ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಅವಕಾಶಗಳ ಕೊರತೆಯಿಂದ ಇಂದು ಹಲವಾರು ಕಲಾವಿದರು ಎಲೆ ಮರೆಯ ಕಾಯಿಯಂತೆ ಬದುಕುತಿದ್ದು ಅವರಿಗೆ ಸ್ಥಳೀಯರೆ ಅವಕಾಶ ನೀಡಿ ಪ್ರೊತ್ಸಾಹಿಸಿದಲ್ಲಿ ಅವರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಗ್ರಾಮದ ದಸರಾ ದೀಪಾವಳಿ ಹಾಗೂ ಶ್ರೀ ರಘುನಾಥ ಪ್ರೀಯ ಸಾಧು ಮಹಾರಾಜರ ಜಾತ್ರಾ ಮಹೋತ್ಸವದ ನಿಮಿತ್ಯ ಹಾಗೂ ಯಂಗ್ ಸ್ಟಾರ್ ಕಮೀಟಿ ಆಶ್ರಯದಲ್ಲಿ ಹಮ್ಮಿ ಕೊಳ್ಳಲಾಗಿದ್ದ “ಸಂಗೀತ ಸಂಭ್ರಮ-೨೦೨೫” ರಸಮಂಜರಿ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಅವಕಾಶಗಳ ಸದುಪಯೋಗ ಮಾಡಿಕೊಂಡ ಹಲವಾರು ಸ್ಥಳೀಯ ಪ್ರತಿಭೆಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈ ದಿಸೆಯಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುವಲ್ಲಿ ಪಕ್ಷಬೇಧ, ಜಾತಿಬೇಧ ಮಾಡದೆ ವರ್ಷಕ್ಕೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸುವ ಚಿಮ್ಮಡ ಗ್ರಾಮಸ್ಥರ ಕಾರ್ಯ ಶ್ಲಾಘನೀಯವೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರ ಬಟಕುರ್ಕಿ, ಪಂಡಿತ ಭೋಸಲೆ ಮಾತನಾಡಿದರು.
ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಓಂಕಾರ ಮಹಾರಾಜರು ಸಾನಿಧ್ಯ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶಿವಪ್ಪಾ ನಾಗನೂರ, ಪ್ರಕಾಶ ಪಾಟೀಲ, ರಾಜು ಬಗನಾಳ, ನೂರಸಾಬ ನದಾಫ, ಅಶೋಕ ಮೋಟಗಿ, ಪ.ಪಂ. ಮಾಜಿ ಅಧ್ಯಕ್ಷ ಬಸವರಾಜ ರಾಯರ, ತಾ.ಪಂ. ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಂತೇಶ ಜಾಲಿಕಟ್ಟಿ, ಬಾಲಕೃಷ್ಣ ಮಾಳವಾದಿ, ಗುರುಪಾದ ಉರಭಿನವರ, ಶೌಕತ ಪಾಲಭಾವಿ, ಸಲೀಮ ಸರಕಾವಸ ಸೇರಿದಂತೆ ಹಲವಾರು ಧುರೀಣರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾವಿದರಾದ ಮ್ಯುಸಿಕ್ ಮೈಲಾರಿ, ಸರಿಗಮಪ ಸಿಂಗರ ದಿಯಾ ಹೆಗಡೆ, ಪ್ರಜ್ವಲ್ ಮೂಡಲಗಿ, ಮನು ಸೇರಿದಂತೆ ಹಲವಾರು ಕಲಾವಿದರು ಪ್ರೇಕ್ಷರಿಗೆ ಮನರಂಜನೆ ನೀಡಿದರು. ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.
ಇದೇ ಸಂಧರ್ಬದಲ್ಲಿ ಹಲವಾರು ಜನ ಸಾಧಕರನ್ನು ಹಾಗೂ ಸಹಾಯ ನೀಡಿದವರನ್ನು ಸತ್ಕರಿಸಲಾಯಿತು. ಶಿಕ್ಷಕ ಪ್ರಕಾಶ ಪೂಜೇರಿ ನಿರೂಪಿಸಿ ವಂದಿಸಿದರು.

