ಮಕ್ಕಳ ಅನುಪಾತದಂತೆ ಶಿಕ್ಷಕರ ಹೆಚ್ಚುವರಿ ಮತ್ತು ವರ್ಗಾವಣೆ ವ್ಯವಸ್ಥೆಗೆ ಚಿತ್ರಕಲಾ ಶಿಕ್ಷಕರ ವಿರೋಧ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಮಕ್ಕಳ ಅನುಪಾತದಂತೆ ವೃಂದ ಬಲವನ್ನು ಜಾರಿಗೆ ತಂದಿರುವುದರಲ್ಲಿ ಶಿಕ್ಷಣದ ಎಲ್ಲಾ ಆಶಯಗಳನ್ನು ಬದಿಗೊತ್ತಿ ಖಾಲಿ ಹುದ್ದೆಗಳನ್ನು ಮರು ಭರ್ತಿ ಮಾಡದೆ ಅಳಿದುಳಿದ ಶಿಕ್ಷಕರುಗಳಲ್ಲೇ ಬಲವಂತದಿಂದ ಹುದ್ದೆ ಮರ್ಜ್ ಅಥವಾ ರದ್ದು ಗೊಳಿಸುತ್ತಾ ಹೆಚ್ಚುವರಿ ನೆಪದಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಮತ್ತು ಸೃಜನಶೀಲತೆಯಿಂದ ತೊಡಗಿಕೊಂಡು ಉಲ್ಲಸಿತವಾಗಿ ಚೈತನ್ಯದಿಂದ ತೊಡಗಿಕೊಂಡು ತನ್ನ ಮನೋವೃದ್ದಿ ಹೊಂದುವಂತಿದ್ದ ಜೈವಿಕವಾದ ವಿಷಯ “ಚಿತ್ರಕಲೆಯನ್ನು” ಮೊಟಕುಗೊಳಿಸುವುದು ಸರಿಯಲ್ಲ ಎಂದು ಚಿತ್ರಕಲಾ ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾಂತ್ರಿಕ ಶಿಕ್ಷಣವನ್ನು ಅಂದರೆ ವಸ್ತುನಿಷ್ಠ ಪ್ರಶ್ನೆಗಳಿಗೆ ವಸ್ತುನಿಷ್ಠ ಉತ್ತರ ಉದಾಹರಣೆ : ಕ್ಯಾಲ್ಕುಲೇಟರ್ ಒಟ್ಟಾರೆಯಾಗಿ ಹೇಳುವುದಂದರೆ ಪರ್ಸೆಂಟೇಜ್ ಫಲಿತಾಂಶ ಶಿಕ್ಷಣಕ್ಕೆ ಇಲಾಖೆ ಮತ್ತು ಪಾಲಕರು ವ್ಯಾಮೋಹ ಹೊಂದಿ,ಅನುಭವಿಸಿ ಜೀವಿಸುವ ನಮ್ಮ ಕೌಶಲ್ಯ ಮತ್ತು ಸಂಸ್ಕೃತಿಗಳಿಂದ ದೂರಗೊಳಿಸುತ್ತಾ ಮಕ್ಕಳನ್ನು ಮಾನಸಿಕ ಅಶ್ವಸ್ಥರನ್ನಾಗಿಸುವುದರಿಂದ ಮಕ್ಕಳಲ್ಲಿ ಫಲಿತಾಂಶ ಕಡಿಮೆ ಬಂದಾಗ ವೃತ್ತಿ ಬದುಕನ್ನು ಕಟ್ಟಿಕೊಡುವ ಚಿತ್ರಕಲೆಯನ್ನು ಕಲಿಯದ ಮಕ್ಕಳು ಸಹಿಸಿಕೊಳ್ಳಲಾಗದೆ ಖಿನ್ನತೆಯಲ್ಲಿ ದುಶ್ಚಟಗಳಿಗೆ ದಾಸರಾಗುವುದನ್ನು ತಡೆಯಲು ಪ್ರತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಣ ನೀಡಬೇಕೆಂಬ ಶಿಕ್ಷಣ ತಜ್ಞ, ಟಿ.ಪಿ. ಇಸಾರ್ ವರದಿಯಂತೆ ಎಲ್ಲಾ ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಯನ್ನು ಕಡ್ಡಾಯಗೊಳಿಸಬೇಕು ಎಂಬ ಸಲಹೆಯಂತೆ ಜಾರಿಯಲ್ಲಿ ಇದ್ದುದನ್ನು ಬಿಟ್ಟು 2022 23ರಲ್ಲಿ ಏಕಾಏಕಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಆದೇಶ ಜಾರಿಗೊಳಿಸಿ ಪ್ರೌಢಶಾಲೆಗಳಲ್ಲಿದ್ದ ಶಿಕ್ಷಕರ ವೃಂದಬಲ 8 +1 ಇದ್ದುದನು ಮಕ್ಕಳ ಅನುಪಾತಕ್ಕೆ ತಕ್ಕಂತೆ ವೃಂದಬಲ ವನ್ನು ತಂದು 7+1 ಕೆ ಇಳಿಸಲಾಗಿದೆ.
ವಿಶೇಷ ಶಿಕ್ಷಕರ ಹುದ್ದೆಯನ್ನು ರದ್ದುಪಡಿಸಿ ಮಕ್ಕಳ ಸಂಖ್ಯೆ 210 ಕಿಂತ ಹೆಚ್ಚಿದ್ದಲ್ಲಿ ಮಾತ್ರ ಒಂದು ವಿಶೇಷ ಶಿಕ್ಷಕರ ಹುದ್ದೆ ಎಂಬ ನಿಯಮದಿಂದಾಗಿ ಸಾಮಾನ್ಯವಾಗಿ ಶಿಕ್ಷಣದಿಂದ ವಂಚಿತರಾಗುವ ವರ್ಗ ಹಳ್ಳಿಯಲ್ಲಿ ಜೀವನ ನಡೆಸುವವರು ಅವರ ಆರ್ಥಿಕತೆಯು ಅಷ್ಟಕ್ಕಷ್ಟೇ, ದುಬಾರಿ ಫಿ ತೆತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸಲಾಗದ ಬಡ ಹಳ್ಳಿಗರ ಮಕ್ಕಳಿಗಾಗಿ ಇರುವ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆ 100ರಿಂದ 200 ಸಾಮಾನ್ಯ, ಪ್ರೌಢ ಶಾಲೆಗಳಲ್ಲಿ ಆರು ವಿಷಯಗಳ ಜೊತೆಗೆ ದೈಹಿಕ ಶಿಕ್ಷಣ ಮತ್ತು ಅಟೆಂಡರ್ ಮತ್ತು ಕ್ಲರ್ಕ್ ಗಳನ್ನು ಉಳಿಸಿಕೊಂಡು ಮತ್ತು ಮುಖ್ಯೋಪಾಧ್ಯಾಯರು ಇಲ್ಲಿ ಕಲಿಯುವ ಮಕ್ಕಳಿಗೆ ಒಂದು ಚಿತ್ರಕಲಾ ವಿಷಯವನ್ನು ಕಲಿಯದಂತೆ ಬೋಧನೆಯಿಂದ ವಂಚಿತರನ್ನಾಗಿಸುವುದು, ಇದು ಎಷ್ಟರ ಮಟ್ಟಿಗೆ ಸರಿ? ಸರ್ವರಿಗೂ ಉಚಿತ ಶಿಕ್ಷಣ ಸರ್ವ ಶಿಕ್ಷಣ ಅಭಿಯಾನದ ಆಶಯ ಬರಿ ನಾಮಫಲಕಕ್ಕೆ ಮಾತ್ರ. ಮತ್ತು ಸುಳ್ಳು ಅಭಿಯಾನ ಎಂಬಾಗಿರುವುದು, ಇನ್ನು ಈ ಅವೈಜ್ಞಾನಿಕ ಹೆಚ್ಚುವರಿ ನಿಯಮದಿಂದ ಚಿತ್ರಕಲಾ ಶಿಕ್ಷಕರಿಗೆ ಘೋರ ಅನ್ಯಾಯವಾಗಿದೆ. ಮಕ್ಕಳ ಸಂಖ್ಯೆ 210 ಕ್ಕಿಂತ ಕಡಿಮೆ ಇದ್ದ ಶಾಲೆಗಳಲ್ಲಿನ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಎಂದು ಸೃಷ್ಟಿಸಿದೆ, 210 ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳು ಅತಿ ವಿರಳ, ಸರಿ ಸುಮಾರು 40 ರಿಂದ 50 ಕಿಲೋಮೀಟರ್ಗಳ ದೂರ ಹೋಗಿ ಸೇವೆ ಸಲ್ಲಿಸುವ ಪರಿಸ್ಥಿತಿ ಒದಗಿದೆ, ಹತ್ತರಿಂದ ಹದಿನೈದು ಕಿಲೋಮಿಟರ್ ಗಳಲ್ಲಿ ಪ್ರೌಢ ಶಾಲೆಗಳಿದ್ದರೂ ಹುದ್ದೆ ರದ್ದು ಮಾಡಿ ಅಥವಾ ಮರ್ಜ್ ಮಾಡಿ ವರ್ಗಾವಣೆಯು ಸಿಗದಂತಾಗಿದೆ ಬಡ ಮಕ್ಕಳಿಗೆ ಕಲಿಯಲು ಮತ್ತು ಚಿತ್ರಕಲಾ ಶಿಕ್ಷಕರುಗಳಿಗೆ ವರ್ಗಾವಣೆಗೆ ಇರುವ ಸಮಸ್ಯೆಯನ್ನು ದೂರಗೊಳಿಸಲು ನಿಗದಿಗೊಳಿಸಿರುವ 210 ರ ಮಕ್ಕಳ ಸಂಖ್ಯೆಯನ್ನು 110ಕ್ಕೆ ಇಳಿಸಿದರೆ ಮಕ್ಕಳಿಗೂ ಹಾಗೂ ಶಿಕ್ಷಕರಿರುವರಿಗೂ ಅನುಕೂಲವಾಗುತ್ತದೆ ಈ ನಿಯಮವನ್ನಾದರೂ ಜಾರಿಗೆ ತಂದು ನೊಂದ ಚಿತ್ರಕಲಾ ಶಿಕ್ಷಕರುಗಳ ಸಮಸ್ಯೆಗೆ ಪರಿಹಾರವಾಗಬೇಕೆಂದು ರಾಜ್ಯದ ಚಿತ್ರಕಲಾ ಶಿಕ್ಷಣ ಶಿಕ್ಷಕರ ಅಳಲು.
ಈ ಕುರಿತು ಈಗಾಗಲೇ ಶಿಕ್ಷಣ ಸಚಿವರಿಗೂ ಕೂಡ ಕರ್ನಾಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಕೇಂದ್ರ ಕಚೇರಿ ವಿಜಯಪುರದಿಂದ ಮನವಿ ಸಲ್ಲಿಸಲಾಗಿದೆ ಮುಂಬರುವ ವರ್ಗಾವಣೆಯಲ್ಲಿ ಮಕ್ಕಳ ಅನುಪಾತ ಸಡಿಲಿಕೆಗೊಳಿಸಿ ಅನುಕೂಲಿಸಬೇಕೆಂದು ರಾಜ್ಯದ ಎಲ್ಲಾ ಚಿತ್ರಕಲಾ ಶಿಕ್ಷಕರ ಹಾಗೂ ಸಂಘಟನೆಯ ಪರವಾಗಿ ಸಹಕಾರ್ಯದರ್ಶಿ, ಚಿತ್ರಕಲಾ ಶಿಕ್ಷಕ ಕೆ ಎ ಮುಲ್ಲಾ ಮನವಿ ಮಾಡಿದ್ದಾರೆ

