Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮೋಬೈಲ್ ಬಿಡಿ; ಪುಸ್ತಕ ಹಿಡಿ..
ವಿಶೇಷ ಲೇಖನ

ಮೋಬೈಲ್ ಬಿಡಿ; ಪುಸ್ತಕ ಹಿಡಿ..

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಶ್ರೇಷ್ಠ ವಿಜ್ಞಾನಿ ಡಾ. ಎ.ಪಿ.ಜೆ. ಕಲಾಂ ಅವರು “ನೀವು ನಿಮ್ಮ ಭವಿಷ್ಯವನ್ನು ಬದಲಿಸಲಾರಿರಿ. ನಿಮ್ಮ ಹವ್ಯಾಸವನ್ನು ಬದಲಿಸಿದರೆ, ನೀವು ಖಂಡಿತವಾಗಿಯೂ ನಿಮ್ಮ ಒಳ್ಳೆಯ ಹವ್ಯಾಸಗಳು ಭವಿಷ್ಯತ್ತಿನ ದಿಕ್ಕನ್ನೇ ಬದಲಿಸಬಲ್ಲವು” ಎಂದು ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ವಿಚಾರ, ಆಲೋಚನೆ, ಒಳ್ಳೆಯ ಹವ್ಯಾಸ ಮತ್ತು ಒಳ್ಳೆಯ ಕಾರ್ಯ ಮಾಡುತ್ತಾ ಸಾಗಿದರೆ ನಮ್ಮ ಭವಿಷ್ಯವು ಕೂಡ ನಮ್ಮ ಆಲೋಚನೆಯಂತೆ ನಿರ್ಮಾಣಗೊಳ್ಳಲಿದೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಮೋಬೈಲ್ ಬಳಕೆಯನ್ನು ತಗ್ಗಿಸಿ, ಪುಸ್ತಕದತ್ತ ಆಸಕ್ತಿ ಹೊರಳಿಸಬೇಕಾಗಿದೆ. ಮನೆಯಲ್ಲಿ ಪೋಷಕರು ಮಕ್ಕಳು ಓದುವ ಸಮಯದಲ್ಲಿ ಮೋಬೈಲ್ ಬಳಸದಂತೆ ಮತ್ತು ಮಕ್ಕಳಿಗೆ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ತಮ್ಮ ಮಕ್ಕಳನ್ನು ಮೋಬೈಲ್ ಎಂಬ ಮಾಯೆಯಿಂದ ದೂರವಿರಿಸುವುದು ಪೋಷಕರಿಗೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಕೂಡಿಕೊಂಡು ಮೋಬೈಲ್ ಬದಲಿಗೆ ಪುಸ್ತಕವನ್ನು ಓದುವ ಸಂಸ್ಕೃತಿಯನ್ನು ಬೆಳೆಸಿದರೆ ಇತ್ತ ವಿದ್ಯಾರ್ಥಿಗಳ ಗಮನ ವಿಷಯದ ಮೇಲೆ ಕೇಂದ್ರಕರೀಸುತ್ತದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೋಬೈಲ್ ಮೇಲಿನ ವ್ಯಾಮೋಹ ಅವರಲ್ಲಿನ ಸೃಜನಶೀಲತೆಗೆ ದೊಡ್ಡ ಸವಾಲಾಗಿದೆ. ಶಾಲೆ-ಕಾಲೇಜುಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕಿಂಚಿತ್ತೂ ಭಾಗವಹಿಸದೇ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವೇ ಇಲ್ಲದಂತಾಗಿದೆ. ಮನೆಗೆ ಬಂದ ಕೂಡಲೇ ಪೋಷಕರ ಮೋಬೈಲ್ ಫೋನನೊಂದಿಗೆ ಹಿಡಿಯುವ ಮಕ್ಕಳು ರೀಲ್ಸ್, ಯೂಟ್ಯೂಬ್, ಗೇಮ್, ಸಿನಿಮಾಗಳಲ್ಲಿ ಮುಳುಗುತ್ತಾರೆ.
ಇಂದು ಮಕ್ಕಳಲ್ಲಿ ಮೋಬೈಲ್ ಚಟ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೋಬೈಲ್ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ. ಅದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅಗಾಧವಾದ ಪರಿಣಾಮವನ್ನುಂಟು ಮಾಡುತ್ತಿದೆ. ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಫೋನನಲ್ಲಿಯೇ ಹೆಚ್ಚು ಕಳೆಯುತ್ತಿರುವದರಿಂದ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಒಮದು ಮೋಬೈಲ್ ದೂರವಾದಾಗ ಅಥವಾ ಬಳಕೆಯನ್ನು ನಿಷೇಧಿಸಿದಾಗ ಮಕ್ಕಳಲ್ಲಿ ಕೋಪ, ಆವೇಶ, ಮಾನಸಿಕ ಕಿರಿಕಿರಿಗೆ ಒಳಗಾಗುತ್ತಾರೆ. ಮಧ್ಯರಾತ್ರಿಯವರೆಗೂ ಮೋಬೈಲ್ ನಲ್ಲಿಯೆಏ ತೊಡಗುವುದರಿಂದ ಆರೋಗ್ಯವಂತ ವ್ಯಕ್ತಿಗೆ ಬೇಕಾದ ಕನಿಷ್ಠ ೮ ಗಂಟೆಗಳ ನಿದ್ರೆಯನ್ನು ಸಹ ಮಾಡದೇ ಮಾನಸಿಕ ಖಿನ್ನತೆ ಮತ್ತು ನಿದ್ರಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.


೨೦೧೯ ರ ಕೋವಿಡ್ ಕಾಲಘಟ್ಟಕ್ಕಿಂತ ಪೂರ್ವದಲ್ಲಿ ಮಕ್ಕಳು ಪಠ್ಯ-ಪಠ್ಯೇತರ ಹಾಗೂ ಇನ್ನಿತರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಆನಲೈನ್ ಮುಖಾಂತರ ಶಿಕ್ಷಣ ಆರಂಭಗೊಂಡಿತೋ ಅಂದಿನಿಂದ ಮೋಬೈಲ್ ಎಂಬುದು ಕಲಿಕೆಯ ಸಾಧನಗಳಲ್ಲೊಂದು ಅನಿವಾರ್ಯ ಎನ್ನುವಂತಾಯಿತು. ಅಧ್ಯಯನಕ್ಕೆ ಕಿಂಚಿತ್ತೂ ಸಮಯ ಮೀಸಲಿಡದೇ ೨೪ ತಾಸಿನಲ್ಲಿ ಕನಿಷ್ಠ ೧೬ ಗಂಟೆಗಳ ಕಾಲವನ್ನು ವೃಥಾ ಮೋಬೈಲ್‌ನಲ್ಲಿಯೇ ಕಳೆಯುವುದರಿಂದ ಶೈಕ್ಷಣಿಕ ಕಾರ್ಯಕ್ಷಮತೆ ಕುಗ್ರಿ ಹೋಗುತ್ತಿದೆ. ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರೊಂದಿಗೆ ಬೆರೆತು, ಕುಶಲೋಪರಿ ಮತ್ತು ಅನು-ತನು ವಿನಿಮಯ ಮಾಡಿಕೊಳ್ಳಲು ಸಮಯವಿಲ್ಲದೇ ಜೀವನದಲ್ಲಿ ಶಾಂತಿ, ನೆಮ್ಮದಿ ಮತ್ತು ಸಂತೋಷ ಮಾಯವಾಗುತ್ತಿರುವುದು ತೀರಾ ಕಳವಳಕಾರಿ ಸಂಗತಿ. ಕಳೆದ ನಾಲ್ಕೈದು ತಿಂಗಳ ಹಿಂದೆ ವ್ಯಾಟ್ಸಾಪ್ ಗ್ರೂಪ್ ಹರಿದಾಡಿದ ಒಂದು ವಿಡಿಯೋ ದೃಶ್ಯದಲ್ಲಿ ೮ ವರ್ಷ ಬಾಲಕ ತಾಯಿ ಮೋಬೈಲ್ ಕಸಿದುಕೊಂಡು ಹೋಮ್ ವರ್ಕ ಮಾಡಲು ಸಲಹೆ ನೀಡಿ, ತಾನು ಬಳಸುತ್ತಿದ್ದಾಗ ಪ್ರಚೋದಿತ ನಾದ ಆ ಬಾಲಕ ಕೋಪದಲ್ಲಿ ತನ್ನ ತಾಯಿಯನ್ನು ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಸಾಯಿಸಿದ ಕರಾಳ ಸನ್ನಿವೇಶ ಇಡೀ ಜಗತ್ತೇ ಕಂಡಿದೆ.
ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಮೋಬೈಲ್ ಅನ್ನೋ ‘ಮಾಯಾವಿ’ ಯ ನಶೆ ಇಳಿಸಲು ಅಥವಾ ದೂರವಿರಿಸಲು ಇರುವ ಸುಲಭ ಮಾರ್ಗ ಅಥವಾ ಸಲಹೆಗಳು ಹೀಗಿವೆ.
ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ ಮಕ್ಕಳು ಮನೆಯಿಂದಲೇ ಸಂಸ್ಕೃತಿ-ಸಂಸ್ಕಾರ, ಸನ್ನಡತೆ ಮತ್ತು ಸದಾಚಾರದಂತಹ ಗುಣಗಳನ್ನು ಕಲಿಯುವುದರಿಂದ ಮೊದಲು ತಂದೆ-ತಾಯಿ ಅಥವಾ ಪೋಷಕರು ತಾವು ಮೋಬೈಲ್ ಬಳಕೆ ಕಡಿಮೆ ಮಾಡಬೇಕು. ಆದಷ್ಟು ಮಕ್ಕಳ ಓದುವ ಸಮಯದಲ್ಲಾದರೂ ಮೋಬೈಲ್ ಉಪಯೋಗಿಸಕೂಡದು, ಇಂದಿನ ಮಕ್ಕಳು ಪಾಠ ಹೇಳುವುದರಿಂದ ಕೇಳುವುದಿಲ್ಲ. ಹೊರತು ನೋಡಿ, ಅನುಕರಣೆ ಮಾಡಿ ಕಲಿಯುತ್ತಾರೆ. ಅದಕ್ಕಾಗಿ ಮೋಬೈಲ್ ಬಳಕೆ ಎಂಬುದು ಮನೆಯಿಂದಲೇ ಮಿತಗೊಳಿಸಬೇಕು.
ಮಕ್ಕಳು ಕ್ರೀಡೆ, ದೈಹಿಕ ಚಟುವಟಿಕೆಗಳು, ಚಿತ್ರಕಲೆ, ನೃತ್ಯ, ಸಂಗೀತದಂತಹ ಕಲೆಯನ್ನು ಒಡಮೂಡಿಸುವ ಚಟುವಟಿಕೆಗಳಲ್ಲಿ ಮತ್ತು ಒಳ್ಳೆಯ ಹವ್ಯಾಸಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು.
ಮಕ್ಕಳು ಮೋಬೈಲ್ ಬಳಕೆಯಿಂದ ಹೊರ ಬರುವುದು ತೀರಾ ಕಷ್ಟ ಸಾಧ್ಯವೆಂದರೆ ಚಟವನ್ನು ಬಿಡಿಸಲು ಮನೋವೈದ್ಯರನ್ನು ಕಂಡು ಸೂಕ್ತ ಆರೋಗ್ಯ ಸಲಹೆ ಪಡೆದು ಮಕ್ಕಳನ್ನು ಮೋಬೈಲ್ ಎಂಬ ಫೋಬಿಯಾ ಮಾಯೆಯಿಂದ ಹೊರ ತರಬಹುದು.
ಮಕ್ಕಳು ಮನೆಯಲ್ಲಿನ ಸದಸ್ಯರನ್ನು ನೋಡಿ ಅನುಕರಣೆ ಮಾಡುವ ಕಾರಣ, ನಾವು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಂಡರೆ ಅವರು ಕೂಡ ಅದನ್ನೇ ಫಾಲೋ ಮಾಡುತ್ತಾರೆ. ಹೀಗೆ ಮನೆಯನ್ನು ಡಿಜಿಟಲ್ ಮುಕ್ತ ವಲಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕು.
ಕೊನೆಯ ನುಡಿ: ಆಗ ನಾವು ಸಣ್ಣವರಿದ್ದಾಗ ನಮ್ಮ ಅಜ್ಜ-ಅಜ್ಜಿ ಅಥವಾ ತಾಯಿ ಭೂಮಿ, ಆಕಾಶ, ನಕ್ಷತ್ರ, ಚಂದ್ರ, ಗುಬ್ಬಿ-ಕಾಗೆ ಮತ್ತು ಸುತ್ತಮುತ್ತಲಿನ ಪರಿಸರದ ಸನ್ನಿವೇಶಗಳನ್ನು ಕಣ್ಮುಂದೆ ತಂದು ಅಥವಾ ಲಾಲಿ ಹಾಡಿ ನಮಗೆ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ಒತ್ತಡಮಯ ಮತ್ತು ಸಂಘರ್ಷಮಯ ಬದುಕಿನಲ್ಲಿ ಯಾವ ಪಾಲಕರಿಗೂ ಅವರ ಮಕ್ಕಳನ್ನು ಸುಧಾರಿಸುವ ಸಹನೆ, ಸಮಯ ಎರಡೂ ಇಲ್ಲ. ತಮ್ಮ ಮಕ್ಕಳು ಅತ್ತರೆ ಸಾಕು ಆ ಮಗುವಿನ ಕೈಯಲ್ಲಿ ಮೋಬೈಲ್ ಕೊಟ್ಟು ಅದರಲ್ಲಿ ರೀಲ್ಸ್, ಕಾರ್ಟೂನ ಅಥವಾ ಮತ್ಯಾವುದೇ ಚಿಕ್ಕ ಮಕ್ಕಳಿಗೆ ಮನರಂಜನೆ ನೀಡುವ ವಿಡಿಯೋಗಳನ್ನು ಹಚ್ಚಿ ಅವರನ್ನು ಒಂದೆಡೆ ಕೂರಿಸಿ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಮಕ್ಕಳಿಗೆ ಆಟಿಕೆ ಸಾಮಾನುಗಳು, ಅಪ್ಪ-ಅಮ್ಮ ಮತ್ತು ಇನ್ನಿತರ ವಸ್ತುಗಳು ಬೇಕು ಎನ್ನುವದಕ್ಕಿಂತ ಬೋಬೈಲ್ ಬೇಕು ಎಂಬ ಭಾವನೆ ಮೂಡುತ್ತಿದೆ. ಇಂದು ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೋಬೈಲ್ ಗೀಳು ಬಿಡಿಸಲು ಪುಸ್ತಕ ಓದುವ ಹವ್ಯಾಸವನ್ನು ಒಡಮೂಡಿಸಬೇಕು. ಇದಕ್ಕೆಲ್ಲ ಒಂದೇ ಪರಿಹಾರ ಅದುವೇ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು.
ಆದ್ದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಪಾಲಕರು, ಪೋಷಕರು ಮತ್ತು ಶಿಕ್ಚಕರು ಪ್ರೇರಣೆ ನೀಡಬೇಕು ಮತ್ತು ಓದುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಿಸಬೇಕು. ಮಕ್ಕಳು ಇಷ್ಟಪಡುವ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಬೇಕು. ಮನೆಯಲ್ಲಿ ಮತ್ತು ಶಾಲೆಯಲ್ಲಿ ಕಲಿಕಾ ಪರಿಸರ ಮತ್ತು ಓದಿನ ವಾತಾವರಣವನ್ನು ನಿರ್ಮಿಸಬೇಕು. ಮಕ್ಕಳ ಹುಟ್ಟುಹಬ್ಬ ಅಥವಾ ಜನ್ಮದಿನ ಅಥವಾ ಯಾವುದೇ ವಿಶೇಷ ಸಂದರ್ಭ್ದದಲ್ಲಿ ದುಬಾರಿ ಉಡುಗೊರೆ ನೀಡದೇ ವ್ಯಕ್ತಿತ್ವ ವಿಕಸನ ಮತ್ತು ಸಾಧಕರ ಜೀವನ ಚರಿತ್ರೆಯ ಪುಸ್ತಕಗಳನ್ನು ಉಡುಗೊರೆಯಾಗಿ ನೀಡವಂತಾಗಬೇಕು. ಪ್ರತಿ ಹಳ್ಳಿಯಲ್ಲಿ ಸರ್ಕಾರ ನಡೆಸುವ ಗ್ರಂಥಾಲಯಗಳಿಗೆ ಹೋಗಿ ಮಕ್ಕಳು ವೃತ್ತಪತ್ರಿಕೆ, ಪ್ರಚಲಿತ ವಿದ್ಯಮಾನ, ಸಣ್ಣ ಕಥೆಗಳು, ಯಶಸ್ವಿ ಹೊಂದಲು ಪ್ರೇರೇಪಿಸಬಹುದಾದ ಪುಸ್ತಕಗಳನ್ನು ಓದುವಂತೆ ಮನವೊಲಿಸಬೇಕು ಅಂದಾಗ ಮಾತ್ರ ಮಕ್ಕಳು ಮೋಬೈಲ್ ಮಾಯಾವಿ ಬೆನ್ನು ಬಿಟ್ಟು ಪುಸ್ತಕವನ್ನು ಹಿಡಿದು ಯಶಸ್ವಿ ಹೊಂದಲು ಸಾಧ್ಯವೆನ್ನುವುದು ನನ್ನ ಅಂಬೋಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.