Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆಲಮೇಲದ ಹೆಮ್ಮೆಯ ಹೈದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಕಮಾಂಡೆಂಟ್ ಆಗಿ ಉತ್ತಮ ಕಾರ್ಯನಿರ್ವಹಣೆಗೆ ಈ ಪುರಸ್ಕಾರ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಪ್ರತಿಭಾವಂತ, ತನ್ನ ವೃತ್ತಿಯ ಮೂಲಕ ಉನ್ನತ ಮಟ್ಟದ ಹೆಸರು ಮಾಡಿರುವ ಶರಣಬಸು ಕೊಳಾರಿ ಅವರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಮುಖ್ಯಮಂತ್ರಿಗಳಿಂದ ಕೊಡಮಾಡುವ ಉತ್ತಮ ಪೊಲೀಸ್ ಅಧಿಕಾರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ಆಲಮೇಲದ ಪ್ರತಿಷ್ಠಿತ ಕೊಳಾರಿ ಮನೆತನದ ಮಹದೇವಪ್ಪ ಕೊಳಾರಿ ಅವರ ಮಗನಾದ ಶರಣಬಸು ಕೊಳಾರಿ ತಮ್ಮ ಕಷ್ಟದ ಜೀವನದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಇಂದು ರಾಜ್ಯದಲ್ಲಿ ಆಲಮೇಲ ತಾಲೂಕಿನ ಹೆಸರು ಬರುವಂತೆ ಮಾಡಿದ್ದಾರೆ.ಆಲಮೇಲ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ದಯಾನಂದ ಕೋಳಾರಿ, ಸ್ನೇಹಿತರಾದ ಆಲಮೇಲ ನಾಗರಿಕ ಸಮೀತಿ ಅಧ್ಯಕ್ಷ ರಮೇಶ ಬಂಟನೂರ್, ಪ್ರಭು ವಾಲಿಕರ, ಸುರೇಶ ಹಳ್ಳೂರ, ರಾಕೇಶ ಬಿರಾದಾರ, ಪಿಎಸ್ಐ, ಸುರೇಂದ್ರಕುಮಾರ ಮದಗುಣಕಿ, ಸಿದ್ರಾಮ ಯಾದವಾಡ, ಕಡಣಿಯ ಸಂತೋಷ ಕತ್ತಿ, ಬಸವರಾಜ ಪಡಶೆಟ್ಟಿ ಅವರು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ನೀರು ಜೀವಜಲ, ಇದು ಅತ್ಯಮೂಲ್ಯ. ನೀರನ್ನು ಮಿತವ್ಯಯವಾಗಿ ಬಳಸುವ ಮೂಲಕ ಜಲ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥ ಸಂಸ್ಥೆಯ ಸಿಂದಗಿ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿ ಹೇಳಿದರು.ತಾಲ್ಲೂಕಿನ ಜಾಲವಾದ ಗ್ರಾಮದ ಹೊಸನಗರದಲ್ಲಿ ಬುಧವಾರ ಮಹಿಳಾ ಸಂಘದ ಸದಸ್ಯರಿಗೆ ನೀರು ಉಳಿಸಿ ಕಾರ್ಯಕ್ರಮದ ಮೂಲಕ ನೀರಿನ ಮಹತ್ವ, ನೀರಿನ ಮಿತವ್ಯಯ ಬಳಕೆ, ಅನಗತ್ಯ ನೀರು ಪೋಲಾಗದಂತೆ ತಡೆಯುವ ಕ್ರಮಗಳು, ಮಕ್ಕಳಲ್ಲಿ ನೀರಿನ ಕುರಿತು ಅರಿವು, ಜಾಗೃತಿ ಮೂಡಿಸುವ ಬಗ್ಗೆ ಮಾತನಾಡಿದರು.ಇದೇ ಸಂದರ್ಭದಲ್ಲಿ ಜಾಲವಾದ ವಲಯದ ಹೊಸನಗರ(ಬಮ್ಮನಜೋಗಿ) ಕಾರ್ಯಕ್ಷೇತ್ರದಲ್ಲಿ ಯುಗಾದಿ ಹಾಗೂ ಈದ್-ಉಲ್-ಫಿತ್ರ ಹಬ್ಬಗಳ ನಿಮಿತ್ತ ಹೊಸದಾಗಿ ರಚನೆಯಾದ ವಿಜಯಲಕ್ಷ್ಮಿ ಸ್ವಸಹಾಯ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ, ನಂತರ ಸಂಘದ ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಮಾಹಿತಿ, ನಿರ್ಣಯ ಪಟ್ಟಿಯನ್ನು ವಿತರಿಸಲಾಯಿತು.ವಲಯ ಮೇಲ್ವಿಚಾರಕ ಬಾಬುರಾವ್ ಗೋಣಿ, ಸೇವಾಪ್ರತಿನಿಧಿಗಳಾದ ಶ್ರೀಗೌರಿ, ಗುರುಬಾಯಿ, ಸಂಘದ ಸದಸ್ಯರು ಹಾಗೂ ಮಕ್ಕಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರ್ಥಕ ಬದುಕಿಗೆ ದೇವರ ದಾಸಿಮಯ್ಯನಂತಹ ಅಸಂಖ್ಯಾತ ಶರಣರ ವಚನಗಳು ದಾರಿ ದೀಪಗಳಾಗಿವೆ ಎಂದು ಬಸವ ಶರಣ ಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಬುಧವಾರ ಜರುಗಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸಾರ್ಥಕ ಹಾಗೂ ಸುಂದರ ಬದುಕು ಕಟ್ಟಿಕೊಳ್ಳಲು ಶರಣರ ವಚನಗಳು, ಸಂತರ ಅಭಂಗಗಳು ಹಾಗೂ ದಾಸರ ಪದಗಳು ನಿದರ್ಶನಗಳಾಗಿವೆ ಎಂದು ಹೇಳುತ್ತಾ, ೧೦ನೇ ಶತಮಾನದ ಆದ್ಯವಚನಕಾರ ದೇವರ ದಾಸಿಮಯ್ಯನ ಜೀವನ, ಸಾಧನೆ, ಅಚಲ ಕಾಯಕ ಹಾಗೂ ವಚನಗಳ ಕುರಿತಾಗಿ ಸುದೀರ್ಘವಾಗಿ ಮಾತನಾಡಿದರು.ತಹಶೀಲ್ದಾರ ಪ್ರಕಾಶ ಸಿಂದಗಿ, ಗ್ರೇಡ್-೨ ತಹಶೀಲ್ದಾರ ಎಸ್.ಎಚ್.ರಾಠೋಡ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ವೀರಣ್ಣ ಮಣೂರ, ಗುಂಡಪ್ಪ ಹಂದಿಗನೂರ, ಯಲ್ಲಾಲಿಂಗ ವಡ್ಡೋಡಗಿ, ಚಂದ್ರಶೇಖರ ಹೊಸಮನಿ, ಕುಮಾರ ವಡ್ಡೋಡಗಿ, ನೀಲಕಂಠ ಮಶಾನವರ, ರವಿ ವಡ್ಡೋಡಗಿ ಇದ್ದರು.
ಹಾವೇರಿ ವಿವಿ ಮೌಲ್ಯಮಾಪನ ಕುಲಸಚಿವೆ ಪ್ರೊ. ರೇಣುಕಾ ಮೇಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಶೋಧನಾ ಲೇಖನಗಳು ಸಮಾಜದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಬೆಳಕಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹಾವೇರಿ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ರೇಣುಕಾ ಮೇಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿರ್ವಹಣಾ ಅಧ್ಯಯನ ವಿಭಾಗದ ವತಿಯಿಂದ ಐ.ಸಿ.ಎಸ್.ಎಸ್.ಆರ್ ಪ್ರಾಯೋಜಿಕತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಹತ್ತು ದಿನಗಳ ಸಮಗ್ರ ಸಾಮಾಜಿಕ ವಿಜ್ಞಾನ ವಿಶ್ಲೇಷಣೆಗಾಗಿ ‘ಸಂಶೋಧನಾ ವಿಧಾನ ತಂತ್ರಗಳು’ ಕುರಿತ ಸಂಶೋಧನಾ ವಿಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ಸಂಶೋಧನೆ ಅತ್ಯಂತ ಪ್ರಮುಖವಾಗಿದೆ. ಉತ್ತಮ ಗುಣಮಟ್ಟದ ಸಂಶೋಧನಾ ಲೇಖನಗಳು ಹೊಸ ತಿಳುವಳಿಕೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಅಂತರಾಷ್ಟ್ರೀಯ ಮಟ್ಟದ ತಜ್ಞರಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗುತ್ತವೆ. ನಿರಂತರ ಅಧ್ಯಯನ ಮತ್ತು ವಿಶ್ಲೇಷಣೆಯ ಮೂಲಕ ಸಂಶೋಧಕರು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸಬಹುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ರಿಸ.ನಂ. ೩೭//ರ ಪೈಕಿ, ೩ ಎಕರೆ ಗಾಯರಾಣಾ ಜಮೀನನ್ನು ಮೌಲಾನಾ ಆಜಾದ ಮಾದರಿ ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರಿಗೆ ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆ ಹೊರಡಿಸಿದ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫ ರ೦೧ ಎಕರೆ ಜಮೀನುಬಬಲೇಶ್ವರ ತಾಲೂಕಿನ ಬಬಲೇಶ್ವರ ಪಟ್ಟಣದ ಸರ್ಕಾರಿ ರಿಸ.ನಂ. ೪೨೫// ರ ೦೧ ಎಕರೆ ಜಮೀನನ್ನು ಪರಿಶಿಷ್ಟ ಜಾತಿಯ ಸಮುದಾಯದ ೧೩ ಜನ ಫಲಾನುಭವಿಗಳಿಗೆ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಹಂಚುವುದಕ್ಕಾಗಿ ಜಮೀನು ಮಂಜೂರಿಸಲು ಉದ್ದೇಶಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಈ ಅಧಿಸೂಚನೆಯ ಮೂವತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.ಕಲಕೇರಿ ಗ್ರಾಮದ ರಿಸ.ನಂ. ೦೧/ರಲ್ಲಿ ೩೮ ಗುಂಟೆ ಗಾಯರಾಣಾ ಜಮೀನು*ತಾಳಿಕೋಟಿ ತಾಲೂಕಿನ ಕಲಕೇರಿ…
ವಿಜಯಪುರ ಜಿಲ್ಲಾಡಳಿತ ವತಿಯಿಂದ ದೇವರ ದಾಸಿಮಯ್ಯ ಜಯಂತಿ ಆಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜನಸಾಮಾನ್ಯರ ಭಾಷೆಯಲ್ಲಿಯೇ ಸರಳವಾಗಿ ಹಾಗೂ ಸುಲಲಿತವಾಗಿ ವಚನಗಳನ್ನು ರಚಿಸಿ, ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡವರು ದೇವರ ದಾಸಿಮಯ್ಯ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಯಕ ನಿಷ್ಠೆ, ಲಿಂಗ ಸಮಾನತೆ ಸೇರಿದಂತೆ ಅನೇಕ ವಿಷಯಗಳನ್ನು ತಮ್ಮ ವಚನಗಳ ಮೂಲಕ ನಮಗೆ ಕೊಡುಗೆ ನೀಡಿದ್ದಾರೆ. ಅವರು ತಿಳಿಸಿಕೊಟ್ಟಿರುವ ಕಾಯಕ ತತ್ವ, ನೈತಿಕ ಮೌಲ್ಯಗಳಂತಹ ಆದರ್ಶ ವಿಚಾರಗಳ ಚಿಂತನೆಗಳ ಅಳವಡಿಸಿಕೊಳ್ಳಬೇಕಾಗಿದೆ. ಲಿಂಗ ಸಮಾನತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಿ, ಸಮಾನತೆಯನ್ನು ಸಾರಿದ ಶರಣ ದೇವರ ದಾಸಿಮಯ್ಯನವರು ಎಂದು ಹೇಳಿದರು.ಡಾ.ಸಂಗಮೇಶ ಮೇತ್ರಿ ಉಪನ್ಯಾಸ ನೀಡಿ, ದಾರ್ಶನಿಕರ ಆದರ್ಶ ವಿಚಾರಗಳಿಗೆ ಪ್ರಾಮುಖ್ಯತೆ ನೀಡಿ ಅವುಗಳನ್ನು ತಮ್ಮ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷರು ಹಾಗೂ ಸಮಾಜಸೇವಕರು ಶ್ರೀಶೈಲಪ್ಪ ಜೋಗೂರ ರವರಿಗೆ ಅವರ , ಶೈಕ್ಷಣಿಕ ,ಸಾಮಾಜಿಕ ಸೇವೆಯನ್ನು ಪರಿಗಣಿಸಿ ಮೈಸೂರಿನ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ( ರಿ.) ಕರ್ನಾಟಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ರವರ ಸಂಯುಕ್ತ ಆಶ್ರಯದಲ್ಲಿ ಜರುಗುವ ಕರ್ನಾಟಕ ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಹಾಗೂ ಉತ್ತಮ ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುತ್ತಿರುವ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯಮಟ್ಟದ ಅತ್ಯುತ್ತಮ ಶಾಲೆ ಎಂದು ಆಯ್ಕೆ ಮಾಡಲಾಗಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಎಪ್ರಿಲ್ 10 ರಂದು ಮೈಸೂರಿನಲ್ಲಿ ಜರುಗುವುದು ಎಂದು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಡಾ.ಜಿ.ಶಿವಣ್ಣ ರವರು ತಿಳಿಸಿರುತ್ತಾರೆ.ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಕಾರ್ಯದರ್ಶಿ ಪ್ರಶಾಂತ ಬಡದಾಳ, ಕೋಶಾಧ್ಯಕ್ಷ ಅರವಿಂದ ಕುಲಕರ್ಣಿ, ಸಹ ಕಾರ್ಯದರ್ಶಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿನ ದಿನಗಳಲ್ಲಿ ಬಸವನಬಾಗೇವಾಡಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ) ಇವರ ಪರವಾಗಿ ಹಾಗೂ ಬಿಜೆಪಿಯ ವಿರುದ್ದವಾಗಿ ಮಾತನಾಡುವ ಸಮಯದಲ್ಲಿ ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವನ್ನು ಬಳಸಿದ್ದರ ಕುರಿತು ವಿಜಯಪುರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ವಿಜಯಪುರ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಜಿ.ಕತ್ನಳ್ಳಿ ಮಾತನಾಡಿ, ಲಕ್ಷ್ಮಿ ಪಾಟೀಲ ಎಂಬುವಳು ಸರಕಾರದ ನಿಷೇಧಿತ ಪದವಾದ ಹಜಾಮ ಎನ್ನುವ ಪದವು ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುವದನ್ನು ನೋಡಿ ನಮ್ಮ ಕೌರಿಕ ಸ್ವಾಭಿಮಾನಿ ಸಮಾಜಕ್ಕೆ ಮುಜುಗರವನ್ನುಂಟು ಮಾಡಿದೆ. ಹಾಗೂ ಕ್ಷೌರಿಕ ವೃತ್ತಿಗೆ ಅವಮಾನಿಸಲಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಡಪದ (ಉತ್ನಾಳ) ಮಾತನಾಡಿ, ಹಡಪದ ಅಪ್ಪಣ್ಣ ಸಮಾಜದ ಕುರಿತು ಲಕ್ಷ್ಮಿ ಪಾಟೀಲ ಎಂಬುವಳು ಮಾತನಾಡಿದ ನಿಷೇಧಿತ ಪದದಿಂದ ಹಡಪದ ಸಮಾಜಕ್ಕೆ ತೀವ್ರ ತರಹದ ನೋವುಂಟಾಗಿದೆ. ಕಾರಣ ಕೂಡಲೇ ಲಕ್ಷ್ಮಿ ಪಾಟೀಲ ಇವರನ್ನು ಬಂಧಿಸಿ ಇವರ ಮೇಲೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ರಂಗಭೂಮಿಯಲ್ಲಿ ಜಾನಪದ ಕಲೆಗೆ ಶ್ರೇಷ್ಠ ಸ್ಥಾನವಿದೆ. ಸಣ್ಣಾಟ, ದೊಡ್ಡಾಟ, ಯಕ್ಷಗಾನ ಎಂಬ ಆಟಗಳು ಜಾನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿವೆ ಎಂದು ಕತಕನಹಳ್ಳಿ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮಠದ ಶಿವಯ್ಯ ಸ್ವಾಮೀಜಿ ಹೇಳಿದರುಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ “ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ ” ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಕಲೆ ನಮ್ಮ ಬದುಕಿನ ಭಾಗವಾಗಿದೆ. ನಮ್ಮ ಸಂಸಾರದ ಗುಟ್ಟು ಜಾನಪದ ಕಲೆಯಲ್ಲಿ ಅಡಗಿದೆ. ಅದಕ್ಕಾಗಿ ಜಾನಪದ ಕಲೆ ಮತ್ತು ಸಾಹಿತ್ಯವನ್ನು ಬೆಳೆಸಬೇಕು ಎಂದು ಕರೆ ನೀಡಿದರು.ಕರ್ಣಾಟಕ ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸೂಯಾ ವಡ್ಡರ ಮಾತನಾಡಿ ಜಾನಪದ ಕಲಾವಿದರು ಕಲೆಯನ್ನು ಬೆಳೆಸುತ್ತಾ ಬಡತನದಲ್ಲಿ ಬದುಕು ಕಳೆಯುತ್ತಿದ್ದಾರೆ. ಸರಕಾರ ಮತ್ತು ಸಮಾಜದವರು ಕಲಾವಿದರಿಗೆ ಸಹಾಯ ಮಾಡಬೇಕು ಎಂದರು.ಬಬಲೇಶ್ವರದ ವೆಂಕಟೇಶ್ವರ ಪಾರಿಜಾತ ತಂಡದ ಮುಖ್ಯಸ್ಥೆ ಅಂಜಲಿ ಪವಾರ ಹಾಗೂ ತಂಡದ ಕಲಾವಿದರಿಂದ ಇಡಿ ರಾತ್ರಿ ಪಾರಿಜಾತ ಪ್ರದರ್ಶನ ನಡೆಯಿತು.
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಗದ್ದೆಯ ಬದುವಿನಲ್ಲಿ ತೋಟದ ಕಡೆಗೆ ನಾನು ಮತ್ತು ನನ್ನ ತಮ್ಮ ಸಂದೇಶ್ ತೋಟದ ಕಡೆಗೆ ಸಾಗುತ್ತಿದ್ದೆವು. ಸ್ವಲ್ಪ ದೂರ ಬದುವಿನಲ್ಲಿ ಸಾಗಿದ್ದೆವಷ್ಟೇ, ತಮ್ಮ ಸಂದೇಶ್ ಅಲ್ಲೇ ನಿಂತು ಅಣ್ಣಾ ನಿನಗೆ ಚೆಂಡು ಬೇಕೇ ಎಂದು ಕೇಳಿದ. ಆಗ ನಾನು ಈ ಗದ್ದೆಯ ಬದುವಿನಲ್ಲಿ ಅದ್ಯಾವ ಬಾಲ್ ಎಂದು ಕೇಳುತ್ತಿದ್ದಂತೆಯೇ ತಮ್ಮ ಅಲ್ಲಿದ್ದ ಚೆಂಡನ್ನು ಎತ್ತಿಕೊಂಡು ಬಿಟ್ಟಿದ್ದ. ಆಗ ಜೊತೆಗಿದ್ದ ನನ್ನಪ್ಪ ಅದು ಬಾಲ್ ಅಲ್ಲಪ್ಪಾ, ಅದು ಒಂದು ಹುಳ. ಆದರೆ ಆ ಹುಳ ಚೆಂಡಿನಂತೆಯೇ ಇದೆ ಎಂದು ಅವರೂ ಅದನ್ನು ಕೈಯಿಂದ ಎತ್ತಿಕೊಂಡು ತೋರಿಸಿದರು.ಹತ್ತಿರ ಹೋಗಿ ನೋಡಿದೆ, ಹೌದು, ಕಪ್ಪು ಬಣ್ಣದ ಚೆಂಡಿಗೆ ಅಲ್ಲಲ್ಲಿ ಬಿಳಿ ಬಣ್ಣವನ್ನು ಹಚ್ಚಿದ ಅಂದದ ಚೆಂಡಿನಂತೆ ಇತ್ತು. ಅದುವರೆಗೆ ತೋಟವನ್ನು ತಲುಪುವ ಧಾವಂತದಲ್ಲಿದ್ದ ನಮ್ಮೆಲ್ಲರ ಚಿತ್ತ ಒಮ್ಮಿಂದೊಮ್ಮೆಲೇ ಚೆಂಡು ಹುಳುವಿನ ಕಡೆಗೆ ತಿರುಗಿತು. ಚೆಂಡನ್ನು ಅಲ್ಲೇ ಬಿಟ್ಟು ಮುಂದಡಿ…
