Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂದು (ಸೆಪ್ಟಂಬರ್ ೨೧, ರವಿವಾರ) ಅಂತರಾಷ್ಟ್ರೀಯ ಶಾಂತಿ ದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿದ್ರಾಮ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ದಲೈಲಾಮಾ ಅವರು “ನಾವು ನಮ್ಮೊಂದಿಗೆ ಶಾಂತಿ ಕಾಯ್ದುಕೊಳ್ಳುವವರೆಗೆ ನಾವು ಹೊರಗಿನ ಜಗತ್ತಿನಲ್ಲಿ ಎಂದಿಗೂ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ನಾವು ನಮ್ಮ ರಾಷ್ಟçದ ಜನರಲ್ಲಿ ಪ್ರೀತಿ, ದಯೆ, ಗೌರವ, ಸಹಾನುಭೂತಿ, ಸಹಾಯ, ಸಹಕಾರ, ಸಮನ್ವಯತೆ ಮತ್ತು ಸಾಮರಸ್ಯತೆ, ಸಮಗ್ರತೆ, ರಾಷ್ಟ್ರೀಯತೆ, ಐಕ್ಯತೆ ಮತ್ತು ಸಹಿಂಷ್ಣುತೆಯನ್ನು ಬೆಳೆಸುತ್ತಾ, ಇಡೀ ಜಗತ್ತಿಗೆ ಶಾಂತಿಯ ಮಂತ್ರದ ಸಂದೇಶವನ್ನು ಸಾರಬೇಕಾಗಿದೆ. ಜಗತ್ತಿನಲ್ಲಿ ಇಂದು ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ-ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಪ್ರಗತಿಯನ್ನು ಸಾಧಿಸಿದರೂ ಜನರ ಜನರ ಮಧ್ಯೆ, ರಾಷ್ಟ್ರ-ರಾಷ್ಟ್ರಗಳ ನಡುವೆ ಪ್ರೀತಿ, ಗೌರವ, ಸೌಹಾರ್ಧತೆ, ಶಾಂತಿ, ಸಹಕಾರ, ಸಮನ್ವಯತೆ ಮತ್ತು ಸಹಮತ ಇಲ್ಲದಾಗಿದೆ. ಜಗತ್ತಿನಲ್ಲಿ ಅಹಿಂಸೆ, ಕದನ, ಯುದ್ಧದದಂತಹ ಭೀತಿಯು ಆವರಿಸುತ್ತಿದೆ. ಈ ಕಾರಣಕ್ಕಾಗಿ ವಿಶ್ವಸಂಸ್ಥೆಯು ಜಗತ್ತಿನ ಎಲ್ಲ ರಾಷ್ಟçಗಳಲ್ಲಿ ಅಹಿಂಸೆ, ಕದನ ವಿರಾಮ ಮತ್ತು ಉತ್ತಮ…
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಅಬಕಾರಿ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ನಗರದ ಬಿಎಲ್ಡಿಇ ಕಾಲೇಜಿನ ದರ್ಬಾರ್ ಹಾಲ್ನಲ್ಲಿ ಬೆಂಗಳೂರು ರಾಜೀವ್ ಗಾಂಧಿ ಯೂನಿವರ್ಸಿಟಿ ಹೆಲ್ತ್ ಸೈನ್ಸ್, ಬಿಎಲ್ಡಿಇ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ನಡೆದ ಪುರುಷರ ಇಂಟರ್ ಜೋನ್, ಮಹಿಳೆಯರ ಸಿಂಗಲ್ ಜೋನ್ ಕಬಡ್ಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಬಡ್ಡಿ ಮತ್ತು ಸೈಕ್ಲಿಂಗ್ ಕ್ರೀಡಾಪಟಗಳಿಗೆ ಜಮಖಂಡಿ ಕೊಡುಗೆ ಬಹಳಷ್ಟು ಇದೆ, ಕ್ರೀಡೆಗಳಲ್ಲಿ ಸೋಲು ಗೆಲುವು ಇದ್ದೆ ಇರುತ್ತದೆ ಸೋತವರು ನಾಳಿಯ ಗೆಲುವುವಿಗೆ ಮೆಟ್ಟಿಲು ಮಾಡಿಕೊಳ್ಳಬೇಕು, ಗೆದ್ದವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯ ಮಟ್ಟದಲ್ಲಿ ಬೆಳೆಯಬೇಕು ಎಂದರು.ನನ್ನ ರಾಜಕೀಯ ಗುರುಗಳು ನನ್ನನ್ನು 27 ವಯಸ್ಸನಲ್ಲಿ ಎಂಎಲ್ಎ ಸ್ಥಾನಕ್ಕೆ ನಿಲ್ಲಿಸಿದರು, ನನ್ನ ಗುರುಗಳು ಎಂಪಿ ಸ್ಥಾನಕ್ಕೆ ನಿಂತರು ಆದರೆ ಕಬಡ್ಡಿ ಕ್ರೀಡಾಪಟುವಾಗಿದ್ದ ನನಗೆ ನನ್ನ ಗೆಳೆಯರು ನನ್ನ ಗುರುಗಳಿಂತ ಹೆಚ್ಚಿಗೆ ಮತ ನೀಡಿದ್ದರು ಇದಕ್ಕೆ ಗುರುಗಳು ಕೂಡಾ ಅಚ್ಚರಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಅಂಚೆ ಕಚೇರಿಯಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಕಳೆದ ಕೆಲವು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದು, ಇದರಿಂದಾಗಿ ರೈಲ್ವೆ ಪ್ರಯಾಣಿಕರು ಅನಗತ್ಯ ತೊಂದರೆ ಎದುರಿಸುತ್ತಿದ್ದಾರೆ ಆದ್ದರಿಂದ ಸರಾಫ್ ಬಜಾರ್ನ ವ್ಯಾಪಾರಸ್ಥರಿಂದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ತೆರೆಯಲು ವ್ಯಾಪಾರಸ್ಥರಿಂದ ಪೋಸ್ಟ್ ಮಾಸ್ಟರ್ ಎಸ್.ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಮೇಶ್ ಕೊಠಾರಿ, ರಮೇಶ್ ಮೆಹ್ರಾ, ಮುಖೇಶ್ ಜೈನ್, ಸಂದೀಪ್ ವರ್ಮಾ, ಬಾಲ್ ಕಿಸಾನ್ ವರ್ಮಾ, ದಾಮೋದರ್ ವರ್ಮಾ, ಸುರೇಶ್ ವರ್ಮಾ, ವಿಮಲ್ ಓಸ್ವಾಲ್, ಕಿರಣ್ ಓಸ್ವಾಲ್, ರಾಜೇಶ್ ಓಸ್ವಾಲ್, ನರೇಂದ್ರ ಭಂಡಾರಿ, ಮಂದರ್ ಓಸ್ವಾಲ್, ಪಿಂಟು ಓಸ್ವಾಲ್, ದರ್ಶನ್ ಓಸ್ವಾಲ್, ರಾಜೇಶ್ ಜೈನ್, ರಾಮದೇವ್ ವರ್ಮಾ, ಗೌರವ್ ವರ್ಮಾ ಇತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ ೨೦೦ ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಹಾಗೂ ಭಾರತದ ಮೊದಲ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತೋತ್ಸವದಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ಪ್ರಾಂತವು ಹಮ್ಮಿಕೊಂಡಿರುವ ರಥಯಾತ್ರೆ ಸೆ.21ರಂದು ಸಂಜೆ 6 ಗಂಟೆಗೆ ತಾಳಿಕೋಟೆಯಿಂದ ಬಸವನಬಾಗೇವಾಡಿಗೆ ಬರಲಿದೆ ಎಂದು ಎಬಿವ್ಹಿಪಿ ಹಿರಿಯ ಕಾರ್ಯಕರ್ತರಾದ ಅಶೋಕ ಕಲ್ಲೂರ ದೇಸಾಯಿ, ಮಲ್ಲಿಕಾರ್ಜುನ ದೇವರಮನಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಂಜೆ ರಥಯಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿ ೨೦೦ ವರ್ಷಗಳ ಹಿಂದೆ ಮಹಿಳೆಯೋರ್ವಳು ದಕ್ಷ ಆಡಳಿತ ನಡೆಸಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಕತ್ತಿ ಹಿಡಿದು ಧೈರ್ಯದಿಂದ ಯುದ್ಧ ಮಾಡಿ ಮೊದಲ ಯುದ್ಧದಲ್ಲಿ ಅವರನ್ನು ಸೋಲಿಸಿ, ಕಿತ್ತೂರಿನ ಸ್ವಾತಂತ್ರವನ್ನು ರಕ್ಷಿಸಲು ಯತ್ನಿಸಿದ ಧೀಮಂತ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ. ಬ್ರಿಟಿಷರ ವಸಾಹತುಶಾಹಿ ವಿರುದ್ಧ ಹೋರಾಡಿದ ಮೊದಲ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಸೋಂಪುರ ರಸ್ತೆ, ಹಳೆಯ ಚಾಂದಕವಟೆ ರಸ್ತೆ, ಓಂ ನಗರ, ಬಂದಾಳ ರಸ್ತೆ, ಕಲ್ಯಾಣ ನಗರ ಮತ್ತು ಜ್ಯೋತಿ ನಗರ ಸೇರಿದಂತೆ ವಿವಿದೆಡೆ ಸೆ.೧೮ರ ರಾತ್ರಿ ಭೂಕಂಪನ ಸಂಭವಿಸಿದ ಕಾರಣ ಸ್ಥಳೀಯ ಸಾರ್ವನಿಕರಲ್ಲಿ ಭಯದ ವಾತಾವರಣ ಮನೆಮಾಡಿದೆ. ಇದರ ಕುರಿತಾಗಿ ಜಿಲ್ಲೆಯ ತಂಡವನ್ನು ಕರೆಯಿಸಿ ಪರಿಶೀಲನೆ ಮಾಡಲಾಗಿದೆ. ಅವರು ಪ್ರಾಥಮಿಕ ವರದಿಯನ್ನು ನೀಡಿರುತ್ತಾರೆ. ಭೂಕಂಪನದ ಅನುಭವವಾದ ಸಿಂದಗಿಯ ಸುತ್ತಮುತ್ತಲಿನ ಭಾಗದಲ್ಲಿ ಭೂಮಿಯ ಆಳದಲ್ಲಿ ಸುಣ್ಣದ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಅತಿಯಾದ ಮಳೆಯಾದ ಕಾರಣ ನೀರು ಸುಣ್ಣದ ಜೊತೆ ಬೆರೆತು ರಾಸಾಯನಿಕ ಪ್ರಕ್ರಿಯೆ ಜರುಗುವುದರಿಂದ ಈ ರಸಾಯನವು ಭೂಮಿಯಲ್ಲಿ ಅತ್ತಿಂದಿತ್ತ ಹೊಯ್ದಾಡುವುದರಿಂದ ಭೂಮಿಯಲ್ಲಿ ಕಂಪನ ಉಂಟಾಗುತ್ತದೆ. ಈ ಕಂಪನವೇ ನಮಗೆ ಭೂಕಂಪನ ಎಂಬಂತೆ ಭಾಸವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.ಸಾರ್ವಜನಿಕರು ಪ್ರಕೃತಿಯ ಈ ವಿಸ್ಮಯದಿಂದ ಯಾವುದೇ ರೀತಿ ಘಾಭರಿಗೆ ಒಳಗಾಗಬಾರದು ಎಂದು ಸಲಹೆ ನೀಡಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ವಿಸೃತವಾಗಿ ಚರ್ಚೆ ಮಾಡಲಾಗಿ ಬರುವ ಸೆ.೨೨…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿ ಸುರಿದ ಮಳೆಯಿಂದಾಗಿ ಬೋರಿ ಹಳ್ಳ ತುಂಬಿ ಬಂದಿದ್ದು ತಾಲೂಕಿನ ಜೇವರ್ಗಿ ಬಿ ಗ್ರಾಮದ ಶಾಲೆಯ ಮೈದಾನಕ್ಕೆ ನೀರು ನುಗ್ಗಿದರ ಪರಿಣಾಮ ಶಾಲೆಗೆ ರಜೆ ಘೋಷಿಸಲಾಗಿದೆಪ್ರತಿ ವರ್ಷ ಬೋರಿಹಳ್ಳ ತುಂಬಿ ಬಂದಾಗ ಹಾಗೂ ಜೋರಾಗಿ ಮಳೆ ಸುರಿದಾಗ ಶಾಲಾ ಆವರಣಕ್ಕೆ ನೀರು ನುಗ್ಗಿ ತೊಂದರೆ ಮಾಡುತ್ತದೆ ಇದು ಪ್ರತಿ ವರ್ಷದ ಸಮಸ್ಯೆಯಾಗಿ ಕಾಡುತ್ತಿದೆಶಾಲೆಯ ಹಲವು ಗೋಡೆಗಳು ಬಿರುಕು ಬಿಟ್ಟಿದ್ದು ಸತತ ಮಳೆ ಬಂದಾಗ ಮೇಲ್ಚಾವಣಿ ಸೋರುವುದು ಇದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಶಾಲೆಯನ್ನು ಬೆರಡೆ ಸ್ಥಳಾಂತರಿಸಿ ಪರ್ಯಾಯವ್ಯವಸ್ಥೆ ಮಾಡಬೇಕೆಂದು ಎಸ್ಡಿಎಂಸಿ ಅಧ್ಯಕ್ಷ ಶಿವರುದ್ರ ಜೋಗದೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈಗಾಗಲೇ ಜಾಸ್ತಿ ಮಳೆ ಬಂದ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಆದರೆ ಪದೇ ಪದೇ ಹೇಗಾಗುವುದರಿಂದ ಮಕ್ಕಳ ಅಭ್ಯಾಸದ ಮೇಲೆ ಪರಿಣಾಮವಾಗುತ್ತದೆ ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ರೇವೂರ(ಬಿ) ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಾನಂದ ಮಲಕಾಜ ಹಾಗೂ ಉಪಾಧ್ಯಕ್ಷರಾಗಿ ಸಂಗೀತಾ ಉಡಗಿ ಆಯ್ಕೆಯಾಗಿದ್ದಾರೆಚುನಾವಣೆ ನಡೆಯುವ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ಈ ಇಬ್ಬರು ಮಾತ್ರ ನಾಮ ಪತ್ರ ಸಲ್ಲಿಸಿದ ಪ್ರಯುಕ್ತ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪರಶುರಾಮ ಘೋಷಿಸಿದರುರೇವೂರ್ (ಬಿ), ಅಂಕಲಗಾ, ಸಿಧನೂರ, ಚಿಕ್ಕರೇವೂರ, ಕುಲಾಲಿ, ಅರ್ಜುಣಗಿ ಗ್ರಾಮಗಳ ರೈತರನ್ನೊಳಗೊಂಡ ಪತ್ತಿನ ಸಹಕಾರ ಸಂಘ ಇಲ್ಲಿ ಸೇವೆ ಸಲ್ಲಿಸುತ್ತಿದೆ.ಈ ಸಂದರ್ಭದಲ್ಲಿ ಶ್ರೀಶೈಲ ಶಿವಶರಣಪ್ಪ ಪಾಟೀಲ, ಭೀಮರಾಯ ಮಹಾಂತಪ್ಪ ಪಾಟೀಲ, ಗುಂಡರಾಯ ಪಾಟೀಲ, ಸಿದ್ದಣ್ಣ ಮಲ್ಲಪ್ಪ ಸಾಗರ, ಶಿವಕುಮಾರ ಪಾಟೀಲ, ಮಲ್ಲಿಕಾರ್ಜುನ ಜಮಾದಾರ, ಗುರು ನಂದರ್ಗಿ, ಮಹೀಬುಬ್ ಪಟೇಲ್, ಶ್ರೀಮಂತ ಶರಣಪ್ಪ, ಅಶ್ವಿನಿ ರಾಜಕುಮಾರ ಕಲಶೆಟ್ಟಿ ಮತ್ತಿತರರು ಇದ್ದರುಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲು ಹಂಚಿ ಸಂಭ್ರಮಿಸಿದರು.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಹೃದಯ ಭಾಗವಾದ ಹನುಮಾನ್ ಚೌಕದಲ್ಲಿ ‘ಸ್ವಚ್ಛತೆಯೇ ಸೇವಾ 2025’ ಎಂಬ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ನಗರಸಭೆ ವತಿಯಿಂದ ಚಾಲನೆ ನೀಡದರು.ಹನುಮಾನ್ ಚೌಕದಲ್ಲಿ ನಿರಂತರವಾಗಿ ಕಸ ಬೀಳುತ್ತಿದ್ದ. ಈ ಹಿನ್ನೆಲೆಯಲ್ಲಿ ನಗರಸಭೆಯ ಸಿಬ್ಬಂದಿ ಶ್ರಮಪಟ್ಟು ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ನಂತರ, ಆ ಸ್ಥಳದಲ್ಲಿ ವಿವಿಧ ಬಣ್ಣದ ಆಕರ್ಷಕ ರಂಗೋಲಿಗಳನ್ನು ಅಳವಡಿಸಿ, ಸ್ವಚ್ಛತೆಯ ಪ್ರತೀಕವಾಗಿ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಿ ಈ ಸಾಂಸ್ಕೃತಿಕ ಪರಿವರ್ತನೆಯ ಮೂಲಕ ಕಸ ಎಸೆಯುವ ಸ್ಥಳವನ್ನು ಜಾಗೃತಿಯ ಕೇಂದ್ರವಾಗಿ ರೂಪಿಸಿ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸದರುಸಾರ್ವಜನಿಕರಲ್ಲಿ ವಿನಂತಿ:ನಗರಸಭೆ ಅಧಿಕಾರಿಗಳು “ನಮ್ಮ ನಗರ ನಮ್ಮ ಹೊಣೆ” ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಿಗೆ ವಿನಮ್ರ ವಿನಂತಿ ಸಲ್ಲಿಸಿದರು. ಎಲ್ಲೆಂದರಲ್ಲಿ ಕಸ ಎಸೆಯದೆ, ನಗರಸಭೆಯ ಟಾಟಾ ವಾಹನಗಳಿಗೆ ಕಸ ನೀಡುವ ಮೂಲಕ ನಗರವನ್ನು ಸ್ವಚ್ಛವಾಗಿಡುವಲ್ಲಿ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.ಕಂದಾಯ ಇಲಾಖೆ ಅಧಿಕಾರಿ ಯಲ್ಲಪ್ಪ ಬಿದರಿ, ಹಿರಿಯ ಆರೋಗ್ಯ ನಿರ್ದೇಶಕ ಸಚಿನ ಹಿರೇಮಠ,ವಿನಾಯಕ, ಕಿರಿಯ ಆರೋಗ್ಯ…
ಇಂದು (ಸೆಪ್ಟಂಬರ್ ೨೧, ರವಿವಾರ) ಅಂತರಾಷ್ಟ್ರೀಯ ಶಾಂತಿ ದಿನ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಬಿ.ವಿ.ಹಿರೇಮಠಶಿಕ್ಷಕರು, ಹವ್ಯಾಸಿ ಬರಹಗಾರರುಇಂಡಿಮೊ: 9972658355 ಉದಯರಶ್ಮಿ ದಿನಪತ್ರಿಕೆ ಪ್ರೀತಿ ಇಲ್ಲದ ಮೇಲೆ –ಸಂಶಯದ ಗಡಿಗಳುದ್ದಕ್ಕುಸಿಡಿಗುಂಡುಗಳ ಕದನ ನಿಂತೀತು ಹೇಗೆ?ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆನರಳುವ ಪಾಡು ತಪ್ಪೀತು ಹೇಗೆ?ನಮ್ಮ ನಿಮ್ಮ ಮನಸ್ಸುಮರುಭೂಮಿಯಾಗದ ಹಾಗೆತಡಗಟ್ಟುವುದು ಹೇಗೆ?ಈ ಮೇಲಿನ ಜಿ.ಎಸ್.ಶಿವರುದ್ರಪ್ಪನವರ ಕವನದ ಸಾಲುಗಳು ಇಂದಿನ ಪ್ರಸ್ತುತೆಯಲ್ಲವೇ? ಪ್ರೀತಿಯ ನೋಟ, ಪ್ರೀತಿಯ ಮಾತು, ಪ್ರೀತಿಯ ಮನಸ್ಥಿತಿ ಎಂತಹ ಪರಿಸ್ಥಿತಿಗಳನ್ನು ಶುದ್ಧಗೊಳಿಸುತ್ತವೆಯಂತೆ, ಅಂತಹುದರಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲವೇ? ಪ್ರೀತಿಗೆ ಅಂಗುಲಿಮಾಲಾನಂತಹ ರಾಕ್ಷಸರೇ ಶರಣಾಗಿರುವಾಗ ಹುಲು ಮಾನವರಿಗೆ ಕಷ್ಟವೇ? ಜಗತ್ತು ಇತರ ರಾಷ್ಟ್ರಗಳ ಮೇಲೆ ಕ್ರೌರ್ಯ ಬಿತ್ತುವಾಗಲೇ ಶಾಂತಿಯ ಬೆಳಕನ್ನು ಪಸರಿಸಿದ ರಾಷ್ಟ್ರ ನಮ್ಮದು. ನಮ್ಮ ಚರಿತೆಯನ್ನು ತಿಳಿದು ಇತರ ರಾಷ್ಟ್ರಗಳು ಬದಲಾಗಲಿ, ಶಾಂತಿ ಎಲ್ಲೆಡೆ ಸ್ಥಾಪನೆಯಾಗಲಿ.
ವಿಜಯಪುರದಲ್ಲಿ ನಡೆದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದ ವಿಜಯಪುರ ಜಿಲ್ಲೆಯಲ್ಲಿ ಪರಿಸರ ಕಾಳಜಿಯೊಂದಿಗೆ ಕೋಟಿ ವೃಕ್ಷ ಅಭಿಯಾನದ ಮೂಲಕ ೦.೧೭ರಷ್ಟಿದ್ದ ಜಿಲ್ಲೆಯ ಅರಣ್ಯ ಪ್ರದೇಶವನ್ನು ಶೇಕಡಾ ೨ರಷ್ಟು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.೧೦ ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.ಶುಕ್ರವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕೆಎಸ್ಡಿಎಲ್- ಸಿಎಸ್ಆರ್ ಅನುದಾನದಲ್ಲಿ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ೨೦ಜನ ಸಿಬ್ಬಂದಿಗಳಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ೨೦೧೬ರಲ್ಲಿ ಆರಂಭಿಸಿದ ಕೋಟಿ…
