Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹಿಂದೂ ಧರ್ಮವನ್ನೇ ಒಪ್ಪದವರಿಂದ ನಾಡ ಹಬ್ಬ ದಸರಾಹಬ್ಬ ಉದ್ಘಾಟಿಸುತ್ತಿರುವುದು ಖಂಡನಾರ್ಹ ಎಂದು ಯುವಾ ಬ್ರಿಗೇಡ್ ವಿಭಾಗದ ಸಹ ಸಂಚಾಲಕ ಶಿವಮೂರ್ತಿ ಕಾಟಕರ್ (ದೇವಣಗಾಂವ) ಹೇಳಿದರು.ಅವರು ಯುವಾ ಬ್ರಿಗೇಡ್ ಸಿಂದಗಿ ವತಿಯಿಂದ ರಾಜ್ಯಪಾಲರಿಗೆ ಬರೆದಿರುವ ಮನವಿ ಪತ್ರವನ್ನು ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಸಲ್ಲಿಸಿ ಮಾತನಾಡುತ್ತಿದ್ದರು.ದಸರಾ ಹಬ್ಬವು ಸಮಸ್ತ ಹಿಂದುಗಳ ಸಂಸ್ಕೃತಿ ಮತ್ತು ನಂಬಿಕೆಯ ಗುರುತಾಗಿದೆ, ನಮ್ಮ ಪರಂಪರೆಯ ಪ್ರತೀಕವಾಗಿದೆ ಎಂಥ ಭವ್ಯ ಪರಂಪರೆ ಹೊಂದಿರುವ ನಾಡಹಬ್ಬದಲ್ಲಿ ರಾಜಕೀಯ ಮಾಡಿ ಸಮಸ್ತ ಹಿಂದುಗಳ ಭಾವನೆಗೆ ಧಕ್ಕೆ ತರುವಂತ ಕೆಲಸ ಸರ್ಕಾರ ಮಾಡುತ್ತಿದೆ ಇದನ್ನು ನಾಡಿನ ಸಮಸ್ತ ಹಿಂದೂ ಜನತೆ ಇದನ್ನು ಒಪ್ಪುತ್ತಿಲ್ಲ ಈ ಕಾರಣಕ್ಕಾಗಿ ಭಾನು ಮುಸ್ತಾಕ್ ಅವರಿಂದ ಉದ್ಘಾಟನೆ ವಾಪಸ್ ಪಡೆಯುವ ಮೂಲಕ ಹಿಂದುಗಳ ಭಾವನೆಗೆ ಗೌರವಿಸಬೇಕಿದೆ. ಗೌರವಾನ್ವಿತ ರಾಜ್ಯಪಾಲರು ಮಧ್ಯೆಸ್ಥಿಕೆ ವಹಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ವಿಭಾಗ ಸಂಚಾಲಕ ರಾಜು ಪಾಟೀಲ,ವಿ ಎಚ್ ಪಿ ಮುಖಂಡ ಶೇಖರಗೌಡ ಹರನಾಳ,ಜಿಲ್ಲಾ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿಜಯಪುರ ಜಿಲ್ಹಾ ಅಮೇಚೂರ ಕಬಡ್ಡಿ ಸಂಸ್ಥೇಯ ಪ್ರಧಾನ ಕಾರ್ಯದರ್ಶೀಯಾಗಿ ಮತ್ತು ರಾಜ್ಯ ಸೈಕ್ಲಿಂಗ್ ಅಸೋಷೀಯೇಶನ್ ಸಂಘಟನಾ ಕಾರ್ಯದರ್ಶಿಯಾಗಿ ಕಳೆದ ಮೂರು ದಶಕಗಳ ಕಾಲ ಯಾವುದೇ ಪ್ರತಿಫಲಾಪೇಕ್ಷೇ ಬಯಸದೆ ವೇತನವಿಲ್ಲದೆ ನಿಸ್ವಾರ್ಥ ಮನೋಬಲದಿಂದ ಆಟಗಾರರಿಗೆ ಸ್ಥೈರ್ಯ ತುಂಬುತ್ತಿದ್ದ ಕ್ರೀಡಾ ಪ್ರೇಮಿ ರಮೇಶ ಪಾಟೀಲ ಇನ್ನು ನೆನಪು ಮಾತ್ರ.ಕೃಷ್ಣಾ ನದಿ ತೀರದ ಅವಳಿ ಜಿಲ್ಹೆಯ ನೂರಾರು ಯುವಕ ಯುವತಿಯರಿಗೆ ಕ್ರೀಡೆಯ ಬಗ್ಗೆ ಅದರಲ್ಲೂ ಕಬಡ್ಡಿ ಆಟ ಮತ್ತು ಸೈಕ್ಲೀಂಗ್ ಸ್ಪರ್ಧೇಯ ಬಗ್ಗೆ ಆಸಕ್ತಿ ಮೂಡಿಸಿ ಸ್ಪೂರ್ತಿ ತುಂಬಿ ಗ್ರಾಮೀಣ ಪಟ್ಟಣ ನಗರ ಪ್ರದೇಶದ ಹಲವಾರು ಆಟಗಾರರು ತಂಡಗಳು ತಾಲೂಕು ಜಿಲ್ಹಾ ರಾಜ್ಯ ಹಾಗೂ ರಾಷ್ಟç ಮಟ್ಟದ ಅತ್ಯುತ್ತಮ ಕ್ರೀಡಾ ಪ್ರತಿಭೆಗಳು ಮಿಂಚಿ ಪ್ರಶಸ್ತಿ ಪಡೆಯಲು ಕಾಣದ ಕೈಯಂತೆ ಶಕ್ತಿ ತುಂಬಲು ಶ್ರಮಿಸಿದವರು ರಮೇಶ ತ್ರೀವಿಕ್ರಮ ಪಾಟೀಲ.ಕ್ರೀಡಾ ಕ್ಷೇತ್ರದಲ್ಲಿ ಅಪ್ರತಿಮ ಕ್ರೀಡಾ ಸಾಧಕರನ್ನು ನಾಡಿಗೆ ಪರಿಚಯಿಸಿದ ರಮೇಶ ಜನಿಸಿದ್ದು ಕೆನೆಮೋಸರ ಸವಿನಾಡು ಕೊಲ್ಹಾರದಲ್ಲಿ. ಇವರು ದೈಹಿಕ ಶಿಕ್ಷಣವನ್ನು ಓದದೆ ಇದ್ದರೂ ಪಟ್ಟಣ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಅತಿಥಿ ಉಪನ್ಯಾಸಕರ ನೇಮಕವಾಗದೆ ಇರುವದರಿಂದ ಪೂರ್ಣಪ್ರಮಾಣದಲ್ಲಿ ತರಗತಿಗಳು ನಡೆಯುತ್ತಿಲ್ಲ , ಆದಷ್ಟೂ ಬೇಗ ಅತಿಥಿ ಉಪನ್ಯಾಸಕರ ನೇಮಕ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.ಬೆಳಿಗ್ಗೆ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಪಟ್ಟಣದ ಆಡಳಿತಸೌಧವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿದರು.ಬಸ್ ನಿಲ್ದಾಣದ ಬಸವೇಶ್ವರ ಸರ್ಕಲ್ ನಲ್ಲಿ ಬರುತ್ತಿದ್ದಂತೆ ಟ್ರಾಫಿಕ್ ಜ್ಯಾಮ್ ಹೆಚ್ಚಾಯಿತು.ಉಪವಿಭಾಗಾಧಿಕಾರಿ ಅವರ ಕಛೇರಿಗೆ ಆಗಮಿಸಿ ಪ್ರತಿಭಟನೆ ಮುಂದುವರೆಸಿದರು. ತಹಶಿಲ್ದಾರ ಅವರಿಗೆಮನವಿ ಸಲ್ಲಿಸಿದ ನಂತರ ಮಾತನಾಡಿದ ವಿದ್ಯಾರ್ಥಿ ಮುಖಂಡ ಬಸವರಾಜ ಹಿರೇಕುರಬರ ‘ಕಳೆದ ಎರಡು ತಿಂಗಳಿಂದ ಸರಿಯಾಗಿ ನಮ್ಮ ತರಗತಿಗಳು ನಡೆಯುತ್ತಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಭೋದನೆ ಮಾಡುತ್ತಿದ್ದರು, ಅವರನ್ನು ಬಿಡುಗಡೆ ಮಾಡಿದ ದಿನದಿಂದ ತರಗತಿಗಳೇ ಸರಿಯಾಗಿ ನಡೆಯುತ್ತಿಲ್ಲ, ನಮ್ಮ ಪರೀಕ್ಷೆಗಳು ಸಮೀಪ ಬರುತ್ತಿದ್ದರಿಂದ ನಮಗೆ ಅನ್ಯಾಯವಾಗುತ್ತಿದೆ, ಆದಷ್ಟು ಬೇಗ ಸರಿಯಾಗಿ ಕ್ಲಾಸ್ ಗಳು ನಡೆಯುವಂತಾಗಬೇಕು ಎಂದು ಆಗ್ರಹಿಸಿದರು.ವೈಷ್ಣವಿ ಮುಜಗೊಂಡ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಬಾನಾ ಮಲ್ಲೇದ ಅವರು ಸಲ್ಲಿಸಿದ್ದ ಇಂಪ್ಯಾಕ್ಟ್ ಆಫ್ ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್(ಜಿ.ಎಸ್.ಟಿ) ಆನ್ ರಿಟೇಲ್ ಸೇಲ್: ಅ ಸ್ಟಡಿ ಆಫ್ ಟೆಕ್ಸಟೈಲ್ ಮಾರ್ಕೆಟ್ ಇನ್ ವಿಜಯಪುರ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ನೀಡಿದೆ.ಶಬಾನಾ ಮಲ್ಲೇದ ಅವರು ಅರ್ಥಶಾಸ್ತ್ರ ವಿಭಾಗದ ಪ್ರೊ. ಆರ್.ವಿ. ಗಂಗಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಬಾನಾ ಮಲ್ಲೇದ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಸ್ಡಿಪಿ 2022-23 ನೇ ಸಾಲಿನ ಸುಮಾರು 1 ಕೋಟಿ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ಮಿಸಿದ ನೂತನ ಸಭಾಂಗಣ ಮತ್ತು ಗ್ರಂಥಾಲಯ ಕಟ್ಟಡ, ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಶರಣಬಸಪ್ಪಗೌಡ ದರ್ಶನಪುರವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು. ಕಾಲೇಜಿನ ಪ್ರಾಯೋಗಿಕ ಕೋಣೆಗಳ ನಿರ್ಮಾಣಕ್ಕೆ, 2023-24 ನೇ ಸಾಲಿನಲ್ಲಿ ಯಾದಗಿರಿ ಜಿಲ್ಲಾ ಪಂಚಾಯತ್ ಇಲಾಖೆ, ಸುಮಾರು 1 ಕೋಟಿ 56 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರಾಯೋಗಿಕ ಕೋಣೆಗಳ ಅಡಿಗಲ್ಲು ಹಾಗೂ ನೂತನ ಸಭಾಂಗಣ ಮತ್ತು ಗ್ರಂಥಾಲಯ ಕಟ್ಟಡದ ಉದ್ಘಾಟನೆಯನ್ನು, 15/09/2025 ರಂದು ಸೋಮವಾರ ನೆರವೇರಿಸುವುದಾಗಿ ತಿಳಿಸಿದರು, ಈಗಾಗಲೇ…
ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ – ಪುಣೆಮೊ:9552002338 ಉದಯರಶ್ಮಿ ದಿನಪತ್ರಿಕೆ ಗದಗ ಜಿಲ್ಲೆಯ ಗಜೇಂದ್ರಗಡ ಪಕ್ಕದ ನಾರಾಯಣಪುರ ಒಂದು ಐತಿಹಾಸಿಕ ಪಟ್ಟಣ. ಕುಮಾರವ್ಯಾಸನ ಸಂಬಂಧಿ ಅಳಿಯ ಚಾಮರಸನ ಹುಟ್ಟು ಊರು. ಅವರಿಬ್ಬರೂ ಸಮಕಾಲೀನರು ಮತ್ತು ಸಾಹಿತಿಕ ಪ್ರತಿಸ್ಪರ್ಧಿಗಳಾಗಿದ್ದರು. ಚಾಮರಸನ ಪ್ರಭುಲಿಂಗ ಲೀಲೆ ಅವತ್ತಿನ ಅತ್ಯಂತ ಶ್ರೇಷ್ಠ ಮಹಾಕಾವ್ಯ. ಇಮ್ಮಡಿ ದೇವರಾಯ ಪ್ರೌಢದೇವರಾಯ ಚಾಮರಸನನ್ನು ಕೆಲ ಕಾಲ ಮಂತ್ರಿಯನ್ನಾಗಿ ಮಾಡಿದನೆಂದು ಇತಿಹಾಸದಲ್ಲಿ ಕೇಳಿ ಬರುತ್ತದೆ.ಚಾಮರಸಸು ಕನ್ನಡದ ಪ್ರಸಿದ್ಧ ಕವಿ. ಇವರು ಪ್ರಭುಲಿಂಗ ಲೀಲೆಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ. ಇಮ್ಮಡಿ ಪ್ರೌಢದೇವರಾಯರ ರಾಜಾಶ್ರಯದಲಿದ್ದರು. ಅನ್ಯಮತ ಕೋಳಾಹಲ (ಈ ರೀತಿ ಬಿರುದಿದ್ದರೂ ಅವನ ಕಾವ್ಯಗಳಲ್ಲಿ ಯಾವುದೇ ಮತೀಯವಾದ ಕಂಡು ಬರುವುದಿಲ್ಲ), ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವರ ಬಿರುದುಗಳು.ಪ್ರಸಿದ್ಧಿನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ಪ್ರಭುಲಿಂಗಲೀಲೆಯ ಕರ್ತೃ. ಲಿಂಗಾಯತ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ಈತನ ಸ್ಥಳ ಗದಗ ಇಲ್ಲವೆ ನಾಗಣಾಪುರ ಎಂದು ಹೇಳಲಾಗಿದೆ.ಕಾವ್ಯಹರಿಹರ ರಾಘವಾಂಕರ ತರುವಾಯ ಐತಿಹಾಸಿಕ…
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಪ್ರವಾಸ ಬೇಕಾ? ಹೌದು ಬೇಕೇ ಬೇಕು. ‘ಕೋಶ ಓದಿ ನೋಡು, ದೇಶ ಸುತ್ತಿ ನೋಡು’ ಅಂತ ಅಷ್ಟಿಲ್ಲದೇ ಹೇಳ್ತಾರಾ? ನಮ್ಮ ದೇಶವನ್ನು ಮೊದಲು ಸುತ್ತಿನೋಡಬೇಕು ನಂತರ ಇತರ ದೇಶಗಳನ್ನು ಸಾಧ್ಯವಾದರೆ ಸುತ್ತಿಬಿಡಬೇಕು. ಆದರೆ.. ಆದರೆ…ಸನ್ಯಾಸಿಗಳು ಎಷ್ಟಾದರೂ ಸುತ್ತಿಕೊಳ್ಳಲಿ, ಸಂಸಾರಿಗಳಿಗೆ ಕುಟುಂಬದ ಕಡೆಗೂ ತುಸು ಗಮನವಿರಲಿ.ಕೆಲವು ಜನರು ಊಟಕ್ಕೆ ಉಪ್ಪಿನಕಾಯಿ ತಿನ್ರಪ್ಪ ಎಂದರೆ, ಉಪ್ಪಿನಕಾಯಿಯನ್ನೇ ಊಟದ ರೀತಿ ತಿಂತಾರೆ.ಪ್ರವಾಸ ಜೀವನದ ಒಂದು ಭಾಗವಾಗಬೇಕೇ ಹೊರತು, ಜೀವನ ಪ್ರವಾಸದ ಒಂದು ಭಾಗವಾಗಬಾರದು.ಕೆಲವರಿಗೆ ಅದೇನೋ ಹುಚ್ಚಪ್ಪ ಒಂದು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡ್ತಾರೆ. ಮನೆ ಇಲ್ಲ ಮಠ ಇಲ್ಲ ಮನೆಯವರ ಯೋಚನೆ ಮೊದಲೇ ಇಲ್ಲ. ಹೊರಗಿನ ಪ್ರಪಂಚ ತಿಳಿಯುವ ಆಸಕ್ತಿ ಅಥವಾ ಒಳಗಿನ ಅಸಮಾಧಾನ ಮರೆಯುವ ಆತುರ ಎರಡೂ ಕಾರಣಗಳಿಂದಲೂ ಮನ ಪ್ರವಾಸದ ಕಡೆ ಎಳೆಯಬಹುದು. ಹೌದು ದೇಹ ಎಲ್ಲಿಗೆ ಬೇಕಾದರೂ ಹೋಗಬಹುದು ರೀ, ಆದರೆ ಮನಸ್ಸು ಕ್ಷಣ ಮಾತ್ರಕ್ಕಾದರೂ ನಮ್ಮವರ, ನಮ್ಮೂರ ಸುತ್ತಿಬರುವುದಾ ಮರೆಯುವುದೇ? ಕೊನೆಗೆ ಸೇರುವ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 17ರ ವರೆಗೆ ಆರು ದಿನಗಳ ಕಾಲ ಪುರುಷರಲ್ಲಿ ಸಂತಾನ ಹೀನತೆ ಮತ್ತು ಪುರುಷರ ವೀರ್ಯದಲ್ಲಿನ ಸಮಸ್ಯೆಗೆ ಉಚಿತ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆ ಶಿಬಿರ ನಡೆಯಲಿದೆ.ಈ ಸಮಸ್ಯೆ ಎದುರಿಸುತ್ತಿರುವ ಪುರುಷರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಮೊಬೈಲ ನಂ. 8073518596 ಕ್ಕೆ ಸಂಪರ್ಕಿಸಬಹುದಾಗಿದೆ, ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಇ.ಸಿ.ಎಚ್ಎಸ್(Ex- Servicemen Contributory Health Scheme) ಮತ್ತು ಇ.ಎಸ್.ಐ.ಸಿ(Employees State Insurance Corporation) ವಿಮೆ ಅಡಿಯಲ್ಲಿ ನಗದು ರಹಿತವಾಗಿ ನಾನಾ ಕಾಯಿಲೆಗಳಿಗೆ ಸೂಪರ್ ಸ್ಪೇಷಾಲಿಟಿ ಚಿಕಿತ್ಸೆ ಸೌಲಭ್ಯ ಪ್ರಾರಂಭವಾಗಿದೆ.ಸೂಪರ್ ಸ್ಪೇಷಾಲಿಟಿ ಚಿಕಿತ್ಸೆಗಳಾದ ಹೃದಯ ರೋಗ, ನರರೋಗ, ಮೂತ್ರಪಿಂಡ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ, ಮೊಳಕಾಲು ಮಂಡಿ, ಸೋಂಟದ ಕೀಲು ಶಸ್ತ್ರಚಿಕಿತ್ಸೆ, ಚಿಕ್ಕ ಮಕ್ಕಳ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಮೇಲಿನ ಎರಡು ಆರೋಗ್ಯ ವಿಮೆ ಸೌಲಭ್ಯಗಳು ಲಭ್ಯವಾಗಿವೆ.ಈ ರೋಗಗಳಿಗೆ ಮೇಲಿನ ಯೋಜನೆಗಳ ಉಚಿತ ಸೌಲಭ್ಯ ಪಡೆಯಲು ಬಯಸುವ ಅರ್ಹ ಫಲಾನುಭವಿಗಳು ಸಂಭಂದಪಟ್ಟ ದಾಖಲಾತಿಗಳನ್ನು ಸಲ್ಲಿಸಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ಆಸ್ಪತ್ರೆಯ ವೈಧ್ಯಕೀಯ ಅಧಿಕ್ಷಕರಾದ ಡಾ. ಆರ್.ಎಂ. ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ. ನಂ. 9591682224 ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಆಟಗಳು ಮಕ್ಕಳ ಶಾರೀರಿಕ ಮಾನಸಿಕ ಆರೋಗ್ಯ ವನ್ನು ಕಾಪಾಡುವಲ್ಲಿ ತುಂಬಾ ಸಹಕಾರಿ. ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ಹೇಳಿದರು.ಜಿಲ್ಲೆಯ ಇಂಡಿ ತಾಲ್ಲೂಕಿನ ಹಡಲಸಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಝಳಕಿ ವೃತ್ತದ ವ್ಯಾಪ್ತಿಯ ವಲಯ ಮಟ್ಟದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳ ಕ್ರೀಡಾ ಆಸಕ್ತಿ ಮೂಡಿಸುವ ಕಾರ್ಯವನ್ನು ಶಾಲಾ ಹಂತದಲ್ಲಿ ಪ್ರೋತ್ಸಾಹ ನೀಡಬೇಕು. ಜೊತೆಗೆ ಆರೋಗ್ಯ ದಿಂದ ಇರಲು ಆಟಗಳು ತುಂಬಾ ಸಹಕಾರಿ ಎಂದರು.ಚಡಚಣ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಸ್ ಎಸ್ ಪಾಟೀಲ ಮಾತನಾಡಿ, ದೇಶಿಯ ಆಟಗಳನ್ನು ಸಂರಕ್ಷಣೆ ಮಾಡಿ ಅವುಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.ಶಿಕ್ಷಣ ಪ್ರೇಮಿ ಸುಭಾಷಚಂದ್ರ ಬಿರಾದಾರ ಮಾತನಾಡಿ, ವಿದ್ಯಾಭ್ಯಾಸ ಜೊತೆಗೆ ಮಕ್ಕಳನ್ನು ಮೋಬೈಲ್ ಗೀಳಿನಿಂದ ಹೊರತರುವ ಶಕ್ತಿ ಆಟಗಳಿಗೆ ಇದೆ ಎಂದರು.ಕ್ರೀಡಾಜ್ಯೋತಿಯನ್ನು ಭೂ ದಾನಿ…
