಂಸತ್ತನ್ನು ನಿರ್ಮಿಸಿದರು. ಅನುಭವ ಮಂಟಪ (ಅಥವಾ, “ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ 770 ಅಮರಗಣಂಗಳು ಇದ್ದರೆಂದು ಮತ್ತು 196000 ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಕಲ್ಯಾಣದಲ್ಲಿ ಈಗ ನೋಡಲು ಅರುಹಿನ ಮನೆ, ಬಂದವರ ಓಣಿ, ಪರುಷ ಕಟ್ಟೆ, ತ್ರಿಪುರಾಂತಕ ಕೆರೆ, ಅಲ್ಲಮಪ್ರಭುಗಳ ವಾಸಸ್ಥಾನ, ಅಕ್ಕನಾಗಮ್ಮನ ಗವಿ, ಮಡಿವಾಳ ಮಾಚಿದೇವರ ಕೆರೆ, ಶ್ರೀ ಬಸವೇಶ್ವರ ಮಹಾಮನೆ, ಹರಳಯ್ಯನ ಗವಿ, ನುಲಿಯ ಚಂದಯ್ಯನ ಗವಿ, ಕಲ್ಯಾಣ ಅರಮನೆ ಕೋಟೆ, ಬಸವಣ್ಣನವರು ಮದುವೆಯ ಕಲ್ಯಾಣ ಮಂಟಪ, ಹೀಗೆ ಅನೇಕ ಸ್ಮಾರಕಗಳು ಕಂಡು ಬರುತ್ತವೆ.

ಶ್ರೀ ಬಸವೇಶ್ವರರ ಮಹಾ ಮನೆ

ಬಸವಣ್ಣನವರು ವಾಸಿಸುವ ಮನೆಗೆ ಮಹಾಮನೆ ಎಂದು ಕರೆಯುತ್ತಾರೆ, ಕಲ್ಯಾಣಕ್ಕೆ ಬಂದವರಿಗೆ ಪ್ರಸಾದದ ವ್ಯವಸ್ಥೆ ಮತ್ತು ತಂಗಿಕೊಳ್ಳಲು ಅನುವು ಮಾಡಿ ಕೊಡುವ ಮಹಾಮಂತ್ರಿಯ ಮನೆಯೇ ಇವತ್ತು ಬಸವೇಶ್ವರರ ದೇವಸ್ಥಾನ. ಅಲ್ಲಿ ಹಿಂದೆ ಅಡುಗೆ ಮನೆ ಇದೆ ಎರಡೂ ಕಡೆಗೂ ಪೌಳಿ ಕಂಡು ಬರುತ್ತವೆ. ಬಸವಣ್ಣವರ ಮೂರ್ತಿ ಎದುರಿನ ಮಂದಿರದಲ್ಲಿ ಶೋಭಾಯಮಾನವಾಗಿದೆ .

ಬಂದವರ ಓಣಿ

ಬಂದವರ ಓಣಿ ಇದು ಕಲ್ಯಾಣದ ಆರಂಭದಲ್ಲಿಯೇ ಕಂಡು ಬರುವ ಜನರಿಗೆ ಕುಳಿತು ಕೊಳ್ಳಲು ಅವರಿಗೆ ಸ್ನಾನ ಪೂಜೆಗೆ ಅನುವು ಮಾಡಿಕೊಡುವ ವಿಶಾಲವಾದ ಸ್ಥಾನವಾಗಿದೆ. ಅಕ್ಕ ಮಹಾದೇವಿಯು ಕಲ್ಯಾಣಕ್ಕೆ ಬಂದಾಗ ಕಿನ್ನರಿ ಬ್ರಹ್ಮಯ್ಯನು ಅತ್ಯಂತ ಗೌರವ ಪೂರ್ವಕವಾಗಿ ಕರೆದುಕೊಂಡು ಹೋಗಿ ಅಲ್ಲಿರುವ ಪುಟ್ಟ ಗವಿಯಲ್ಲಿ ತಾತ್ಪೂರ್ತಿಕವಾಗಿ ಇರಲು ವ್ಯವಸ್ಥೆ ಮಾಡಿ ಕೊಟ್ಟ ಸ್ಮಾರಕವು ಇದೆ. ಅತ್ಯಂತ ವಿಶಾಲವಾದ ನಿಸರ್ಗ ರಮಣೀಯವಾದ ಸ್ಥಳದಲ್ಲಿ ಹೊರಗಿನಿಂದ ಬಂದ ಶರಣರಿಗೆ ಇಳಿದುಕೊಳ್ಳಲು ವಿಶ್ರಮಿಸಲು ಅತಿಥಿ ಆದರೆ ಆತಿಥ್ಯಕ್ಕೆ ನಿರ್ಮಿಸಿದ ಸ್ಥಾನವಾಗಿತ್ತು.

ಅಕ್ಕ ಮಹಾದೇವಿ ಧ್ಯಾನದ ಗವಿ

ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ, ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ. ವಚನ ಚಳುವಳಿಯ ಸಮಯದಲ್ಲಿ, ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆದಿದ್ದಾರೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ.
ಉದಾ: ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ’,
‘ಬೆಟ್ಟದಾ ಮೇಲೊಂದು ಮನೆಯ ಮಾಡಿ, ಮೃಗಗಳಿಗೆ ಅಂಜಿದೊಡೆಂತಯ್ಯಾ’,
‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು’- ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ.
ದೊರೆ ಕೌಶಿಕ ರಾಜನನ್ನು ತೊರೆದು ಕಲ್ಯಾಣಕ್ಕೆ ಆಗಮಿಸಿದ ಅಕ್ಕನು ಆರಂಭದಲ್ಲಿ ಮತ್ತು ಕಲ್ಯಾಣದಲ್ಲಿ ಇರುವವರೆಗೆ ಬಂದವರ ಓಣಿಯಲ್ಲಿರುವ ಪುಟ್ಟ ಗವಿಯಲ್ಲಿ ವಾಸವಾಗಿದ್ದಳು ಎಂದು ಪ್ರತೀತಿ ಇದೆ.

ತ್ರಿಪುರಾಂತಕ ಕೆರೆ

ತ್ರಿಪುರಾಂತಕ ಕೆರೆಯು 25 ಎಕರೆಯಲ್ಲಿ ಹಮ್ಮಿಕೊಂಡ ಅತ್ಯಂತ ದೊಡ್ಡ ಕೆರೆಯಾಗಿತ್ತು
ಇಲ್ಲಿಗೆ ಹತ್ತಿಕೊಂಡು ಅಂಬಿಗರ ಚೌಡಯ್ಯನವರ ಗವಿ ಇದೆ. ಕಲ್ಯಾಣಕ್ಕೆ ಬರುವ ಶರಣರನ್ನು ಅಂಬಿಗರ ಚೌಡಯ್ಯನವರು ತಮ್ಮ ದೋಣಿಯಿಂದ ಕರೆತರುತ್ತಿದ್ದರು. ಮಡಿವಾಳ ಮಾಚಿದೇವ ಇಲ್ಲಿಯೇ ಶರಣರ ಬಟ್ಟೆಯನ್ನು ಮಡಿ ಮಾಡುತ್ತಿದ್ದನು. ಮೇದಾರ ಕೇತಯ್ಯನವರು ಅಲ್ಲಿರುವ ಸೆಣಬನ್ನು ಹೊಸೆದು ಹಗ್ಗ ಮತ್ತು ಕಣ್ಣಿ ಮಾಡುತ್ತಿದ್ದರು, ಗಾಳದ ಕಣ್ಣಪ್ಪ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದನು. ಇವೆಲ್ಲವುಗಳ ಸ್ಮಾರಕ ಇಂದಿನ ಬಸವ ಕಲ್ಯಾಣದಲ್ಲಿ ಕಂಡು ಬರುತ್ತವೆ.

ಅನುಭವ ಮಂಟಪ

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ಕರ್ನಾಟಕದ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿರುವ ತ್ರಿಪುರಾಂತಕ ಪ್ರದೇಶದ ಒಂದು ಧಾರ್ಮಿಕ ಸಂಕೀರ್ಣವಾಗಿದೆ. ಇದು ವಿಶ್ವದ ಮೊದಲ ಧಾರ್ಮಿಕ ಸಂಸತ್ತು, ಇದರ ಹೆಸರನ್ನು ಅಕ್ಷರಶಃ “ಅನುಭವ ಮಂಟಪ” ಎಂದು ಅನುವಾದಿಸಲಾಗಿದೆ ಮತ್ತು 12 ನೇ ಶತಮಾನದಲ್ಲಿ ಲಿಂಗಾಯತ ನಂಬಿಕೆಯ ಅತೀಂದ್ರಿಯರು, ಸಂತರು ಮತ್ತು ದಾರ್ಶನಿಕರ ಅಕಾಡೆಮಿಯಾಗಿತ್ತು. ಇದು ಮೂಲಭೂತವಾಗಿ ಲಿಂಗಾಯತಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳ ಮೂಲವಾಗಿತ್ತು ಮತ್ತು ಕರ್ನಾಟಕ ಮತ್ತು ಭಾರತದ ಇತರ ಭಾಗಗಳಿಂದ ಹಲವಾರು ಶರಣರು ಭಾಗವಹಿಸಿದ್ದ ಅತೀಂದ್ರಿಯ ಅಲ್ಲಮ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮತ್ತು ಇದನ್ನು ವಿಶ್ವದ ಮೊದಲ ಸಂಸತ್ತು ಎಂದೂ ಕರೆಯುತ್ತಾರೆ. ಅಂದು ವೈದಿಕ ಕೋಪಕ್ಕೆ ನೆಲಸಮವಾಗಿರಬಹುದಾದ ಅನುಭವ ಮಂಟಪದ ಕುರುಹುಗಳು ಮಾತ್ರ ಕಾಣುತ್ತವೆ, ಇಂದು ಕರ್ನಾಟಕ ಸರಕಾರವು ಕೊಟ್ಟ ಅನುದಾನದಲ್ಲಿ 1000 ಕೋಟಿ ರೂಪಾಯಿಯ ಬೃಹತ್ ಅನುಭವ ಮಂಟಪವು ನಿರ್ಮಾಣದ ಹಂತದಲ್ಲಿದೆ,

ಅಕ್ಕ ನಾಗಮ್ಮನ ಗವಿ

ಅಕ್ಕನಾಗಮ್ಮನ ಆಧ್ಯಾತ್ಮಿಕ ಸಾಧನೆಗೆ ಅಲ್ಲಿ ಅಕ್ಕ ನಾಗಮ್ಮ ಮತ್ತು ಚೆನ್ನ ಬಸವಣ್ಣನವರು ಕುಳಿತು ಲಿಂಗ ಯೋಗ ಸಾಧನೆ ಮಾಡುತ್ತಿದ್ದರು ಎನ್ನುವ ಪುಟ್ಟ ಗವಿ ಇದೆ.
ಬಸವಣ್ಣನವರ ಅರುಹಿನ ಮನೆ

ಬಸವಣ್ಣನವರು ಮಡದಿ ಗಂಗಾಂಬಿಕೆ ನೀಲಾಂಬಿಕೆ ಇವರೆಲ್ಲರೂ ಕುಳಿತು ಇಷ್ಟ ಲಿಂಗ ಪೂಜೆ ಯೋಗ ಮಾಡುವ ಸುಂದರ ಗವಿಗಳು ಕಂಡು ಬರುತ್ತವೆ.

ಮಡಿವಾಳ ಮಾಚಿದೇವರ ಕಟ್ಟೆ

ಮಡಿವಾಳ ಮಾಚಯ್ಯ ಹುಟ್ಟಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಟನಾಗಿದ್ದ, ಹಿಮಾಲಯದಷ್ಟು ಧೃಢನಾಗಿದ್ದ, ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ.
ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ‘ಮಡಿ’ ಮಾಡಿ ಮುಟ್ಟಿಸುವ ಕಾಯಕ ಇವರಾದಾಗಿತ್ತು. ಮಡಿ ಬಟ್ಟೆ ಹೊತ್ತುಕೊಂಡು ‘ವೀರ ಘಂಟೆ’ ಬಾರಿಸುತ್ತ, ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದೆಂದು ನಿಯಮವನ್ನು ವಿಧಿಸಿಕೊಂಡಿದ್ದರು.
ಕುಚೋದ್ಯಕ್ಕೆ ಬಂದು ಮುಟ್ಟುವ ಭವಿಗಳನ್ನು ತುಂಡರಿಸಿ ಚೆಲ್ಲುತ್ತ ಮುನ್ನಡೆಯುವುದು ಮಾಚಿದೇವರ ನಡತೆಯಾಗಿತ್ತು. ಭವಿಯೋರ್ವ ಮಡಿ ಗಂಟು ಮುಟ್ಟಿ ಮೈಲಿಗೆಗೊಳಿಸಿದ್ದಕ್ಕೆ ಆತನ ಶಿರವನ್ನು ಆಕಾಶಕ್ಕೆ ತೂರಿದ ಘಟನೆಯಿಂದಾಗಿ, ಭಕ್ತಿ ಭಾವದಿಂದ ಮಡಿವಾಳಯ್ಯನನ್ನು ಜನರು ಗೌರವಿಸುತ್ತಿದ್ದರು. ಕಾಯಕ ಮಾಡದ -ಸೋಮಾರಿಗಳ-ಬಡವರನ್ನು ಶೋಷಿಸುವ -ಸೋಮಾರಿಗಳ- ದುರ್ಗುಣವುಳ್ಳವರ ಬಟ್ಟೆಗಳನ್ನೆಂದು ಆತ ಮುಟ್ಟುತ್ತಿರಲಿಲ್ಲ. ‘ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ‘ ಎಂಬುದನ್ನು ಜನಕ್ಕೆ ಸಾರಿದರು.
ಮಡಿವಾಳ ಮಾಚಿದೇವರು ತ್ರಿಪುರಾಂತಕ ಕೆರೆಯ ಒಂದು ಭಾಗದಲ್ಲಿ ವಾಸಿಸುತ್ತಿದ್ದರು. ಈಗ ಅಲ್ಲಿ ಈಗ ಒಂದು ಮಂದಿರವು ನಿರ್ಮಾಣಗೊಂಡಿದೆ.

ಪರುಷ ಕಟ್ಟೆ

ಬಸವಣ್ಣನವರು ಜನರ ಸಮಸ್ಯೆ ಆಲಿಸುತ್ತಿದ್ದ ಬಸವಕಲ್ಯಾಣದ ಈ ಕಟ್ಟೆಗೆ ಜನರು ಪರುಷ ಕಟ್ಟೆ ಎಂದು ಕರೆಯುತ್ತಾರೆ. ಬಸವಣ್ಣನವರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ ಪರುಷ ಕಟ್ಟೆಗೆ ಆಗಮಿಸುತ್ತಿದ್ದರು. ಶೋಷಿತರ, ದಮನಿತರ ಸಮಸ್ಯೆಗಳನ್ನು ಆಲಿಸಿ ಬಸವಣ್ಣನವರು ಸ್ಥಳದಲ್ಲೇ ಪರಿಹಾರ ಕಲ್ಪಿಸುತ್ತಿದ್ದ ಪವಿತ್ರ ಸ್ಥಳ ಈ ಪರುಷ ಕಟ್ಟೆ. ಒಂದು ಅರ್ಥದಲ್ಲಿ ಇದು ಜನತಾ ದರ್ಬಾರವಾಗಿತ್ತು. ಬಡವರಿಗೆ ಅಂಗವಿಕಲರಿಗೆ ಸಹಾಯ ಮಾಡುವ ಪುಣ್ಯ ಕ್ಷೇತ್ರ ಇದಾಗಿತ್ತು.

ಅಲ್ಲಮ ಪ್ರಭುಗಳ ಮನೆ

ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಜನಿಸಿದರು. ಸುಮಾರು(12ನೇ ಶತಮಾನ) ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸಿ-12000 ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರವಾಗಿತ್ತು.
ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದಾನೆ. ಈತನು ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವನಾದರೂ, ಮನೆ ಬಿಟ್ಟು ತೆರಳಿ ಅಧ್ಯಾತ್ಮಸಾಧಕನಾದನೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷನಾಗುತ್ತಾನೆ. ಅಲ್ಲಮನ ವಚನಚಂದ್ರಿಕೆಯಲ್ಲಿ 1294 ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಲಿಂಗೈಕ್ಯನಾದನೆಂದು ಪ್ರತೀತಿ. ಬಸವಣ್ಣನವರ ಸಮಕಾಲೀನನಾದ ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಈತನ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವನ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವನದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವನ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.
ಅಲ್ಲಮ ಪ್ರಭುಗಳು ವಾಸವಾಗಿದ್ದ ಮನೆಯನ್ನು ಇಂದು ಅಲ್ಲಮರ ಮಠ ಎಂದು ಕರೆಯಲ್ಪಡುತ್ತದೆ. ಒಳಗೆ ಒಂದು ಪುಟ್ಟ ನಂದಿ ಅಲ್ಲಮರ ಇರುವ ಎರಡು ಕೊನೆ ಕಾಣುತ್ತೇವೆ.

ಬಸವ ಕಲ್ಯಾಣದ ಕೋಟೆ

ಕಲ್ಯಾಣ ಕೋಟೆ ಎಂದು ಕರೆಯಲ್ಪಡುತ್ತಿದ್ದ ಬಸವಕಲ್ಯಾಣ ಕೋಟೆಯು ಭಾರತದ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯಲ್ಲಿದೆ . ಇದರ ಐತಿಹಾಸಿಕ ಮಹತ್ವವು 10 ನೇ ಶತಮಾನಕ್ಕೆ ಸೇರಿದೆ. ಚಾಲುಕ್ಯರ ರಾಜಧಾನಿಯನ್ನು 10 ನೇ ಶತಮಾನದಲ್ಲಿ ಮಾನ್ಯಖೇಟದಿಂದ ಕಲ್ಯಾಣಕ್ಕೆ ಸ್ಥಳಾಂತರಿಸಲಾಯಿತು. ಬಸವಕಲ್ಯಾಣ ಪಟ್ಟಣದ ಅವಿಭಾಜ್ಯ ಅಂಗವಾಗಿರುವ ಈ ಕೋಟೆಯು ಬಸವಣ್ಣ ( ಲಿಂಗಾಯತ ಧರ್ಮದ ಸ್ಥಾಪಕ) ಮತ್ತು ನೂರಾರು ಇತರ ಶರಣರ ( ಲಿಂಗಾಯತ ಧರ್ಮದ ಶರಣರು ಸಂತರು) ಕರ್ಮಭೂಮಿ ಎಂದೂ ಪ್ರಸಿದ್ಧವಾಗಿದೆ .
12 ನೇ ಶತಮಾನದಲ್ಲಿ ಸಮಾಜ ಸುಧಾರಕ ಬಸವೇಶ್ವರರಿಂದಾಗಿ, ಅದರ ಕೋಟೆಯೊಂದಿಗೆ ಬಸವಕಲ್ಯಾಣ (ಇತಿಹಾಸದಲ್ಲಿ ಕಲ್ಯಾಣ ಎಂದು ಕರೆಯಲಾಗುತ್ತದೆ) ಒಂದು ದೊಡ್ಡ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಯ ಕೇಂದ್ರವಾಗಿತ್ತು. ಇದು ಕಲಿಕೆಯ ಕೇಂದ್ರವಾಯಿತು. ಬಸವೇಶ್ವರ, ಅಕ್ಕ ಮಹಾದೇವಿ , ಚನ್ನಬಸವಣ್ಣ , ಸಿದ್ಧರಾಮ ಮತ್ತು ಇನ್ನೂ ಅನೇಕ ಶರಣರು ಬಸವಕಲ್ಯಾಣದೊಂದಿಗೆ ಸಂಬಂಧ ಹೊಂದಿದ್ದಾರೆ. ನಿರ್ದಿಷ್ಟವಾಗಿ ಬಸವೇಶ್ವರರು ಹಿಂದೂ ಧರ್ಮದಲ್ಲಿ ಜಾತಿಪದ್ಧತಿ ಮತ್ತು ಸಾಂಪ್ರದಾಯಿಕತೆಯ ವಿರುದ್ಧ ಹೋರಾಡಿದರು.

ಹರಳಯ್ಯನವರ ಗವಿ

ಹರಳಯ್ಯ 12ನೆಯ ಶತಮಾನದ ಶಿವಶರಣ. ಬಸವಣ್ಣನವರ ಸಮಕಾಲೀನ.
ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರು ಲಿಂಗ ಜಂಗಮ ಸೇವೆಗೆ ತನ್ನ ತನುಮನಧನ ಗಳನ್ನು ಮುಡಿಪಾಗಿಟ್ಟಿದ್ದವ. ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯ ದಲ್ಲಿ ಭೇಟಿಯಾದ ಹರಳಯ್ಯ, ಶರಣು ಬಸವರಸ ಎಂದು ತಲೆಬಾಗಿ ವಂದಿಸಿದ. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದ. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದ, ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು, ಹರಳಯ್ಯನಿಗೆ. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದ. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ.
ಅನಂತರ ನಡೆದ ಕಲ್ಯಾಣದ ಕ್ರಾಂತಿಗೆ ಕಾರಣವಾದ ಘಟನೆಗಳಲ್ಲಿ ಕೀಳು ಜಾತಿಯ ಹರಳಯ್ಯನ ಮಗನ ಮದುವೆ ಮೇಲು ಜಾತಿಯ ಮಧುವಯ್ಯನ ಮಗಳೊಂದಿಗೆ ನಡೆದದ್ದು ಮುಖ್ಯವಾದದ್ದು. ಹರಳಯ್ಯ ಅನುಭವ ಮಂಟಪದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದಿರ ಬಹುದಾದರೂ ಇವರ ವಚನಗಳು ದೊರೆತಿಲ್ಲ.
ಹರಳಯ್ಯ ಆತನ ಮಡದಿ ಕಲ್ಯಾಣಮ್ಮ ಮಗ ಶೀಲವಂತರು ವಾಸವಾಗಿದ್ದು ಇಷ್ಟ ಲಿಂಗ ಸಾಧನೆಯನ್ನು ಮಾಡುವ ಸ್ಥಳವನ್ನು ಹರಳಯ್ಯನ ಗವಿ ಎಂದು ಕರೆಯುತ್ತಾರೆ.

ನುಲಿಯ ಚಂದಯ್ಯನ ಗವಿ

ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಚಂದಯ್ಯ ಒಬ್ಬ ಕಾಯಕಯೋಗಿ. ಬಿಜಾಪುರ ಜಿಲ್ಲೆಯ ಶಿವಣಗಿ ಈತನ ಹುಟ್ಟೂರು. ಶೂನ್ಯಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕನಿಷ್ಠೆಯ ಕಥೆ ವರ್ಣಿತವಾಗಿದೆ. ಶರಣ ಹೆಂಡದ ಮಾರಯ್ಯನವರು ತನ್ನೊಂದು ವಚನದಲ್ಲಿ ಈವರ ಘನವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ.
ತ್ರಿಪುರಾಂತಕ ಕೆರೆಯ ಮೇಲೆ ಬೆಳೆದ ಹುಲುಸಾದ ಹುಲ್ಲನ್ನು ಕೊಯ್ದು ಹಗ್ಗ ಕಣ್ಣಿ ಮಾಡುವ ಕಾಯಕದವನಾದ ನುಲಿಯ ಚಂದಯನ್ನ ಅಧ್ಯಾತ್ಮದ ಇಷ್ಟ ಲಿಂಗ ಯೋಗ ಸಾಧನೆಗೆ ಒಂದು ವಿಶಾಲವಾದ ತೋಟದ ಮಧ್ಯೆ ಅವರ ಗವಿ ಕಂಡು ಬರುತ್ತದೆ.
ಬಸವ ಕಲ್ಯಾಣವು ಇಂದು ಇಡೀ ಜಗತ್ತಿಗೆ ಮಾದರಿ ಎನಿಸಿದ ಪ್ರವಾಸಿ ಸ್ಥಳವಾಗಿದೆ ಅನೇಕ ಪ್ರವಾಸಿ ಮಂದಿರಗಳು ಇದ್ದು ಪ್ರವಾಸಿಗರಿಗೆ ಉತ್ತಮ ವಸತಿ ಮತ್ತು ಆಹಾರದ ವ್ಯವಸ್ಥೆಯು ಇರುತ್ತದೆ. ಭಾಲ್ಕಿ ಮಠದ ನಿತ್ಯ ಅನ್ನಸಂತರ್ಪಣೆ ದಾಸೋಹವೂ ಇರುತ್ತದೆ.
ಹೈದ್ರಾಬಾದ ಸೋಲಾಪುರ ಕಲಬುರ್ಗಿ ಲಾತೂರ ಮುಂತಾದ ಪ್ರದೇಶಗಳಿಗೆ ಸಮೀಪದಲ್ಲಿದ ಪುಣ್ಯ ಕ್ಷೇತ್ರಗಳ ಸಂಗಮ ಬಸವ ಕಲ್ಯಾಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.