Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಡ ಜನರಿಗೆ ಪೂರೈಸಿದ ಅನ್ನಭಾಗ್ಯ ಅಕ್ಕಿಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 40890 ರೂಪಾಯಿ ಮೌಲ್ಯದ 28 ಅಕ್ಕಿ ತುಂಬಿದ ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಡಿಮೆ ದರದಲ್ಲಿ ಅಕ್ಕಿ ಖರೀದಿಸಿ, ಅವುಗಳನ್ನು ಒಂದೆಡೆ ಸಂಗ್ರಹಿಸಿ ತದನಂತರ ಬಹಳಷ್ಟು ಚೀಲ ತುಂಬಿದ ಮೇಲೆ ಬೇರೆ ಕಡೆಗೆ ಸಾಗಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಸೂಮ್ ಸಲೀಂ ಅರಬ್, ಹಾಗೂ ಸದ್ದಾಂ ಮತಾಬ್ ಬಾಗವಾನ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಗೂ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಇದ್ದರು
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಿರಂತರ ಮೂವತ್ತು ವರ್ಷದ ಹೋರಾಟದ ಪ್ರತಿಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆಲ, ಜಲ, ಮೀಸಲಾತಿಯನ್ನು ಪ್ರತಿಯೊಂದು ದಲಿತರಿಗೆ ನ್ಯಾಯ ಬದ್ದವಾಗಿ ಮೀಸಲಾತಿ ಸಿಗಬೇಕು ಎಂಬ ಸದ್ದುದೇಶದಿಂದ ಪರಿಶೀಷ್ಠ ಜಾತಿಯ ಸಮಗ್ರ ಸಮೀಕ್ಷೆ ಪ್ರಾರಂಭಿಸಲಾಗಿದೆ ದಲಿತ ಮುಖಂಡ ರಾಜಶೇಖರ ಕೂಚಬಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಿಗೆ ಮೀಸಲಾತಿಯಿದ್ದರು ಸಹಿತ ಸಂಪೂರ್ಣ ಲಾಭವನ್ನು ಕೆಲವು ಜಾತಿಗಳು ಅದರ ಸದುಪಯೋಗ ಪಡೆದುಕೊಳ್ಳುತ್ತಿರುವುದನ್ನು ನೋಡಿದ ಹೋರಾಟಗಾರರು ಕಳೆದ ೩೦ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದ್ದರಿಂದ ಎಲ್ಲ ಪರಿಶಿಷ್ಟ ಸಮುದಾಯಗಳು ಮನೆ ಬಾಗಿಲಿಗೆ ಬರುವ ಸಮೀಕ್ಷಾದಾರರಿಗೆ ಸಹಕಾರ ನೀಡಿ ಸಂಪೂರ್ಣವಾದ ಮಾಹಿತಿ ಒದಗಿಸಬೇಕು. ಹಾಗೂ ಮುಖ್ಯವಾಗಿ ನಮೂದಿಸ ಬೇಕಾಗಿರುವುದು ಜಾತಿ ಖಾಲಂ. ನನ್ನ ಕುಲ ಬಾಂದವರು ಅವರು ನೀಡುವ ಖಾಲಂ ನಂಬರ ೪೪.೧, ೪೪.೨, ೪೪.೩.( ಹೋಲೆಯ, ಹೋಲೆರ, ಹೊಲೇಯ) ಮೂರು ಸಮನಾರ್ಥಕ ಪದಗಳು ಸೂಚಿಸುತ್ತದೆ. ನಿಮ್ಮ ಜಾತಿ ಪ್ರಮಾಣ ಪತ್ರದಂತೆ ನಮೂದು ಮಾಡಿಸಬೇಕಾಗಿದೆ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಖದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಶ್ರೀ ಉಜ್ಜಯಿನಿ ಮಹಾಪೀಠ ಇವರ ದಿವ್ಯ ಸಾನಿಧ್ಯದಲ್ಲಿ ಇತ್ತೀಚಗೆ ಹಮ್ಮಿಕೊಂಡ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ತೈಲಾಭಿಷೇಕ, ಸದ್ಧರ್ಮ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದಿಂದ ಕೊಡಮಾಡುವ ಸದ್ಧರ್ಮ ಶಿರೋಮಣಿ ಪ್ರಶಸ್ತಿಯನ್ನು ಸಿಂದಗಿ ಸಾರಂಗಮಠದ ಪೀಠಾಧಿಪತಿ, ಗುರುಕುಲ ಭಾಸ್ಕರ್, ಪಂಚಾಚಾರ್ಯಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಅಲ್ಲಿ ಸಮ್ಮೇಳನಗೊಂಡ ಶಿವಾಚಾರ್ಯರ ಸಮ್ಮುಖದಲ್ಲಿ ಉಜ್ಜಯಿನಿ ಜಗದ್ಗುರು ಮಹಾಸನ್ನಿಧಿಯವರು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.ಈ ವೇಳೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕAಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು ಸೇರಿದಂತೆ ಹರಗುರು ಚರಮೂರ್ತಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ರವರು ನಾಳೆ ದಿ. ೭ ಬುಧವಾರ ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ.ಅಂದು ಬೆ. ೧೧ಗಂ. ಧನ್ಯಾಳ ಗ್ರಾಮದ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಗೊಳಿಸಲಿದ್ದಾರೆ. ನಂತರ ಸಂ. ೪ಗಂ. ನಿಡೋಣಿಯಲ್ಲಿ ನಿಡೋಣಿ ಮತ್ತು ಕಾಖಂಡಕಿ ಸುತ್ತಲಿನ ಎತ್ತರದ ಪ್ರದೇಶಕ್ಕೆ ನೀರೋದಗಿಸುವ ೫ಎ ಮತ್ತು ೫ಬಿ ಲಿಫ್ಟ್ ಏತನೀರಾವರಿ ಮತ್ತು ೧೫ ನೇ ವಿತರಣಾ ಕಾಲುವೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣ | ಸಿಬಿಐ ವಿಶೇಷ ಕೋರ್ಟ್ ತೀರ್ಪು | ಗಂಗಾವತಿ ಶಾಸಕರಾಗಿದ್ದ ಜನಾರ್ದನ ರೆಡ್ಡಿ ಹೈದರಾಬಾದ್: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಒಎಂಸಿ ಕಂಪನಿ ಮಾಲೀಕ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.ಏಳು ವರ್ಷ ಜೈಲು ಶಿಕ್ಷೆಗೆ…
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಪೊಲೀಸರು ನಗರದ ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಅವರನ್ನು 1 ಲಕ್ಷ ರೂ. ಲಂಚದೊಂದಿಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಉದ್ಯಮಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರ ಹೆಸರನ್ನು ಕೈಬಿಡಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಆವಲಹಳ್ಳಿ ನಿವಾಸಿ ಕೇಶವಮೂರ್ತಿ ಎಂಬುವವರು ಫೆಬ್ರವರಿ 2025ರಲ್ಲಿ ಕೆಂಪೇಗೌಡ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕೈಬಿಡಲು ಆರೋಪಿ ಪೊಲೀಸ್ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ 6 ಲಕ್ಷ ರೂ. ಲಂಚವನ್ನು ಕೊಡಲು ಸಾಧ್ಯವಾಗದೆ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ್ದರು. ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದ ನಂತರ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ಅದರಂತೆ ಇನ್ಸ್ಪೆಕ್ಟರ್ ಶಿವಾಜಿ ರಾವ್ ಮತ್ತು ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಇಬ್ಬರನ್ನೂ 1 ಲಕ್ಷ ರೂ. ಲಂಚದೊಂದಿಗೆ ಬಂಧಿಸಿದ್ದಾರೆ.ಕೆಂಪೇಗೌಡ ನಗರದ ಉದ್ಯಮಿ ಉತ್ತಮ್ ಚಂದ್ ಮಾರು ಎಂಬುವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರೊ.ಅನಿಲ ಆರ್. ಪಾಟೀಲ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಸಾಯನಿಕ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅನಿಲ್ ಆರ್. ಪಾಟೀಲ ಅವರು ಪ್ರೊ. ಲೋಕೇಶ್ ಎ.ಶಾಸ್ತ್ರಿ ಮಾರ್ಗದರ್ಶನದಲ್ಲಿ “ಡಿಸೈನ್ ಸಿಂಥೆಸಿಸ್ ಆಂಡ ಕ್ಯಾರಕ್ಟರೈಸೇಶನ್ ಆಫ್ ಕೋಮರಿನ್ ಸಿ 4 ಅರೋಮ್ಯಾಟಿಕ್ ಅಜಾ ಕಾಂಪೌಂಡ್ಸ್ ಅಂಡ್ ಇಟ್ಸ್ ಫೋಟೋಫಿಸಿಕಲ್ ಸ್ಟಡಿಸ್”(Design , Synthesis and Characterisation of Coumarin C4-Aromatic Aza Compounds and its Photophysical Studies) ಎಂಬ ವಿಷಯದ ಸಂಶೋಧನೆ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.ಡಾ. ಅನಿಲ್ ಪಾಟೀಲ ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್.ಎಂ.ಮಿರ್ದೆ, ಉಪ ಪ್ರಾಚಾರ್ಯ ಡಾ.ಅನೀಲ ಬಿ. ನಾಯಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬಾಗಲಕೋಟೆ ಜಿಲ್ಲೆ ಸಮಗ್ರ ಅಭಿವೃದ್ದಿಗೆ ನನ್ನ ಆಧ್ಯತೆಯಾಗಿದೆ, ಎಲ್ಲೂ ತಾರತಮ್ಯ ಮಾಡುವದಿಲ್ಲ, ನನ್ನ ಕ್ಷೇತ್ರಕ್ಕೂ ಏನೆಲ್ಲ ಬೇಕು ಅದನ್ನು ನಾನು ಸರ್ಕಾರದಿಂದ ತರುವ ಕಾರ್ಯ ಮಾಡುತ್ತೆನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ನೂತನ ಕಟ್ಟಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೆ ತಾಲೂಕಿಗೆ ಬಂದ ಯೋಜನೆಗಳನ್ನು ನಾನು ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಿಲ್ಲ ಅಷ್ಟು ಸಣ್ಣತನ ನಾನು ಮಾಡುದಿಲ್ಲ ಹಿಂದೆಯೂ ಮಾಡಿಲ್ಲ ಎಂದರು.ಯಾವುದೆ ಸರ್ಕಾರ ಜನಪ್ರತಿನಿಧಿಗಳು ತಂದ ಯೋಜನೆಗಳನ್ನು ಸಾರ್ವಜನಿಕರು ಅದರ ಉಪಯೋಗ ಮಾಡಿಕೊಳ್ಳಬೇಕು, ಪ್ರಜಾಪ್ರಭುತ್ವ ವ್ಯವಸ್ಥೆ ನಾವು ಒಪ್ಪಿಕೊಳ್ಳಬೇಕು, ಈ ಹಿಂದೆ ಈ ಕಟ್ಟಡವನ್ನು ಕಾರಜೋಳ ಮತ್ತು ನ್ಯಾಮಗೌಡ ಅವರು ಅಡಿಗಲ್ಲು ಹಾಕಿದರು ಈಗ ನಾನು ಮತ್ತು ಗುಡಗುಂಟಿ ಅವರು ಉದ್ಘಾಟಿಸುತಿದ್ದೆವೆ ಇದು ಪ್ರಜಾತಂತ್ರ ವ್ಯವಸ್ಥೆ ಹೀಗೆ ಇರುತ್ತದೆ ಎಂದರು.ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು, ಇಲ್ಲಿನ ಶಾಲೆಗಳಲ್ಲಿ ಜೀವನ ಮೌಲ್ಯಗಳ ಜೋತೆ…
ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ತಾಲೂಕಿನ ಆರೇಶಂಕರ ಗ್ರಾಮದಲ್ಲಿ ಹಜರತ್ ಜಾನೇಸಾಹೆಬ್ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅತಿ ವಿಜೃಂಭಣೆಯಿಂದ ಜರುಗಿತು.ಹಜರತ್ ಜಾನೇಸಾಹೆಬ್ ಜಾತ್ರೆ ನಿಮಿತ್ತ ನಿನ್ನೆಯ ದಿನ ರಾತ್ರಿ 9 ಗಂಟೆಗೆ ಗಂದ ಏರಿಸಲಾಯಿತು. ಪಟ್ಟದ ಕುದುರೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ದೇವಸ್ಥಾನಕ್ಕೆ ಬರಲಾಯಿತು.ರವಿವಾರ ರಾತ್ರಿ 10 ಗಂಟೆಗೆ ದುರ್ಗಾದೇವಿ ಭಜನಾ ಮಂಡಳಿ ಆರೇಶಂಕರ ಹಾಗೂ ಸಂಗಮೇಶ್ವರ ಭಜನಾ ಮಂಡಳಿ ಗೆದ್ದಲಮರಿ ಇವರಿಂದ ರಾತ್ರಿ ಇಡಿ ಸೇವೆ ಸಲ್ಲಿಸಿದರು.ಸೋಮವಾರ ಬೆಳಗ್ಗೆ ಹಜರತ್ ಜಾನೇಸಾಹೆಬ್ ಉರುಸು ಜರುಗಿತು. ನಂತರ ಜಾನೇಸಾಹೆಬ್ ರಿವಾಯಿತಿ ಸಂಘದವರು ಮತ್ತು ಮೌಲಾಲಿ ರಿವಾಯಿತಿ ಸಂಘ ಕುಂಚನೂರ , ಜಾನೇಸಾಹಬ್ ರಿವಾಯಿತಿ ಸಂಘ ಮತ್ತು ಮೌಲಾಲಿ ರಿವಾಯಿತಿ ಸಂಘ ಗುಡದಿನ್ನಿ ಇವರಿಂದ ರಿವಾಯಿತಿ ಪದಗಳು ಜರುಗಿದವು.ಭಕ್ತರು ದರ್ಶನ್ ಮಾಡುವುದು ಕಂಡು ಬಂತು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕೂಡಾ ಮಾಡಲಾಗಿತ್ತುಸಾಯಂಕಾಲ ಒಂದು ಎತ್ತು ಒಂದು ಕುದುರೆ ಓಟದ ಸ್ಪರ್ಧೆಗೆ ಗ್ರಾಮದ ಹಿರಿಯರು ರಿಬ್ಬನ್ ಕಟ್ ಮಾಡುವುದರ…
ಚಿಂತನೆ- ಡಾ.ಸರಸ್ವತಿ ಪಾಟೀಲವಿಜಯಪುರ ಉದಯರಶ್ಮಿ ದಿನಪತ್ರಿಕೆ ಕಾಲ: ೧೨ನೇ ಶತಮಾನಜನ್ಮ ಸ್ಥಳ: ಇಂಗಳೇಶ್ವರ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆತಂದೆ: ಮಾದರಸತಾಯಿ: ಮಾದಲಾಂಬಿಕೆವೃತ್ತಿ: ಸಮಾಜ ಮುಖಿ, ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿ, ಪ್ರಧಾನ ದಂಡನಾಯಕಬರೆದ ವಚನಗಳು: ೧೫೦೦ಕ್ಕೂ ಹೆಚ್ಚುಅಂಕಿತನಾಮ: ಕೂಡಲಸಂಗಮದೇವ ಡೋಹರನೆಂಬೆನೆ ಕಕ್ಕಯ್ಯನಆನು ಹಾರುವನೆಂದರೆಕೂಡಲಸಂಗಯ್ಯ ನಗುವನಯ್ಯಎಂದು ಹೇಳುವ ಮೂಲಕ ಕಾಯಕಕ್ಕೆ ಅಂಟಿದ್ದ ಕುಲಭೇದವನ್ನು ತಾರತಮ್ಯವನ್ನು ಅಳಿಸಿ ಹಾಕಿದರು ಬಸವಣ್ಣನವರು. ವಚನ ವಿಶ್ಲೇಷಣೆ ಅಡವಿಯಲ್ಲೊಬ್ಬ ಕಡು ನೀರಡಿಸಿ ,ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯಾಕುರುಡ ಕಣ್ಣ ಪಡೆದಂತೆʼಬಡವ ನಿಧಾನವ ಹಡೆದಂತಾಯಿತ್ತಯ್ಯಾ ,ನಮ್ಮ ಕೂಡಲಸಂಗನ ಶರಣರಬರವೆನ್ನ ಪ್ರಾಣ ಕಂಡಯ್ಯಾ.(ಸಮಗ್ರ ವಚನ ಸಂಪುಟ ೧, ವಚನದ ಸಂಖ್ಯೆ ೩೭೬)ಶರಣರ ಆಗಮನ, ಶರಣರ ಒಡನಾಟ ಬಸವಣ್ನನವರಿಗೆ ಬಹಳ ಅಪ್ಯಾಯಮಾನಿವಾದ ಸಂಗತಿ. ನಿರೀಕ್ಷಣೆಯಲ್ಲಿದ್ದಾಗ ಶರಣರು ಬಂದು ಬಸವಣ್ಣನವರ ಮುಂದೆ ನಿಂತಾಗ, ಅವರ ಕಣ್ಣಿಗೆ ಬಿದ್ದಾಗ, ಅರಣ್ಯದಲ್ಲಿ ನಡೆದು ನಡೆದು, ಸುಸ್ತಾಗಿ ಬಾಯಾರಿಕೆಯಾಗಿ ಕುಸಿದು ಬಿಳುವಂಥ ಸ್ಥಿತಿಯಲ್ಲಿದ್ದಾಗ ನೀರು ಸಿಕ್ಕರೆ ಕಳೆದು ಹೋದ ಜೀವ ಮತ್ತೆ ಮರಳಿ ಬಂದಂತಾಗುತ್ತದೆ. ಕಣ್ಣಿಲದ ಕುರುಡನಿಗೆ ದೃಷ್ಟಿ ಬಂದಾಗ…
