Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೧೧೦/೩೩/೧೧ ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸಿಂದಗಿ ಪಟ್ಟಣ, ಯರಗಲ್ ಐಪಿ, ಸುಂಗಠಾಣ ಐಪಿ ಮತ್ತು ಯಂಕಂಚಿ ಐಪಿ ೧೧ ಕೆವ್ಹಿ ಮಾರ್ಗಗಳಲ್ಲಿ ಮೇ.೦೮ರಂದು ಬೆಳಿಗ್ಗೆ ೮ಗಂಟೆಯಿಂದ ಸಾಯಂಕಾಲ ೬ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪ-ವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಗೌತಮ್ ಆರ್ ಚೌಧರಿ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಭಾರತ ಸರ್ಕಾರದ ದಿಟ್ಟ ನಿರ್ಧಾರವಾಗಿದೆ. ಈಚೆಗೆ ಕಾಶ್ಮೀರದ ಪೆಹೆಲ್ಗಾಮ್ನಲ್ಲಿ ನಡೆದ ಘೋರ ಹತ್ಯಾಕಾಂಡಕ್ಕೆ ಉತ್ತರವಾಗಿ ನಮ್ಮ ಸೇನೆಯಿಂದ ಪಿಓಕೆ ಮತ್ತು ಪಾಕಿಸ್ತಾನದಲ್ಲಿರುವ ೨೧ ಉಗ್ರರ ತಾಣಗಳ ಮೇಲೆ ಧಾಳಿ ನಡೆಸಿ ಧ್ವಂಸಗೊಳಿಸಿ ಉಗ್ರರನ್ನು ಹತ್ಯೆಗೈದಿರುವುದು ನಮ್ಮ ಶಕ್ತಿ ಏನೆಂದು ಹೇಡಿ ಪಾಕಿಸ್ತಾನಕ್ಕೆ ತಿಳಿಸಿದಂತಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಆರ್ ಚೌಧರಿ ಹೇಳಿದ್ದಾರೆ.ಬುಧವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಈಚೆಗೆ ಕಾಶ್ಮೀರದ ಪೆಹಲ್ಗಾಮ್ದಲ್ಲಿ ಉಗ್ರರು ಮಾಡಿದ ದಾಳಿಗೆ ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಇದರಲ್ಲಿ ಅನೇಕ ಮಹಿಳೆಯರು ತಮ್ಮ ಸಿಂಧೂರವನ್ನು ಕಳೆದುಕೊಂಡಿದ್ದರು. ಇದಕ್ಕೆ ಪ್ರತಿಕಾರವಾಗಿ ಕೇಂದ್ರ ಸರ್ಕಾರವು ನಮ್ಮ ಸೈನಿಕರಿಂದ ನಿನ್ನೆ ಮಧ್ಯರಾತ್ರಿ “ಆಪರೇಶನ್ ಸಿಂಧೂರ” ಕಾರ್ಯಾಚರಣೆ ಮಾಡಿ ಮೂಲಕ ನೂರಾರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತಿಕಾರ ನೀಡಿದೆ. ಇದು ನಾವೆಲ್ಲರೂ…

Read More

ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿದ “ಉದಯರಶ್ಮಿ” ಪತ್ರಿಕಾ ಬಳಗ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಬಡವರ ಸೇವೆಯಲ್ಲಿ ದೇವರನ್ನು ಕಾಣುತ್ತಿರುವ ಮಾನವೀಯ ಕಳಕಳಿಯ ಡಾ.ಗೌತಮ್ ಚೌಧರಿ ಅವರ ಸೇವೆಯನ್ನು ಇಂದಿನ ಯುವ ವೈದ್ಯರು ಅನುಸರಿಸಬೇಕು ಎಂದು “ಉದಯರಶ್ಮಿ” ಸಂಪಾದಕ ಇಂದುಶೇಖರ ಮಣೂರ ಹೇಳಿದರು.ಬುಧವಾರ ಸಂಜೆ ಬೆಂಗಳೂರಿನ ಅವರ ಆಸ್ಪತ್ರೆಯಲ್ಲಿ “ಉದಯರಶ್ಮಿ” ಪತ್ರಿಕಾ ಬಳಗದೊಂದಿಗೆ ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಗೌತಮ್ ಚೌಧರಿ ಅವರ ಜನ್ಮದಿನದ ಪ್ರಯುಕ್ತ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.ಡಾ.ಗೌತಮ್ ಚೌಧರಿ ಅವರು ಬಸವಾದಿ ಶರಣರ ಹಾದಿಯಲ್ಲಿ ಸಾಗುತ್ತಿದ್ದು, ವಿಜಯಪುರ ಜಿಲ್ಲೆಯ ಗ್ರಾಮಗಳಲ್ಲಿ ಆಗಾಗ ಆರೋಗ್ಯ ಉಚಿತ ಶಿಬಿರಗಳ ಮೂಲಕ ಸದ್ದಿಲ್ಲದೆ, ಪ್ರಚಾರದ ಹಂಗಿಲ್ಲದೇ ಆರೋಗ್ಯ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಅನುಕರಣೀಯ ನಡೆಯಾಗಿದೆ ಎಂದರು.ಈ ವೇಳೆ ಡಾ.ಗೌತಮ್ ಚೌಧರಿ ಮಾತನಾಡಿ, ಬಡರೋಗಿಗಳ ಸೇವೆಯಲ್ಲಿ ತಾವು ತಮ್ಮ ತಂದೆ ಮಾಜಿ ಸಚಿವ ದಿ. ಡಾ.ಆರ್.ಬಿ.ಚೌಧರಿ ಅವರನ್ನು ಕಾಣುತ್ತಿದ್ದು ಇದನ್ನು ನಿರಂತರ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಪುರಸಭೆ ಸದಸ್ಯ ಶಿವಪ್ಪ ಹರಿಜನ ಇವರು ದಿನಗೂಲಿ ನೌಕರ ಶಮುಶುದ್ಧಿನ್ ಮೂಲಿಮನಿ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಮತ್ತು ಅವರು ಪುರಸಭೆಯ ಸಿಬ್ಬಂದಿಗಳಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದು ಅವರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷ, ಕೆಲ ಸದಸ್ಯರು ಮತ್ತು ಕೆಲ ನಾಮ ನಿರ್ದೇಶಿತ ಸದಸ್ಯರು ಸಹಿ ಹಾಕಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಪತ್ರದ ಸ್ವೀಕೃತಿ ಪ್ರತಿಯನ್ನು ಪತ್ರಿಕೆಗೆ ನೀಡಿದ್ದು, ಶಿವಪ್ಪ ಇವರು ಪದೇ ಪದೇ ಕಚೇರಿಗೆ ಬಂದು ಎಲ್ಲಾ ಸಿಬ್ಬಂದಿಗಳಿಗೆ ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಸರಕಾರಿ ಕೆಲಸ ನಿರ್ವಹಿಸಲು ಬಿಡುತ್ತಿಲ್ಲ. ಪ್ರತ್ಯೇಕವಾಗಿ ಮತ್ತು ವೈಯಕ್ತಿಕವಾಗಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದು ಮತ್ತು ಸಿಬ್ಬಂದಿಗಳ ವಿರುದ್ಧ ತಮ್ಮ ಕಚೇರಿಗೆ ಇಲ್ಲಸಲ್ಲದ ಆರೋಪ ಮಾಡಿ ಪತ್ರಗಳು ನೀಡುತ್ತಿದ್ದು ಇದರ ಬಗ್ಗೆ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದೇ ಪದೇ ಪದೇ ನಮ್ಮ ಕೋಠಡಿಗೆ ಬಂದು ಆರೋಪ ಮಾಡುತ್ತಿದ್ದಾರೆ.ಪುರಸಭೆಯಲ್ಲಿ ಶಮಶುದ್ದಿನ್…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಆಲಗೂರ ಗ್ರಾಮದ ಶ್ರೀ ಮಹಾವೀರ ಅಲ್ಪಸಂಖ್ಯಾತರ ವಿದ್ಯಾವರ್ಧಕ ಸಂಘದ ಕನ್ನಡ/ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಫಲಿತಾಂಶ ಕನ್ನಡ ಮಾಧ್ಯಮ ಶೇಕಡ 89. 28 ಹಾಗೂ ಆಂಗ್ಲ ಮಾಧ್ಯಮ ಶೇಕಡ 88 ಆಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮುರುಗೇಶ ಚ ಲಿಗಾಡೆ ತಿಳಿಸಿದ್ದಾರೆ.ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದ ಕಲ್ಪನಾ ಸಿ ಬೆಳಗಲಿ 625ಕ್ಕೆ 619 (99.04%) ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಪರೀಕ್ಷಾ ಕೇಂದ್ರಕ್ಕೆ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಅಮೃತಾ ಮ.ತೆಲಿ 625ಕ್ಕೆ 615(98.4%) ಅಂಕ ಪಡೆದು ರಾಜ್ಯಕ್ಕೆ 11ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಐಶ್ವರ್ಯ ಮ. ತೊನಶ್ಯಾಳ ಹಾಗೂ ಸೃಷ್ಟಿ ಆ.ದಾಶ್ಯಾಳ 625 ಕ್ಕೆ 608(97.28%) ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 12 ವಿದ್ಯಾರ್ಥಿಗಳು ಪ್ರತಿಶತ 90 ಕಿಂತ…

Read More

ಲೇಖನಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಬಹುತೇಕ ಜನರಿಗೆ ಯಾವುದೇ ಕೆಲಸ ಹೇಳಿದರೂ ’ನಾನು ನಾಳೆಯಿಂದ ಪ್ರಾರಂಭಿಸುತ್ತೇನೆ’ ಎಂಬ ರೆಡಿಮೇಡ್ ಉತ್ತರ ರೆಡಿಯಾಗಿರುತ್ತದೆ. ಅಂದ್ಹಾಗೆ ನಾನು ನಾಳೆಯಿಂದ ಪ್ರಾರಂಭಿಸುತ್ತೇನೆ ಎಂಬ ಬಲೆಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಅನ್ನೋದು ಅನೇಕರ ಅಂಬೋಣ. ಹಾಗಂತ ಸಾಧ್ಯವಿಲ್ಲ ಅಂತಿಲ್ಲ. ಇಂದು ಎನ್ನುವುದು ಮುಂದೂಡುವ ಜನರಿಗೆ ಒಂದು ಸಮಸ್ಯೆಯಾಗಿದೆ. ನಾಳೆಯ ಬಲೆಯಲ್ಲಿ ಬಿದ್ದು ಒದ್ದಾಡುವುದೇ ಅವರ ಆಯ್ಕೆಯಾಗಿದೆ. ಯಾವುದನ್ನಾದರೂ ಮನಸ್ಸಿಗೆ ಬಂದಾಗ, ಆಗಾಗ, ವಿರಳವಾಗಿ ಮಾಡುವುದಕ್ಕಿಂತ ಪ್ರತಿದಿನ ಮಾಡುವುದು ಉತ್ತಮ. ಉದಾಹರಣೆಗೆ ತಿಂಗಳಿಗೆ ಒಮ್ಮೆ ೫ ಗಂಟೆಗಳಿಗಿಂತ ದಿನಕ್ಕೆ ೫ ನಿಮಿಷ ಹೊಸ ಭಾಷೆ ಕಲಿಯಲು ಕಳೆಯುವುದು ಉತ್ತಮ. ಪ್ರತಿದಿನ ಏನನ್ನಾದರೂ ಮಾಡಿದರೆ ಅದರಲ್ಲಿ ಕರಗತ ಮಾಡಿಕೊಳ್ಳುವ ಸಾಧ್ಯತೆಗಳು ತುಂಬಾ ಹೆಚ್ಚು. ಸವಾಲು ಎಂದರೆ ಒಂದು ದಿನದಲ್ಲಿ ಕೇವಲ ೨೪ ಗಂಟೆಗಳು ಮಾತ್ರ ಇರುತ್ತವೆ. ಈ ೨೪ ಗಂಟೆಗಳ ನಿರ್ಬಂಧವು ನಮಗೆ ನಿಜವಾಗಿಯೂ ಮುಖ್ಯವಾದುದನ್ನು ನಿರ್ಧರಿಸಲು ಒತ್ತಾಯಿಸುತ್ತದೆ. ನಾವು ಯಾವುದರ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇವೆ? ಏನು…

Read More

ಚಿಂತನೆಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಹನ್ನೆರಡನೆಯ ಶತಮಾನದ ದಿಟ್ಟ ಶರಣೆ ಅಕ್ಕ ಮಹಾದೇವಿ ತನ್ನ ಅನುಭವಕ್ಕೆ ನಿಲುಕದ ಅನುಭಾವವನ್ನು ಅತ್ಯಂತ ಸುಂದರ ಸರಳ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾಳೆ. ಅಕ್ಕ ತಾನೂ ಒಬ್ಬ ಸಮಾಜದ ಪ್ರತಿನಿಧಿ .ತನಗೂ ಹಸಿವು ನಿದ್ದೆ ಬಯಕೆ ಕನಸು ಮನುಷ್ಯ ಸಹಜ ದತ್ತವಾದ ಬೇಡಿಕೆ ಸರಳ ಮತ್ತು ಸ್ವಾಭಾವಿಕ ಎಂದು ಈ ವಚನದಲ್ಲಿ ಅಭಿವ್ಯಕ್ತಗೊಳಿಸಿದ್ದಾಳೆ. ವಚನ ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.ಅವು ನೀಡಿದವು ತಮ್ಮ ಲಿಂಗಕ್ಕೆಂದು.ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು.ಇನ್ನು ಬೇಡಿದೆನಾಡದೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ. ವಚನ ವಿಶ್ಲೇಷಣೆ ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.ಅಕ್ಕ ತಾನು ಪ್ರಕೃತಿಯ ಪ್ರಾಣಿ ಪಶು ಪಕ್ಷಿ ಜೀವಿಗಳ ಹಾಗೆ ಒಡಲ ಹಸಿವಿಗೆ ಆಹಾರ ಪಡೆಯಲು ದಟ್ಟವಾದ ಅರಣ್ಯ ಅಡವಿಗೆ ಹೊಕ್ಕೆನು ಎಂದು ಹೇಳಿದ್ದು ಅವಳ ಪ್ರೌಢಿಮೆ ನೀರ್ಭಾವ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ.ಅನೇಕ ಪ್ರಾಣಿಗಳಿಗೆ ಹಲವು ರೀತಿಯಲ್ಲಿ ಆಶ್ರಯ ನೀಡಿದ ಅಡವಿಯ ಉಪಮೆಯ ಸುಂದರ. ಪ್ರಾಣಿಗಳಂತೆ ತನ್ನ ಹಸಿವಿನ ಒಡಲ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿನ ೨೦೨೧-೨೨ನೇ ಅವಧಿಯ ಖಾಲಿ ಇರುವ ಉತ್ನಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕಲಬುರಗಿಯ ಕರ್ನಾಟಕ ಉಚ್ಛ ನ್ಯಾಯಾಲಯ ಇವರ ರಿಟ್ ಅಪೀಲು ಆದೇಶದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.ಪ್ರಕಟಿತ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಆಕ್ಷೇಪಣೆಗಳನ್ನು ದಿನಾಂಕ:೧೫-೦೫-೨೦೨೫ರೊಳಗಾಗಿ ಸಂಬಂಧಿಸಿದ ವಿಜಯಪುರ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೧೦/೧೧ ಕೆ.ವ್ಹಿ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ನಿಡೋಣಿ ಹಾಗೂ ಕಂಬಾಗಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೆಯ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿದೆ.೧೧೦/೧೧ ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುವ ೩೩/೧೧ಕೆ.ವ್ಹಿ ದೇವರಗೆಣ್ಣೂರ, ೩೩/೧೧ ಕೆ.ವ್ಹಿ ಲಿಂಗದಳ್ಳಿ ಎಲ್.ಐ.ಎಸ್ ಹಾಗೂ ಎಲ್ಲ ೧೧ ಕೆ.ವ್ಹಿ ವಿದ್ಯುತ್ ಮಾರ್ಗಗಳಲ್ಲಿ ಮೇ.೦೮ರ ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೩ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಹಣದಲ್ಲಿ ಕೆಲವರು ಹೊಲಿಗೆ ಯಂತ್ರ, ಪ್ರಿಡ್ಜ್, ಸೇರಿದಂತೆ ಕೆಲವು ಸಾಮಾನುಗಳನ್ನು ಖರೀದಿಸಿದ್ದನ್ನು ಕೇಳಿದ್ದೇವೆ. ಇದಕ್ಕೆ ವಿಭಿನ್ನವಾಗಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಒಂದು ಲಕ್ಷ ನುಡಿಮುತ್ತು ಬರೆದ ಯುವ ಸಾಹಿತಿ ಭೀಮರಾಯ ಹೂಗಾರ ಅವರು ತಮ್ಮ ಪತ್ನಿಗೆ ಬಂದಿರುವ ಗೃಹಲಕ್ಷ್ಮೀ ಹಣದಲ್ಲಿ ರಾಜಕಾರಣಿ ಹೇಗಿರಬೇಕು ನುಡಿಮುತ್ತುಗಳನ್ನು ಬರೆಯುವ ಜೊತೆಗೆ ರಾಜಕಾರಣಿಯರ ಜೀವನ ಚರಿತ್ರೆ ಒಳಗೊಂಡ ನಾಲ್ಕು ಪುಸ್ತಕಗಳನ್ನು ಇದುವರೆಗೂ ಪ್ರಕಟಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಗಮನ ಸೆಳೆಯುತ್ತಿದ್ದಾರೆ.

Read More