ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಆಲಗೂರ ಗ್ರಾಮದ ಶ್ರೀ ಮಹಾವೀರ ಅಲ್ಪಸಂಖ್ಯಾತರ ವಿದ್ಯಾವರ್ಧಕ ಸಂಘದ ಕನ್ನಡ/ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಫಲಿತಾಂಶ ಕನ್ನಡ ಮಾಧ್ಯಮ ಶೇಕಡ 89. 28 ಹಾಗೂ ಆಂಗ್ಲ ಮಾಧ್ಯಮ ಶೇಕಡ 88 ಆಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಮುರುಗೇಶ ಚ ಲಿಗಾಡೆ ತಿಳಿಸಿದ್ದಾರೆ.
ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾದ ಕಲ್ಪನಾ ಸಿ ಬೆಳಗಲಿ 625ಕ್ಕೆ 619 (99.04%) ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಹಾಗೂ ಪರೀಕ್ಷಾ ಕೇಂದ್ರಕ್ಕೆ ಮತ್ತು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ, ಅಮೃತಾ ಮ.ತೆಲಿ 625ಕ್ಕೆ 615(98.4%) ಅಂಕ ಪಡೆದು ರಾಜ್ಯಕ್ಕೆ 11ನೇ ಸ್ಥಾನ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಐಶ್ವರ್ಯ ಮ. ತೊನಶ್ಯಾಳ ಹಾಗೂ ಸೃಷ್ಟಿ ಆ.ದಾಶ್ಯಾಳ 625 ಕ್ಕೆ 608(97.28%) ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 12 ವಿದ್ಯಾರ್ಥಿಗಳು ಪ್ರತಿಶತ 90 ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. 19 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಒಬ್ಬ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕನ್ನಡ ವಿಷಯದಲ್ಲಿ 3,ಇಂಗ್ಲಿಷ್ ವಿಷಯದಲ್ಲಿ 1,ಹಿಂದಿ ವಿಷಯದಲ್ಲಿ 05, ಸಮಾಜ ವಿಷಯದಲ್ಲಿ 5 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.
ಅದೇ ರೀತಿ ಆಂಗ್ಲ ಮಾಧ್ಯಮದಲ್ಲಿ ಸಮೀಕ್ಷಾ ಸು ದೈಗೊಂಡ 625ಕ್ಕೆ 595 (95.2%) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸಂದೀಪ್ ಶಿ. ಸಿದ್ದಗೋಣಿ 625ಕ್ಕೆ 593 (94.88%) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮೇಘನಾ ರ ಗೋರ್ಪಡೆ 620ಕ್ಕೆ 550 (88%) ಅಂಕ ಪಡೆದುಕೊಂಡು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಎಂದು ಹೇಳಲು ಖುಷಿ ಎನಿಸುತ್ತದೆ.
ಮೂರು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ,07 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕನ್ನಡ ವಿಷಯದಲ್ಲಿ ಇಬ್ಬರು ಹಿಂದಿ ವಿಷಯದಲ್ಲಿ ಒಬ್ಬರು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕ್ಷೆತ್ರ ಶಿಕ್ಷಣಾಧಿಕಾರಿಗಳಾದ ಎ.ಕೆ ಬಸಣ್ಣವರ್, ಸಂಸ್ಥೆಯ ಅಧ್ಯಕ್ಷರಾದ ಡಾ ಎ ಜೆ ನ್ಯಾಮಗೌಡ, ಕಾರ್ಯದರ್ಶಿಗಳಾದ ರಾಜು ಪರಂಗೊಂಡ ಹಾಗೂ ಸರ್ವ ಸದಸ್ಯರು ಶಿಕ್ಷಕವೃಂದ ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.