Author: editor.udayarashmi@gmail.com

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಆಗ್ರಹ | ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ ಅವರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಶುಭ್ರ ವಸ್ತ್ರದ ಸೀರೆಯೊಂದಿಗಿನ ಅಕ್ಕ ಮಹಾದೇವಿ ಮೂರ್ತಿಯನ್ನು ಸ್ಥಾಪಿಸಲು ಕೋರಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ.ವಿಜಯಾ ಕೋರಿಶೆಟ್ಟಿ ಅವರನ್ನು ಅಭಿನಂದಿಸಿದ ಡಾ.ಶಶಿಕಾಂತ ಪಟ್ಟಣ ಅವರು, ನಿಮ್ಮ ಈ ಸಾಧನೆ ನಮ್ಮೆಲ್ಲರಿಗೂ ಬಹಳ ಸಂತೋಷವನ್ನುಂಟುಮಾಡಿದೆ. ನಿಮ್ಮ ಪರಿಶ್ರಮ ಮತ್ತು ಸಮರ್ಪಣಾ ಭಾವವು ಈ ಯಶಸ್ಸಿಗೆ ಕಾರಣವಾಗಿದೆ. ನಿಮ್ಮ ಮುಂದಿನ ಕಾರ್ಯಗಳಲ್ಲಿಯೂ ಇದೇ ರೀತಿಯ ಯಶಸ್ಸು ಸಿಗಲಿ ಎಂದು ಶುಭಹಾರೈಸಿದ್ದಾರೆ.ತಮ್ಮ ವಿಶ್ವ ವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಲು ಪ್ರಾರ್ಥನೆ.ಅದೇ ರೀತಿ ನಾಡಿನ ಮೊದಲ ಕವಯಿತ್ರಿ ಶರಣೆ ಅಕ್ಕ ಮಹಾದೇವಿ ಇವರ ಅರೆ ಬೆತ್ತಲೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬಾನುವಾರ ಹಸಿರು ಕ್ರಾಂತಿಯ ರಾಷ್ಟ್ರ ನಾಯಕ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ರವರ ೩೯ ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಅಬ್ದುಲ್‌ಹಮೀದ ಮುಶ್ರೀಫ, ಡಾ. ಮಾಲಿಪಾಟೀಲ, ಗಂಗಾಧರ ಸಂಬಣ್ಣಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಪ್ರಧಾನ ಕಾರ್ಯದರ್ಶಿ ಎಂ. ಎಂ. ಮುಲ್ಲಾ (ದ್ಯಾಬೇರಿ), ವಸಂತ ಹೊನಮೋಡೆ, ದೇಸು ಚವ್ಹಾಣ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶಕೀಲಅಹ್ಮದ ಬಾಗಮಾರೆ, ಅಶ್ಪಾಕ ಮನಗೂಳಿ, ರಮೇಶ ಗುಬ್ಬೇವಾಡ, ತಾಜುದ್ದೀನ ಖಲೀಫಾ, ಸರ್ಫರಾಜ ಅಗಸಬಾಳ, ಕೃಷ್ಣಾ ಲಮಾಣಿ, ಹಮೀದ ಮನಗೂಳಿ, ಎಂ. ಎಂ. ಮುಲ್ಲಾ, ಅಬುಬಕರ ಕಂಬಾಗಿ, ಪರಶುರಾಮ ಹೊಸಮನಿ, ವೀರೇಶ ಕಲಾಲ, ಅಮಿತ ಚವ್ಹಾಣ, ಡಿ. ಎಚ್. ಕಲಾಲ, ಮುನ್ನಾ ಬಕ್ಷಿ, ಆಬಿದ ಇಲಕಲ್, ಇಮತಿಯಾಜ ಮುಲ್ಲಾ, ಪೀರಾಂ ಹಡಗಲಿ, ಇಲಿಯಾಸ ಮುಲ್ಲಾ, ಹಾಶಿಂಪೀರ ಕಾದರಿ, ಪರವೇಜ ಪೀರಜಾದೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ದೇಶದಲ್ಲಿ ಹಲವಾರು ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳ ಆಚರಣೆ ತಮ್ಮದೇಆದ ವಿಶಿಷ್ಟ ರೀತಿಯಿಂದ ನಾವೆಲ್ಲ ಭಾರತೀಯರು ಇಂದಿನವರೆಗೂ ಆಚರಿಸುತ್ತ ಬಂದಿದ್ದಿವೆ.ದೇಶಾಭಿಮಾನ ತೋರುತ್ತಲಿದ್ದೆವೆ. ನಾವೇಲ್ಲರೂ ಒಂದೇ ಕುಟುಂಬದ ಸಹೋದರರಂತೆ ಸಹಬಾಳ್ವೆ ಸಮಾನತೆಯಿಂದ ಹಬ್ಬ ಹರಿದಿನಗಳು ಆಚರಿಸುವ ಮೂಲಕ ನಾವೇಲ್ಲ ಒಂದು ಎಂಬ ಭಾವೈಕ್ಯದ ಸಂಗಮವಾಗಿದೆ.ಚಡಚಣದಲ್ಲಿ ಪ್ರತಿವರ್ಷದಂತೆ ಈ ವರ್ಷವುಕೂಡ ಅಮವಾಸ್ಯೆಯ ಮಾರನೇದಿನ ಗುದ್ಲಿ ಬಿಳುತ್ತವೆ ಮತ್ತು ಐದನೆ ದಿನ ದೇವರು ಒಂದು ಸ್ಥಳದಲ್ಲಿ ಕೂರಿಸಿ ಪಟ್ಟಣದ ಎಲ್ಲ ಸಮಾಜದವರು ಪೂಜಿಸುತ್ತಾರೆ ಸತತ ೫ ದಿನಗಳವರೆಗೆ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲೀಮ್ ಸಮುದಾಯದ ಜನರೆಲ್ಲರು ಕೂಡಿಕೊಂಡು ವಾದ್ಯ ವೈವಿಧ್ಯ, ಮತ್ತು ಹರಿಕೆಯ ವೇಷದೊಂದಿಗೆ ಕುಣಿದು ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.ಶನಿವಾರ ಸಣ್ಣ ಕತ್ಲ ಕಾರ್ಯಕ್ರಮ ಜರುಗಿದವು.ಮೋಹರಂ ಕೊನೆಯದಿನವಾದ ರವಿವಾರ ದೊಡ್ಡ ಕತ್ಲ ಕಾರ್ಯಕ್ರಮ ಜರುಗಿದವು ದೇವರಿಗೆ ಗಂಧ ಮತ್ತು ಹೂ ಏರಿಸುವ ಕಾರ್ಯಕ್ರಮ ಜರಗಿದವು.ಚಡಚಣದಲ್ಲಿ ಹುಸೇನ್‌ಬಾಷಾ ಮಕಾನದಾರ ಸಮೀತಿಯವರ ಪಂಜಿ ಸೇರಿದಂತೆ ಒಟ್ಟು ೪ಪಂಜಿಗಳು ಚಡಚಣದಲ್ಲಿ ಶನಿವಾರ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ದೇಶದಲ್ಲಿ ಹಲವಾರು ಧರ್ಮ, ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಂಪ್ರದಾಯಗಳ ಆಚರಣೆ ತಮ್ಮದೇಆದ ವಿಶಿಷ್ಟ ರೀತಿಯಿಂದ ನಾವೆಲ್ಲ ಭಾರತೀಯರು ಇಂದಿನವರೆಗೂ ಆಚರಿಸುತ್ತ ಬಂದಿದ್ದಿವೆ.ದೇಶಾಭಿಮಾನ ತೋರುತ್ತಲಿದ್ದೆವೆ. ನಾವೇಲ್ಲರೂ ಒಂದೇ ಕುಟುಂಬದ ಸಹೋದರರಂತೆ ಸಹಬಾಳ್ವೆ ಸಮಾನತೆಯಿಂದ ಹಬ್ಬ ಹರಿದಿನಗಳು ಆಚರಿಸುವ ಮೂಲಕ ನಾವೇಲ್ಲ ಒಂದು ಎಂಬ ಭಾವೈಕ್ಯದ ಸಂಗಮವಾಗಿದೆ.ಚಡಚಣದಲ್ಲಿ ಪ್ರತಿವರ್ಷದಂತೆ ಈ ವರ್ಷವುಕೂಡ ಅಮವಾಸ್ಯೆಯ ಮಾರನೇದಿನ ಗುದ್ಲಿ ಬಿಳುತ್ತವೆ ಮತ್ತು ಐದನೆ ದಿನ ದೇವರು ಒಂದು ಸ್ಥಳದಲ್ಲಿ ಕೂರಿಸಿ ಪಟ್ಟಣದ ಎಲ್ಲ ಸಮಾಜದವರು ಪೂಜಿಸುತ್ತಾರೆ ಸತತ ೫ ದಿನಗಳವರೆಗೆ ಮೊಹರಂ ಹಬ್ಬವನ್ನು ಹಿಂದು ಮತ್ತು ಮುಸ್ಲೀಮ್ ಸಮುದಾಯದ ಜನರೆಲ್ಲರು ಕೂಡಿಕೊಂಡು ವಾದ್ಯ ವೈವಿಧ್ಯ, ಮತ್ತು ಹರಿಕೆಯ ವೇಷದೊಂದಿಗೆ ಕುಣಿದು ದೇವರಿಗೆ ಭಕ್ತಿಯನ್ನು ಸಮರ್ಪಿಸಿದರು.ಶನಿವಾರ ಸಣ್ಣ ಕತ್ಲ ಕಾರ್ಯಕ್ರಮ ಜರುಗಿದವು.ಮೋಹರಂ ಕೊನೆಯದಿನವಾದ ರವಿವಾರ ದೊಡ್ಡ ಕತ್ಲ ಕಾರ್ಯಕ್ರಮ ಜರುಗಿದವು ದೇವರಿಗೆ ಗಂಧ ಮತ್ತು ಹೂ ಏರಿಸುವ ಕಾರ್ಯಕ್ರಮ ಜರಗಿದವು.ಚಡಚಣದಲ್ಲಿ ಹುಸೇನ್‌ಬಾಷಾ ಮಕಾನದಾರ ಸಮೀತಿಯವರ ಪಂಜಿ ಸೇರಿದಂತೆ ಒಟ್ಟು ೪ಪಂಜಿಗಳು ಚಡಚಣದಲ್ಲಿ ಶನಿವಾರ…

Read More

ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ದುರ್ಗಾಬಾಯಿಯವರು ಆಂಧ್ರಪ್ರದೇಶದ ಪೂರ್ವ ಕರಾವಳಿಯ ರಾಜಮಂಡ್ರಿಯಲ್ಲಿ ಜುಲೈ 15 1909ರಲ್ಲಿ ಜನಿಸಿದರು. ಆ ಕಾಲದಲ್ಲಿ ಪ್ಲೇಗ್ ಮತ್ತು ಕಾಲರಾ ರೋಗಗಳು ಬಹಳವಾಗಿದ್ದವು.ಆಗ ಅವರ ತಂದೆ ಒಬ್ಬ ಸಾಮಾಜಿಕ ಕಾರ್ಯಕರ್ತರನ್ನು ನೇಮಿಸಿದರು. ಅವರು ಈ ಭಯಂಕರ ಕಾಯಿಲೆಗಳಿಗೆ ಹೆದರುತ್ತಿರಲಿಲ್ಲ. ದುರ್ಗಾಬಾಯಿಯವರು ತಾಯಿ ಹಾಗೂ ತಮ್ಮನಾದ ನಾರಾಯಣರೊಂದಿಗೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ಕಾಕಿನಾಡದ ರಸ್ತೆಗಳನ್ನು ದಾಟಿ ಸ್ಮಶಾನಗಳು, ಉರಿಯುವ ಘಟ್ಟಗಳು ಮತ್ತು ಚರ್ಚಿನ ಸಮಾಧಿಗಳಿಗೆ ಭೇಟಿ ಇತ್ತು ಸಾಂಕ್ರಾಮಿಕ ರೋಗಗಳಿಂದ ಸತ್ತವರಿಗೆ ನಿಷೇಧವಿದ್ದರೂ ಗೌರವ ಪೂರ್ವಕ ವಿದಾಯ ಹೇಳುತ್ತಿದ್ದರು.ಗಾಂಧಿಯವರು 1921 ರಲ್ಲಿ ಆಂಧ್ರಕ್ಕೆ ಭೇಟಿ ಇದ್ದಾಗ ದುರ್ಗಾದೇವಿಯವರಿಗೆ ಹನ್ನೆರಡು ವರ್ಷ ವಯಸ್ಸು. ಅವರಿಗೆ ಗಾಂಧಿಯವರನ್ನು ಭೇಟಿಯಾಗಿ ದೇವದಾಸಿಯರು ಪರದಾ ಹಾಕಿದ ಮಹಿಳೆಯರು ಮುಂತಾದವರಿಗೆ ಇರುವ ಕಡಿವಾಣಗಳು ಮತ್ತು ಸಂಕೋಲೆಗಳ ಬಗ್ಗೆ ಮಾತಾಡಬೇಕೆಂದು ಆಶಿಸಿದರುಆದರೆ ಒಂದಿಷ್ಟು ಜನರು ಇದರ ಸಲುವಾಗಿ ಹಣ ಸಂಗ್ರಹಿಸಬೇಕೆಂದು ಅವರಿಗೆ ಹೇಳಿದರು. ದುರ್ಗಾಬಾಯಿ ಯವರು ತಕ್ಷಣವೇ ಈ ವಿಷಯ…

Read More

ಲೇಖನ- ಜಯಲಕ್ಷ್ಮೀಕೃಷ್ಣಬೆಂಗಳೂರು”ನಮ್ಮ ಕಥಾ ಅರಮನೆ*ಬರಹಗಾರರು ಉದಯರಶ್ಮಿ ದಿನಪತ್ರಿಕೆ ಸಮಯ ಮನುಷ್ಯನ ಜೀವನದಲ್ಲಿ ಎಷ್ಟು ಪ್ರಾಮುಖ್ಯವನ್ನು ಪಡೆದಿದೆ ಅಲ್ಲವೇ..! ಜಗತ್ತಿನಲ್ಲಿಏನನ್ನಾದರೂ ಹಣ ನೀಡಿ ಕೊಂಡುಕೊಳ್ಳಬಹುದು ಆದರೆ ಸರಿದ ಕಳೆದಹೋದ ಸಮಯವನ್ನು ಮತ್ತೆ ಪಡೆಯಲು ಸಾಧ್ಯವಾಗದು. ಅಷ್ಟು ಅಮೂಲ್ಯವಾದುದು.ಇರುವ ಸಮಯ ಕಳೆದು ಹೋದರೆ ಮತ್ತೆ ನಮ್ಮ ಕೈಗೆ ಸಿಗುವುದೇ ಇಲ್ಲ. ಕೈ ಜಾರಿದ ಮುತ್ತಿನಂತೆ. ಮತ್ತೆ ಸೇರುವುದೇ ಇಲ್ಲ. ಆದುದರಿಂದ ಸಮಯಕ್ಕೆ ಯಾರು ಪ್ರಾಧಾನ್ಯತೆ ನೀಡುತ್ತಾರೋ ಗೌರವಿಸುತ್ತಾರೆ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಸೂರ್ಯ ಉದಯಿಸುವ ಮೊದಲು ಎದ್ದು ಯಾರು ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿ ಸೂರ್ಯನನ್ನು ಸ್ವಾಗತಿಸುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿಯಂತೆ. ಅಯ್ಯೋ ಚಳಿ ಬೆಚ್ಚಗೆ ಇನ್ನೂ ಸ್ವಲ್ಪ ಮಲಗಿದರಾಯಿತು ಎಂದು ಮಲಗಿ ನಿದ್ದೆ ಮಾಡಿ ಕಾಲಹರಣ ಮಾಡಿದರೆ ಹೋದ ಸಮಯ ಮತ್ತೆ ಹಿಂದೆ ಯಂತೂ ಬರುವುದಿಲ್ಲ. ಆದರೆ ಸೋಮಾರಿತನ ಅನಾರೋಗ್ಯ ಇವೆಲ್ಲಾ ಆವರಿಸಿ ದೇಹ ಆಲಸ್ಯಕ್ಕೆ ಒಗ್ಗಿಕೊಂಡು ಯಾವುದರ ಕಡೆಗೂ ಮನಸ್ಸು ಲವಲವಿಕೆಯಿಂದ ಇರಲು ಸಾಧ್ಯವಾಗದೇ ನೀರಿನಿಂದ ತೆಗೆದ…

Read More

ರಚನೆ- ಸುಬ್ರಹ್ಮಣ್ಯ ಕೊಪ್ಪ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಪ್ರತೀ ಜೀವಿಗೂ ಜೀವಿಸಲು ಮಣ್ಣಿನ ಅವಶ್ಯಕತೆಜೋಪಾನ ಮಾಡಿದಾಗ ತಿಳಿವುದು ಸಾರ್ಥಕತೆನದಿ ಕೆರೆ ಹಳ್ಳಗಳ ಇಕ್ಕೆಡೆಗೆ ತಡೆಗೋಡೆಯಂತೆಆಳೆತ್ತರದ ಮರಕ್ಕೆ ಬೇರುಬಿಡಲು ಆಸರೆಯಂತೆ ಮಣ್ಣಿನಿಂದಲೇ ಹುಟ್ಟು ಇಟ್ಟಿಗೆ ಮಡಕೆಯುಅಷ್ಟೇಕೆ ಹಲವು ವಿಗ್ರಹಗಳ ಕಲಾಕೃತಿಯುಗತಿಸಲು ಹೂಳಲು ಬೇಕು ಮಣ್ಣಿರುವ ಭೂಮಿಯುಬೆಳೆತೆಗೆಯಲು ಹದವಾದ ಮಣ್ಣಿನ ಆಸರೆಯು ಮಣ್ಣು ಶಿಥಿಲವಾದರೆ ಜೀವನ ಅಯೋಮಯಭೂಮಿಪೂಜೆ ನಾಗಪಂಚಮಿಯ ವಿಶೇಷತೆಯುಖನೀಜ ಸಂಪತ್ತು ಕಾಪಿಡಲು ಉತ್ತಮ ಜಾಗವದುಪರಿಸರ ಸ್ವಚ್ಛತೆ ಇಡುವ ಜವಾಬ್ದಾರಿ ನಮ್ಮದು.

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಕ್ಕಳಲ್ಲಿ ಜಾನಪದ ಸಾಹಿತ್ಯದ ಅಭಿರುಚಿ ಮತ್ತು ಅವರ ಪ್ರತಿಭೆ ವಿಶಿಷ್ಟವಾಗಿ ಗುರುತಿಸುವ ಕಾರ್ಯ ಈ ಜಿಲ್ಲಾ ಬಾಲಭವನ ಸೊಸೈಟಿ ಮಾಡುತ್ತದೆ ಇದರ ಉಪಯೋಗ ಮಕ್ಕಳ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಬಾಲಭವನ ಅಧಿಕಾರಿ ಗೀತಾ ಬುಳ್ಳಾ ಹೇಳಿದರು.ರಾಜ್ಯ ಬಾಲಭವನ ಸೊಸೈಟಿ (ರಿ) ಬೆಂಗಳೂರು, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ವಿಜಯಪುರ ಸಹಯೋಗದಲ್ಲಿ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಶನಿವಾರ ಪಟ್ಟಣದ ಕೆಜಿಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಖ್ಯ ಶಿಕ್ಷಕಿ ಕೆ.ಆರ್. ದಾಸರ, ಮಂಜುನಾಥ ತುಂಬರಮಟ್ಟಿ, ಮಾರುತಿ ಪವಾರ, ಜ್ಯೋತಿ ಕೊಟ್ಟಗಿ, ಲಕ್ಷ್ಮಣ ಕುಂಬಾರ, ಹೊನ್ನಪ್ಪ ಹಡಪದ, ಶಕುಂತಲಾ ಚೌಡಪ್ಪನವರ, ಸುಮಾ ಬಗಲಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಸೀಪಾ ನದಾಫ್, ಸ್ವಾಗತ ಸಾಕ್ಷಿ ಬುದಿಹಾಳ, ವಂದನಾರ್ಪಣೆ ಕಾವೇರಿ ಬೆಳ್ಳುಬ್ಬಿ ನಡೆಸಿಕೊಟ್ಟರು.ಸುಮಾರು ನೂರು ಮಕ್ಕಳಿಂದ ವಿವಿಧ ಜಾನಪದ ನೃತ್ಯ ಹಾಗೂ ನಾಟಕ ಪ್ರದರ್ಶನ…

Read More

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಬೆಂಗಳೂರು: ‘ಅಕ್ರಮ ಗಣಿಗಾರಿಕೆ’ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿ ಹಲವು ವಿಷಯಗಳ ಕುರಿತು ಪರಿಶೀಲಿಸಲು ಮತ್ತು ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ರಾಜ್ಯ ಸರ್ಕಾರ ಶನಿವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ನೇತೃತ್ವದಲ್ಲಿ ಆರು ಸದಸ್ಯರ ಸಂಪುಟ ಉಪಸಮಿತಿ ರಚಿಸಿದೆ.ಒಂದು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲು ಸಂಪುಟ ಉಪಸಮಿತಿಗೆ ಸೂಚಿಸಲಾಗಿದೆ.ಗೃಹ ಸಚಿವ ಜಿ ಪರಮೇಶ್ವರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಸಂಪುಟ ಉಪಸಮಿತಿಯ ಸದಸ್ಯರಾಗಿದ್ದಾರೆ.ಜುಲೈ 2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಉಪಸಮಿತಿ ರಚಿಸಲು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂ ಕಾಲೇಜು, ಮಾತೋಶ್ರೀ ಗುರುಬಸಮ್ಮ ಹ.ಸೋಮಾಪೂರ ಸೇವಾ ಸಂಸ್ಥೆ ಹಾಗೂ ಲಾಯನ್ಸ್ ಕ್ಲಬ್ ಸಹಯೋಗದಲ್ಲಿ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜು.೦೮ರಂದು ಬೆಳಿಗ್ಗೆ ೯:೩೦ ಗಂಟೆಗೆ ಎಂಜೆಫ್ ಲಾಯನ್ ಕೆ.ಎಚ್.ಸೋಮಾಪೂರ ಅವರ ಬಿಚ್ಚುಗತ್ತಿ ಗ್ರಂಥ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಹೇಳಿದರು.ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಮ್ಮುಖವನ್ನು ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಪಿಇಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ.ಕರ್ಜಗಿ ವಹಿಸುವರು. ಗ್ರಂಥ ಲೋಕಾರ್ಪಣೆಯನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಿ.ಎಂ.ತ್ಯಾಗರಾಜ ನೆರವೇರಿಸುವರು. ಗ್ರಂಥಾವಲೋಕನವನ್ನು ನಿವೃತ್ತ ಪ್ರಾಧ್ಯಾಪಕ ಧಾರವಾಡ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಮಾಡಲಿದ್ದಾರೆ. ಅತಿಥಿಗಳಾಗಿ ತಾಳಿಕೋಟಿಯ ಶಿವಯೋಗಿ ಸಂಗಮಾರ್ಗ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಜಿ.ಪಿ.ಪೋರವಾಲ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ರವಿ ಗೋಲಾ, ತಾಳಿಕೋಟಿಯ ಎಸ್.ಕೆ.ಪದವಿ ಕಾಲೇಜಿನ ಪ್ರಾಚಾರ್ಯ…

Read More