Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಜಯಪುರ ಕೇಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅವರ ಎಡಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಸಮಾಜ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಒತ್ತಾಯಿಸಿದ್ದಾರೆ.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನಕ ಸೇನೆ ಹಾಗೂ ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಿತ್ತೂರ ರಾಣಿ ಚೆನ್ನಮ್ಮನವರ ಮೂರ್ತಿಯ ಎಡಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಜಿಲ್ಲೆಯ ಸಚಿವರು ಮತ್ತು ಶಾಸಕರು ಕಾರ್ಯಪ್ರವೃತ್ತರಾಗಬೇಕು. ಕೇವಲ ವೇದಿಕೆ ಸಮಾರಂಭಗಳಲ್ಲಿ ಮತ ಗಳಿಕೆಗಾಗಿ ಮಾತ್ರ ರಾಯಣ್ಣ ಚೆನ್ನಮ್ಮಳ ಪುತ್ರ ಎಂದು ಹೇಳುವುದು ಬೇಡ. ರಾಯಣ್ಣನ ಮೂರ್ತಿಯನ್ನು ಚೆನ್ನಮ್ಮಾ ಜೀ ಅವರ ಮೂರ್ತಿ ಎಡಭಾಗದಲ್ಲಿ ಪ್ರತಿಷ್ಠಾಪನೆ ಮಾಡಿಸುವ ಮುಖೇನ ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.ಈ ವೇಳೆ ಕನಕ ಸೇನೆಯ ತಾಲೂಕಾಧ್ಯಕ್ಷ ನಿಂಗಣ್ಣ ಬಿರಾದಾರ, ಆಲಮೇಲ ಕುರುಬ ಸಂಘದ ತಾಲೂಕಾಧ್ಯಕ್ಷ ಸಿದ್ದು ಕೆರಿಗೊಂಡ ಮಾತನಾಡಿ, ಜ.೦೯ರಂದು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಕ್ಕಳಲ್ಲಿನ ಕಲಿಕಾಭಿರುಚಿಯನ್ನು ದ್ವಿಗುಣಗೊಳಿಸುವಲ್ಲಿ ಕಲಿಕಾ ಹಬ್ಬವು ಬಹಳ ಸಹಕಾರಿ ಎಂದು ಹಿಟ್ಟಿನಹಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಎಸ್.ಬಡದಾಳ ಹೇಳಿದರು.ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಎಫ್.ಎಲ್.ಎನ್.ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳು ಸೃಜನಾತ್ಮಕ ಚಿಂತನೆ ಹಾಗೂ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಕಲಿಯಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.ತಾಲ್ಲೂಕು ಶಿಕ್ಷಕರ ಸಂಘದ ಕೋಶಾಧ್ಯಕ್ಷ ಎಸ್.ವಿ.ಕೋಟೀನ ಮಾತನಾಡಿ, ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.ಎಸ್.ಡಿ.ಎಮ್.ಸಿ.ಅಧ್ಯಕ್ಷ ವಿಠ್ಠಲ.ದೇಗಿನಾಳ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾರದಾಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯತು.ಮುಖ್ಯಶಿಕ್ಷಕ ಅಶೋಕ ತಳಕೇರಿ, ಕ್ಲಸ್ಟರಿನ ವಿವಿಧ ಶಾಲೆಗಳ ಮುಖ್ಯಶಿಕ್ಷಕರಾದ ಡಿ.ಸಿ. ಲಮಾಣಿ, ಮಹಾದೇವ ಹುಲ್ಲೂರ, ಶ್ರೀಶೈಲ ಕುದುರಿ, ಬಿ.ಬಿ.ಮಾದರ, ಅರ್ಜುನ ಕರ್ಜಗಿ, ಜಿ.ಬಿ.ಶಿವಣಗಿ, ಆಶಾ ರಾಠೋಡ, ದಯಾನಂದ ಪೊಲೇಶಿ, ರಮೇಶ ನಾಯಕ, ನಂದ್ಯಾಳ ಬಿ.ಬಿ. ಭರಮಣ್ಣ, ಸುನೀತಾ ಕೋರವಾರ, ಎಸ್.ಡಿ.ಬೇನೂರ, ಎಮ್.ಎಮ್.ಕಂಬಾರ, ಎ.ವಿ.ನಿಂಬರಗಿಮಠ, ಎಮ್.ಎಸ್.ಅವಟಿ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಉತಾರೆ ಮತ್ತು ಮತದಾರರ ಪಟ್ಟಿ ಪರಿಶೀಲಿಸುವಂತೆ ಒತ್ತಾಯಿಸಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಮುಖಂಡ ಬಸವರಾಜ ಕೊಳೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಆರಂಭಿಸಿದ ಧರಣಿ ಸತ್ಯಾಗ್ರಹ ಮೂರು ದಿನಗಳನ್ನು ಪೂರ್ಣಗೊಳಿಸಿ ನಾಲ್ಕನೇ ದಿನಕ್ಕೆ ಕಾಲಿಸಿರಿಸಿದೆ.ಮೂರನೇ ದಿನದ ಹೋರಾಟದಲ್ಲಿ ಧರಣಿಯ ನೇತೃತ್ವ ವಹಿಸಿದ ಬಸವರಾಜ ಕೊಳೂರ, ಪುರಸಭೆ ಮಾಜಿ ಸದಸ್ಯ ರಾಜು ಪಾತ್ರೋಟ, ಬಡಾವಣೆಯ ನಿವಾಸಿಗಳಾದ ನಾರಾಯಣ ಮಿರಜಕರ, ಅಂಬರೀಶ ಉಪಲದಿನ್ನಿ, ರಿಯಾಜ ಉಣ್ಣಿಭಾವಿ ಮತ್ತೀತರರು ಮಾತನಾಡಿ ಧರಣಿ ಮೂರನೇ ದಿನದ ಅಂತ್ಯ ಕಂಡರು ಅಧಿಕಾರಿಗಳು ನಮಗೆ ಉತಾರೆ ಕೊಡಿಸುವ ಪ್ರಯತ್ನ ಮಾಡುತ್ತಿಲ್ಲ. ಧರಣಿ ಸ್ಥಳಕ್ಕೆ ಭೇಟಿ ಕೂಡ ನೀಡಿಲ್ಲ. ಹಾಗಾಗಿ ನಾಳೆಯಿಂದ ನಾವು ಹೋರಾಟವನ್ನು ಉಗ್ರವಾಗಿಸುತ್ತಿದ್ದೇವೆ. ನಾಳೆ ಇಡೀ ದಿನ ತಮಟೆ ಬಾರಿಸುವ ಮೂಲಕ ನಮ್ಮ ಹೋರಾಟವನ್ನು ಉಗ್ರವಾಗಿಸುತ್ತೇವೆ. ಆಗಲೂ ಅಧಿಕಾರಿಗಳು ಭೇಟಿ ನೀಡದಿದ್ದರೆ ಅರೆ ಬೆತ್ತಲೆ ಚಳುವಳಿ ಪ್ರಾರಂಭಿಸುತ್ತೇವೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.ಧರಣಿಗೆ ಅಮರೇಶ ಉಪಲದಿನ್ನಿ, ವಿಷ್ಣು ಗಂಗಾಪುರ್, ಬಾಬು ಬಳಗಾನೂರ, ಮಂಜುನಾಥ್…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕುವೆಂಪು ಸಾಹಿತ್ಯವು ವಿಶ್ವಮಾನವ ಸಂದೇಶ ಪ್ರಕೃತಿ ಪ್ರೇಮ ವೈಚಾರಿಕತೆ ಸಾಮಾಜಿಕ ಸಮಾನತೆ ಶಿಕ್ಷಣದ ಮಹತ್ವ ಮತ್ತು ಮಾನವೀಯ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸುತ್ತದೆ ಎಂದು ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಬಸವರಾಜ ರಾಹೂರ ಹೇಳಿದರು.ನಗರದ ಆಡಳಿತಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜನ್ಮ ದಿನದಂದು ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಾತಿ ಮತ ಪಂಥಗಳ ಬೇದಬಾವಗಳನ್ನು ತಿರಸ್ಕರಿಸಿ ನವೋದಯ ಸಮಾನತೆ ಸಾರುವ ಮನುಷ್ಯಜಾತಿ ತಾನೊಂದು ವಲಂ ಎಂಬ ತತ್ವವನ್ನು ಎತ್ತಿಹಿಡಿದ ಕುವೆಂಪುರವರ ಸಾಹಿತ್ಯ ವು ಇಂದಿಗೂ ಪ್ರಸ್ತುತವಾಗಿದ್ದು ಯುವ ಪಿಳಿಗೆಗೆ ಮಾರ್ಗದರ್ಶನ ನೀಡುತ್ತಿದೆ ಎಂದರು.ಸಂತೋಷ ಹೊಟಕರ ಮಾತನಾಡಿ, ಕುವೆಂಪು ಸಾಹಿತ್ಯ ಮಕ್ಕಳಿಗೆ ಜಾತಿ ಧರ್ಮದ ಕಟ್ಟು ಪಾಡುಗಳಿಲ್ಲದೆ ಮುಕ್ತ ಮನೋಭಾವ ಪ್ರಕೃತಿಯೊಂದಿಗೆ ಬೆರೆಯುವ ಸಹಜತೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಕಲಿಸುತ್ತದೆ. ಇದರಿಂದ ಮಕ್ಕಳು ಸ್ವತಂತ್ರ ಸಮತಾವಾದಿ ಪ್ರಜೆಗಳಾಗಿ ಬೆಳೆಯಲು ಸಾದ್ಯ ಎಂದರು.ಆರ್.ಬಿ.ಮುಗಿ ಎಚ್.ಎಸ್ ಗುನ್ನಾಪುರ ಮಾತನಾಡಿದರು.ಪ್ರಶಾಂತ ಕಾಳೆ, ಸಿ.ಸಿ ಕರಕಟ್ಟಿ ವೀಣಾ ಕೋಳುರಗಿ, ಭೂವನೇಶ್ವರಿ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ನಗರದ ಡಿ.ದೇವರಾಜ ಅರಸು ಹಿಂದುಳಿವ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ನಾಡೋಜ ಜಗದೀಶ ಗುಡಗುಂಟಿ ದಿಢೀರ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.ಗೋದಿ ಹಿಟ್ಟಿನಲ್ಲಿ, ಅಕ್ಕಿಯಲ್ಲಿನ ಹುಳು ನೋಡಿ ಎಂತಾವ ಆಹಾರ ಪದಾರ್ಥ ಬಳಸ್ತಿರಿ ಇದಕ್ಕೆ ಹೆಂಗ್ರಿ ನೀವು ಇಲ್ಲಿ ಕಾರ್ಯನಿರ್ವಹಿಸುತ್ತಿರಿ ಮಕ್ಕಳಿಗೆ ಒಳ್ಳೆ ಆಹಾರ ಪದಾರ್ಥ ಇಟ್ಟುಕೊಳ್ಳುವದಕ್ಕೆ ಆಗಲ್ವಾ, ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದಿರಾ ಹೇಗೆ ಎಂದು ಮೇಲ್ವಿಚಾರಕರನ್ನು ಪ್ರಶ್ನಿಸಿದರು.ಸರ್ಕಾರ ದಿಂದ ನಡೆಯುವ ವಸತಿ ನಿಲಯಗಳ ವ್ಯವಸ್ಥೆ ಸುಧಾರಿಸಬೇಕು ನಿಲಯದಲ್ಲಿ ಇರುವ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆದಿಲ್ಲ, ತಿಂಗಳಿಗೊಮ್ಮೆ ವಿತರಿಸಲಾಗುವ ಸ್ಯಾನಿಟರಿ ಪ್ಯಾಡ್ಗಳನ್ನು ಬಿಸಾಕಲು ಪ್ರತ್ಯೇಕ ಡಸ್ಟ್ರಿನ್ಗಳಿಲ್ಲ, ತಿಂಗಳಿಗೊಮ್ಮೆ ಪಡಿತರ ವಿತರಿಸಲಾಗುತ್ತಿದ್ದು ಆಹಾರ ಧಾನ್ಯಗಳಲ್ಲಿ ಹುಳ ಬಿದ್ದಿವೆ.ಒಂದು ರೂಮ್ನಲ್ಲಿ ಆರು ಜನ ವಿದ್ಯಾರ್ಥಿನಿಯರು ಇರುತ್ತಾರೆ ನಾಲ್ವರಿಗೆ ಮಾತ್ರ ಮಲಗುವ ವ್ಯವಸ್ಥೆ ಇದೆ. ಇನ್ನಿಬ್ಬರು ವಿದ್ಯಾರ್ಥಿನಿಯರು ನೆಲದ ಮೇಲೆ ಮಲುಗುವ ಅನಿವಾರ್ಯತೆ ಇದೆ. ಮಕ್ಕಳಿಗೆ ಯೋಗ, ವ್ಯಾಯಾಮ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಮಾರ್ಸನಳ್ಳಿ ಗ್ರಾಮದಲ್ಲಿರುವ ಮೆ.ಕರ್ನಾಟಕ ಕಾಟನ್ ಸೀಡ್ಸ್ ಪ್ರೈ.ಲಿ. ನಲ್ಲಿ ಸಿಸಿಆಯ್ ಇವರು ೨೦೨೫-೨೬ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಲಾಗಿದ್ದು, ಇಂಡಿ ಹಾಗೂ ಚಡಚಣ ತಾಲೂಕಿನ ರೈತರು ಈ ಹತ್ತಿ ಖರೀದಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಇಂಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಿನಾಂಕ:೦೧-೦೧-೨೦೨೪ ರಿಂದ ೩೧-೧೨-೨೦೨೫ರವರೆಗೆ ನಡೆದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಸೇನಾ ಸಿಬ್ಬಂದಿ ಹಾಗೂ ಮಾಜಿ ಸೈನಿಕರ ಅವಲಂಬಿತ ಮಕ್ಕಳಿಂದ ಕ್ರೀಡಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ.ಆಸಕ್ತರು ಅಗತ್ಯ ದಾಖಲಾತಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೫೦೯೧೩ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ.ಔದ್ರಾಮ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಡಾ.ಔದ್ರಾಮ ಅವರು ೨೦೦೪ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದು, ಇವರು ಈ ಹಿಂದೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಾಗಿ, ಅಪರ ಜಿಲ್ಲಾಧಿಕಾರಿಯಾಗಿ,ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಹಾಗೂ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ವಿಶ್ವವಿದ್ಯಾಲಯ ಧಾರವಾಡ-ವಿಜಯಪುರ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಜನವರಿ ೦೪ ರಿಂದ ೦೬ರವರೆಗೆ ವಿಜಯಪುರದ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.ಜ.೪ರಂದು ಬೆಳಿಗ್ಗೆ ೧೧ಕ್ಕೆ ಉದ್ಘಾಟನೆಯನ್ನು ಕೃಷಿ ಸಚಿವರಾದ ಹಾಗೂ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳೂ ಆದ ಎನ್.ಚಲುವರಾಯಸ್ವಾಮಿ ಅವರು ನೆರವೇರಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಕೃಷಿ ಪ್ರಕಟಣೆಗಳನ್ನು ಬಿಡುಗಡೆ ಮಾಡಲಿದ್ದು, ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ರವಿಕುಮಾರ ಎನ್, ಶಾಸಕರೂ ಆದ ನವದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ಪ್ರಕಾಶ ಬಿ. ಹುಕ್ಕೇರಿ,ಕರ್ನಾಟಕ ಸೋಪ್ಸ್ ಮತ್ತು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಮಾಜ ಸಂಘಟನೆಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶೃದ್ಧೆಯಿಂದ ಕಾರ್ಯ ನಿರ್ವಹಿಸಿ ನಿಸ್ವಾರ್ಥದಿಂದ ಸಮಾಜ ಕಟ್ಟುವ ಕಾಯಕ ಮಾಡಬೇಕೆಂದು ಮಕ್ಕಳ ಸಾಹಿತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹ ಮ ಪೂಜಾರಿ ಹೇಳಿದರು.ನಗರದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಹೂಗಾರ, ಪೂಜಾರಿ, ಜೀರ ಹಾಗೂ ಗುರವ ಸಮಾಜ ಸೇವಾ ಸಂಘಕ್ಕೆ ನೂತನ ಪದಾಧಿಕಾರಿಗಳಸದಸ್ಯರಿಗೆ ಪದಗ್ರಹಣ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ನಮ್ಮ ಮಕ್ಕಳ ಶಿಕ್ಷಣ ಪ್ರಗತಿ ಕುರಿತು ಚಿಂತನೆ ಇರಬೇಕು. ನಮ್ಮ ಸಮುದಾಯ ಬೆಳೆಸಬೇಕು ಇತರೆ ಸಮಾಜವನ್ನು ಗೌರವಿಸಬೇಕು. ನೂತನ ಪದಾಧಿಕಾರಿಗಲು ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೋರಿದರು.ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಜ್ಯ ಪದಾಧಿಕಾರಿಗಳಾದ ಅರವಿಂದ ಹೂಗಾರ, ನಮ್ಮ ಸಮಾಜದ ಶ್ರೇಯೋಭಿವೃದ್ಧಿಗೆ ನೂತನ ಸಮಿತಿ ಶ್ರಮವಹಿಸಲಿ. ಪ್ರತಿಯೊಂದು ಚಟುವಟಿಕೆಗಳಲ್ಲಿ ಮುಂದೆ ಬರಬೇಕೆಂದು ಶುಭ ಹರಿಸಿದರು.ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನವಾಗಿ ಹೂಗಾರ ಸಮಾಜದ ಅಧ್ಯಕ್ಷರಾಗಿ ಎಮ್ ಆರ್ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಗಿರಿಮಲ್ಲಪ್ಪ ಎಸ್ ಪೂಜಾರಿ, ಸಂಗಪ್ಪ ರಾಯಪ್ಪ…
