ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಂದಿನ ಮಕ್ಕಳೆ ಮುಂದಿನ ಸತ್ಪ್ರಜೆಗಳು. ಸರ್ಕಾರಿ ಶಾಲೆಯಲ್ಲಿನ ಶಿಕ್ಷಕರ ಮೇಲೆ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಮಹತ್ತರ ಜವಾಬ್ದಾರಿ ಇದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ಸ್ಥಳೀಯ ಶಾಂತಿ ನಗರದಲ್ಲಿ ಪಿಎಂಶ್ರೀ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ನಂ.6ರಲ್ಲಿನ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ರಾಷ್ಟ್ರೀಯ ಗ್ರಾಮಿಣ ಸಾಕ್ಷರತಾ ಮಿಶನ್ ಅಡಿಯಲ್ಲಿ ಶಾಲಾ ಬ್ಯಾಗ್, ಸ್ವೆಟರ್ಗಳನ್ನು ವಿತರಿಸಿ ಅವರು ಮಾತನಾಡಿದರು.
ವಿಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಸ್ಪರ್ಧಾತ್ಮಕ ಯುಗದಲ್ಲಿ ಇಂದಿನ ಮಕ್ಕಳು ಬೆಳೆಯಬೇಕು, ಬಾಲ್ಯದಲ್ಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗದಿದ್ದರೆ ಅವರು ಬದುಕಿನುದ್ದಕ್ಕೂ ಪರಿತಪಿಸುವಂತಾಗುತ್ತದೆ ಮಕ್ಕಳಿಗೆ ಬಾಲ್ಯದಲ್ಲೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆ ಅಭಿವೃದ್ದಿಗೆ ವೈಯಕ್ತಿಕವಾಗಿ 51 ಸಾವಿರ ರೂಗಳನ್ನು ನೀಡಿದರು.
ವೇದಿಕೆಯಲ್ಲಿ ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಕಾಶಿಬಾಯಿ ಹೂಗಾರ, ಮಲ್ಲು ಮಠ, ಕುಶಾಲ ವಾಗ್ಮೋರೆ, ಮುಸ್ತಾಕ ಅಪರಾದ, ಮಂಜುರ ಅವಟಿ, ಶಬಾನಾ ಇನಾಮದಾರ, ಮುಖ್ಯಶಿಕ್ಷಕಿ ಭಾರತಿ ದೊಡಮನಿ, ಶ್ರೀಧರ ಕಂಬಿ, ವಶಿಮ್ ಹವಾಲ್ದಾರ, ರಫಿಕ ಬಾರಿಗಡ್ಡಿ, ರಫಿಕ ಕಲಾದಗಿ, ಆಶಿಫ ಮೋಮಿನ್, ಆಬೀದ ಕಲಾದಗಿ, ಅಸ್ಲಾಂ ಇನಾಮದಾರ, ಇತರರು ಇದ್ದರು.
ಝಡ್.ಪಿ.ಕೊಡತಿ ಸ್ವಾಗತಿಸಿದರು. ಸಂಜು ಪಂಚಾಲ ನಿರೂಪಿಸಿ ವಂದಿಸಿದರು.

