ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಷಯ ಶಿಕ್ಷಕರ ಕೊರತೆಯಿಂದ ಅನುದಾನಿತ ಶಾಲೆಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದಿರುತ್ತದೆ ಎಂದು ಜಿಲ್ಲಾ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಎಸ್.ಬಿ. ಹಿರೇಕುರಬರ ತಿಳಿಸಿದ್ದಾರೆ.
ಇದನ್ನು ಮನಗೊಂಡು ನಿರ್ದೇಶಕರು ಬೆಂಗಳೂರು ಇವರು ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು. ಸರಕಾರವು ದಿನಾಂಕ : ೩೧-೧೨-೨೦೧೫ ರಿಂದ ೩೧-೧೨-೨೦೨೦ ರವರೆಗೆ ಖಾಲಿ ಇರುವ ಹುದ್ದೆ ತುಂಬಿಕೊಳ್ಳಲು ಅನುಮತಿ ನೀಡಿದ್ದರು. ಒಂದು ವರ್ಷದಿಂದ ಇನ್ನು ಗೊಂದಲದಲ್ಲಿ ಇರುತ್ತದೆ. ಇದಕ್ಕೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರುಗಳು, ಕೂಡಲೇ ಅನುದಾನಿತ ಶಾಲೆಗಳ ಮೇಲೆ ನೀಡುತ್ತಿರುವ ಮಾನದಂಡಗಳನ್ನು ಕೂಡಲೇ ಹಿಂಪಡೆಯಬೇಕು. ಹಿಂಪಡೆಯದೇ ಹೋದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಯ ವಿಜಯಪುರ ಜಿಲ್ಲಾ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಅನುದಾನಿತ ಮಹಾ ಮಂಡಳ ವತಿಯಿಂದ ಬೀದಿಗಿಳಿದು ಹೋರಾಟ ಮಾಡಲಾಗುವದು ಎಂದು ಮಹಾ ಮಂಡಳ ಅಧ್ಯಕ್ಷರಾದ ಬಿ.ಎಸ್. ಪಾಟೀಲ, ನಿರ್ದೆಶಕರಾದ ಆರ್.ಎಸ್. ತುಂಗಳ, ಆರ್.ಬಿ. ಜಾಧವ, ಮೋಹನ ಜಾಧವ, ಸಳ್ಳಗಿ, ಬಿರಾದಾರ, ವಿಜಯಪುರ ಜಿಲ್ಲಾ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಎಸ್.ಬಿ. ಹಿರೇಕುರಬರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.