ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಬಾಗಲಕೋಟೆ ಜಿಲ್ಲೆ ಸಮಗ್ರ ಅಭಿವೃದ್ದಿಗೆ ನನ್ನ ಆಧ್ಯತೆಯಾಗಿದೆ, ಎಲ್ಲೂ ತಾರತಮ್ಯ ಮಾಡುವದಿಲ್ಲ, ನನ್ನ ಕ್ಷೇತ್ರಕ್ಕೂ ಏನೆಲ್ಲ ಬೇಕು ಅದನ್ನು ನಾನು ಸರ್ಕಾರದಿಂದ ತರುವ ಕಾರ್ಯ ಮಾಡುತ್ತೆನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೂತನ ಕಟ್ಟಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೆ ತಾಲೂಕಿಗೆ ಬಂದ ಯೋಜನೆಗಳನ್ನು ನಾನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿಲ್ಲ ಅಷ್ಟು ಸಣ್ಣತನ ನಾನು ಮಾಡುದಿಲ್ಲ ಹಿಂದೆಯೂ ಮಾಡಿಲ್ಲ ಎಂದರು.
ಯಾವುದೆ ಸರ್ಕಾರ ಜನಪ್ರತಿನಿಧಿಗಳು ತಂದ ಯೋಜನೆಗಳನ್ನು ಸಾರ್ವಜನಿಕರು ಅದರ ಉಪಯೋಗ ಮಾಡಿಕೊಳ್ಳಬೇಕು, ಪ್ರಜಾಪ್ರಭುತ್ವ ವ್ಯವಸ್ಥೆ ನಾವು ಒಪ್ಪಿಕೊಳ್ಳಬೇಕು, ಈ ಹಿಂದೆ ಈ ಕಟ್ಟಡವನ್ನು ಕಾರಜೋಳ ಮತ್ತು ನ್ಯಾಮಗೌಡ ಅವರು ಅಡಿಗಲ್ಲು ಹಾಕಿದರು ಈಗ ನಾನು ಮತ್ತು ಗುಡಗುಂಟಿ ಅವರು ಉದ್ಘಾಟಿಸುತಿದ್ದೆವೆ ಇದು ಪ್ರಜಾತಂತ್ರ ವ್ಯವಸ್ಥೆ ಹೀಗೆ ಇರುತ್ತದೆ ಎಂದರು.
ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು, ಇಲ್ಲಿನ ಶಾಲೆಗಳಲ್ಲಿ ಜೀವನ ಮೌಲ್ಯಗಳ ಜೋತೆ ಉತ್ತಮ ಶಿಕ್ಷಣ ಸಿಗುತ್ತಿದೆ, ಇಲ್ಲಿನ ಮಕ್ಕಳು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸುವದರ ಮೂಲಕ ಎಲ್ಲರ ಗಮನ ಸೆಳೆಯುತಿದ್ದಾರೆ ಎಂದರು.
ಪಾಲಕರು ರಾಜಕೀಯ ನಾಯಕರ ಬಗ್ಗೆ ಗಂಟೆಗಳ ಕಾಲ ಮಾತನಾಡುತ್ತಿರಿ ಆದರೆ ತಮ್ಮ ಮಕ್ಕಳ ಶಿಕ್ಷಣ ಬಗ್ಗೆ ಓದು ಬರಹ ಬಗ್ಗೆ ಎಷ್ಟು ವೇಳೆ ನೀಡುತಿದ್ದಿರಿ ಎಂಬುದರ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿದರು.
ಕಲ್ಯಾಣ ಹೊರಗೀನ ಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಆಶಿರ್ವಚನ ನೀಡಿದರು.
ಕರಿಸಿದ್ದೇಶ್ವರ ಗದ್ದಿಗೆ ಪೂಜಾರಿ ಸಾನ್ನಿಧ್ಯವಹಿಸಿದ್ದರು. ವೇದಿಕೆಯಲ್ಲಿ ಎಸಿ ಶ್ವೇತಾ ಬೀಡಿಕರ, ತಹಶೀಲ್ದಾರ ಸದಾಶಿವ ಮಕ್ಕೋಜಿˌ ಗ್ರಾಪಂ ಅಧ್ಯಕ್ಷ ಬಾಗವ್ವ ಅಗಸರ, ಸಿದ್ದಪ್ಪ ಎಣ್ಣೆ, ಮಹೀಬೂಬ ಪೆಂಡಾರಿ, ಸದುಗೌಡ ಪಾಟೀಲ, ಅಜಯ ಕಡಪಟ್ಟಿ, ಯಮನೂರ ಮೂಲಂಗಿ, ಮಲ್ಲು ದಾನಗೌಡ, ಈಶ್ವರ ಆದೆಪ್ಪನವರ, ಬಿ.ಎನ್.ಗಸ್ತಿ, ಮುದಕಣ್ಣ ಅಂಬೀಗರ, ಅಶೋಕ ಕಿವಡಿ, ಸಂಗಪ್ಪ ಎಮ್ಮಣ್ಣವರ, ತಾಪಂ ಇಓ ಸಂಜಿವ ಜುನ್ನೂರ, ಚಿನ್ನು ಅಂಬಿ, ಅಬುಬಕರ ಕುಡಚಿ, ಗ್ರಾಪಂ ಸದಸ್ಯರು ಇತರರು ಇದ್ದರು.