Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಆಲಗೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.ಸಿಂದಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಜರುಗಿದ ಕಲಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರು ಕಬಡ್ಡಿಯಲ್ಲಿ ‘ಪ್ರಥಮ’ ಸ್ಥಾನ ಖೋ ಖೋ, ಥ್ರೋಬಾಲ್, ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರು. ವೈಯಕ್ತಿಕ ವಿಭಾಗದಲ್ಲಿ ರಹಿಮತ್ ಅಲಿ ಕಲಕೇರಿ ೧೦೦ ಮೀಟರ್ ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದನು. ಕಾರ್ತಿಕ ಮಾಕೊಂಡ ೪೦೦ ಮೀ ಓಟದಲ್ಲಿ ಪ್ರಥಮ, ಕಾರ್ತಿಕ ಇಮ್ಲಾಪುರ ೬೦೦ ಮೀ ಓಟದಲ್ಲಿ ಪ್ರಥಮ, ತಿಪ್ಪಣ್ಣ ತಮ್ಮಣ್ಣಗೋಳ ೬೦೦ ಮೀ ಓಟದಲ್ಲಿ ದ್ವಿತೀಯ, ಮಲ್ಲಿಕಾರ್ಜುನ ಅಮ್ಮಾಗೋಳ ೨೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದರು.ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಜಿ.ಎಮ್.ತಳವಾರ, ದೈಹಿಕ ಶಿಕ್ಷಕ ವಿ.ಎನ್.ಮದ್ದರಕಿ, ಸಹಶಿಕ್ಷಕರಾದ ಅಬ್ಬಾಸಲಿ ಪಾಂಡು,…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಇಂದು ಬಹುತೇಕರ ಅಂಬೋಣ, ನನ್ನ ಸರಳ ಸ್ವಭಾವ ನನ್ನ ಬಲಹೀನತೆ ಆಗಿದೆ ಎಂಬುದು. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದೂ ಇಲ್ಲ. ಆದರೆ ಅದರ ರಭಸಕ್ಕೆ ಎಲ್ಲವನ್ನೂ ಸೋಲಿಸುವ ಸಾಮರ್ಥ್ಯವಿದೆ ಎನ್ನುವ ಮಾತನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ವಾಸ್ತವದಲ್ಲಿ ಸಮಾಜ ಕಠಿಣ ಜನರಿಂದ ಕೂಡಿದೆ. ಕೆಲವರು ಪರೀಕ್ಷಿಸುತ್ತಾರೆ. ಕೆಲವರು ಹಿಂಡುತ್ತಾರೆ. ಇನ್ನೂ ಕೆಲವರು ಜೀವನವನ್ನು ಇನ್ನಷ್ಟು ಕಠಿಣ ಮಾಡಲೆಂದೇ ಇರುತ್ತಾರೆ. ವಿಚಿತ್ರ ಸತ್ಯವೆಂದರೆ ಅವರೆಲ್ಲ ನಮ್ಮ ಬದುಕಿನಲ್ಲಿ ನಮ್ಮ ಅನುಮತಿಯ ಹೊರತು ಏನೂ ಮಾಡಲು ಸಾಧ್ಯವಿಲ್ಲ. ‘ನೀನು ಅವರನ್ನು ಹೇಗೆ ನಿಭಾಯಿಸುವೆಯೋ ಅದು ನಿನ್ನ ವ್ಯಕ್ತಿತ್ವವನ್ನು ತೋರಿಸುತ್ತದೆ.’ ವಿಷಕಾರಿ ಜನರು ಕೆಟ್ಟದಾಗಿ ನಡೆದುಕೊಳ್ಳುವಂತೆ ತಿವಿಯುತ್ತಾರೆ ಪ್ರಚೋದಿಸುತ್ತಾರೆ ಏಕೆಂದರೆ ಅವರು ನಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ. ನಮ್ಮನ್ನು ಬಲಹೀನರನ್ನಾಗಿಸಲು ಹಾತೊರೆಯುತ್ತಾರೆ. ಅವರು ಅಂದುಕೊಂಡಂತೆ ನಾವು ಪ್ರತಿಕ್ರಿಯಿಸಿದರೆ ತಾವು ಗೆದ್ದೆವೆಂದು ಬೀಗುತ್ತಾರೆ. ಇದರರ್ಥ ಅವರು ಸರಿ ಇರುವರೆಂದು ಅರ್ಥವಲ್ಲ, ಶಕ್ತಿವಂತರೆಂದು ಅಲ್ಲ. ಅವರು ನಮ್ಮ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾ, ತಾಲೂಕು ಘಟಕವು ಶಿಕ್ಷಕರ ದಿನಾಚರಣೆ ಹಾಗೂ ದಸರಾ ಹಬ್ಬದಂಗವಾಗಿ ಎರಡು ದಿನಗಳ ಕಾಲ ಬಸವನಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕಿನ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಹಾಗೂ ಥ್ರೋಬಾಲ್ ಟೂರ್ನಾಮೆಂಟ್ ನಲ್ಲಿ ಭಾನುವಾರ ಸಂಜೆ ಜರುಗಿದ ರೋಚಕ, ಕುತೂಹಲ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಬಸವನಬಾಗೇವಾಡಿ ಬ್ಲಾಸ್ಟರ್ ತಂಡದ ವಿರುದ್ಧ ಮನಗೂಳಿ ಮಹಾರಾಜ ತಂಡವು ಜಯಸಾಧಿಸುವ ಎರಡನೇ ಬಾರಿಗೆ ಟೀಚರ್ಸ್ ಚಾಂಪಿಯನ್ ಟ್ರೋಫಿ ತನ್ನದಾಗಿಸಿಕೊಂಡಿತು.ಇದೇ ಪ್ರಥಮ ಬಾರಿಗೆ ವೇದಿಕೆಯು ಪ್ರಾಥಮಿಕ ಶಾಲಾ ಶಿಕ್ಷಕಿಯರಿಗೆ ಹಮ್ಮಿಕೊಂಡಿದ್ದ ಥ್ರೋಬಾಲ್ ಪಂದ್ಯದಲ್ಲಿ ಅಂತಿಮವಾಗಿ ನಡೆದ ಸ್ಪರ್ಧೆಯಲ್ಲಿ ಹೂವಿನಹಿಪ್ಪರಗಿ ತಂಡವನ್ನು ಕೊಲ್ಹಾರ ತಂಡ ಸೋಲಿಸುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಸ್ಟ್ ಮ್ಯಾನ್ ಮ್ಯಾಚ್, ಮ್ಯಾನ್ ಆಫ್ ಸಿರೀಜ್, ಫೈನಲ್ ಮ್ಯಾನ್ ಆಫ್ ಸಿರೀಜ್ ಗೆ ಮೋಹನ ಭಾಜನರಾದರೆ, ಬೆಸ್ಟ್ ಪೀಲ್ಡರ್, ಬೆಸ್ಟ್ ಬೌಲರ್ ಯಾಗಿ ಸಿ.ಬಿ.ಕೆಂಚಗೌಡರ,…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ನಾಗರಾಳಹುಲಿ ಗ್ರಾಮದಲ್ಲಿರುವ ಜಮೀನು ಸರ್ವೆ ನಂ.65 ಕ್ಕೆ ಗ್ರಾಮಸ್ಥರು ಸೋಮವಾರ ತಹಸೀಲ್ದಾರರಿಗೆ ತಕರಾರು ಅರ್ಜಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಪ್ರಕಾಶ ಜಂಬಲದಿನ್ನಿ, ಸಿದ್ದಪ್ಪ ಸಾಸನೂರ, ಶಂಕ್ರೆಪ್ಪ ಹುಲಿಬೆಂಚಿ, ಬಸಣ್ಣ ಬ್ಯಾಳಿ ಮಾತನಾಡಿ, ಗ್ರಾಮದ ಸರ್ವೆ ನಂ.65 ರಲ್ಲಿ ನಾಲ್ಕು ಎಕರೆ 7 ಗುಂಟೆ ಸರ್ಕಾರಿ ಜಮೀನು ಇದೆ. ಈ ಜಮೀನಿನಲ್ಲಿ ಈಗಾಗಲೇ ಒಂದು ಸರ್ಕಾರಿ ಬಾವಿ ಇದೆ.ನಾಗರಾಳಹುಲಿ ಗ್ರಾಮದಿಂದ ವಡವಡಗಿ ಗ್ರಾಮಕ್ಕೆ ಹೋಗುವ ಸರ್ಕಾರಿ ರಸ್ತೆ ಸಹ ಇದೆ. ಅಲ್ಲದೇ ಈ ಜಮೀನಿನಲ್ಲಿ ಒಂದು ಧೋಬಿಘಾಟ ಹಾಗೂ ಗ್ರಾಮದೇವತೆಯ ಗಂಗಸ್ಥಳದ ಪಾದಗಟ್ಟಿ ಸಹ ಇದೆ. ಇದನ್ನು ಹೊರತು ಪಡಿಸಿದಂತೆ ಉಳಿದ ಅಂದಾಜು ಎರಡು ಎಕರೆ ಕ್ಷೇತ್ರದಲ್ಲಿ ಗ್ರಾಮದಲ್ಲಿ ಸರ್ವ ಸಮಾಜದ ಜನರು ಯಾರೇ ಮೃತರಾದರೆ ಮೃತ ಶರೀರದ ದಹನ ಕ್ರಿಯೆಯನ್ನು ಮಾಡಲಾಗುತ್ತದೆ. ಈ ವಿಷಯ ಗ್ರಾಮದ ಎಲ್ಲ ಜನರಿಗೂ ಗೊತ್ತಿದ್ದರೂ ಸಹ ಇನ್ನುಳಿದ ಸಮಾಜಕ್ಕೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಮುಸ್ಲಿಂ ಸಮಾಜದವರು ಈ ಜಮೀನು ಸ್ಮಶಾನಕ್ಕೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ ಸೆ.22 ರಿಂದ ಅ.7 ರವರೆಗೆ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡಿದ್ದು. ಈ ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಸಮೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಸಕ್ಕರೆ,ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ ಅವರ ನಿವಾಸದ ಮುಂಭಾಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಸೋಮವಾರ ಹಮ್ಮಿಕೊಂಡಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅಂಗವಾಗಿ ಸಮೀಕ್ಷೆ ಮಾಡುವ ಶಿಕ್ಷಕರಿಗೆ ಕಿಟ್ ಅನ್ನು ವಿತರಿಸಿ ಮಾತನಾಡಿದ ಅವರು, ಸೆ.22 ರಿಂದ ಅ.7 ರವರೆಗೆ ನಡೆಯಲಿರುವ ಈ ಸಮೀಕ್ಷೆಯಲ್ಲಿ ಯಾರೂ ಹೊರಗುಳಿಯದಂತೆ ಸಮೀಕ್ಷೆದಾರರು ಗಮನಹ ಹರಿಸಬೇಕು. ರಾಜ್ಯದ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿದುಕೊಳ್ಳು ಉದ್ದೇಶದಿಂದ ಈ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷಾದಾರರು ಪ್ರತಿ ಸದಸ್ಯರ ವಿದ್ಯಾರ್ಹತೆ,ಕೌಶಲ್ಯ ತರಬೇತಿಯ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು ಧರ್ಮ, ಜಾತಿ,…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದ ಸಮೀಪದ ಭೀಮಾ ನದಿಯಲ್ಲಿ ಮಹಾನವಮಿ ಪ್ರಯುಕ್ತ ಹಾಸಿಗೆ ತೊಳೆಯಲು ಹೋಗಿದ್ದ ಯುವಕ ಭಾಗೇಶ ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ.ನೀರುಪಾಲಾಗಿದ್ದ ಯುವಕನ ಮೃತದೇಹ ಎರಡು ದಿನಗಳ ಬಳಿಕ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ನದಿಯಲ್ಲಿ ಯುವಕ ಕೊಚ್ಚಿ ಹೋದ ಬಳೊಕ ಆತನ ಶೋಧ ಕಾರ್ಯ ತೀವ್ರಗೊಳಿಸಲಾಗಿತ್ತು.ಎರಡು ದಿನಗಳ ನಿರಂತರ ಕಾರ್ಯಾಚರಣೆಯ ನಂತರ ದೇವಣಗಾಂವ ಗ್ರಾಮದ ಭೀಮಾ ನದಿಯ ತೀರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತದೇಹ ಪತ್ತೆಯಾದ ನಂತರ ಕುಟುಂಬಸ್ಥರು ಗುರುತಿಸಿದ್ದು,ಅಫಜಲಪುರ ಸರಕಾರಿ ಆಸ್ಪತ್ರೆಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.ಮೃತ ಭಾಗೇಶ್ ಅವರ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರು ಸೋಮವಾರ ಮಧ್ಯಾಹ್ನ ನೆರವೇರಿಸಿದರು.
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ಮಹಾರಾಷ್ಟ್ರದ ತುಳಜಾಪುರ ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ದೀಪವನ್ನು ಹೊತ್ತಿಸಿಕೊಂಡು, ಅದನ್ನು ಅಫಜಲಪುರ ತಾಲೂಕಿನ ಗಡಿ ಗ್ರಾಮವಾದ ಹೊಸೂರ ಗ್ರಾಮದಲ್ಲಿ ಅಂಬಿಕಾದೇವಿಯ ಮಂದಿರ ಮುಂದೆ ಜ್ಯೋತಿ ಹಚ್ಚುವುದು ವಾಡಿಕೆ. ನವರಾತ್ರಿಯ ಘಟಸ್ಥಾಪನೆಯ ಮುನ್ನಾ ದಿನ ತಾಲೂಕಿನ ಹೊಸೂರ ಗ್ರಾಮದ ಅಂಬಾಭವಾನಿ ಯುವಕ ಮಂಡಳಿಯ ಯುವಕರು ತುಳಜಾಪುರಕ್ಕೆ ಹೋಗಿ, ತುಳಜಾಭವಾನಿ ಮಂದಿರದಲ್ಲಿ ದೀಪ ಹೊತ್ತಿಸಿಕೊಂಡು ಅದು ಆರದಂತೆ ನೂರಾರು ಕಿ.ಮೀ ಕಾಲ್ನಡಿಗೆ ಮೂಲಕ ತರಲಾಯಿತು. ಈ ದೀಪ ಸೋಮವಾರ ಮಧ್ಯಾಹ್ನ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಅದಕ್ಕೆ ಪೂಜೆ ಸಲ್ಲಿಸಿ ಜ್ಯೋತಿಗೆ ಸ್ವಾಗತ ಮಾಡಿಕೊಂಡರು. ನಂತರ ಅಂಬಾಭವಾನಿ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಅಂಬಾಭವಾನಿಯ ಮುಂದೆ ಜ್ಯೋತಿ ಹಚ್ಚಲಾಯಿತು.ಪ್ರತಿವರ್ಷದಂತೆ ಈ ವರ್ಷವು ಕೂಡ 15 ದಿನಗಳ ಕಾಲ ಶ್ರೀ ಕಡಿಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮ ಶ್ರೀ.ಮ.ನಿ.ಪ್ರ ವೇಧಾಂತಚಾರ್ಯ ಮುರುಗೇಂದ್ರ ಮಹಾಸ್ವಾಮಿಗಳು ವಿರಕ್ತಮಠ ಅಥರ್ಗಾ ಇವರಿಂದ ಇಂದಿನಿಂದ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪುರಾಣ ಜರಗುವುದು.
ಕಾನ್ಪುರದಲ್ಲಿ ‘ಐ ಲವ್ ಮುಹಮ್ಮದ್’ ಬ್ಯಾನರ್ ಅಳವಡಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರ ವಿರುದ್ಧ ಎಫ್ಐಆರ್ ದಾಖಲೆಗೆ ಸಮುದಾಯದ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ “ಐ ಲವ್ ಮುಹಮ್ಮದ್” ಬ್ಯಾನರ್ ಅಳವಡಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಯುವಕರ ವಿರುದ್ಧ ದಾಖಲಾಗಿರುವ ಪೊಲೀಸ್ ಎಫ್ಐಆರ್ ಅನ್ನು ಖಂಡಿಸಿ, ವಿಜಯಪುರದ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿ (MMDC) ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಘಟನೆಯು ಅನ್ಯಾಯಪೂರ್ವಕ ಮತ್ತು ಖಂಡನೀಯವಾಗಿದ್ದು, ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ.MMDC ತನ್ನ ಮನವಿ ಪತ್ರದಲ್ಲಿ, ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಭಾವನಾ ಸ್ವಾತಂತ್ರ್ಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಶಾಂತಿಯುತವಾಗಿ ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ ಎಂದು ತಿಳಿಸಿದೆ. “ಐ ಲವ್ ಮುಹಮ್ಮದ್” ಎಂಬ ಬ್ಯಾನರ್ ಧಾರ್ಮಿಕ ಭಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಈ ಶಾಂತಿಯುತ ಸಂದೇಶವನ್ನು ಕ್ರಿಮಿನಲ್ ಕೃತ್ಯವೆಂದು ಪರಿಗಣಿಸಿ ಎಫ್ಐಆರ್ ದಾಖಲಿಸಿರುವುದು ಭಾರತೀಯ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೨ನೇ ಶತಮಾನದಲ್ಲಿ ಶರಣರ ವಚನಗಳು ಸತ್ಯ, ಶುದ್ಧ, ಕಾಯಕದಿಂದ ಕೂಡಿದ್ದು ಮಾನವೀಯ ಮೌಲ್ಯಗಳನ್ನು ಶರಣರು ಸಮಾನತೆ ಕಾಯಕ, ದಾಸೋಹ ತಮ್ಮ ಜೀವನೂದ್ದಕ್ಕೂ ಸಾರ್ಥಕತೆಯನ್ನು ಪಡೆದವರು. ನಮಗೆಲ್ಲ ಜೀವನಕ್ಕೆ ಅಮೃತ ನೀಡಿದವರು ಎಂದು ಉಪನ್ಯಾಸಕ ಡಾ. ಎಂ.ಎಸ್. ಮಾಗಣಗೇರಿ ಹೇಳಿದರು.ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವೀರಶೈವ ಲಿಂಗಾಯತ ಸಭಾಭವನದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಕಿನ್ನರಿ ಬೊಮ್ಮಯ್ಯನವರ ಅನುಭಾವ ಕುರಿತು ಮಾತನಾಡಿದ ಅವರು ಆಂದ್ರಪ್ರದೇಶದ ಕಿನ್ನರಿ ಬೊಮ್ಮಯ್ಯನವರು ಅಕ್ಕಸಾಲಿಗ ವೃತ್ತಿ ಮಾಡುತ್ತ ಪ್ರವೃತ್ತಿಗಾಗಿ ಕಿನ್ನರಿ ವಾದನವನ್ನು ನುಡಿಸುತ್ತ ಕಲ್ಯಾಣಕ್ಕೆ ಬಂದು ಮನತಣಿಸುವಂತೆ ಕಿನ್ನರಿ ನುಡಿಸುತ್ತ ಪಡೆದ ಹಣವನ್ನು ಶರಣರ ದಾಸೋಹಕ್ಕಾಗಿ ಬಳಸುತ್ತ ನಿಸ್ವಾರ್ಥ ಬದುಕು ಹಾಕಿದವರು. ವೈರಾಗ್ಯನಿಧಿ ಅಕ್ಕಮಹಾದೇವಿ ಕುರಿತು ೧೮ ವೈರಾಗ್ಯ ವಚನಗಳನ್ನು ರಚಿಸಿದ್ದಾರೆ. ಅವೆಲ್ಲವೂ ಅನುಭಾವದ ನುಡಿದರು. ಸಮಾನತೆ, ಅರಿವು, ಜ್ಞಾನ, ಶರಣರ ಸ್ತುತಿ ಅವುಗಳಲ್ಲಿ ಅಡಕವಾಗಿವೆ ಎಂದರು.ಮಹಾಸಭೆಯ ಕಾರ್ಯದರ್ಶಿ ದೊಡ್ಡಣ್ಣ ಬಜಂತ್ರಿ ಮಾತನಾಡುತ್ತ ಅರಿವಿನ ಮಾರ್ಗ ವಚನಗಳ ಮೂಲಕ…
ಇಂದು (ಸೆಪ್ಟಂಬರ್ ೨೪ ಬುಧವಾರ) “ರಾಷ್ಟ್ರೀಯ ಸೇವಾ ಯೋಜನೆ” ದಿನಾಚರಣೆಯ ತನಿಮಿತ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರತಿಕೋಟಾವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಅವರು, ಜೀವನದ ಸಾರವೇನು? ಇತರರಿಗೆ ಸೇವೆ ಸಲ್ಲಿಸುವುದು ಮತ್ತು ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ನೀಡುತ್ತಾ, ಸದಾ ಒಳ್ಳೆಯದನ್ನು ಮಾಡುವುದು ಎಂದು ಹೇಳಿದ್ದಾರೆ. ಎನ್.ಎಸ್.ಎಸ್. ನ ಮೂಲ ಮಂತ್ರ ನನಗಾಗಿ ಅಲ್ಲ ನಿನಗಾಗಿ (ಓoಣ ಒe buಣ ಙou) ಅಂದರೆ ನಾನು ನನಗಾಗಿ ಮಾತ್ರವಲ್ಲ. ನಿಮೆಲ್ಲರಿಗಾಗಿ ಮತ್ತು ಈ ಸಮಾಜಕ್ಕಾಗಿ ಸೇವೆ ಸಲ್ಲಿಸಲು ಎಂಬ ಅರ್ಥವನ್ನು ತಿಳಿಸುತ್ತದೆ. ನಮ್ಮ ಬದುಕು ನಿಸ್ವಾರ್ಥ ಸೇವೆ ಮತ್ತು ಬೇರೆ ವ್ಯಕ್ತಿಗಳೊಂದಿಗೆ ಕೂಡಿಕೊಂಡು ಮಾನವೀಯತೆಯನ್ನು ಎತ್ತಿ ತೋರಿಸುವ ಅಗತ್ಯತೆಯನ್ನು ಈ ಧ್ಯೇಯವಾಕ್ಯವು ಪ್ರತಿಬಿಂಬಿಸುತ್ತದೆ.ಈ ಯೋಜನೆಯು ರಾಷ್ಟ್ರ ನಿರ್ಮಾಣ ಮತ್ತು ಶ್ರಮದ ಮಹತ್ವವನ್ನು ಸಾರುತ್ತಾ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ ಮತ್ತು ದಕ್ಷತೆ ಮೈಗೂಡಿಸಿಕೊಳ್ಳುವಂತಹ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ವಿವಿಧ ಆಯಾಮಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ…
