Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸರ್ಕಾರಕ್ಕೆ ಸಾಲ ಕೊಡಬಲ್ಲ ರೈತ ಆದರೆ ಇಂದು ರೈತ ತನ್ನ ಗೊಬ್ಬರ ಪಡೆಯಲು ಹೋರಾಟ ಮಾಡಿ ಪಡೆಯುವ ದುಸ್ಥಿತಿ ಬಂದಿದೆ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕರವೇ ಕಾರ್ಯಕರ್ತರು ರೈತರಿಗೆ ಯೂರಿಯಾ ಗೊಬ್ಬರ ಲಭ್ಯತೆ ಹಾಗೂ ಸತತ ಸುರಿದ ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಮುಖಂಡ ಟಿ.ಟಿ. ಹಗೇದಾಳ ಮಾತನಾಡಿ ರಾಜ್ಯದಲ್ಲಿ ನಮ್ಮ ತಾಲೂಕಿನಲ್ಲಿಯೇ ಅತಿ ಹೆಚ್ಚು ಭೂಮಿಯನ್ನು ಸರ್ಕಾರ ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಿದ್ದು, ಮುಂದೆ ಯಾವುದೇ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು. ನಮ್ಮ ಮುಂದಿನ ಮಕ್ಕಳು, ಮೊಮ್ಮಕ್ಕಳಿಗೆ ಭೂಮಿ ಇಲ್ಲದಂತಾಗುತ್ತದೆ. ಜಿಲ್ಲಾಡಳಿತ ಅತೀ ಶೀಘ್ರದಲ್ಲಿ ಮಳೆಯಿಂದ ಹಾನಿಯಾದ ಬೆಳೆಗಳ ವರದಿಯನ್ನು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಜ್ಯದ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ದೇವಾಲಯದ ಬಗ್ಗೆ ಕಳೆದ ಹಲವು ದಿನಗಳಿಂದ ಪಟ್ಟಭದ್ರ ಹಿತಾಸಕ್ತಿಯ ಸಂಘಟನೆಯವರು ನಿರಂತರ ಅಪಪ್ರಚಾರ ಮಾಡುತ್ತಿರುವದನ್ನು ಖಂಡಿಸಿ ಭಾರತೀಯ ಜನತಾಪಕ್ಷ ಬಸವನ ಬಾಗೇವಾಡಿ ಮಂಡಲ ಘಟಕದ ವತಿಯಿಂದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಪಟ್ಟಣದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಕೆ.ಬೆಳ್ಳುಬ್ಬಿ ದೇಶದಲ್ಲಿರುವ ಎಡಪಂಕ್ತಿಯ ಸಂಘಟಣೆಗಳು ಹಿಂದೂ ಧರ್ಮ ವಿರೋಧಿ ಮಹಣೀಯರು ಸೇರಿಕೊಂಡು ಕೆಲವೇ ಕೆಲವು ಧರ್ಮ ವಿರೋಧಿಯ ಪಟ್ಟಭದ್ರ ಹಿತಾಸಕ್ತಿಯ ನೀಚ ವ್ಯಕ್ತಿತ್ವ ಗುಣಗಳುಳ್ಳ ವ್ಯಕ್ತಿಗಳು ಇಂತಹ ಪವಿತ್ರ ದೇವಸ್ಥಾನದ ಮತ್ತು ಧರ್ಮಾಧಿಕಾರಿಗಳ ವ್ಯಕ್ತಿತ್ವಕ್ಕೆ ಮಸಿಬಳಿಯಲು ಕುಹಕ ಬುದ್ದಿಯನ್ನು ತೋರಿಸುತ್ತಿದ್ದು ಸತ್ಯ ಹೊರಬಂದು ಮಾನಗೇಡಿ ಮನುಷ್ಯತ್ವವುಳ್ಳ ವ್ಯಕ್ತಿಗಳಿಗೆ ತಕ್ಕ ಶಿಕ್ಷೆಯನ್ನು ಮಂಜುನಾಥ ಸ್ವಾಮಿ ಕಲ್ಪಿಸುವ ಕಾಲ ದೂರವಿಲ್ಲ ಎಂದರು.ಬಸವನ ಬಾಗೇವಾಡಿ ಮಂಡಲದ ಪದಾದಿಕಾರಿಗಳು ಪಟ್ಟಣದ ಸರ್ವಜನತೆ ಪ್ರತಿಭಟಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಈ ಸಂಧರ್ಬದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶಿರೋಳದ ಮಹಾಂತಸ್ವಾಮಿಗಳು, ಮಂಡಲ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಆವೇಶದಲ್ಲಿ ಮನುಷ್ಯ ಮಾಡಿದ ತಪ್ಪಿಗೆ ನಿರಂತರವಾಗಿ ಇಡೀ ಜೀವನ ಪರ್ಯಂತ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆ ತಪ್ಪನ್ನು ತಿದ್ದಿಕೊಳ್ಳಲು ದೇವರ ಮೊರೆ ಹೋಗಬೇಕಾದ ಸಂದರ್ಬದಲ್ಲಿ ಭಜನೆಯಲ್ಲಿ ಅಡಗಿರುವ ಸಂದೇಶವನ್ನು ಅರಿತು ನಡೆಯಬೇಕಾಗುತ್ತದೆ ಆದ್ದರಿಂದ ಇಂದಿನ ಯುವ ಸಮೂಹ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾದ ಭಜನೆ ಮಾಡುವ ಪರಿಪಾಠವನ್ನು ನಿತ್ಯವೂ ಮಾಡಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ದ್ಯಾಮವ್ವದೇವಿ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಮತ್ತು ಕನ್ನಡ ಜಾನಪದ ಪರಿಷತ್ತು ತಾಲೂಕಾ ಘಟಕ ಕೊಲ್ಹಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ಒಂದು ತಿಂಗಳ ಪರ್ಯಂತ ಕೈಗೊಂಡ ಹರಭಜನಾ ಮುಕ್ತಾಯ ಹಾಗೂ ಅವಳಿ ಜಿಲ್ಲೆಯ ಭಜನಾ ತಂಡಗಳ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ನಮ್ಮ ದೇಶದ ಸಂಸ್ಕೃತಿ ಮನೆಯಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಸಂಸ್ಕಾರ ಕೊಡಬೇಕು ಈ ಹಿಂದೆ ಸಂತರು, ದಾಸರು, ಬಸವಾದಿ ಶರಣರು ತಮ್ಮ ವಚನ, ಕೀರ್ತನೆಗಳ ಮೂಲಕ ನಿತ್ಯ ಎಚ್ಚರಕೆಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಪಲ್ಲಕ್ಕಿ ಉತ್ಸವದೊಂದಿಗೆ ಅದ್ದೂರಿಯಾಗಿ ಜರುಗಿತು.ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿಶ್ರೀ ಗುರು ರೇವಣಸಿದ್ದೇಶ್ವರ ಪಲ್ಲಕ್ಕಿ, ತೆನ್ನಳ್ಳಿ ಜನವರಿಸಿದ್ಧ ಪಲ್ಲಕ್ಕಿ, ಬನ್ನಟ್ಟಿ ಲಕ್ಷ್ಮಿ ಲಾಯಮ್ಮ ಪಲ್ಲಕ್ಕಿ, ತಡವಲಗಾ ಮಡ್ಡಿಸಿದ್ದ ಪಲ್ಲಕ್ಕಿ, ಬೋಳೆಗಾಂವ ಶಾವರಸಿದ್ದ ಪಲ್ಲಕ್ಕಿ ಹಾಗೂ ಜಟ್ಟಿಂಗೇಶ್ವರ ಪಲ್ಲಕ್ಕಿ ಆಗಮಿಸಿದ್ದು, ಪಲ್ಲಕ್ಕಿ ಉತ್ಸವ ಜರುಗಿತು. ತದನಂತರ ರೇವಣಸಿದ್ಧೇಶ್ವರ ಗುಡಿಯಲ್ಲಿ ಹೂವಿನ ಅಲಂಕಾರದೊಂದಿಗೆ ದೇವಸ್ಥಾನ ಗರ್ಭ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಲಾಯಿತು.ತದನಂತರ ಹಾಡಕಿ ಶ್ರೀ ಗುರು ರೇವಣ ಸಿದ್ದೇಶ್ವರ ಗಾಯನ ಸಂಘ ಹನುಮಂತ ಗಿಣ್ಣಿ ಸಂಗಡಿಗರು ಹಾಗೂ ಜಟ್ಟಿಂಗೇಶ್ವರ ಗಾಯನ ಸಂಘ ಜಟ್ಟಪ್ಪ ಮಿರಗಿ ಸಂಗಡಿಗರು, ಸಂಗೊಳ್ಳಿ ರಾಯಣ್ಣನ ಗಾಯನ ಸಂಘ ಎಲ್ಲಪ್ಪ ಕೇಸುಗೂಳ ಸಂಗಡಿಗರು, ತೆನ್ನಳ್ಳಿ ಜನವರಿಸಿದ್ಧ ಡೊಳ್ಳಿನ ಗಾಯನ ಸಂಘ ಸೇರಿದಂತೆ ಅನೇಕರು ತಮ್ಮ ಗಾಯನ ಮೂಲಕ ಜಾತ್ರೆಯಲ್ಲಿ ಪರಂಪರೆಯ ಜಾತ್ರೆ ಮಾಡಿದರು.ಈ ಸಂದರ್ಭದಲ್ಲಿ ಜಾತ್ರೆಯ ಉಸ್ತುವಾರಿ ಪೀರಪ್ಪ ಜೋತಗೊಂಡ, ಸೈದಪ್ಪ ಜೊತಗೊಂಡ, ಜಟ್ಟೆಪ್ಪ ಜೊತಗೊಂಡ, ಬನ್ನಪ್ಪ ಜೋತಗೊಂಡ,ನಿಂಗಪ್ಪ ಜೋತಗೊಂಡ , ರೇವಣಸಿದ್ದ ಜೋತಗೊಂಡ,ಹಣಮಂತ ಜೋತಗೊಂಡ ವಹಿಸಿಕೊಂಡಿದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟಣ್ಣದ ನಾರಾಯಣಕರ ಒಣಿಯಲ್ಲಿ ಪರಶಿಷ್ಟ ವರ್ಗಿಕರಣ ದಲ್ಲಿ ನಾಗಮೋಹನ ದಾಸ ಆಯೋಗದ ವರದಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ೩೦ ವರ್ಷಗಳ ಸತತ ಹೋರಾಟ ಮಾಡಿದರ ಪಲವಾಗಿ ಒಳಮಿಸಲಾತಿಯಲ್ಲಿ ನಮ್ಮ ಡೋರ ಸಮಾಜವನ್ನು ಯಡಗೈ ಸಮುದಾಯದಲ್ಲಿ ಇಟ್ಟು ನಮ್ಮ ಸಮಾಜವನ್ನು ಮತ್ತೆ ಸಮಾಜದಲ್ಲಿ ಗುರುತಿಸುವಂತೆ ಮಾಡಿದಕ್ಕೆ ಆಲಮೇಲ ಪಟ್ಟಣದ ಸಮಾಜ ಬಾಂಧವರು ಸಹಿ ಹಂಚಿ ಸಂಬ್ರಮಿಸಿದರು. ಮುಖಂಡರಾದ ಅಶೋಕ ನಾರಾಯಣಕರ, ಶಿವಾಜಿ ನಾರಾಯಣಕರ, ಶ್ರೀಶೈಲ ನಾರಾಯಣಕರ, ದೇವಾನಂದ ಕಂದಾರೆ, ಶರಣು ಕಟಕೆ, ಸುನಿಲ ನಾರಾಯಣಕರ, ಸಿದ್ದು ನಾರಾಯಣಕರ, ಬಿ ಜಿ ನಾರಾಣಕರ, ರಮೇಶ ಕಂದಾರೆ ಇದ್ದರು.
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವರ್ಷದ ೧೨ ತಿಂಗಳಲ್ಲಿ ಒಂದು ಪವಿತ್ರವಾದ ಮಾಸ ವೆಂದರೆ ಅದು ಶ್ರಾವಣ ಮಾಸ ಈ ಮಾಸದಲ್ಲಿ ಬಹಳ ವಿಶೇಷವಾಗಿ ಆಚರಿಸುವುದರೊಂದಿಗೆ ನಾವು ಒಳ್ಳೇಯದನ್ನು ಮಾತನಾಡಿ, ಒಳ್ಳೆಯದನ್ನು ಕೇಳಿ, ಒಳ್ಳೆಯ ಜಾಗಕ್ಕೆ ಹೋಗಿ, ಒಳ್ಳೆಯ ನುಡಿಗಳನ್ನು ಕೇಳಿ ಪಾಲಿಸಿಕೊಂಡು ಹೋದಾಗ ಮಾತ್ರ ಈ ತಿಂಗಳಿಗೆ ಒಂದು ಅರ್ಥ ಬರುತ್ತದೆ ಎಂದು ಬಡದಾಳದ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.ಅವರು ತಾಲೂಕಿನ ದೇವರನಾವದಗಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಸೋಮೇಶ್ವರ ದೇವರ ಜಾತ್ರಾ ಮಹೋತ್ಸವದ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಜಗತ್ತನಲ್ಲಿ ಮನೆ ಕಟ್ಟಬೇಕಾದರೆ ಬೇರೆ ಬೇರೆ ದೇಶದವರು ಮನೆಯ ಕೋಲಿಗೆ ಬೇರೆ ಬೇರೆ ಹೆಸರಿಡುತ್ತಾರೆ. ಆದರೆ ನಮ್ಮ ಭಾರತ ದೇಶದಲ್ಲಿ ದೇವರ ಕೋಲಿಗೆ ಭಾರತ ಎಂದು ಹೆಸರಿಡುತ್ತಾರೆ. ಇದು ನಮ್ಮ ಭಾರತ ದೇಶ ಕಲಿಸಿಕೊಟ್ಟ ಆಚಾರ, ವಿಚಾರ, ಸಂಪ್ರದಾಯ. ಇವತ್ತಿನ ದಿನಮಾನದಲ್ಲಿ ಪುರಾಣ ಪುಣ್ಯ ಕಥೆಗಳು ಏಕೆ ಹಚ್ಚುತ್ತಾರೆ ಅಂದರೆ ನಮ್ಮಲ್ಲಿರುವ ಅವಗುಣಗಳನ್ನು ತೊಲಗಿ ಶಿವಗುಣಗಳು ಬರಲಿ ಎಂದು…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕನ್ನಡ ಫಿಲಂ ಚೇಂಬರ ವತಿಯಿಂದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಂ ಪೂಜಾರ ಅವರಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಆರೋಗ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವವಿಸಲಾಗಿದೆ.ಇಂಡಿ ತಾಲ್ಲೂಕಿನ ಚಿಕಬೇವನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ವೈ ಎಮ್ ಪೂಜಾರ ಅವರ ಗಣನೀಯ ಸೇವೆಗೆ ಕನ್ನಡ ಫಿಲಂ ಚೇಂಬರ ವತಿಯಿಂದ ಪ್ರಶಸ್ತಿ ಲಭಿಸಿದೆತಮ್ಮ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಧಾರ್ಮಿಕ ಸಂಘ ಸಂಸ್ಥೆಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚಿಸಿ ಯುವ ರಕ್ತಧಾನಿಗಳ ಮನವೊಲಿಸಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯಿಂದ ಹೋಗುವ ಜೀವಗಳು ಉಳಿಸುವ ಕಾರ್ಯ ಮಾಡಿದ್ದಾರೆ.ಅದಲ್ಲದೆ ವಯೋವೃದ್ಧರು ಕಣ್ಣು ಪೊರೆಯಿಂದ ಕಣ್ಣು ಕಾಣದೆ ಕಂಗಾಲಾಗಿ ಬದುಕುತ್ತಿರುವವರಿಗೆ ಉಚಿತ ಕಣ್ಣಿನ ಆಪರೇಷನ್ ಕ್ಯಾಂಪುಗಳು ಆಯೋಜನೆ ಹಾಗೂ ತಾಯಿ ಮಗುವಿನ ಆರೈಕೆ, ಸಾಂಕ್ರಾಮಿಕ, ಅಸಾಂಕ್ರಮಿಕ ರೋಗಗಳು ನಿಯಂತ್ರಣ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಅಧ್ಯಯನ ವಿಭಾಗ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ ಇವರ ಸಹಯೋಗದಲ್ಲಿ ‘ಕನ್ನಡ ಸಾಹಿತ್ಯ ಪರಂಪರೆ- ಅವಲೋಕನ’ ಕಾರ್ಯಕ್ರಮವನ್ನು ಇದೇ ದಿ. ೩೦ ರಂದು ಮಧ್ಯಾಹ್ನ ೩ ಗಂಟೆಗೆ ಕನ್ನಡ ಸಭಾಂಗಣದಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿವಿಯ ಕುಲಸಚಿವ ಶಂಕರಗೌಡ ಎಸ್ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಹಾಗೂ ಮೈಸೂರಿನ ಹಿರಿಯ ಪತ್ರಕರ್ತ ಡಾ.ಗಣೇಶ ಅಮೀನಗಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ವಹಿಸಲಿದ್ದಾರೆ ಎಂದು ಕಾರ್ಯಕ್ರಮ ಸಂಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥ, ಪ್ರೊ.ಎಂ.ನಾಗರಾಜ ಮತ್ತು ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಬಿಜೆಪಿ ಅಭಿವೃದ್ದಿ ಕೆಲಸ ಮಾಡದೆಯೇ ಪ್ರಚಾರ ಪಡೆದುಕೊಳ್ಳುತ್ತದೆ, ಆದರೆ ಕಾಂಗ್ರೆಸ್ ಅಭಿವೃದ್ದಿ ಮಾಡಿಯೂ ಪ್ರಚಾರ ಪಡದುಕೊಳ್ಳುವುದಿಲ್ಲ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಾರಂಭಿಸಲಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಇನ್ಮುಂದೆ ಹೆಚ್ಚೆಚ್ಚು ಮತದಾರರನ್ನು ತಲುಪಲಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.ಗ್ರಾಮದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬಾಗಲಕೋಟ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ನೇಮಕಗೊಂಡ ಸಲೀಮ ಸರಕಾವಸ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಡವರಿಗೆ ಜೀವನ ಮಟ್ಟ ಸುಧಾರಿಸಲು ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಯೂ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ, ಬಡವರು, ಹಿಂದುಳಿದವರ ಏಳ್ಗೆಯೆ ಕಾಂಗ್ರೆಸ್ ಧೇಯವಾಗಿದ್ದು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ತಲುಪುತ್ತಿರುವ ಕಾಂಗ್ರೆಸ್ ಮುಂಬರುವ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಲಿದೆ ಎಂದರು.ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಮಾತನಾಡಿ ಕಟ್ಟ ಕಡೆಯ ವ್ಯಕ್ತಗಳೂ ರಾಜಕೀಯವಾಗಿ ಬೆಳೆಯುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ ಇದಕ್ಕೆ ಸಲೀಮ ಸರಕಾವಸ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಸೆ. ೪ ರಂದು ನಡೆಯಲಿರುವ ಕಿಚಡಿ ಜಾತ್ರೆಗಾಗಿ ಸುಮಾರು ೪೦ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ರಥದ ಪುರ ಪ್ರವೇಶ ಕಾರ್ಯಕ್ರಮ ರವಿವಾರ ನಡೆಯಿತು.ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಹಾಗೂ ಶ್ರೀ ಜನಾರ್ಧನ ಮಹಾರಾಜರ ಸಾನಿಧ್ಯದಲ್ಲಿ ನಡೆದ ನೂತನ ರಥದ ಪುರಪ್ರವೇಶ ಕಾರ್ಯಕ್ರಮದಲ್ಲಿಸ್ಥಳಿಯ ಬಸ್ ನಿಲ್ದಾಣದ ಮಹಾದ್ವಾರದಿಂದ ನೂರಾರು ಮಹಿಳೆಯರಿಂದ ಆರತಿ ಕುಂಭ, ಸಕಲ ವಾದ್ಯ ವೃಂದಗಳೊAದಿಗೆ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ವರೆಗೆ ಮೆರವಣಿಗೆ ಮೂಲಕ ತರಲಾಯಿತು. ನಂತರ ವಿಶೇಷ ಪೂಜೆ, ಮಹಾಮಂಗಳಾರತಿಯ ನಂತರ ಮಹಾಪ್ರಸಾದ ವಿತರಣೆ ನಡೆಯಿತು.ಪ್ರಭುಲಿಂಗ ಸೇವಾ ಸಮೀತಿಯ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಬಾಳಪ್ಪ ಹಳಿಂಗಳಿ, ರಾಚಯ್ಯ ಮಠಪತಿ, ರಾಮಣ್ಣ ಬಗನಾಳ, ಗುರಪ್ಪ ಬಳಗಾರ, ಬಸಪ್ಪ ಮುಗಳಖೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಶಂಕರ ಬಟಕುರ್ಕಿ, ಪರಪ್ಪಾ ಪಾಲಭಾವಿ, ಬೀರಪ್ಪ ಹಳೆಮನಿ, ಪ್ರಕಾಶ ಪಾಟೀಲ, ಬಸವರಾಜ ಕುಂಚನೂರ, ಉಮೇಶ ಪೂಜಾರಿ, ಅಶೋಕ…
