Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ

ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ

ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ವ್ಯಕ್ತಿ ಪೂಜೆ ಬೇಕೇ..?
ಭಾವರಶ್ಮಿ

ವ್ಯಕ್ತಿ ಪೂಜೆ ಬೇಕೇ..?

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ರಶ್ಮಿ ಕೆ. ವಿಶ್ವನಾಥ್
ಮೈಸೂರು

ಉದಯರಶ್ಮಿ ದಿನಪತ್ರಿಕೆ

ವ್ಯಕ್ತಿ ಪೂಜೆ ಬೇಕೇ..?? ಮಾನವರೇ ದೇವರಾದರೆ ದೇವರ ಅಸ್ತಿತ್ವಕ್ಕೆ ಬೆಲೆ ಎಲ್ಲಿ..?! ಎಂದು ಕೇಳುತ್ತಾರೆ ನಮ್ಮ ದೊಡ್ಡವರು
ಬೇಕು ಎನ್ನುತ್ತೇನೆ ನಾನು. ಅದರೆ ವ್ಯಕ್ತಿಗಲ್ಲ, ದೇವರಂತಹ ವ್ಯಕ್ತಿಗೆ. ಮನುಷ್ಯ ದೇವರಾಗಿಬಿಡಬೇಕು ತನ್ನ ಉತ್ತಮ ಯೋಚನೆಗಳಿಂದ, ಉತ್ತಮ ಕೆಲಸಗಳಿಂದ.
ಇನ್ನು ದೇವರೆಂದರೆ ಯಾರು? ನೀವು ರಾಮ, ಕೃಷ್ಣ, ಅಲ್ಲಾ, ಯೇಸು ಇವರೆಲ್ಲರೂ ದೇವರೆಂದರೆ, ನಾನು ಮನುಷ್ಯನಲ್ಲಿರಬೇಕಾದ ಒಳ್ಳೆಯತನವನ್ನೇ ದೇವರೆನ್ನುತ್ತೇನೆ. ದೇವರು ಒಬ್ಬೊಬ್ಬರಿಗೆ ಒಂದೊಂದು ರೂಪ. ಅವರವರ ಅಸ್ಮಿತೆಗೆ ಬಿಟ್ಟಂತೆ.


ಆದರೆ ದೇವರು ಎಂಬ ಪದದ ತೂಕ ಮಾತ್ರ ಬಲು ಎತ್ತರದ್ದು. ಯಾರಿಗೂ ನಿಲುಕದ್ದು. ಅಷ್ಟೆಲ್ಲಾ ಒಳ್ಳೆಯವರಾಗಿ ಬಾಳಿದ ಪಾಂಡವರೇ, ಸ್ವರ್ಗಕ್ಕೆ ಹೋಗಿ ಸೇರುವಷ್ಟು ಪುಣ್ಯ ಸಂಪಾದನೆ ಮಾಡಲಾಗಲಿಲ್ಲ. ಸ್ವರ್ಗಕ್ಕೆ ಹೋಗುವ ದಾರಿಯಲ್ಲೇ, ಹೋಗುತ್ತಲೇ ಪ್ರಾಣ ಬಿಟ್ಟವರು. ಇನ್ನೂ ನಾವು-ನೀವು ಎಲ್ಲಿಯವರು?
ಹುಲು ಮಾನವರು ದೇವರಾಗಬಾರದೆಂದಿಲ್ಲ, ಆಗಬಹುದು ಅದು ಅವರ ಒಳ್ಳೆಯ ಕೆಲಸಗಳಿಂದ. ಆದರೆ ಒಳ್ಳೆಯವರನ್ನು ಪೂಜಿಸುವವರು ಬೇಕಲ್ಲಾ!ಯಾರಿದ್ದಾರೆ?!.
ಇರುವವರೆಲ್ಲಾ ಅರ್ಹರಲ್ಲದ ವ್ಯಕ್ತಿಪೂಜೆಯಲ್ಲಿ ನಿರತರಾಗಿಬಿಟ್ಟಿದ್ದಾರೆ. ಊರತುಂಬಾ ಹರಡಿಕೊಂಡಿರುವ ಅನರ್ಹರು, ಅಲ್ಲಲ್ಲೇ ಇರುವ ಸಜ್ಜನರ ಉಪಯೋಗ ಇತರರಿಗೆ ಸಿಗುವುದಕ್ಕೆ ಬಿಡುವುದೇ ಕಷ್ಟ. ಹೇಗೆ ಅಂತೀರಾ ಪಾಪಾಸುಕಳ್ಳಿ ಹಣ್ಣಿನ ಹಾಗೆ. ಪಾಪಾಸುಕಳ್ಳಿ ಹಣ್ಣು ಸಹ ಹಣ್ಣೇ. ಆದರೆ ಮೈ ಮೇಲೆಲ್ಲಾ ಮುಳ್ಳು ತಿನ್ನುವುದಾದರೂ ಹೇಗೆ?!. ಕೆಲವೇ ಕೆಲವು ಸಜ್ಜನರು ಆ ಹಣ್ಣು. ಆ ಹಣ್ಣಿನ ಮೇಲೂ ಸಹ ಮುಳ್ಳಿನ ದಾಳಿ.
ಇನ್ನು ಸಜ್ಜನರಂತೆ ಕಾಣುವವರ ಬಗ್ಗೆ ಹೇಳುವುದಾದರೆ, ಅವರು ಹತ್ತಿಯ ಹಣ್ಣು. ಒಳಗಿರುವ ಹುಳಗಳು ಕಾಣಿಸೋದೇ ಇಲ್ಲಪ್ಪ. ಸುಮ್ಮನೆ ಹಣ್ಣು ಅಷ್ಟೇ.
ಅಲ್ಲಿ ರುಚಿಯಾದ ಪಾಪಾಸುಕಳ್ಳಿ ಹಣ್ಣನ್ನು ತಿನ್ನಲು ಅದರ ಮೇಲಿರುವ ಮುಳ್ಳುಗಳು ಬಿಡುವುದಿಲ್ಲ, ಇಲ್ಲಿ ಸುಂದರವಾಗಿ ಕಾಣುವ ಹತ್ತಿ ಹಣ್ಣು ತಿನ್ನಲು ಯೋಗ್ಯವೇ ಇರುವುದಿಲ್ಲ. ಇದು ನಮ್ಮ ಸಮಾಜದ ದುರ್ಗತಿ.
ಅಯ್ಯೋ ಅದೆಲ್ಲ ಬಿಡಿ, ಬನ್ನಿ ನಮ್ಮ ವ್ಯಕ್ತಿ ಪೂಜೆಯ ದುರ್ಗತಿ ನೋಡೋಣ:
ಅದೇನೋ ಸಮಾವೇಶ ಅಂತೆ ಕಣ್ರೀ. ಅವ, ಅವರ ದೇವರಂತೆ… ಅದಕ್ಕೆ ತಲಾ 500 ಕೊಡ್ತಾರಂತೆ, ಜನಸಾಮಾನ್ಯರಿಗೆ ತೊಂದರೆ ಆದರೂ ಪರವಾಗಿಲ್ಲ ಅಂತ ksrtc ಬಸ್ಸುಗಳನ್ನ ಹಳ್ಳಿಗೆ ಕಳಿಸ್ತಾರಂತೆ ಅದಕ್ಕೆ ಆ ಜನರೆಲ್ಲಾ ಬಂದು ಸೇರ್ತಾರಂತೆ. ಹಣ ಕೊಡ್ತಾರಲ್ಲ. ಅವ, ಅವರ ದೇವರಂತೆ.
ಮತ್ತೇನೋ ಮೈಸೂರು ಪೇಟ ಅಂತೆ. ಹೆಂಗೆ ಹೇಳಿ ಡಿಸೈನ್ ಡಿಸೈನ್. ಸಿಕ್ಕಸಿಕ್ಕದವರಿಗೆಲ್ಲ. ನನಗೂ ಹಾಕಿದ್ರು ನಾ ಯಾವಾಗ ಮೈಸೂರು ಮಹಾರಾಣಿ ಆದೆ ಅಂತ ಗೊತ್ತೇ ಆಗ್ಲಿಲ್ಲ. ಬದಲಿಗೆ ಒಂಚೂರು ಹಣ್ಣು ಕೊಟ್ಟಿದ್ರೆ ಹೊಟ್ಟೆಗಾದ್ರೂ ತಿನ್ನಬಹುದಿತ್ತು. ಅಯ್ಯೋ ಇಲ್ವಂತೆ, ಅದು ಫೋಟೋಗೆ ಕಾಣಿಸೋಲ್ವಂತೆ ಅದಕ್ಕೆ, ಅಷ್ಟೇಲ್ಲಾ ಕಷ್ಟಪಟ್ಟು ಸಂಸ್ಥಾನ ಕಟ್ಟಿದ, ಮೈಸೂರು ಒಡೆಯರ ತಲೆಮೇಲೆ ಇರಬೇಕಾದ ಪೇಟವನ್ನು ಸಿಕ್ಕ ಸಿಕ್ಕಿದವರಿಗೆಲ್ಲಾ ಹಾಕ್ತಾರಂತೆ, ಅವರೆಲ್ಲ ರಾಜರಂತೆ. ಅಷ್ಟೇ ಅಲ್ಲ ರಾಣಿಯರೂ ಹೌದಂತೆ.
ಮತ್ತೊಂದು ಗೊತ್ತಾ?! ಯಾರು ಫೇಮಸ್ ಆಗಿರ್ತಾರೋ ಅವರೇನು ಹೇಳಿದ್ರೂ ಸೈ ಅಂತೆ. ಎಲ್ಲಾ ಕುರಿಗಳು ಅವರ ಕಡೆಗೇನೇ ಇರುತ್ತಾವಂತೆ. ಸರೀನೋ ತಪ್ಪೋ ಒಟ್ಟಿನಲ್ಲಿ ಅವರಿಗೆ ಜೈ. ಯಾಕಂದ್ರೆ ಇವರದೂ ಬೇಳೆ ಬೇಯಿಸಿಕೊಳ್ಳೋದು ಬೇಡ್ವಾ?! ಕೊನೆಯಪಕ್ಷ ಇವರಿಗೆ ಉಳಿಗಾಲವಾದರೂ ಬೇಕಲ್ಲ! ಹಾಗಾಗಿ ಜೈ ಎನ್ನಲೇಬೇಕು.
ಇಷ್ಟು ಸಾಕು ಬಿಡಿ. ‘ಮಾಡಿದವರ ಪಾಪ ಆಡಿದವರ ಬಾಯಲ್ಲಿ’ ಸುಮ್ಮನೆ ಯಾಕೆ. ಮತ್ತೆ ಅವರಿಗೆ ಬೇಸರವಾಗಿಬಿಟ್ಟೀತು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ

ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ

ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ

ಮಾನವೀಯತೆಯ ಗ್ರಂಥಾಲಯದಂತಿದ್ದ ಅಟಲ್ ಜೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶೇಷಚೇತನ ಮಕ್ಕಳನ್ನು ಗೌರವದಿಂದ ಕಾಣಿ :ಬಿಇಓ ತಳವಾರ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ಸಾಮರಸ್ಯ ಮೂಡಿಸುವ ಭಗವದ್ಗೀತಾ :ಹೆಗಡೆ
    In (ರಾಜ್ಯ ) ಜಿಲ್ಲೆ
  • ವಕೀಲಿಕೆಯು ಪಕ್ಷಗಾರರಿಗೆ ನ್ಯಾಯ ಕೊಡಿಸೊ ಕಾರ್ಯಗೈವ ಏಕೈಕ ವೃತ್ತಿ
    In (ರಾಜ್ಯ ) ಜಿಲ್ಲೆ
  • ಮಾನವೀಯತೆಯ ಗ್ರಂಥಾಲಯದಂತಿದ್ದ ಅಟಲ್ ಜೀ
    In ವಿಶೇಷ ಲೇಖನ
  • ಲೋಕಾಯುಕ್ತ ಅಧಿಕಾರಿಗಳ ದಾಳಿ :ದಾಖಲೆಗಳ ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಹಾಗೂ ಪತ್ರಕರ್ತರ ಓಟಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತ
    In (ರಾಜ್ಯ ) ಜಿಲ್ಲೆ
  • ಗುರು ಎಂದು ಚೈತನ್ಯ ಸ್ವರೂಪ :ಶಿವಬಸಯ್ಯ ಸ್ವಾಮಿ
    In (ರಾಜ್ಯ ) ಜಿಲ್ಲೆ
  • ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ
    In (ರಾಜ್ಯ ) ಜಿಲ್ಲೆ
  • ಅದ್ಧೂರಿ ಗುರುವೀರಘಂಟೈ ಮಡಿವಾಳೇಶ್ವರ ಜೋಡು ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಮಕ್ಕಳನ್ನು ಪ್ರಬುದ್ದ ನಾಗರಿಕರಾಗಿ ನಿರ್ಮಾಣ ಮಾಡಿ :ಬಿಇಓ‌ ತಳವಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.