Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮಹಾ ಶರಣೆ ಅಕ್ಕಮಹಾದೇವಿ
ವಿಶೇಷ ಲೇಖನ

ಮಹಾ ಶರಣೆ ಅಕ್ಕಮಹಾದೇವಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಚಿಂತನೆ
ಡಾ. ಶಶಿಕಾಂತ ಪಟ್ಟಣ
ರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಹನ್ನೆರಡನೆಯ ಶತಮಾನದ ದಿಟ್ಟ ಶರಣೆ ಅಕ್ಕ ಮಹಾದೇವಿ ತನ್ನ ಅನುಭವಕ್ಕೆ ನಿಲುಕದ ಅನುಭಾವವನ್ನು ಅತ್ಯಂತ ಸುಂದರ ಸರಳ ರೀತಿಯಲ್ಲಿ ಕಟ್ಟಿ ಕೊಟ್ಟಿದ್ದಾಳೆ. ಅಕ್ಕ ತಾನೂ ಒಬ್ಬ ಸಮಾಜದ ಪ್ರತಿನಿಧಿ .ತನಗೂ ಹಸಿವು ನಿದ್ದೆ ಬಯಕೆ ಕನಸು ಮನುಷ್ಯ ಸಹಜ ದತ್ತವಾದ ಬೇಡಿಕೆ ಸರಳ ಮತ್ತು ಸ್ವಾಭಾವಿಕ ಎಂದು ಈ ವಚನದಲ್ಲಿ ಅಭಿವ್ಯಕ್ತಗೊಳಿಸಿದ್ದಾಳೆ.

ವಚನ

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು; ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾಡದೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.

ವಚನ ವಿಶ್ಲೇಷಣೆ

ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಅಕ್ಕ ತಾನು ಪ್ರಕೃತಿಯ ಪ್ರಾಣಿ ಪಶು ಪಕ್ಷಿ ಜೀವಿಗಳ ಹಾಗೆ ಒಡಲ ಹಸಿವಿಗೆ ಆಹಾರ ಪಡೆಯಲು ದಟ್ಟವಾದ ಅರಣ್ಯ ಅಡವಿಗೆ ಹೊಕ್ಕೆನು ಎಂದು ಹೇಳಿದ್ದು ಅವಳ ಪ್ರೌಢಿಮೆ ನೀರ್ಭಾವ ಗುಣಕ್ಕೆ ಹಿಡಿದ ಕನ್ನಡಿಯಾಗಿದೆ.
ಅನೇಕ ಪ್ರಾಣಿಗಳಿಗೆ ಹಲವು ರೀತಿಯಲ್ಲಿ ಆಶ್ರಯ ನೀಡಿದ ಅಡವಿಯ ಉಪಮೆಯ ಸುಂದರ. ಪ್ರಾಣಿಗಳಂತೆ ತನ್ನ ಹಸಿವಿನ ಒಡಲ ಕಳವಳಕ್ಕಾಗಿ
ತಾನೂ ಕೂಡ ಅಡವಿಯ ಹಣ್ಣು ಹಂಪಲುಗಳನ್ನು ಪಡೆಯಲು ದಟ್ಟವಾದ ಅರಣ್ಯ ಹೊಕ್ಕಳು ಎಂದು ಹೇಳುತ್ತಾಳೆ.
ಗಿಡುಗಿಡುದಪ್ಪಿದೆ ಬೇಡಿದೆನೆನ್ನಂಗಕ್ಕೆಂದು.
ತನ್ನ ಅಂಗ ಸುಖದ ಹಸಿವು ತೀರಿಸಿಕೊಳ್ಳಲು ಸಜ್ಜಾಗಿ ಅಕ್ಕ ಅಡವಿಯೊಳಗಿನ ಎಲ್ಲಾ ಗಿಡಗಳನ್ನು ಅಪ್ಪಿಕೊಂಡು ತನ್ನಂಗ ಹಸಿವಿಗೆ ಆಹಾರ ರೂಪದಲ್ಲಿ ಹಣ್ಣು ಹಂಪಲುಗಳನ್ನು ಪಡೆಯಲು ಬೇಡಿಕೆ ಇಡುತ್ತಾಳೆ. ಹೇಗೆ ಪ್ರಾಣಿಗಳು ಪಕ್ಷಿಗಳು ತಮಗೆ ಹಸಿವಾದಾಗ ಹೊಟ್ಟೆಗೆ ಮರಗಳನ್ನು ಆಶ್ರಯಿಸುವ ಹಾಗೆ ಅಕ್ಕ ಪ್ರತಿಯೊಂದು ಮರವನ್ನು ಅಪ್ಪಿ ಕೇಳಿಕೊಳ್ಳುತ್ತಾಳೆ.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಪರಿಸರ ಸಂರಕ್ಷಣೆ ಸೃಷ್ಟಿ ಪ್ರೇಮಿ ಅಕ್ಕ ತನ್ನ ಒಡಲ ಹಸಿವಿಗೆ ಗಿಡಕ್ಕೆ ಕಲ್ಲು ಹೊಡೆಯದೆ ಕೋಲಿನಿಂದ ತಿವಿಯದೆ ಮರಗಳಿಂದ ಬಿದ್ದ ಪೂರ್ಣ ಪ್ರಮಾಣದ ಮಾಗಿದ ಹಣ್ಣು ಹಂಪಲುಗಳನ್ನು ಆಯ್ದು ತನ್ನ ಹಸಿವು ಹಿಂಗಿಸಲು.
ಆದರೆ ಹಣ್ಣು ಹಂಪಲುಗಳನ್ನು ಹೊತ್ತ ಮರ ಗಿಡ ಅವಳ ಬೇಡಿಕೆಗೆ ತಾವು ನೀಡಿದವು ಲಿಂಗಕ್ಕೆಂದು. ಎಂತಹ ಅದ್ಭುತ ಭಾವ ಉಪಮೆಯ ಅಕ್ಕ ಬಳಸಿದ್ದಾಳೆ. ಅಕ್ಕ ಮಹಾದೇವಿ ತನ್ನ ಹಸಿವಿಗೆ ಗಿಡಗಳನ್ನು ಬೇಡಿಕೊಂಡರೆ ಮರ ಗಿಡಗಳು ಇದು ತಮ್ಮ ಲಿಂಗ ಪ್ರಜ್ಞೆ ಜವಾಬ್ದಾರಿ ಎಂದು ತಿಳಿದು ಹಣ್ಣು ಹಂಪಲುಗಳನ್ನು ನೀಡಿದವು ಎನ್ನುತ್ತಾಳೆ ಅಕ್ಕ ಇಂತಹ ಅನುಭವ ಅಧ್ಯಾತ್ಮದ ಚಿಂತನೆ ನಾವಿಲ್ಲಿ ಕಾಣುತ್ತೇವೆ.
ಆನು ಬೇಡಿ ಭವಿಯಾದೆನು
ಬಯಕೆ ಬೇಡಿಕೆ ಹಸಿವು ಕಡಲ ಕಳವಳ ಅಂಗ ಸುಖದ ಹಸಿವು ಹಿಂಗಿಸುವ ಹುಡುಕಾಟ ಹೀಗೆ ಅಕ್ಕ ಮಹಾದೇವಿ ಅರಣ್ಯದ ಮಧ್ಯೆ ಅನೇಕ ಮರಗಳನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಅಪ್ಪಿ ತನ್ನ ಹಸಿವಿಗೆ ಆಹಾರಕ್ಕೆ ಬೇಡಿಕೆ ಇಟ್ಟಳು ಆ ಕಾರಣಕ್ಕೆ ತಾನು ಭವಿಯಾದೇನು ಎನ್ನುತ್ತಾಳೆ. ತಾನು ಗಿಡ ಮರ ಬಳ್ಳಿಗಳು ಪೋಷಿಸುವ ಜವಾಬ್ದಾರಿ ಇದೆ ಆದರೆ ತಾನು ಭವಿಯಾದೆ ತನ್ನ ಸ್ವಾರ್ಥಕಾಗಿ ಗಿಡಗಳನ್ನು ಬೇಡಿದೆ ಎಂದಿದ್ದಾಳೆ.
ಅವು ನೀಡಿ ಭಕ್ತರಾದವು.
ಅಕ್ಕ ತನ್ನ ಒಡಲ ಹಸಿವಿಗೆ ಬೇಡಿ ಭವಿಯಾದಳು. ಆದರೆ ಮರಗಳು ಲಿಂಗ ಜಂಗಮ ಪ್ರಜ್ಞೆ ಮತ್ತು ಭಕ್ತನ ದಾಸೋಹದ ಆಶಯದಂತೆ ಅಕ್ಕನ ಕೂಗಿಗೆ ಸ್ಪಂದಿಸಿ ತಮ್ಮಲ್ಲಿನ ಹಣ್ಣು ಹಂಪಲುಗಳನ್ನು ನೀಡಿದವು.
ತಮ್ಮ ದಾಸೋಹ ಪ್ರಜ್ಞೆ ಜವಾಬ್ದಾರಿ ಮೆರೆದು ಭಕ್ತರಾದವು. ಭಕ್ತನ ಅನುಪಮ ಪ್ರೀತಿಯನ್ನು ಈ ರೀತಿಯಲ್ಲಿ ಅಕ್ಕ ಮಹಾದೇವಿ ನಿರೂಪಿಸಿದ್ದಾಳೆ .
ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
ಅಕ್ಕ ಇಲ್ಲಿ ಒಡಲ ಹಸಿವು ಎನ್ನುವ ಸಣ್ಣ ಉಪಮೆಯ ಬಳಸಿ ಅರಣ್ಯ ಅಡವಿ ಎಂಬ ನಂಬಿಕೆಯನ್ನು ಸೂಚಿಸಿ ತಾನು ತನ್ನ ಅಂಗದ ಹಸಿವಿಗೆ ಬೇಡಿದೆ. ಬೇಡಿ ಭವಿಯಾದೇ ಆದರೆ ಅರಣ್ಯದ ಮಧ್ಯೆ ಇರುವ ಗಿಡ ಮರಗಳು ನೀಡಿ ಭಕ್ತರಾದವು ಮರಗಳಿಗೆ ಲಿಂಗ ಪ್ರಜ್ಞೆ ಜಂಗಮ ಜವಾಬ್ದಾರಿ ಇದೆ ಹೀಗಾಗಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಗಿಡಗಳು ಭಕ್ತರಾದರೆ ತಾನು ಬೇಡಿ ಭವಿಯಾದೆ ಎನ್ನುವ ವಿನಯ ಭಾವ ಪ್ರಜ್ಞೆ ಅವಳದ್ದು. ಕೊನೆಗೆ ತಾನು ಇನ್ನೂ ಮುಂದೆ ಎಂದಿಗೂ ಬೇಡುವುದಿಲ್ಲ ಬಳಲುವುದಿಲ್ಲ ಸತ್ಯ ಶುದ್ಧ ಕಾಯಕ ಮಾಡಿ ದಾಸೋಹ ತತ್ವ ಸಿದ್ಧಾಂತಗಳನ್ನು ಪಾಲಿಸಿ ತಾನೂ ಕೂಡ ಭಕ್ತಳಾಗುವೇನು ಎಂದಿದ್ದಾಳೆ. ಬೇಡಿಕೆ ಭಿಕ್ಷೆ ದಾನ ವ್ಯವಸ್ಥೆ ಸಮಾಜದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಬೇಡಿ ಭವಿಯಾಗದೆ ನೀಡಿ ಹಂಚಿ ಭಕ್ತಳಾಗುವೆ ಎನ್ನುತ್ತಾಳೆ ಅಕ್ಕ. ಅಷ್ಟೇ ಅಲ್ಲ ಇನ್ನು ಮುಂದೆ ತಾನು ಎಂದಿಗೂ ಯಾರನ್ನೂ ಬೇಡುವುದಿಲ್ಲ ಹಾಗೇನಾದರೂ ಆದಲ್ಲಿ ಅದು ಚೆನ್ನಮಲ್ಲಿಕಾರ್ಜುನ ಎಂಬ ಜಂಗಮ ಸಮಾಜದ ಮೇಲೆ ಪ್ರಮಾಣ ಆಣೆ ಎಂದಿದ್ದಾಳೆ.
ಅವಳ ವಚನದಲ್ಲಿ ಅತ್ಯಂತ ಸುಂದರ ಸೂಕ್ಷ್ಮ ಉನ್ನತ ವಿಚಾರಗಳು ಸಾದರಗೊಂಡಿವೆ.
ಪ್ರತಿನಿಧಿತ್ವ ಅನುಭವ ಪರಿಸರದ ಅಡವಿ ಗಿಡ ಮರಗಳ ಚಿತ್ರಣ ತನ್ನ ವಚನದಲ್ಲಿ ಅತ್ಯಂತ ಸೊಗಸಾಗಿ ಬಳಸಿ ತನ್ನ ಅನುಭವಕ್ಕೆ ಮಾದರಿಯಾಗಿದ್ದಾಳೆ ಅಕ್ಕ ಮಹಾದೇವಿ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.