Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು ಶಿಕ್ಷಣ ಶ್ರೇಷ್ಠ ಸೇವೆ. ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಹೋರ್ತಿ ಗ್ರಾಮದ ಶ್ರೀ ರೇಣುಕ ವಿಜಯ ಕಲ್ಯಾಣ ಮಂಟಪ ಆವರಣದಲ್ಲಿ ನಡೆದ ಸೇವಾ ನಿವೃತ್ತಿ ಹೊಂದಿರುವ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಬಿ ಬಿ ಗಡ್ಡದ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.ನಮ್ಮತನ ಯಾವತ್ತಿದ್ದರೂ ಅಳಿದು ಹೋಗದಂತೆ ವಿಶ್ವದ ಭೂಪಟದಲ್ಲಿ ನಾವು ಮಿಂಚಬೇಕು ಎನ್ನುವ ಮಾತಿನಂತೆ ಬಿ ಬಿ.ಗಡ್ಡದವರು ಇಂಡಿ ತಾಲ್ಲೂಕಿನ ಹೋರ್ತಿ ಎಂಬ ಹಳ್ಳಿಯಿಂದ ಬೆಳೆದು ನಿಂತು ಇವತ್ತು ವಿವಿಧ ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅವರದ್ದು ಸೌಮ್ಯ-ಗಂಭೀರ ಸ್ವಭಾವ. ವ್ಯತಿರಿಕ್ತ ಸಂದರ್ಭಗಳಲ್ಲಿ ಕಷ್ಟಗಳನ್ನು ಅನುಭವಿಸಿ ಯಾರೂ ಬೆಳೆದು ಬರುತ್ತಾರೋ ಅವರಿಗೆ ಸಾಧನೆ ಮಾಡುವ ಹುಮ್ಮಸ್ಸಿರುತ್ತದೆ ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ ಈಶಪ್ರಸಾದ ಮಹಾಸ್ವಾಮಿಗಳು ಗುರುದೇವ ಆಶ್ರಯ ಅಥರ್ಗಾ ಅವರು ಆಶೀರ್ವಚನ ನೀಡಿದರು.ಈ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ತ್ಯಾಗ ಭಾವ್ಯಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ರವಿವಾರದಂದು ಲೇಝಿಮ್ ಉತ್ಸವ, ಡೋಲಿ ಮೆರವಣಿಗೆಯೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.ಕಳೆದ ಐದುದಿನಗಳಿಂದ ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಛೇರಿಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ಲಾಲಸಾಬಲಿ ಹಾಗೂ ಹುಸೇನಬಾಷ ದೇವರುಗಳಿಗೆ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.ಸಾಥವಿ ಪೂಜೆ, ಗಂಧರಾತ್ರಿ ನಡೆಯುವ ವಿಶೇಷ ಪೂಜೆಗಳಲ್ಲಿ ಜಾತಿ ಮತಭೇದವಿಲ್ಲದೆ ಸರ್ವಧರ್ಮಿಯರು ಪಾಲ್ಗೊಂಡು ತಮ್ಮ ಭಕ್ತಿಗನುಸಾರವಾಗಿ ಹರಕೆ ತೀರಿಸಿದರು.ಶನಿವಾರ ರಾತ್ರಿ ಕರ್ಬಲಾ ನಿಮಿತ್ಯ ರಾತ್ರಿಯಿಡಿ ಉಪ್ಪಲದಿನ್ನಿಯ ಶಾಲ ನೇತ್ರತ್ವದ ರಿವಾಯತ್ ತಂಡ ಹಾಗೂ ಸ್ಥಳೀಯ ತಂಡಗಳಿಂದ ಮೊಹರಂ ಪದಗಳ ಗೀತಗಾಯನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು. ಹಬ್ಬದ ಕೊಣೆಯದಿನವಾದ ರವಿವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಸಾವಿರಾರು ಜನ ರೈತರು, ಗ್ರಾಮಸ್ಥರು ದೇವರುಗಳಿಗೆ ಬೆತ್ತಾಸು, ಖಾರಿಕ, ಬಿಸ್ಕೇಟ್‌ಗಳನ್ನು ಎಸೆಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವರಲ್ಲಿ ನಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಮುಸ್ಲಿಂ ಬಾಂಧವರು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿರುವ ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ಸಂಜೆ ಅಲಾಯಿ ದೇವರುಗಳ ಹಾಗೂ ಡೋಲಿಗಳ ವಿಸರ್ಜನೆ ಅಂಗವಾಗಿ ಜರುಗಿದ ಮೆರವಣಿಗೆಯಲ್ಲಿ ಜನರು ಶ್ರದ್ಧಾ, ಭಕ್ತಿಯಿಂದ ಭಾಗವಹಿಸಿದರು.ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಅಲಾಯಿ ದೇವರಿಗೆ ಶನಿವಾರ ಸಂಜೆ ಜನರು ಸಕ್ಕರಿ, ಮಾದಲಿ ಅರ್ಪಿಸಿದರು. ಭಾನುವಾರ ಸಂಜೆ ಜರುಗಿದ ಅಲಾಯಿ ದೇವರುಗಳ ವಿಸರ್ಜನಾ ಕಾರ್ಯಕ್ರಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದರು. ಡೋಲಿ, ಅಲಾಯಿ ದೇವರು ಸಾಗುವ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಜನರು ಉತ್ತತ್ತಿ, ಶೇಂಗಾ, ಚುನಮರಿ ತೂರಿ ಅಲಾಯಿ ದೇವರುಗಳಿಗೆ ನಮಸ್ಕರಿಸಿದರು.ಇಂಗಳೇಶ್ವರ ರಸ್ತೆ, ಅಗಸಿ ಒಳಗಡೆ, ಮಹಾರಾಜರ ಮಠದ ಹತ್ತಿರ, ನಾಗೂರ ರಸ್ತೆಯಲ್ಲಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ಡೋಲಿ ಹಾಗೂ ಅಲಾಯಿ ದೇವರಗಳು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡವು. ನಂತರ ಬಸವತೀರ್ಥ ಬಾವಿಯಲ್ಲಿ ವಿಸರ್ಜನಾ ಕಾರ್ಯ ನಡೆಯಿತು.ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಹಿಂದು-ಮುಸ್ಲಿಂ ಬಾಂಧವರು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ರವಿವಾರ ಎಲ್ಲಾ ಧರ್ಮದ ಸಹೋದರರು ಭಾವೈಕ್ಯತೆಯಿಂದ ಕೂಡಿ ಮೊಹರಂ ಹಬ್ಬವನ್ನು ಶಾಂತಿಯಿಂದ ಆಚರಿಸಿದರು.ಕೊಲ್ಹಾರ ಎಂದರೆ ನೆನಪಾಗುವುದು ಕೆನೆ ಮೊಸರು ಕುಡಿಕೆ ಇದರ ಜೋತೆಗೆ ಮೊಹರಂ ಹಬ್ಬ ಈ ಹಬ್ಬದ ವಿಶೇಷತೆ ಪಟ್ಟಣದ ಏಳು ಮಕ್ಕಳ ತಾಯಿ ಯಿಂದ ಮೌಲಾ ಅಲಿ, ಜಿಂಗಿ ಸಾಹೇಬ, ಹಟೇಲ ಬಾಷಾ, ಹಾಶಿಂ ಪೀರ, ಇಮಾಮ ಕಾಸಿಂ, ಹುಸೇನ ಆಲಂ, ಲಾಲಸಾಬಪೀರ್ ಒಟ್ಟು ಹೀಗೆ ಏಳು ದೇವರು ಹಾಗೂ ಐದು ಡೋಲಿಗಳ ಎದುರುಗೊಳ್ಳಲು ಬರುವ ಸನ್ನಿವೇಶ ನೇರದ ಭಕ್ತರು ಹುಯಿಲೋ ಹುಯಿಲೋ ಘೋಷಣೆ ಮುಗಿಲು ಮುಟ್ಟಿತ್ತು.ಪಟ್ಟಣದ ಹೃದಯ ಭಾಗದಲ್ಲಿರುವ ಅಗಸಿ ಮುಂದಿನ ಗಾಂಧಿ ಸರ್ಕಲ್ ನಲ್ಲಿ ಐದು ಡೋಲಿಗಳು ನಿಂತಲ್ಲಿ ಊರಿನ ಹಿರಿಯರು ಯುವಕರು ಭಕ್ತರು ಬಂದು ಉತ್ತತ್ತಿ ಹಾರಿಸಿ,ಲೋಬಾಣ ಹಾಕಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.ವಿಶೇಷತೆ: ಪಟ್ಟಣದಲ್ಲಿ ಎಲ್ಲಾ ಧರ್ಮದ ಸಹೋದರರು ಭಾವೈಕ್ಯತೆಯಿಂದ ಅಲಾಯಿ ಹೆಜ್ಜೆ ಹಾಕುತ್ತಾ, ಕರಡಿ ಮಜಲಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವರನ್ನು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ರಾಜ್ಯ ಸರ್ಕಾರದ ನಾಗರಿಕ ಸೇವಾ ಕೇಂದ್ರಗಳಾದ ಕರ್ನಾಟಕ ಒನ್ ಕೇಂದ್ರಗಳು ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತವೆ. ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯಬಹುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಅವರು ಪಟ್ಟಣದ ಮುಖ್ಯ ಬಜಾರನ ಹಳೇ ಅಂಜುಮನ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಒನ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರುಖಾಸಗಿ ಸೇವೆಗಳನ್ನು ನಾಗರಿಕರಿಗೆ ಸುಲಭವಾಗಿ ಒದಗಿಸುವುದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದು, ಸಮಯ ಮತ್ತು ಹಣವನ್ನು ಉಳಿಸುವುದು, ಪಾರದರ್ಶಕ ಮತ್ತು ಪರಿಣಾಮಕಾರಿ ಆಡಳಿತವನ್ನು ಒದಗಿಸುವುದು, ನಾಗರಿಕರ ಅಗತ್ಯಗಳಿಗೆ ಸ್ಪಂದಿಸುವುದು ಈ ಕೇಂದ್ರದ ಉದ್ದೇಶವಾಗಿದೆ ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ ಕೆ.ವಿಜಯಕುಮಾರ, ಪ.ಪಂ ಅಧ್ಯಕ್ಷ ಸಾಧೀಕ ಸುಂಬಡ, ಕರ್ನಾಟಕ ಓನ್ ನಿರ್ವಹಕ ಇರ್ಫಾನ್ ಹುಂಡೇಕಾರ, ಸೈಪನ್ ಜಮಾದಾರ, ಸೈಪನ್ ಮುಲ್ಲಾ, ಪ್ರಭು ವಾಲೀಕಾರ, ಉಸ್ಮಾನ ಹುಂಡೇಕಾರ, ಮೌಲಾಲಿ ಬಾಗವಾನ ಸೇರಿದಂತೆ ಅನೇಕರಿದ್ದರು.

Read More

ಪಿಕೆಪಿಎಸ್ ಅಧ್ಯಕ್ಷ-ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಸರಕಾರ ರೈತರಿಗಾಗಿ ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವ ಜವಾಬ್ದಾರಿ ಸಹಕಾರಿ ಸಂಸ್ಥೆಯದಾಗಿದ್ದು ಅವರ ಹಿತ ಕಾಯಲು ನೂತನ ಅಧ್ಯಕ್ಷ ಉಪಾಧ್ಯಕ್ಷರು ಬದ್ದರಾಗಿರಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಸಲಹೆ ನೀಡಿದರು.ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಬಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿಯೇ ಜಿಲ್ಲೆಯ ಜಮಖಂಡಿ, ಮುಧೋಳ, ಬೀಳಗಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನ ರೈತ ಸಹಕಾರಿ ಸಂಸ್ಥೆಗಳು ಬಲಿಷ್ಠವಾಗಿದ್ದು ಅಭಿವೃದ್ದಿಯಲ್ಲಿ ಮುಂಚೂನಿಯಲ್ಲಿವೆ. ಈಭಾಗದ ರೈತರ ಜೀವನಾಡಿಯಾಗಿರುವ ಗ್ರಾಮದ ಪಿಕೆಪಿಎಸ್ ಸಂಸ್ಥೆ ಈಗಾಗಲೇ ಲಾಭದಲ್ಲಿದ್ದು ರೈತ, ನೇಕಾರ, ಕೂಲಿ ಕಾರ್ಮಿಕರ ಹಾಗೂ ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ದಿಗೆ ಶೃಮಿಸುವ ಮೂಲಕ ಸಂಘವನ್ನು ಇನ್ನೂ ಉನ್ನತ ಶ್ರೇಣಿಗೆ ಕೊಂಡೊಯ್ಯಬೇಕೆಂದರು.ಸಂಸ್ಥೆಯ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಮಾತನಾಡಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯಲು ಈ ಹಿಂದೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು…

Read More

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ | ೭೩ ಸಸಿ ನೆಟ್ಟು ಪರಿಸರದ ಜಾಗೃತಿ ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಪ್ರತಿ ವರ್ಷ ಜುಲೈ ತಿಂಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ನೆಟ್ಟಿದ ಸಸಿಗಳನ್ನು ಮರವಾಗಿ ಬೆಳೆಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಝಿನ ಪ್ರಾಂಶುಪಾಲ ಡಾ.ಸಂತೋಷ ಹುಗ್ಗಿ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಕಲಬುರಗಿ ವಿಭಾಗದ ವತಿಯಿಂದ ನಡೆದ ವನಮಹೋತ್ಸವದ ಅಂಗವಾಗಿ ಬೃಹತ್ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಗಿಡ ಮರಗಳು ಹೇರಳವಾಗಿ ಬೆಳೆಸಿದರೆ ಸಾಕಷ್ಟು ಲಾಭಗಳಿವೆ. ಭೂಮಿ ಮೇಲಿನ ಪ್ರತಿ ಜೀವಿಗೂ ಗಾಳಿ ಅವಶ್ಯಕವಿದೆ. ಅಷ್ಟೇ ಅಲ್ಲ ಮಳೆ ಹೆಚ್ಚಳವಾಗಿ ಅಂತರ್ಜಲವೂ ಹೆಚ್ಚಳವಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಅರಣ್ಯ ಪ್ರದೇಶ ನಾಶವಾಗದಂತೆ ಕಾಪಾಡಬೇಕು. ಎಲ್ಲೆದಂರಲ್ಲಿ ಗಿಡಗಳಿಂದ ತುಂಬಿದಂತಾಗಬೇಕು ಎಂದರು.ಎನ್‌ಎಸ್‌ಎಸ್ ಅಧಿಕಾರಿ ಡಾ.ದತ್ತಾತ್ರೇಯ ಸಿ.ಹೆಚ್ ಮಾತನಾಡಿ, ಪ್ರತಿ ವರ್ಷ ಜುಲೈ ಮೊದಲ ವಾರದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮೊಹರಂ ನಿಮಿತ್ಯ ರವಿವಾರ ನಸುಕಿನ ೫ ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಹುಸೇನ, ಹಸನ ಮತ್ತು ಕಾಸಿಮರ ಭವ್ಯ ಮೆರವಣೆಗೆ ನಡೆಯಿತು.ದಾದಾಗೌಡರ ಮನೆಯಿಂದ ಹೂವಿನ ಅಲಂಕಾರ ಬಂದ ನಂತರ ಸಿಂಗರಿಸಿ ಮೆರವಣೆಗೆ ಪ್ರಾರಂಭವಾಗುತ್ತದೆ.ಎತ್ತಿನ ಗಾಡಿಯಲ್ಲಿ ನಗಾರಿ ಹಾಕಿ ಬಾರಿಸುವದರೊಂದಿಗೆ ಪ್ರಾರಂಭವಾಯಿತು. ರೈತರು ತಮ್ಮ ಎತ್ತುಗಳನ್ನು ಎತ್ತಿನ ಬಂಡಿಗೆ ಬದಲಾಯಿಸಿ ಪ್ರದರ್ಶನ ಮಾಡುವದು ಇಂದು ವಿಶೇಷ.ಅಲಾವಿ ಕುಣಿತ, ಕೋಲು ಮೇಳ,ಕಡೆಗೋಲು ಮೇಳ, ಭಡಂಗ ಕುಣಿತ, ತಾಷಾ, ಬೆಂಡ್ ಕುಣಿತ ಹುಲಿ ವೇಷ, ಬಾವಾ, ಫಕೀರ ಸೇರಿದಂತೆ ಸುಮಾರು ಎರಡು ಕಿ.ಮಿಉದ್ದದ ಮೆರವಣೆಗೆ ನಡೆಯಿತು.ಮೆರವಣೆಗೆ ಮಹಾವೀರ ವೃತ್ತದಲ್ಲಿ ಬಂದಾಗ ಮೂರು ಜೇನು ಹುಳಗಳು ಬಂದು ಪಂಜಾ ಸ್ಪರ್ಶ ಮಾಡುವದು ಒಂದು ವಿಶೇಷ.ಪಾಂಜಾ ಕುರಿಸಿದ ದೇವಸ್ಥಾನದಲ್ಲಿ ಕವಡೆ — ಉದು ಹಾಕಿ ಹೂವಿನಿಂದ ಅಲಂಕರಿಸಿ ಮಗ್ದುಮ ಸಕ್ಕರೆ ಫಾತೇಹ ನೀಡಲಾಯಿತು.ಯುವಕರು ಹಾಗು ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ ಮೆರವಣೆಗೆಯಲ್ಲಿ ಪಾಲ್ಗೊಳ್ಳುತ್ತಾರೆ.ಅಳ್ಳೊಳ್ಳಿ ಬಾವಾಗಳಾಗಿ ಹುಲಿ ವೇಷ ಧರಿಸಿ ಆಲಾವಿ ಕುಣಿತ ಮಾಡುತ್ತ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತ್ಯಾಗ ಬಲಿದಾನದ ಪ್ರತೀಕವಾದ ಮೊಹರಂ ಅಂಗವಾಗಿ ಅಲಾಯಿ ದೇವರ ಪಂಜಾ ಹಾಗೂ ಡೋಲಿ ಮೆರವಣಿಗೆ ಸರಳವಾಗಿ ಜರುಗಿದವು.ಪಟ್ಟಣದಲ್ಲಿ ಭಾನುವಾರ ಸಾಂಪ್ರದಾಯಿಕ ಹಿಂದೂ-ಮುಸ್ಲಿ ಭಾವೈಕ್ಯತೆಯ ಮೊಹರಂನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಕೊನೆಯ ದಿನ ಸಂಪ್ರದಾಯದಂತೆ ಬಿ.ಕೆ.ಪಾಟೀಲ ಊದ್ ಹಾಕುವುದರ ಮೂಲಕ ಚಾಲನೆ ನೀಡಿದರು. ನಂತರ ಅಲಾಯಿ ದೇವರ ಮೆರವಣಿಗೆ ಹಲಿಗೆ ವಾಧ್ಯಮೇಳದೊಂದಿಗೆ ಬಜಾರ್ ಮಾರ್ಗದಲ್ಲಿ ಜರುಗಿತು. ಈ ಸಮಯದಲ್ಲಿ ಎರಡು ಸಮುದಾಯದ ಜನರು ಕೋಲು ಹಿಡಿದು, ಹೆಜ್ಜೆ ಹಾಕಿ ಭಕ್ತಿಭಾವ ಪ್ರದರ್ಶಿಸಿದರು.ಮೆರವಣಿಗೆಯಲ್ಲಿ ಮಲ್ಲನಗೌಡ ಪಾಟೀಲ, ಸಂಪತ್ ಜಮಾದಾರ, ಮಲ್ಲು ನಾಟೀಕಾರ, ಸುಭಾಸ ಕಡ್ಲೇವಾಡ, ಚಂದ್ರು ಮೆಟಗಾರ, ಜಮೀರ್ ಮಕಾಂದಾರ್, ಸೈಫನ್ ಅತ್ತಾರ, ಅಶೋಕ ರಾಮಗೊಂಡ, ಮಡಿವಾಳಪ್ಪ ಕೋರಿ, ರಾವುತ ಮೆಟಗಾರ, ಮಲ್ಲು ಜಮಾದಾರ, ಶ್ರೀಶೈಲ ಜಮಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಇತ್ತೀಚೆಗೆ ಪ್ರಕರಣವೊಂದರ ಆರೋಪಿಗಳನ್ನು ಬಂಧಿಸಿ ಕರೆತರುವಾಗ ಇತ್ತೀಚಿಗೆ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ತಲಘಟ್ಟಪುರ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಮೆಹಿಬೂಬ್ ಗುಡ್ಡಳ್ಳಿ ಮರಣ ಹೊಂದಿದ್ದು, ಅವರ ಮನೆಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಇದರೊಂದಿಗೆ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಹೆಚ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲೆಯ ದುರಸ್ಥಿ ಮತ್ತು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ವೀಕ್ಷಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಅರವಿಂದ ಹಂಗರಗಿ ಸೇರಿದಂತೆ ಅನೇಕರು ಇದ್ದರು.

Read More