Author: editor.udayarashmi@gmail.com

ಬಿರುಬೇಸಿಗೆಯಲ್ಲಿ ನೀರಿನ ಬವಣೆ | ದಿನದಿಂದ ದಿನಕ್ಕೆ ಬತ್ತುತ್ತಿರುವ ಶ್ರಮಬಿಂದು ಸಾಗರ ಬ್ಯಾರೇಜ್ | ಜನಸಾಮಾನ್ಯರಲ್ಲಿ ಆತಂಕ! ಉದಯರಶ್ಮಿ ದಿನಪತ್ರಿಕೆ ವರದಿ: ಎಸ್.ಎಮ್.ಇಟ್ಟಿಜಮಖಂಡಿ: ತಾಲೂಕಿನ ನೀರಿನ ಮೂಲಗಳಾದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ, ಜಂಬಗಿ ಸೇತುವೆ ಬಳಿ ನೀರು ಬತ್ತಿ ಹೋಗುತ್ತಿದ್ದು ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣಿ ತುಸು ತಟ್ಟಲಿದ್ದು ಮೇ ತಿಂಗಳಿಂದ ಜೂನ ವರೆಗೆ ಒಂದು ತಿಂಗಳು ಕುಡಿಯುವ ನೀರಿನ ತೊಂದರೆ ಉಂಟಾಗಲಿದೆ ಎಂಬ ಆತಂಕ ಕಾಡುತ್ತಿದೆ.ಈಗಾಗಲೇ ಬಿಸಿಲಿನ ತಾಪ ಹೆಚ್ಚಾಗಿದ್ದು ಬಾಯಾರಿಗೆ ನಿವಾರಿಸಲು ನೀರು ಅತ್ಯವಶ್ಯವಾಗಿದೆ. ನೀರು ಪ್ರಾಣಿ ಸಂಕುಲದ ಮುಖ್ಯ ಜೀವಾಳವಾಗಿದೆ. ನೀರನ್ನು ಮಿತವಾಗಿ ಬಳಸಿ, ಪ್ರಾಣಿ ಪಕ್ಷಿಗಳಿಗೆ, ಜಾನುವಾರಗಳಿಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕಾಗಿದೆ, ನೀರನ್ನು ಮಿತವಾಗಿ ಬಳಸಬೇಕಿದೆ.ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ 5 ಟಿಎಂಸಿ ನೀರಿನ ಸಂಗ್ರಹವಿದ್ದು ಬೇಸಿಗೆಯನ್ನು ನೀಗಿಸಬಹುದಾಗಿದ್ದು ಆದರು ಒಂದು ತಿಂಗಳವರೆಗೆ ತುಸು ತೊಂದರೆ ಉಂಟಾಗಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ಅಷ್ಟೇನು ತೊಂದರೆ ಉಂಟಾಗದಿದ್ದು ಬೇಸಿಗೆಯ ಬಿಸಿ 1 ತಿಂಗಳು ತಟ್ಟಲಿದೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮೋ ನಗರ ಸೃಷ್ಟಿಸಿ ಪ್ರಧಾನಿ ಮೋದಿಯವರ ಹೆಸರಲ್ಲಿ ವಸತಿರಹಿತ ಸಾವಿರಾರು ಬಡವರಿಗೆ ಸೂರು ಕಲ್ಪಿಸಿದಲ್ಲದೇ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಲ್ಲಿ ಶಾಲೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನಿಜವಾದ ಬಡವರಬಂಧು ಎನಿಸಿಕೊಂಡಿರುವ ಹಿಂದೂ ಹುಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿರುವ ದೊಡ್ಡ ಅನ್ಯಾಯ ಎಂದು ಬಿಜೆಪಿ ನಾಯಕ, ವಿಡಿಎ ಸದಸ್ಯ ವಿಕ್ರಮ ಗಾಯಕವಾಡ ಆಕ್ರೋಶ ವ್ಯಕ್ತಪಡಿದ್ದಾರೆ.ಹಿಂದುತ್ವದ ಅದಮ್ಯ ಶಕ್ತಿಯಾಗಿರುವ ಶಾಸಕ ಯತ್ನಾಳ ಅವರು ಕಳಂಕರಹಿತ ಪಕ್ಷನಿಷ್ಠ ನಾಯಕರು. ಇಡಿ ದೇಶದಲ್ಲೇ ವಕ್ಫ್ ವಿರುದ್ಧ ಮೊದಲು ಧ್ವನಿ ಎತ್ತಿ ಹಿಂದೂಗಳ ಮಠಮಂದಿರ, ರೈತರ ಆಸ್ತಿ, ಅಸ್ತಿತ್ವ ಉಳಿಸುವಲ್ಲಿ ಮುಂಚೂಣಿಯಾಗಿ ನಿಂತವರು. ನೇರನುಡಿ, ಸ್ವಚ್ಚ, ಜನಪರ ಸೇವೆ ಸಲ್ಲಿಸುತ್ತಾ ಪ್ರತಿಯೊಬ್ಬ ಹಿಂದೂ ಮನೆ ಮನದಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ ಇಂತಹ ಧೀಮಂತ ನಾಯಕನ ಉಚ್ಚಾಟನೆಯನ್ನು ಬಿಜೆಪಿ ಕೇಂದ್ರ ವರಿಷ್ಠರು ಕೂಡಲೇ ಹಿಂಪಡೆದು…

Read More

ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳು | ಎಂಎಲ್ಸಿ ಸುನೀಲಗೌಡ ಪಾಟೀಲ ವಿತರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಕಾರದ ನಾನಾ ಪಿಂಚಣಿ ಯೋಜನೆಗಳಡಿ ಆಯ್ಕೆಯಾದ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಫಲಾನುಭವಿಗಳಿಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಮಂಜೂರಾತಿ ಆದೇಶ ಪತ್ರ ವಿತರಿಸಿದರು.ಶುಕ್ರವಾರ ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ 198 ಮತ್ತು ಬಬಲೇಶ್ವರ ತಾಲೂಕಿನ 127 ಸೇರಿದಂತೆ ಒಟ್ಟು 325 ಫಲಾನುಭವಿಗಳಿಗೆ ಶಾಸಕರು ಆದೇಶ ಪತ್ರ ವಿತರಿಸಿದರು.ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ ವೇತನ, ನಿರ್ಗತಿಕ ವಿಧವಾ ವೇತನ, ಅಂಗವೀಕಲರ ವೇತನ, ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆ ಮತ್ತು ಮೈತ್ರಿ ಹಾಗೂ ಮನಸ್ವೀನಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ 29 ಗ್ರಾಮ ಪಂಚಾಯತಿ ಮತ್ತು ಎರಡು ಪಟ್ಟಣ ಪಂಚಾಯತಿಗಳ ಒಟ್ಟು 325 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸಚಿವ ಎಂ. ಬಿ. ಪಾಟೀಲ ಅವರ…

Read More

ಮುಳವಾಡ ಏತನೀರಾವರಿ ಯೋಜನೆ ಹಂತ-3 ರ ಕಾಮಗಾರಿಗಳು | ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷ್ಣಾ ಮೇಲ್ದಂಡೆ ಮುಳವಾಡ ಏತನೀರಾವರಿ ಯೋಜನೆ ಹಂತ-3 ರಲ್ಲಿ ಬರುವ ಬಬಲೇಶ್ವರ ಶಾಖಾ ಕಾಲುವೆಯ 5ಎ, 5ಬಿ ಲಿಫ್ಟ್ ಕಾಮಗಾರಿಗಳಿಗೆ 127 ಕೋಟಿ ಮತ್ತು ವಿತರಣಾ ಸಂಖ್ಯೆ 15 ಹಾಗೂ ಲ್ಯಾಟರಲ್ ಕಾಲುವೆಗಳಿಗೆ 108 ಕೋಟಿ ಮೊತ್ತದ ಕಾಮಗಾರಿಗಳಿಗೆ ಒಟ್ಟು 235 ಕೋಟಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶ್ರೀಘ್ರದಲ್ಲಿಯೇ ರೈತ ಸಮಾವೇಶ ನಡೆಸಿ ಈ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಬಲೇಶ್ವರ ಶಾಖಾ ಕಾಲುವೆ ಕಿ.ಮೀ 40 ರಲ್ಲಿ 5ಎ ಲಿಫ್ಟ್ ಮುಖಾಂತರ 11,300 ಎಕರೆ ಮತ್ತು ಕಿ.ಮೀ 18 ರಲ್ಲಿ 5ಬಿ ಲಿಫ್ಟ್ ಮುಖಾಂತರ 1,355 ಎಕರೆ ಪ್ರದೇಶಕ್ಕೆ ನೀರೋದಗಿಸುವ ಕಾಮಗಾರಿಗೆ 127 ಕೋಟಿ ಹಾಗೂ ವಿತರಣಾ ಸಂಖ್ಯೆ…

Read More

ಲೇಖನ- ಪ್ರೊ.ಬಸವರಾಜ ನೀಲವಾಣಿಉಪನ್ಯಾಸಕರುಚಡಚಣ ಉದಯರಶ್ಮಿ ದಿನಪತ್ರಿಕೆ ಚಡಚಣ: ಹಬ್ಬಗಳಲ್ಲಿ ಶ್ರೇಷ್ಠವಾದ ಹಬ್ಬ ಯುಗಾದಿ ಹಬ್ಬ, ಯುಗಾದಿ ಅಂದರೆ ಹೊಸ ಯುಗ ಅಥವಾ ಹೊಸ ವರ್ಷ ಆರಂಭ ಎಂದು ಹಿಂದುಗಳು ನಂಬಿರುವ ಒಂದು ಶುಭ ದಿನ.ಈ ಹಬ್ಬವು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುವ ದಿನ. ಹಳ್ಳಿಯ ಜನರಲ್ಲಿ ಯುಗಾದಿ ಹಬ್ಬ ಸುಖ ಸಂತೋಷದ ಹಬ್ಬವಾಗಿದೆ, ಯುಗಾದಿ ಹಬ್ಬದಂದು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಈ ಹಬ್ಬದ ದಿನದಂದು ಗ್ರಾಮೀಣ ಪದೇಶದಲ್ಲಿ ಮನೆಯ ಮಂದಿ ಕೂಡಿಕೊಂಡು ಮುಂಜಾನೆ ಬೇಗನೆದ್ದು, ಎಣ್ಣೆಯಿಂದ ಮತ್ತು ಬೇವಿನ ಎಲೆಯಿಂದ ಸ್ನಾನ ಮಾಡುತ್ತಾರೆ. ಎಣ್ಣೆ ಸ್ನಾನದ ಉದ್ದೇಶ ವಸಂತ ಋತುವಿನ ಮುಂಬರುವ ಬಿಸಲಿಗೆ ದೇಹವನ್ನು ಸಿದ್ದಪಡಿಸುವದು. ರೋಗವನ್ನು ಹೋಗಲಾಡಿಸುವದು.ಮನೆಯ ಮುಂದೆ ಮತ್ತು ದೇವರ ಮುಂದೆ ಮಾವಿನ ಎಲೆಯ ತಳಿರು ತೋರನವನ್ನು ಕಟ್ಟುತ್ತಾರೆ. ಮಾವಿನ ತೋರಣಗಳು ತಂಪಾದ ವಾತಾವರಣವನ್ನು ಕೊಡುತ್ತದೆ ಮತ್ತು ಬಿಸಿಲಿನಿಂದ ಶಾಂತಗೊಳಿಸುತ್ತದೆ ಎಂದು ಹಳ್ಳಿಯ ಜನರು ನಂಬಿರುವರು.ಯುಗಾದಿಯ ದಿನ ಹಳ್ಳಿಯಲ್ಲಿ ಬೇವು ಬೆಲ್ಲ ಮಿಶ್ರಣ…

Read More

ವಿಜಯಪುರ ಜಿಲ್ಲೆಯ ಬಳವಾಟ ಗ್ರಾಮದ ಹೈದಗೆ ಸೇನಾ ಅಧಿಕಾರಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಳವಾಟ ಗ್ರಾಮದ ಶಿವಾನಂದ ಬಸವಂತ್ರಾಯಗೌಡ ಬಿರಾದಾರ ಅವರು ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನಿವೃತ್ತಿ ಹೊಂದಿದ ಸಂಭ್ರಮ ವನ್ನು ಸೇನಾ ಅಧಿಕಾರಿಗಳೆಲ್ಲ ಸೇರಿ ಅಭಿನಂದನಾ ಸಮಾರಂಭ ಏರ್ಪಡಿಸಿ ಅದ್ಧೂರಿ ಮತ್ತು ಅರ್ಥಪೂರ್ಣ ಬೀಳ್ಕೊಡುಗೆಯನ್ನು ನೀಡಿದರು.ತಮಿಳುನಾಡಿನ ಬಾರ್ಡರದಲ್ಲಿರುವ ಮದ್ರಾಸ್ ರೆಜಿಮೆಂಟ್ ನ ವೆಲ್ಲಿಂಗ್ಟನ್ನ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರಿಗಳು ಇವರ ಕಾರ್ಯವೈಖರಿಯನ್ನು ಕೊಂಡಾಡಿ, ನಾವಿಂದು ಒಬ್ಬ ಹೃದಯವಂತ ಅಧಿಕಾರಿಯ ಸೇವೆನ್ನು ಸ್ಮರಿಸಿ ಬೀಳ್ಕೊಡುವುದು ದುಃಖದ ವಿಷಯವಾದರೂ ನಿವೃತ್ತಿ ಅನಿವಾರ್ಯ. ಶ್ರೀಯುತರು ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. ಆದರೆ ನಮ್ಮ ಹೃದಯದಿಂದ ಶ್ರೀಯುತರು ಯಾವಾಗಲೂ ನಿವೃತ್ತಿ ಯಾಗಲಾರರು. ಇವರ ಸೇನಾ ಸೇವೆಯ ಪ್ರತಿಕ್ಷಣಗಳು ನಮಗೆ ದಾರಿ ದೀಪವಾಗಿವೆ ಎಂದು ಶಿವಾನಂದ ಬಿರಾದಾರ್ ದಂಪತಿಗಳನ್ನು ಹರಿಸಿದರು.ಈ ಸಂದರ್ಭದಲ್ಲಿ ಕ್ಯಾಪ್ಟನ್ ಶ್ರೀನಿವಾಸ, ಶ್ರೀಮತಿ ಮಂಗಲಾ ಶ್ರೀನಿವಾಸ, ಕರ್ನಲ್ ಸಾಜು, ಕರ್ನಲ್ ಪ್ರದೀಪ್, ವಿರ್ಗಿಸ್, ಲೆಫ್ಟಿನೆಂಟ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲ್ಲೆಲ್ಲಿಯೂ ಹಬ್ಬ ಹಬ್ಬ.. ಬಂತು ಯುಗಾದಿ ಹಬ್ಬ ಎಂಬ ಹಾಡು ಮನೆ ಮನೆಗಳಲ್ಲಿಯೂ ಅನುರಣಿಸುವ ಸಮಯವಿದು. “ಯುಗ ಯುಗಾದಿ ಕಳೆದರೂಯುಗಾದಿ ಮರಳಿ ಬರುವುದುಹೊಸ ವರುಷಕೆ ಹೊಸ ಹರುಷವಹೊಸತು ಹೊಸತು ತರುವುದು” ಎಂಬ ಬೇಂದ್ರೆ ಅಜ್ಜನವರ ಕವನ ಯುಗಾದಿಯ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ಯುಗಾದಿ ಎಂದರೆ ವಸಂತಕಾಲ. ಯುಗಾದಿ ಎಂದರೆ ಚೈತ್ರ ಮಾಸದ ಆರಂಭದ ಮೊದಲ ಹಬ್ಬ. ಇಡೀ ಪ್ರಕೃತಿಯೇ ಈ ಹಬ್ಬಕ್ಕೆ ಸಜ್ಜಾಗುತ್ತದೆ. ಚಳಿಗಾಲದಲ್ಲಿ ತನ್ನ ಹಳೆಯ ಎಲೆಗಳನ್ನೆಲ್ಲ ಉದುರಿಸಿಕೊಂಡು ಬೋಳಾಗಿರುತ್ತಿದ್ದ ಮರಗಳೆಲ್ಲ ಎಳೆಯ ಹಚ್ಚ ಹಸಿರಿನ ಎಲೆಗಳನ್ನು ತನ್ನದಾಗಿಸಿಕೊಂಡು, ಎಳೆಯ ಕಾಯಿ, ಹಣ್ಣುಗಳು ಬಿಡುವ ಸಮಯ. ಮಾವಿನಲ್ಲಿ ಚಿಗುರೆಲೆಗಳು ಬೇವಿನಲ್ಲಿ ಹೂವುಗಳು ಮೂಡುವ ಈ ಸಮಯದಲ್ಲಿ ಇಡೀ ಪ್ರಕೃತಿಯೇ ಮೈ ಮರೆಸುವ ಸೌಂದರ್ಯಧಾರೆ ಇಳಿದು ಬಂದಂತೆ ಹಸಿರು ಸೀರೆಯುಟ್ಟು ಯುಗಾದಿ ಹಬ್ಬವನ್ನು ಆಚರಿಸಲು ಸಜ್ಜಾಗಿ ನಿಂತಂತೆ ಕಾಣುತ್ತದೆ. ಯುಗಾದಿ ಹಳ್ಳಿಗರ ಭಾಷೆಯಲ್ಲಿ ಉಗಾದಿ ಹಬ್ಬ.. ಯುಗದ ಅಂದರೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿರಿಯ ಪತ್ರಿಕರ್ತ ಟಿ ಕೆ ಮಲಗೊಂಡ ಸಂಪಾದಕತ್ವದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಹೊರತಂದಿರುವ “ಯುಗಾದಿ ವಿಶೇಷಾಂಕ -2025” ನ್ನು ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರು ಅಧಿಕೃತವಾಗಿ ಬಿಡುಗೊಳಿಸಿದರು.ನಂತರ ವಿಶೇಷಾಂಕ ಓದಿದ ಅವರು ವಿಶೇಷಾಂಕ ಮೂಡಿಬಂದ ರೀತಿ ಮತ್ತು ವಿನ್ಯಾಸಕ್ಕೆ ಮಾರುಹೋದರು. ಅಷ್ಟೇ ಅಲ್ಲದೆ ಈ ವರ್ಷದ ವಿಶೇಷಾಂಕದ ಸಾಧಕರ ಲೇಖನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಭೀಮಾತೀರದಲ್ಲಿ ಕೆ ವಿ ಪ್ರಭಾಕರ್ ಎನ್ನುವ ಶಿರ್ಷಿಕೆ ನೋಡಿ ಸಂತಸ ಪಟ್ಟು, ತಾವು ಬರೆದ ಹಳೆಯ ಸಮಗ್ರ ಲೇಖನಗಳನ್ನು ಸಂಪಾದಕ ಟಿ ಕೆ ಮಲಗೊಂಡರ ಮುಂದೆ ಸ್ಮರಿಸಿದರು.ಸಾಧಕರ ಲೇಖನದಲ್ಲಿ ಅಕ್ಷರಕ್ಕಿಳಿಸಿದ ಸಾಧಕರ ಜೀವನ ಚರಿತ್ರೆಯ ಮಾಹಿತಿ ರೋಚಕವಾಗಿವೆ. ಯುಗಾದಿ ಹಬ್ಬದ ಕುರಿತ ಲೇಖನಗಳು, ಹಬ್ಬದಾಚರಣೆ ಸಂಪ್ರದಾಯದ ಬಗೆಗಿನ ವಿಶೇಷ ಬರಹಗಳು, ಇನ್ನಿತ ಲೇಖನಗಳು ಆಕರ್ಷಕವಾಗಿವೆ ಎಂದರು. ಒಟ್ಟಾರೆ ಇಡೀ ವಿಶೇಷಾಂಕದ ಸಂಗ್ರಹ ಯೋಗ್ಯವಾಗಿದೆ. ಜಿಲ್ಲಾಮಟ್ಟದ ಪತ್ರಿಕೆ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಲಿ…

Read More

ರಚನೆ-ದೀಪಾ ಪೂಜಾರಿಕುಶಾಲನಗರ ಉದಯರಶ್ಮಿ ದಿನಪತ್ರಿಕೆ ಅಮ್ಮ, ನಿನ್ನ ಮಮತೆಯತಟ್ಟೆ ಖಾಲಿಯಾಗಿದೆ,ನಿನ್ನ ಮಾತಿನ ಸೀತೆಯುಮೌನವಾಗಿದೆ.ಎಲ್ಲಾ ಹಾದಿಗಳೂನಿರ್ಜನವಾಗಿವೆ,ನೀ ಇಲ್ಲದ ಲೋಕಕತ್ತಲಾಗಿದೆ ನನಗೆ ನನ್ನ ಜನ್ಮದಿನ ಬಂತು,ಆದರೆ ನಿನ್ನ ಕರೆ ಇಲ್ಲ,ನಿನ್ನ ಮಾತುಗಳ ಸಿಹಿಯಿಲ್ಲ.ಎಲ್ಲರ ಶುಭಾಶಯಗಳುಒತ್ತಿ ಬರುತ್ತಿವೆಆದರೆ ನೀನಿಲ್ಲದೆಮನಸ್ಸು ಖಾಲಿಯಾಗಿದೆ. ನಿನ್ನ ನೆನಪಿನಲ್ಲಿಕಣ್ಣೀರಾಗಿದ್ದೇನೆ,ನಿನ್ನ ಸ್ಮೃತಿಗಳೇ ನನ್ನ ಬೆಳಕು.ಅಮ್ಮ, ನೀ ಕಾಣದಿದ್ದರೂ,ನಿನ್ನ ಪ್ರೀತಿ ಸದಾ ನನ್ನ ಜೊತೆ…ನಿನ್ನ ನೆನಹು ನಿನ್ನ ನೆನಪುನನ್ನ ಜೀವದ ಬೆಳಗು

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕಳೆದ ಎರಡು ದಿನಗಳಿಂದ ಮುಖ ಕಿವುಚಿ ಓಡಾಡುತ್ತಿದ್ದ ಮೊಮ್ಮಗ ಒದ್ದಾಟವನ್ನು ಕಂಡು ಅಜ್ಜಿ ಆತನನ್ನು ತನ್ನ ಬಳಿ ಕರೆದು ಆತನ ತಲೆಯನ್ನು ನೇವರಿಸಿ ‘ಏನಾಯಿತು ಮಗು’ ಎಂದು ಕೇಳಿದರು.ತುಸು ಸಂಕೋಚದಿಂದ ಮೊಮ್ಮಗ “ಏನಿಲ್ಲ ಅಜ್ಜಿ, ತುಸು ಹೊಟ್ಟೆ ನೋವು” ಎಂದು ಹೇಳಿದ.ಅಜ್ಜಿ ನಸುನಗುತ್ತಾ ನಾನು ಆಡಿಸಿ ಬೆಳೆಸಿದ ಮಗು, ನನ್ನ ಮುಂದೆ ಸಂಕೋಚ ಏಕೆ? ನೀನು ಸರಿಯಾದ ಕಾರಣ ಹೇಳಿದ್ರೆ ನಿನಗೇ ಅನುಕೂಲ’ ಎಂದು ಹೇಳಲು ಮೊಮ್ಮಗ ಅಜ್ಜಿ ಸರಿಯಾಗಿ ಟಾಯ್ಲೆಟ್ ಆಗ್ತಾ ಇಲ್ಲ ಏನೋ ಒಂತರ ಅನ ಈಸಿನೆಸ್ ಫೀಲ್ ಆಗ್ತಾ ಇದೆ.ಗಂಭೀರವಾಗಿ ತಾನು ಕುಳಿತ ಜಾಗದಿಂದ ಎದ್ದ ಅಜ್ಜಿ ‘ನಾನು ಹೇಳಿದ ಮಾತು ಕೇಳ್ತೀನಿ ಅನ್ನೋದಾದ್ರೆ ಇದಕ್ಕೆ ಪರಿಹಾರ ಹೇಳ್ತೀನಿ’ ಎಂದು ಹೇಳಿದರು. ಒದ್ದಾಡುತ್ತಿದ್ದ ಮೊಮ್ಮಗ ಖಂಡಿತ ಅಜ್ಜಿ, ಈ ತೊಂದರೆಯಿಂದ ಪಾರಾದರೆ ಸಾಕು. ನೀನು ಹೇಳಿದ್ದನ್ನ ಮಾಡೇ ಮಾಡ್ತೀನಿ, ಅದೇನು ಅಂತ ಹೇಳಿ ಎಂದು ಅತ್ಯುತ್ಸಾಹದಿಂದ…

Read More