ಶಾಲೆಯ ಸುತ್ತಮುತ್ತ ಗುಟ್ಟಾ ತಂಬಾಕು ಸಿಗರೇಟ್ ಮಾರಾಟ ಮಾಡುವ ಅಂಗಡಿ ಸಂಪೂರ್ಣ ಬಂದ್ ಮಾಡಲು ಸಾರ್ವಜನಿಕರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಶಾಲಾ ಕಾಲೇಜುಗಳ ಮುಂದೆ ಗುಟ್ಕಾ ಸಿಗರೇಟ್ ಬಿಡಿ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವಾರ್ಡ್ ಸಂಖ್ಯೆ 4ರಲ್ಲಿ ಬರುವ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳು ಮುಂದೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಕೂಡಲೇ ತಡೆಗಟ್ಟಲು ಆಗ್ರಹಿಸಿ ಸೋಮವಾರ ಸಾರ್ವಜನಿಕರು ತಹಸಿಲ್ದಾರ್, ಪೊಲೀಸ್ ಠಾಣೆ ಮತ್ತು ಪಟ್ಟಣ ಪಂಚಾಯಿತಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಬಾಬು ಭಜಂತ್ರಿ ಮಾತನಾಡಿ, ಶಾಲಾ ಕಾಲೇಜುಗಳಿಂದ ಸುಮಾರು 200 ಮೀಟರ್ ಅಂತರದಲ್ಲಿ ಗುಟ್ಕಾ ಸಿಗರೇಟ್ ನಂತಹ ಅಂಗಡಿಗಳು ದೂರವಿರಬೇಕು ಎಂಬ ಆದೇಶವಿದ್ದರೂ ಕೂಡ ಈ ಶಾಲಾ ಕಾಲೇಜುಗಳ ಆವರಣದ ಮುಂದೆ ಗುಟ್ಕಾ, ಸಿಗರೇಟ್ ಹಾಗೂ ಅತಿಯಾದ ಕೆಫೆನ್ ಇರುವ ಸ್ಟಿಂಗ್, ಅಗ್ನಿ, ಇನ್ನಿತರ ಮಾದಕ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಜೊತೆಗೆ ತಮ್ಮ ಅಂಗಡಿಗಳಲ್ಲಿ ಯುವಕರು ಕುಳಿತುಕೊಂಡು ಧೂಮಪಾನ ಸೇವನೆ ಸೇರಿದಂತೆ ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅದು ಅಲ್ಲದೆ ಈ ಶಾಲಾ-ಕಾಲೇಜುಗಳ ಮುಂದಿನ ಮುಖ್ಯ ರಸ್ತೆಯಲ್ಲಿ ಶಿವಾಜಿ ಸರ್ಕಲ್ ಸಂತ ಸೇವಾಲಾಲ್ ಸರ್ಕಲ್ ಬಸ್ ನಿಲ್ದಾಣ ಇತರಡೆಗೆ ದ್ವಿಚಕ್ರ ವಾಹನದಲ್ಲಿ ಕಾನೂನುಬಾಹಿರವಾಗಿ ಮೂರು, ನಾಲ್ಕು, ಐದು ಜನರು ಯುವಕರು ಕುಳಿತುಕೊಂಡು ಸಂಚರಿಸುತ್ತಾ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುತ್ತಿದ್ದು ಅವರನ್ನು ಚುಡಾಯಿಸುವುದೂ ಸಾರ್ವಜನಿಕರಿಗೆ ಕಂಡುಬಂದಿದ್ದು ಕೂಡಲೇ ತಾವುಗಳು ಇದರ ಕುರಿತು ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಇಲ್ಲಿ ಸುತ್ತಾಡುವ ಹಾಗೂ ಧೂಮಪಾನ ಮದ್ಯಪಾನ ಮಾಡುವ ಪುಂಡಪೋಕರಿಗಳಿಗೆ ಕ್ರಮ ಕೈಗೊಳ್ಳಬೇಕು ಹಾಗೂ ಈಗಾಗಲೇ ನಾವು ಪೊಲೀಸ್ ಠಾಣೆಯಲ್ಲಿ ನಡೆಯುವ ಸಭೆಗಳಲ್ಲಿ ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರು ಕೂಡ ಕ್ರಮ ಕೈಗೊಂಡಿಲ್ಲ ಕೂಡಲೆ ಇದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಮಣ್ಣ ಉಪ್ಪಲದಿನ್ನಿ, ರಾಜು ತುಂಬರಮಟ್ಟಿ, ವೀರಭದ್ರಪ್ಪ ಬಾಗಿ, ರಮೇಶ್ ಕಾಕಂಡಕಿ, ರಾಕೇಶ್ ಕೆಳಗಿನಮನಿ, ಸುನಿಲ್ ನಂದಿ ಸೇರಿದಂತೆ ಇತರರು ಇದ್ದರು.

