Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಅಕ್ರಮ ಗಣಿಗಾರಿಕೆ ಪ್ರಕರಣ | ಸಿಬಿಐ ವಿಶೇಷ ಕೋರ್ಟ್ ತೀರ್ಪು | ಗಂಗಾವತಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ಹೈದರಾಬಾದ್: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಒಎಂಸಿ ಕಂಪನಿ ಮಾಲೀಕ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.ಏಳು ವರ್ಷ ಜೈಲು ಶಿಕ್ಷೆಗೆ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ನಗರದ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಅವರನ್ನು 1 ಲಕ್ಷ ರೂ. ಲಂಚದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉದ್ಯಮಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರ ಹೆಸರನ್ನು ಕೈಬಿಡಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಆವಲಹಳ್ಳಿ ನಿವಾಸಿ ಕೇಶವಮೂರ್ತಿ ಎಂಬುವವರು ಫೆಬ್ರವರಿ 2025ರಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಆರೋಪಿ ಪೊಲೀಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ 6 ಲಕ್ಷ ರೂ. ಲಂಚವನ್ನು ಕೊಡಲು ಸಾಧ್ಯವಾಗದೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ ನಂತರ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ಅದರಂತೆ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಇಬ್ಬರನ್ನೂ 1 ಲಕ್ಷ ರೂ. ಲಂಚದೊಂದಿಗೆ ಬಂಧಿಸಿದ್ದಾರೆ.ಕೆಂಪೇಗೌಡ ನಗರದ ಉದ್ಯಮಿ ಉತ್ತಮ್ ಚಂದ್ ಮಾರು ಎಂಬುವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರೊ.ಅನಿಲ ಆರ್. ಪಾಟೀಲ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಸಾಯನಿಕ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅನಿಲ್ ಆರ್. ಪಾಟೀಲ ಅವರು ಪ್ರೊ. ಲೋಕೇಶ್ ಎ.ಶಾಸ್ತ್ರಿ ಮಾರ್ಗದರ್ಶನದಲ್ಲಿ “ಡಿಸೈನ್ ಸಿಂಥೆಸಿಸ್ ಆಂಡ ಕ್ಯಾರಕ್ಟರೈಸೇಶನ್ ಆಫ್ ಕೋಮರಿನ್ ಸಿ 4 ಅರೋಮ್ಯಾಟಿಕ್ ಅಜಾ ಕಾಂಪೌಂಡ್ಸ್ ಅಂಡ್ ಇಟ್ಸ್ ಫೋಟೋಫಿಸಿಕಲ್ ಸ್ಟಡಿಸ್”(Design , Synthesis and Characterisation of Coumarin C4-Aromatic Aza Compounds and its Photophysical Studies) ಎಂಬ ವಿಷಯದ ಸಂಶೋಧನೆ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.ಡಾ. ಅನಿಲ್ ಪಾಟೀಲ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ, ಉಪ ಪ್ರಾಚಾರ್ಯ ಡಾ.ಅನೀಲ ಬಿ. ನಾಯಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬಾಗಲಕೋಟೆ ಜಿಲ್ಲೆ ಸಮಗ್ರ ಅಭಿವೃದ್ದಿಗೆ ನನ್ನ ಆಧ್ಯತೆಯಾಗಿದೆ, ಎಲ್ಲೂ ತಾರತಮ್ಯ ಮಾಡುವದಿಲ್ಲ, ನನ್ನ ಕ್ಷೇತ್ರಕ್ಕೂ ಏನೆಲ್ಲ ಬೇಕು ಅದನ್ನು ನಾನು ಸರ್ಕಾರದಿಂದ ತರುವ ಕಾರ್ಯ ಮಾಡುತ್ತೆನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೂತನ ಕಟ್ಟಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೆ ತಾಲೂಕಿಗೆ ಬಂದ ಯೋಜನೆಗಳನ್ನು ನಾನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿಲ್ಲ ಅಷ್ಟು ಸಣ್ಣತನ ನಾನು ಮಾಡುದಿಲ್ಲ ಹಿಂದೆಯೂ ಮಾಡಿಲ್ಲ ಎಂದರು.ಯಾವುದೆ ಸರ್ಕಾರ ಜನಪ್ರತಿನಿಧಿಗಳು ತಂದ ಯೋಜನೆಗಳನ್ನು ಸಾರ್ವಜನಿಕರು ಅದರ ಉಪಯೋಗ ಮಾಡಿಕೊಳ್ಳಬೇಕು, ಪ್ರಜಾಪ್ರಭುತ್ವ ವ್ಯವಸ್ಥೆ ನಾವು ಒಪ್ಪಿಕೊಳ್ಳಬೇಕು, ಈ ಹಿಂದೆ ಈ ಕಟ್ಟಡವನ್ನು ಕಾರಜೋಳ ಮತ್ತು ನ್ಯಾಮಗೌಡ ಅವರು ಅಡಿಗಲ್ಲು ಹಾಕಿದರು ಈಗ ನಾನು ಮತ್ತು ಗುಡಗುಂಟಿ ಅವರು ಉದ್ಘಾಟಿಸುತಿದ್ದೆವೆ ಇದು ಪ್ರಜಾತಂತ್ರ ವ್ಯವಸ್ಥೆ ಹೀಗೆ ಇರುತ್ತದೆ ಎಂದರು.ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು, ಇಲ್ಲಿನ ಶಾಲೆಗಳಲ್ಲಿ ಜೀವನ ಮೌಲ್ಯಗಳ ಜೋತೆ…
ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ತಾಲೂಕಿನ ಆರೇಶಂಕರ ಗ್ರಾಮದಲ್ಲಿ ಹಜರತ್ ಜಾನೇಸಾಹೆಬ್ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತಿ ವಿಜೃಂಭಣೆಯಿಂದ ಜರುಗಿತು.ಹಜರತ್ ಜಾನೇಸಾಹೆಬ್ ಜಾತ್ರೆ ನಿಮಿತ್ತ ನಿನ್ನೆಯ ದಿನ ರಾತ್ರಿ 9 ಗಂಟೆಗೆ ಗಂದ ಏರಿಸಲಾಯಿತು. ಪಟ್ಟದ ಕುದುರೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನಕ್ಕೆ ಬರಲಾಯಿತು.ರವಿವಾರ ರಾತ್ರಿ 10 ಗಂಟೆಗೆ ದುರ್ಗಾದೇವಿ ಭಜನಾ ಮಂಡಳಿ ಆರೇಶಂಕರ ಹಾಗೂ ಸಂಗಮೇಶ್ವರ ಭಜನಾ ಮಂಡಳಿ ಗೆದ್ದಲಮರಿ ಇವರಿಂದ ರಾತ್ರಿ ಇಡಿ ಸೇವೆ ಸಲ್ಲಿಸಿದರು.ಸೋಮವಾರ ಬೆಳಗ್ಗೆ ಹಜರತ್ ಜಾನೇಸಾಹೆಬ್ ಉರುಸು ಜರುಗಿತು. ನಂತರ ಜಾನೇಸಾಹೆಬ್ ರಿವಾಯಿತಿ ಸಂಘದವರು ಮತ್ತು ಮೌಲಾಲಿ ರಿವಾಯಿತಿ ಸಂಘ ಕುಂಚನೂರ , ಜಾನೇಸಾಹಬ್ ರಿವಾಯಿತಿ ಸಂಘ ಮತ್ತು ಮೌಲಾಲಿ ರಿವಾಯಿತಿ ಸಂಘ ಗುಡದಿನ್ನಿ ಇವರಿಂದ ರಿವಾಯಿತಿ ಪದಗಳು ಜರುಗಿದವು.ಭಕ್ತರು ದರ್ಶನ್ ಮಾಡುವುದು ಕಂಡು ಬಂತು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿತ್ತುಸಾಯಂಕಾಲ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆಗೆ ಗ್ರಾಮದ ಹಿರಿಯರು ರಿಬ್ಬನ್ ಕಟ್ ಮಾಡುವುದರ…
ಚಿಂತನೆ- ಡಾ.ಸರಸ್ವತಿ ಪಾಟೀಲವಿಜಯಪುರ ಉದಯರಶ್ಮಿ ದಿನಪತ್ರಿಕೆ ಕಾಲ: ೧೨ನೇ ಶತಮಾನಜನ್ಮ ಸ್ಥಳ: ಇಂಗಳೇಶ್ವರ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆತಂದೆ: ಮಾದರಸತಾಯಿ: ಮಾದಲಾಂಬಿಕೆವೃತ್ತಿ: ಸಮಾಜ ಮುಖಿ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿ, ಪ್ರಧಾನ ದಂಡನಾಯಕಬರೆದ ವಚನಗಳು: ೧೫೦೦ಕ್ಕೂ ಹೆಚ್ಚುಅಂಕಿತನಾಮ: ಕೂಡಲಸಂಗಮದೇವ ಡೋಹರನೆಂಬೆನೆ ಕಕ್ಕಯ್ಯನಆನು ಹಾರುವನೆಂದರೆಕೂಡಲಸಂಗಯ್ಯ ನಗುವನಯ್ಯಎಂದು ಹೇಳುವ ಮೂಲಕ ಕಾಯಕಕ್ಕೆ ಅಂಟಿದ್ದ ಕುಲಭೇದವನ್ನು ತಾರತಮ್ಯವನ್ನು ಅಳಿಸಿ ಹಾಕಿದರು ಬಸವಣ್ಣನವರು. ವಚನ ವಿಶ್ಲೇಷಣೆ ಅಡವಿಯಲ್ಲೊಬ್ಬ ಕಡು ನೀರಡಿಸಿ ,ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯಾಕುರುಡ ಕಣ್ಣ ಪಡೆದಂತೆʼಬಡವ ನಿಧಾನವ ಹಡೆದಂತಾಯಿತ್ತಯ್ಯಾ ,ನಮ್ಮ ಕೂಡಲಸಂಗನ ಶರಣರಬರವೆನ್ನ ಪ್ರಾಣ ಕಂಡಯ್ಯಾ.(ಸಮಗ್ರ ವಚನ ಸಂಪುಟ ೧, ವಚನದ ಸಂಖ್ಯೆ ೩೭೬)ಶರಣರ ಆಗಮನ, ಶರಣರ ಒಡನಾಟ ಬಸವಣ್ನನವರಿಗೆ ಬಹಳ ಅಪ್ಯಾಯಮಾನಿವಾದ ಸಂಗತಿ. ನಿರೀಕ್ಷಣೆಯಲ್ಲಿದ್ದಾಗ ಶರಣರು ಬಂದು ಬಸವಣ್ಣನವರ ಮುಂದೆ ನಿಂತಾಗ, ಅವರ ಕಣ್ಣಿಗೆ ಬಿದ್ದಾಗ, ಅರಣ್ಯದಲ್ಲಿ ನಡೆದು ನಡೆದು, ಸುಸ್ತಾಗಿ ಬಾಯಾರಿಕೆಯಾಗಿ ಕುಸಿದು ಬಿಳುವಂಥ ಸ್ಥಿತಿಯಲ್ಲಿದ್ದಾಗ ನೀರು ಸಿಕ್ಕರೆ ಕಳೆದು ಹೋದ ಜೀವ ಮತ್ತೆ ಮರಳಿ ಬಂದಂತಾಗುತ್ತದೆ. ಕಣ್ಣಿಲದ ಕುರುಡನಿಗೆ ದೃಷ್ಟಿ ಬಂದಾಗ…
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ) ಉದಯರಶ್ಮಿ ದಿನಪತ್ರಿಕೆ ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ ಹೊತ್ತಾಗಿದೆಯಷ್ಟೇ ಕಾಡಿನ ಪೊದೆಯ ಮರೆಯ ತರಗೆಲೆಗಳ ಮೇಲೆ ಏನೋ ಚಲಿಸುತ್ತಿರುವ ಸದ್ದು. ಯಾವುದೋ ಕಾಡು ಪ್ರಾಣಿ ಇರಬಹುದೆಂಬ ಭಯದಿಂದ ಎದೆಬಡಿತ ಹೆಚ್ಚಾಗತೊಡಗಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ತರಗೆಲೆಗಳ ಸದ್ದು ಮತ್ತಷ್ಟು ಹೆಚ್ಚಾಯಿತು, ಕುತೂಹಲದಿಂದ ಅತ್ತ ನನ್ನ ಕೈಯಲ್ಲಿದ್ದ ಟಾರ್ಚ್ ಲೈಟಿನ ಬೆಳಕನ್ನು ಬೀರಿದೆ. ಯಾವುದೋ ಒಂದು ಪುಟ್ಟ ಪ್ರಾಣಿ ಏನನ್ನೋ ಕಿತ್ತು…
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಕಾ೯ರಕ್ಕೆ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇದೇ ಮೇ ತಿಂಗಳದೊಳಗಾಗಿ 50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಕೂಡಲೇ ಆದೇಶ ಹೊರಡಿಸಬೇಕು ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ. ನಾಗೇಶ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಜಂಟಿಯಾಗಿ ರಾಜ್ಯ ಸಕಾ೯ರವನ್ನು ಆಗ್ರಹಿಸಿದ್ದಾರೆ.ಬೇಸಿಗೆ ಕಾಲದ ರಜೆ ಬಳಿಕ ರಾಜ್ಯಾದ್ಯಂತ ಇದೇ ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.ಎಂದಿನಂತೆ ಶಾಲಾ ತರಗತಿಗಳು ಆರಂಭವಾಗಲಿವೆ.ಕಾರಣ ಶಾಲೆಗಳು ಪ್ರಾರಂಭಗೊಳ್ಳುವ ಮೊದಲೇ ರಾಜ್ಯಾದ್ಯಂತ ಅಗತ್ಯ ವಿರುವ 50 ಸಾವಿರಕ್ಕೂ ಅಧಿಕ ಅತಿಥಿ ಶಿಕ್ಷಕರ ನೇಮಕ ಸಕಾ೯ರ ಮಾಡಿಕೊಂಡು ತಕ್ಷಣವೇ ಆದೇಶ ಹೊರಡಿಸಬೇಕು ಎಂದವರು ಒತ್ತಾಯಿಸಿದ್ದಾರೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್ ಅವರಿಗೆ ಪತ್ರ ಬರೆದು ಆಗ್ರಹಿಸಿರುವ ಅವರು, ರಾಜ್ಯದ ಶಾಲೆಗಳಿಗೆ ಹೆಚ್ಚು ಕಡಿಮೆ ಸುಮಾರು 50 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರ ಅವಶ್ಯಕತೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨೦೨೫-೨೬ನೆಯ ಸಾಲಿನ ಬಜೆಟ್ ಸಭೆ ಕರೆಯುವಂತೆ ಮಾ.೨೬ರಂದು ಪತ್ರ ಬರೆಯಲಾಗಿತ್ತು. ಆದರೆ ಸಿಂದಗಿ ಪುರಸಭೆ ಮುಖ್ಯಾಧಿಕಾರಿ ಯಾವುದೇ ಮುನ್ಸೂಚನೆ ಇಲ್ಲದೇ ನನ್ನ ಹಾಗೂ ಮೇಲಾಧಿಖಾರಿಗಳ ಗಮನಕ್ಕೆ ತರದೇ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಂಡು ರದ್ದುಪಡಿಸಿರುವ ಪರಿಣಾಮ ಪಟ್ಟಣದ ಸಾರ್ವಜನಿಕರಿಗೆ ಮತ್ತು ಪೌರ ಕರ್ಮಿಕರ ಸಿಬ್ಬಂದಿಗಳಿಗೆ ಸರಿಯಾದ ಸಮಯದಲ್ಲಿ ವೇತನ ಮಾಡಲು ಸಾಧ್ಯವಾಗುತ್ತಿದೆ. ಇದರಿಂದ ಪುರಸಭೆ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಸಿಂದಗಿ ಪುರಸಭೆ ಆರ್ಥಿಕವಾಗಿ ಹಿಂದುಳಿಯುವುದಕ್ಕೆ ತಾವೇ ಕಾರಣಿಕರ್ತರಾಗಿದ್ದು, ಅದನ್ನು ಸರಿದೂಗಿಸುವ ಉದ್ದೇಶದಿಂದ ಮೇ.೦೯ರಂದು ಪುರಸಭೆ ಬಜೆಟ್ ಸಭೆಯನ್ನು ಕರೆಯುವಂತೆ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಭಂಟನೂರ ಗ್ರಾಮದ ಶಂಕರಲಿಂಗ ದೇವರ ನೂತನ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ ಮತ್ತು ಸಡಗರದಿಂದ ಜರುಗಿತು.ಮೇ.೦೨ರಂದು ಶುಕ್ರವಾರ ದೇವಸ್ಥಾನಕ್ಕೆ ವಿದ್ಯುತ್ ಅಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಯಿತು. ಸಂಜೆ ೭ಗಂಟೆಗೆ ಗ್ರಾಮದ ದೇವರುಗಳಾದ ಶಂಕರಲಿಂಗ ಪಲ್ಲಕ್ಕಿ, ಗಂಗಿಲಿಂಗ ದೇವರ ಪಲ್ಲಕ್ಕಿ, ಲಕ್ಷ್ಮೀದೇವಿ ಪಲ್ಲಕ್ಕಿ, ಫಕೀರೇಶ್ವರ ಪಲ್ಲಕ್ಕಿ, ಗೊಲ್ಲಾಳೇಶ್ವರ ಪಲ್ಲಕ್ಕಿ ಈ ಎಲ್ಲ ದೇವರಗಳ ಪಲ್ಲಕ್ಕಿಗಳ ಭವ್ಯ ಮೆರವಣಿಗೆ ವಿವಿಧ ವಾಧ್ಯಗಳೊಂದಿಗೆ ಹೊರಗಿನ ದೇವಸ್ಥಾನಕ್ಕೆ ತಲುಪಿತು. ರಾತ್ರಿ ೧೦ ಗಂಟೆಗೆ ಭಜನೆಗಳು ಜರುಗಿದವು.ಮೇ.೦೩ರಂದು ನಸುಕಿನಲ್ಲಿ ನೂತನ ಮೂರ್ತಿಗೆ ಮಹಾ ರುದ್ರಾಭಿಷೇಕ, ಆಗಮಿಸಿದ ಎಲ್ಲ ದೇವರುಗಳಿಗೆ ಮಹಾಪೂಜೆ ಮಂಗಳಾರುತಿ ಜರುಗಿತು. ಮುಂಜಾನೆ ೯ಗಂಟೆಗೆ ೧೦೧ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಳಿಕ ೧೦ಗಂಟೆಗೆ ಸಾರವಾಡದ ಬೊಂಬೆ ಕುಣಿತ, ಸಿಂದಗಿ ತಾಲೂಕಿನ ಬಸ್ತಿಹಾಳ, ಸುಂಗಠಾಣ ಗ್ರಾಮದ ಕಲಾವಿದರಿಂದ ಡೊಳ್ಳಿನ ವಾಲಗ, ಪ್ರಸಿದ್ಧ ಪುರವಂತರ ಸೇವೆಯೊಂದಿಗೆ, ಕಳಸದ ಭವ್ಯ ಮೆರವಣಿಗೆಯು ಮದ್ದು ಸುಡುವುದರೊಂದಿಗೆ ಸಾಗಿ ಅಗಸಿ ಮುಂದಿರುವ ಮೈದಾನಕ್ಕೆ…
