Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 17 ನೆಯ ಶರಣಮಾಸದ ಮಾಲಿಕೆಯಲ್ಲಿ ಶ್ರೀ ವಿಜಯಕುಮಾರ ತೇಲಿ ಅವರು ಮುರಿಗೆಪ್ಪ ಚೆಟ್ಟಿ ಅವರ ಬಗೆಗೆ ಅತ್ಯಂತ ಸವಿಸ್ತಾರವಾಗಿ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟರು.ಮೊದಲಿಗೆ ಮನುಷ್ಯನ ಮನಸ್ಸಿನ ವಿಸ್ತಾರ, ಅಭಿವ್ಯಕ್ತಿ ಪ್ರಸ್ತುತೀಕರಣ, ರಸಗ್ರಹಣ, ಸಂವೇದನೆ, ಆಸ್ವಾದನೆ, ಅನುಭೂತಿ, ಚಿಂತನ-ಮಂಥನದ ಜೊತೆಗೆ ಕಲೆ, ನೆಲೆ, ಹಿನ್ನೆಲೆಯಾದಿಯಾಗಿ ಲಲಿತ ಕಲೆಗಳ ಬಗೆಗೆ,ಮತ್ತು ಭಾರತೀಯ ಕಲಾಪರಂಪರೆ ಶ್ರೇಷ್ಠವಾದದ್ದು ಎಂದು ಪೀಠಿಕೆಯಾಗಿ ಮಾತನಾಡಿದರು.ಮುರಿಗೆಪ್ಪ ಚೆಟ್ಟಿ ಅವರ ಬಾಲ್ಯ, ತಂದೆ-ತಾಯಿ, ಅವರ ಹುಟ್ಟೂರು, ಶಿಕ್ಷಣದ ಬಗೆಗೆ ಹೇಳುತ್ತಾ, ಹೇಗೆ ಅವರು ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಗೋಡೆಯ ಮೇಲೆ, ನೆಲದ ಮೇಲೆ ಚಿತ್ರ ಬಿಡಿಸುತ್ತಿದ್ದುದು,ಸರಕಾರಿ ನೌಕರಿಯಲ್ಲಿದ್ದ ಅವರ ಚಿಕ್ಕಪ್ಪನವರ ಸಹಾಯದಿಂದ ಮುಲ್ಕಿ ಪರೀಕ್ಷೆ, ಇಂಟರಮೀಡಿಯಟ್ ಡ್ರಾಯಿಂಗ್ ಎಕ್ಸಾಮ್ ಪಾಸಾಗಿದ್ದು, ಮ್ಯಾಟ್ರಿಕ್ ಪರೀಕ್ಷೆ ಬರೆದದ್ದು,ನಂತರದಲ್ಲಿ ಬೆಂಬಳಗಿ ಅವರ ಪ್ರೋತ್ಸಾಹದೊಂದಿಗೆ ಮುಂಬೈನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದ್ದು, ಅಲ್ಲಿ ಏಳು ಜನ ಕನ್ನಡಿಗರ ಜೊತೆಗೆ ಸಪ್ತವರ್ಣದ ಗುಂಪು ರಚನೆ…
ಝಳಕಿ ಪೋಲಿಸ್ ಠಾಣಾಧಿಕಾರಿ ಮತ್ತು ಸಿಬ್ಬಂಧಿಗಳಿಗೆ ರಕ್ಷಾ ಬಂಧನ ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹೋದರ-ಸಹೋದರಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಹಬ್ಬ, ಕೇವಲ ಒಂದು ನೂಲಿನ ಬಗ್ಗುವಿಕೆ ಅಲ್ಲ- ಅದು ಸಹೋದರಿಯರ ನಂಬಿಕೆ, ಮಮತೆ ಮತ್ತು ಜೀವಿತಾವಧಿಯ ರಕ್ಷಣೆಯ ಪ್ರತಿಜ್ಞೆ. ಶ್ರಾವಣ ಮಾಸದ ನೂಲ ಹುಣ್ಣಿಮೆಯ ಸಂಭ್ರಮದಲ್ಲಿ ಈ ಮಧುರ ಸಂಪ್ರದಾಯ ಝಳಕಿ ಪೊಲೀಸ್ ಠಾಣೆಯಲ್ಲೂ ಅರಳಿ ಬಂತು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸಿಬ್ಬಂದಿಗಳು, ಪಿಎಸ್ಐ ಮಂಜುನಾಥ ಎಸ್.ಟಿ. ಅವರ ನೇತೃತ್ವದಲ್ಲಿ, ಠಾಣೆಯ ಎಲ್ಲ ಆರಕ್ಷಕರ ಕೈಗೆ ರಕ್ಷಾ ಕಟ್ಟಿ, ಅವರ ಸುರಕ್ಷಿತ ಸೇವೆಗೆ ಕೃತಜ್ಞತೆ ಸಲ್ಲಿಸಿದರು. ಸಿಹಿ ಹಂಚಿ, ಶುಭಾಶಯ ಕೋರಿದರು,ರಕ್ಷಾ ಬಂಧನ ಕಟ್ಟಿಕೊಂಡು ಮಾತನಾಡಿದ ಝಳಕಿ ಠಾಣಾಧಿಕಾರಿ ಮಂಜುನಾಥ ತೀರಕನ್ನವರ ಸಹೋದರತ್ವದ ಮಧುರ ನಂಟು ರಕ್ಷಾ ಬಂಧನ, ಪೊಲೀಸ್ ಸಿಬ್ಬಂದಿ ಕೇವಲ ಕಾನೂನು-ಸುವ್ಯವಸ್ಥೆಯ ರಕ್ಷಕರು ಮಾತ್ರವಲ್ಲ, ಸಮಾಜದ ಕುಟುಂಬದ ಭಾಗವೆಂಬ ಸಂದೇಶವನ್ನು ಹಂಚಿದರು.”ಸಹೋದರತ್ವದ ಪ್ರತೀಕವಾದ ರಕ್ಷಾ ಬಂಧನವು ಅಣ್ಣ-ತಂಗಿಯರ ಭಾವನಾತ್ಮಕ ಬಾಂಧವ್ಯವನ್ನು ಗಟ್ಟಿಗೊಳಿಸುವ ದಿನ. ನಮ್ಮ ಹಿರಿಯರು…
ಮಮದಾಪುರದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಮದಾಪುರ ಬಳಿ ನಿರ್ಮಿಸಲಾಗಿರುವ ಅರಣ್ಯದ ಪ್ರಕೃತಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ನೆಲೆಸಿದ್ದು, ಶ್ರೀಗಳ ಆಶಯದಂತೆ ವ್ಯಸನಮುಕ್ತ, ಜಗಳರಹಿತವಾಗಿ ಬದುಕಿ ಆದರ್ಶ ಗ್ರಾಮವನ್ನಾಗಿ ಮಾಡಲು ಈ ಭಾಗದ ಗ್ರಾಮಸ್ಥರು ಕೈ ಜೋಡಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅಂದಾಜು ರೂ. 120 ಲಕ್ಷ ವೆಚ್ಚದಲ್ಲಿ ಹೆಸ್ಕಾಂ ನೂತನ ಶಾಖಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನಡಿ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಬಳಿಕ ಖಾಜಾ ಬಾಪುಸಾಹೇಬರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಮದಾಪುರದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಕೆರೆ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹೋದರ-ಸಹೋದರಿಯರ ಮಧ್ಯೆ ಇರುವ ಪ್ರೀತಿ, ಮಮತೆ, ಹಾಗೂ ಭರವಸೆಯ ನಂಟಿಗೆ ಪ್ರತೀಕವಾದ ರಕ್ಷಾ ಬಂಧನ ಹಬ್ಬ ಶ್ರಾವಣದ ಸಂಭ್ರಮದಲ್ಲಿ ಚಡಚಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾವಪೂರ್ಣವಾಗಿ ಜರಗಿತು.ಶನಿವಾರ ಬೆಳಿಗ್ಗೆ ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುವ ಮೂಲಕ ಈ ಪವಿತ್ರ ಆಚರಣೆಗೆ ಚಾಲನೆ ನೀಡಿದರು.ಹಣೆಗೆ ತಿಲಕವಿಟ್ಟು, ಆರತಿ ಬೆಳಗುವುದಾದ ನಂತರ ಕಲ್ಲುಸಕ್ಕರೆಯ ಸಿಹಿಯಿಂದ ಸಂತೋಷ ಹಂಚಿಕೊಂಡರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಕ್ಷಾ ಬಂಧನದ ಅಂಗವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರು ಸಚಿವ ಎಂ. ಬಿ. ಪಾಟೀಲ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭಾಷಯ ಕೋರಿದರು.ಶನಿವಾರ ಬೆಳಿಗ್ಗೆ ಸಚಿವರ ಗೃಹ ಕಚೇರಿಗೆ ಆಗಮಿಸಿದ ನಗರದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಪ್ರಕೃತಿ ಕಾಲನಿ ಸೇವಾ ಕೇಂದ್ರಸಂಚಾಲಕಿ ಶೋಭಾ ಅವರು ಸಚಿವರಿಗೆ ರಾಖಿ ಕಟ್ಟಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರೇಮ, ವಿಶ್ವಾಸ ಮತ್ತು ರಕ್ಷಣೆಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬ ಸಹೋದರ–ಸಹೋದರಿಯರ ನಡುವಿನ ಆತ್ಮೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ವೃದ್ಧಿಸಲಿ. ಎಲ್ಲರ ಜೀವನದಲ್ಲಿ ಬಾಂಧವ್ಯದ ನಂಟು ಇನ್ನಷ್ಟು ಗಟ್ಟಿಯಾಗಲಿ. ಸಂಬಂಧಗಳ ಮೌಲ್ಯ ಹೆಚ್ಚಲಿ, ಪ್ರೀತಿ ಮತ್ತು ಗೌರವ ಚಿಗುರಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಸೇವಾ ಕೇಂದ್ರದ ಗಿರೀಶ ಮತ್ತಿತರರು ಉಪಸ್ಥಿತರಿದ್ದರು.
ಕೊಡಂಗಲ್ ರಾಜ್ಯ ಹೆದ್ದಾರಿಯಲ್ಲಿನ ತಗ್ಗು-ಗುಂಡಿಗಳು ಜಲಮಯ | ಕಣ್ತೆರೆಯದ ಅಧಿಕಾರಿಗಳು ಉದಯರಶ್ಮಿ ದಿನಪತ್ರಿಕೆ ವರದಿ: ರಶ್ಮಿ ನೂಲಾನವರಸಿಂದಗಿ: ಇದು ರಾಜ್ಯ ಹೆದ್ದಾರಿ. ಆದರೆ ಸ್ಥಳೀಯ ರಸ್ತೆಗಿಂತಲೂ ಹೆಚ್ಚು ಹಾಳಾಗಿದೆ. ನಿತ್ಯ ಈ ರಸ್ತೆ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಹಾಪೂರ, ಮಳ್ಳಿ, ಕೆಂಭಾವಿ, ಗೋಲಗೇರಿ, ಸಿಂದಗಿಗೆ ಬರಲು ಇದೇ ಪ್ರಮುಖ ದಾರಿಯಾದರೂ ಈ ರಸ್ತೆ ಇದುವರೆಗೂ ದುರಸ್ತಿಯಾಗದಿರುವುದು ದುರಂತವೇ ಸರಿ.ಈ ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ನಿರ್ಮಾಣವಾಗಿವೆ. ಪ್ರತಿದಿನ ಹಲವು ಬೈಕ್ ಸವಾರರು, ವಾಹನ ಚಾಲಕರು ಸಂಚರಿಸಲು ಪರದಾಡುವಂತಾಗಿದೆ.ಹೇಳಿಕೊಳ್ಳಲು ಮಾತ್ರ ಇದು ಕೊಡಂಗಲ್ ರಾಜ್ಯ ಹೆದ್ದಾರಿ. ಆದರೆ ಈ ಹೆದ್ದಾರಿಯಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಹೊಲದ ರಸ್ತೆಯಲ್ಲಿ ಸಂಚರಿಸುವ ಅನುಭವವಾಗುತ್ತದೆ. ಈ ರಸ್ತೆಯ ಮೇಲೆ ನಿತ್ಯ ಇಲ್ಲಿಂದ ಪ್ರಯಾಣ ಬೆಳೆಸುವವರ ಸ್ಥಿತಿ ಅಧೋಗತಿ ಎನ್ನುವಂತಾಗಿದೆ. ಹೇಳೋರು-ಕೇಳೋರು ಯಾರು ಇಲ್ಲದಂತಾಗಿದೆ ಎಂದು ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.ಮಳೆ ಬಂದರೆ ಸಾಕು ಈ ರಸ್ತೆಯಲ್ಲಿನ ತಗ್ಗು-ಗುಂಡಿಗಳ ಜಲಮಯವಾಗಲಿದ್ದು, ವಾಹನ ಸವಾರರಿಗೆ ರಸ್ತೆಯೇ ಗೊತ್ತಾಗುತ್ತಿಲ್ಲ. ಇಂತಹ ದುಸ್ಥಿತಿಯೆಡೆಯ ಸುಧಾರಣೆಗೆ ಸರಕಾರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ವಿಶ್ವನಾಥ ಕೋಟಾರಗಸ್ತಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣಗೌಡ ಬಣ) ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕನ್ನಡ ನಾಡು, ನುಡಿ, ನೆಲ, ಜಲ, ನಿಸ್ವಾರ್ಥ ಕನ್ನಡದ ಸೇವಾ ಮನೋಭಾವ ಗುರುತಿಸಿ ಈ ಹುದ್ದೆಯನ್ನು ನೀಡಲಾಗಿದೆ ಎಂದು ಕರವೇ ತಾಲೂಕಾಧ್ಯಕ್ಷ ಮುತ್ತು ಹಿಪ್ಪರಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಶಾಲೆಯಲ್ಲಿ ಸಂಭ್ರಮದಿಂದ ರಕ್ಷಾಬಂಧನ ಹಬ್ಬ ಆಚರಿಸಲಾಯಿತು.ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಇದೇ ವೇಳೆ ಶಿಕ್ಷಕಿಯರು ಅತಿಥಿಗಳಿಗೆ ರಾಖಿ ಕಟ್ಟಿ ಆರತಿ ಬೆಳಗಿ ದೀರ್ಘಾಯುವಾಗಿ ಬಾಳುವಂತೆ ಹರಿಸಿದರು.ಸಾನಿಧ್ಯ ವಹಿಸಿ ಮಾತನಾಡಿದ ವೇದಮೂರ್ತಿ ಅಮರೇಶ್ವರ ಶಾಸ್ತಿಗಳು, ಸತತವಾಗಿ ೩೬ ವರ್ಷಗಳ ಕಾಲ ನಿರಂತರವಾಗಿ ರಕ್ಷಾ ಬಂಧನ ಹಬ್ಬವನ್ನು ಶಾಲೆಯಲ್ಲಿ ಆಚರಿಸುತ್ತಾ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಭಾತೃತ್ವ ಭಾವನೆಗಳನ್ನು ಕೊಡುತ್ತಾ ಬಂದಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.ಇದೇ ವೇಳೆ ಬೀರಪ್ಪ ಹೊಸೂರ ಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಆಯ್.ಜೋಗೂರ, ಅಲೋಕ ಬಡದಾಳ, ಅಕ್ಷಯ ಕುಲಕರ್ಣಿ, ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ, ಸಮರ್ಥ ಕೊಳಾರಿ, ಈರಣ್ಣ ಕಲಶೆಟ್ಟಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ, ವೀಣಾ ರಾಂಪೂರಮಠ, ರಕ್ಷಿತಾ ಹಡಪದ ಮುಂತಾದವರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನಲ್ಲಿ ಶನಿವಾರ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು. ಬಳಿಕ ಹಣೆಗೆ ತಿಲಕವಿಟ್ಟು, ಹೂನೀಡಿ, ಕಲ್ಲುಸಕ್ಕರೆಯ ಸವಿಯನ್ನು ನೀಡಿ ಸಂಭ್ರಮಿಸಿದರು.ರಕ್ಷಾ ಬಂಧನವು ಮಾನ್ಸೂನ್ ಹಬ್ಬವಾಗಿದ್ದು, ಇದು ಆಳವಾದ ಅರ್ಥವನ್ನು ಹೊಂದಿದೆ. ಮಳೆಗಾಲವು ಜೀವನದ ಎಲ್ಲಾ ಕೊಳಕು ಮತ್ತು ಸಂಕೋಚನಗಳನ್ನು ನಿರ್ಮೂಲನೆ ಮಾಡುತ್ತದೆ. ಋತುವು ನಮಗೆ ಶ್ರೀಮಂತಿಕೆಯನ್ನು ನೀಡುತ್ತದೆ ಮತ್ತು ಜೀವನವನ್ನು ಪೂರ್ಣವಾಗಿ ಸವಿಯಲು ಹೊಸ ಭರವಸೆಯನ್ನು ನೀಡುತ್ತದೆ. ಅದಕ್ಕಾಗಿಯೇ ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಕಳಂಕರಹಿತ ಬಂಧನ ಮತ್ತು ಅದೃಷ್ಟದ ಆಗಮನವನ್ನು ಆಚರಿಸಲು ಶ್ರಾವಣ ಮಾಸವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಂದಿನ ಮಕ್ಕಳೆ ಮುಂದಿನ ಸತ್ಪ್ರಜೆಗಳು. ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರ ಮೇಲೆ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಮಹತ್ತರ ಜವಾಬ್ದಾರಿ ಇದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.ಸ್ಥಳೀಯ ಶಾಂತಿ ನಗರದಲ್ಲಿ ಪಿಎಂಶ್ರೀ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ನಂ.6ರಲ್ಲಿನ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ರಾಷ್ಟ್ರೀಯ ಗ್ರಾಮಿಣ ಸಾಕ್ಷರತಾ ಮಿಶನ್ ಅಡಿಯಲ್ಲಿ ಶಾಲಾ ಬ್ಯಾಗ್, ಸ್ವೆಟರ್ಗಳನ್ನು ವಿತರಿಸಿ ಅವರು ಮಾತನಾಡಿದರು.ವಿಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸ್ಪರ್ಧಾತ್ಮಕ ಯುಗದಲ್ಲಿ ಇಂದಿನ ಮಕ್ಕಳು ಬೆಳೆಯಬೇಕು, ಬಾಲ್ಯದಲ್ಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರು ಬದುಕಿನುದ್ದಕ್ಕೂ ಪರಿತಪಿಸುವಂತಾಗುತ್ತದೆ ಮಕ್ಕಳಿಗೆ ಬಾಲ್ಯದಲ್ಲೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಲೆ ಅಭಿವೃದ್ದಿಗೆ ವೈಯಕ್ತಿಕವಾಗಿ 51 ಸಾವಿರ ರೂಗಳನ್ನು ನೀಡಿದರು.ವೇದಿಕೆಯಲ್ಲಿ ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಕಾಶಿಬಾಯಿ ಹೂಗಾರ, ಮಲ್ಲು ಮಠ, ಕುಶಾಲ…
