ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಹಣದಲ್ಲಿ ಕೆಲವರು ಹೊಲಿಗೆ ಯಂತ್ರ, ಪ್ರಿಡ್ಜ್, ಸೇರಿದಂತೆ ಕೆಲವು ಸಾಮಾನುಗಳನ್ನು ಖರೀದಿಸಿದ್ದನ್ನು ಕೇಳಿದ್ದೇವೆ. ಇದಕ್ಕೆ ವಿಭಿನ್ನವಾಗಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಒಂದು ಲಕ್ಷ ನುಡಿಮುತ್ತು ಬರೆದ ಯುವ ಸಾಹಿತಿ ಭೀಮರಾಯ ಹೂಗಾರ ಅವರು ತಮ್ಮ ಪತ್ನಿಗೆ ಬಂದಿರುವ ಗೃಹಲಕ್ಷ್ಮೀ ಹಣದಲ್ಲಿ ರಾಜಕಾರಣಿ ಹೇಗಿರಬೇಕು ನುಡಿಮುತ್ತುಗಳನ್ನು ಬರೆಯುವ ಜೊತೆಗೆ ರಾಜಕಾರಣಿಯರ ಜೀವನ ಚರಿತ್ರೆ ಒಳಗೊಂಡ ನಾಲ್ಕು ಪುಸ್ತಕಗಳನ್ನು ಇದುವರೆಗೂ ಪ್ರಕಟಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಗಮನ ಸೆಳೆಯುತ್ತಿದ್ದಾರೆ.