Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ.ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸರ್ವೈಕಲ್ ಸ್ಪಾಂಡೊಲೈಸಿಸ್(cervical spondylsis) ಲಕ್ಷಣಗಳು, ಕುತ್ತಿಗೆಯ ಹಿಂಬಾಗ ಬಿಗಿಯುವುದು, ಕುತ್ತಿಗೆ ನೋವು, ಕುತ್ತಿಗೆಯನ್ನು ತಿರಿಗಿಸಲು ಕಷ್ಟವಾಗುವುದು, ಭುಜದಿಂದ ಕೈಗಳಲ್ಲಿ ನೋವು, ಹರಡುವ ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಎಪ್ರಿಲ್ 13 ರಿಂದ ಎಪ್ರಿಲ್18 ರ ವರೆಗೆ ನಡೆಯಲಿದೆ.ಬಿ.ಎಲ್.ಡಿ.ಇ ಆಯುರ್ವೇದ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದಂದು ಆರು ದಿನಗಳ ಕಾಲ ನಡೆಯಲಿದೆ. ಮೇಲಿನ ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು(30ರಿಂದ 60 ವರ್ಷದವರಿಗೆ) ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9513397413 ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಆಲಗೂರು ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಏಪ್ರಿಲ್ 14ರ ಸಂಭ್ರಮದ ಅಂಗವಾಗಿ “ಅಂಬೇಡ್ಕರ್ ಅವರ ಕುರಿತು 100 ಅಂಕಗಳ ಸಿಇಟಿ ಮಾದರಿ ಪರೀಕ್ಷೆ” ನಡೆಯಲಿದೆ.ಪರೀಕ್ಷೆ ಏಪ್ರಿಲ್ 10, 2026ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.ಈ ಪರೀಕ್ಷೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನ ₹500, ದ್ವಿತೀಯ ಬಹುಮಾನ ₹300 ಹಾಗೂ ತೃತೀಯ ಬಹುಮಾನ ₹200 ನಿಗದಿಪಡಿಸಲಾಗಿದೆ.ಹಾಗೂ ಭಾಗವಹಿಸುವ ಪ್ರತಿಯೊಬ್ಬರೂ ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಗಳ ಕುರಿತು ತಿಳಿದುಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.ಕಾರ್ಯಕ್ರಮದ ಬಹುಮಾನ ದಾನಿಗಳಾಗಿ ಸಾರಿಗೆ ನೌಕರ ಮಹಾದೇವ ಫೋತರಾಜ್ ಅವರು ನೀಡುತ್ತಿದ್ದಾರೆ, ಸ್ಥಳೀಯ ಶಿಕ್ಷಣಾಭಿಮಾನಿಗಳು ಮತ್ತು ಗ್ರಾಮಸ್ಥರು ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ.ಕಾರ್ಯಕ್ರಮದ ಸಂಘಟಕರಾಗಿ ಶಿಕ್ಷಕ ಆರ್.ಎಸ್. ದೇಸಾಯಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ಅವರ ಆದರ್ಶಗಳು…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಭಾರತ ಸರ್ಕಾರವು 2027ರ ಜನಗಣತಿ ಕಾರ್ಯಕ್ರಮವನ್ನು ಡಿಜಿಟಲ್ ಮಾದರಿಯಲ್ಲಿ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಜಮಖಂಡಿ ನಗರದಲ್ಲಿ ಜಾಗೃತಿ ಮೂಡಿಸಲು ಬೈಕ್ ರ್ಯಾಲಿಯನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮಾತನಾಡಿ, ಪ್ರತಿ 10 ವರ್ಷಕ್ಕೊಮ್ಮೆ ನಡೆಯುವ ಜನಗಣತಿ ಈ ಬಾರಿ ಪ್ರಪ್ರಥಮ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯುತ್ತಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಸ್ವಯಂ ಗಣತಿ (Self Enumera-tion) ಮಾಡುವ ಅವಕಾಶ ನೀಡಲಾಗಿದ್ದು, ಎಲ್ಲರೂ https://se.census.gov.in ವೆಬ್ಬಸೈಟ್ ಮೂಲಕ ತಮ್ಮ ಮಾಹಿತಿ ಸಲ್ಲಿಸಿ ಈ ಮಹತ್ತರ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಏಪ್ರಿಲ್ 15ರೊಳಗೆ ಸ್ವಯಂಗಣತಿ ಪೂರ್ಣಗೊಳಿಸಿದ ಬಳಿಕ ದೊರೆಯುವ ಅಂಕಿತ ತಿಳಿಸಿದರು.ಸಂಖ್ಯೆಯನ್ನು (Acknowl-edgement Number) ಗಣತಿದಾರರಿಗೆ ನೀಡುವಂತೆ ತಿಳಿಸಿದರು.ಪೌರಾಯುಕ್ತ ಜ್ಯೋತಿ ಗಿರೀಶ್ ಮಾತನಾಡಿ, ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿಯ ಅವಕಾಶ ಲಭ್ಯವಿದ್ದು, ಇದರಿಂದ ಸಮಯ ಉಳಿತಾಯವಾಗಲಿದೆ ಎಂದು ಹೇಳಿದರು.ಮನೆಗೆ ಬರುವ ಗಣತಿದಾರರಿಗೆ ಉತ್ತರ ನೀಡುವ ಬದಲು ನಾಗರಿಕರು ತಮ್ಮ ಮನೆಯಲ್ಲಿ ಸುಲಭವಾಗಿ ಮಾಹಿತಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.ಸುಮಾರು 35…
ಲೇಖನ- ಬಸಲಿಂಗಯ್ಯ ಹಿರೇಮಠಶಿಕ್ಷಕರು, ಸಿಂದಗಿವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪೂರ್ಣಯೋಗದಲ್ಲಿ ವಿಶೇಷ ಆಸನ ಅಥವಾ ಪ್ರಾಣಾಯಾಮಗಳಿಗಿಂತ ‘ಸಮರ್ಪಣಾ ಭಾವ’ ಮುಖ್ಯ. ನಾವು ಮಾಡುವ ಪ್ರತಿಯೊಂದು ಕೆಲಸವನ್ನು (ಕಚೇರಿ ಕೆಲಸ, ಓದು, ಕಲೆ) ದೈವಕ್ಕೆ ಅರ್ಪಿಸುವ ಮೂಲಕ ಯೋಗವನ್ನಾಗಿ ಮಾಡಬಹುದು ಎಂಬುದು ಅರವಿಂದರ ನಿಲುವು.ಪೂರ್ಣಯೋಗದ ಮೂರು ಪ್ರಮುಖ ಹಂತಗಳು:ಆತ್ಮಶುದ್ಧಿ: ಅಹಂಕಾರವನ್ನು ಬಿಟ್ಟು ಮನಸ್ಸನ್ನು ಸ್ಥಿಮಿತಕ್ಕೆ ತರುವುದು.ಸಮರ್ಪಣೆ: ನಮ್ಮ ಇಡೀ ಅಸ್ತಿತ್ವವನ್ನು ದೈವೀ ಶಕ್ತಿಗೆ ಒಪ್ಪಿಸುವುದು.ಪರಿವರ್ತನೆ: ದೈವೀ ಶಕ್ತಿಯ ಪ್ರಭಾವದಿಂದ ನಮ್ಮ ಸ್ವಭಾವವೇ ಬದಲಾಗುವುದು.ಅರವಿಂದರ ಪೂರ್ಣಯೋಗವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, “ಜೀವನದಿಂದ ಪಲಾಯನ ಮಾಡುವುದಲ್ಲ, ಜೀವನವನ್ನು ಗೆದ್ದು ಅದನ್ನು ದಿವ್ಯವನ್ನಾಗಿ ಮಾಡುವುದೇ ಪೂರ್ಣಯೋಗ.”
ಲೇಖನ- ಡಾ ಶಶಿಕಾಂತ ಪಟ್ಟಣ ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ‘ಗೊಗ್ಗಳೇಶ್ವರ’ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಕೇರಳದ ಅವಳೂರಿನ ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ‘ಧೂಪದ ಗೊಗ್ಗವ್ವೆ’ಯೆಂದೂ ಕರೆಯುವರು. ಗುಗ್ಗಳ ಧೂಪ ಸಸ್ಯದ ಒಂದು ಪ್ರಕಾರದ ಅಂಟು. ಪೂಜೆ ಸಮಾರಂಭಗಳಲ್ಲಿ ಪರಿಮಳ ಸೂಸುವ ಕಾರ್ಯಕ್ಕೆ ಬೆಂಕಿಯಲ್ಲಿ ಈ ಧೂಪದ ಪದಾರ್ಥವನ್ನು ಹಾಕಿ ವಾತಾವರಣವನ್ನು ಪ್ರಸನ್ನಗೊಳಿಸುವ ಕೆಲಸ ಕಾಯಕವಾಗಿತ್ತು.ಈಕೆಯ ವಚನಗಳ ಅಂಕಿತ ‘ನಾಸ್ತಿನಾಥಾ’. ಗೊಗ್ಗವ್ವೆಜನನ೧೨ ನೆಯ ಶತಮಾನಅಂಕಿತನಾಮನಾಸ್ತಿನಾಥಾಒಟ್ಟು ವಚನಗಳು. ೬ಇವರು ೧೨ನೇ ಶತಮಾನದ ವಚನಕಾರರಲ್ಲಿ ಒಬ್ಬರು. ಇವರು ಬಾಲ್ಯದಿಂದಲೆ ಶಿವನ ಆರಾಧಕರಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದ ಅವಲೂರಿನವರು. ಇವರು ತಮ್ಮ ಮದುವೆಯ ವಯಸ್ಸಿಗೆ ಬಂದಾಗ ಮನೆಯವರು ಇವರ ಮದುವೆ ವಿಷಯದ ಪ್ರಸ್ತಾವನೆ ಇವರ…
ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ “ಲೋಕೋ ಭಿನ್ನ ರುಚಿಃ” – ಲೋಕದಲ್ಲಿ ನಾಲಗೆಗಳೆಷ್ಟೋ ರುಚಿಗಳಷ್ಟು.ಅವರಿಗೆ ರುಚಿಸಿದ್ದು ನನಗೆ ರುಚಿಸಬೇಕೆಂದೇನು ಇಲ್ಲಾ. ಆದರೂ ಒಪ್ಪಿಕೊಳ್ಳಲೇಬೇಕು.ನನಗೆ ರುಚಿಸಿದ್ದು ಮತ್ತೊಬ್ಬರಿಗೆ ರುಚಿಸಬೇಕೆಂದೇನು ಇಲ್ಲಾ. ಹಾಗಾಗಿ ಅವರು ಒಪ್ಪಿಕೊಳ್ಳುವುದಿಲ್ಲ. ಆದರೆ ಅವರು ಒಪ್ಪದಿದ್ದುದ್ದನ್ನೂ ಸಹ ನಾನು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ಅವರ ಜೊತೆ ಜೊತೆಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ನನಗಿದೆ. ಹಾಗಾಗಿ ಒಳಗಿನ ಮನಸ್ಸನ್ನು ಹಾಗೇ ಕುದಿಯಲು ಬಿಟ್ಟು, ಮೇಲೊಂದು ತಣ್ಣನೆಯ ಮುಖವಾಡ ತೊಟ್ಟು.. ಸುಳ್ಳು ಸುಳ್ಳೇ ಆದರೂ ಸರಿಯೆ.. ಮೆಲ್ಲಗೆ ನಕ್ಕುಬಿಡಬೇಕು.”ಏ ಇಲ್ಲಪ್ಪ ನಾನೇ ತಿಂದುನೋಡಿದ್ದೀನಿ ಹಾಗಲಕಾಯಿ ಸಿಹಿ ಇತ್ತು” ಎಂದು ದೊಡ್ಡ ಸ್ಥಾನದಲ್ಲಿರುವವರು ಅಥವಾ ಹೆಸರು ಮಾಡಿರುವವರು ಹೇಳಿದರೆ, “ಊಹುಂ” ಎಂದವೋ ಅಲ್ಲಿಗೆ ಮುಗಿಯಿತು. ‘ಶನಿಮಹಾತ್ಮ ಹೆಗಲೇರಿದಂತೆಯೇ’ ಇಲ್ಲ-ಸಲ್ಲದ ಆಪಾದನೆಗಳು ನಮ್ಮ ಮೇಲೆಯೇ ಎರಗಿಬೀಳುತ್ತವೆ. “ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನ್ನು “ಆ ಬಹುಸಂಖ್ಯಾತರು” ಪ್ರದರ್ಶಿಸಿಬಿಡುತ್ತಾರೆ. “ಗೆದ್ದೆತ್ತಿನ ಬಾಲ ಹಿಡಿಯುವ” ಜನರ ಬೆಂಬಲ ಅಂತವರಿಗೆ ಇದ್ದೇ ಇರುತ್ತದೆ. ಹಾಗಾಗಿ ನಾವು ಕೊನೆಗೆ “ಹೂಂ” ಎನ್ನದೆ ವಿಧಿಯಿಲ್ಲ.ಇದುವೇ ಜೀವನ.…
ಜಿಪಂನಲ್ಲಿ ಸಿಎಸ್ ಆರ್ ಅನುದಾನದಡಿ ಸಲಕರಣೆ ವಿತರಣೆ | ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಬಣ್ಣನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪವರ್ ಗ್ರೀಡ್ ಸಂಸ್ಥೆ ನಮ್ಮ ದೇಶದಲ್ಲಿರುವ ಹೆಮ್ಮೆಯ ಸಂಸ್ಥೆ, ಈ ಸಂಸ್ಥೆ ಸ್ಪರ್ಧಾತ್ಮಕವಾಗಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ ಹೇಳಿದರು.ಬುಧವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪವರ್ಗ್ರಿಡ್ ಕಾರ್ಪೋರೆಷನ್ ಆಫ್ ಇಂಡಿಯಾ ಲಿಮಿಟೆಡ್, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸಿ.ಎಸ್.ಆರ್ ಅನುದಾನದಡಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ಇಲಾಖೆಗಳಿಗೆ ಸಾಧನ-ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪವರ್ ಗ್ರೀಡ್ ಸಿಎಸ್ಆರ್ ಅನುದಾನದಡಿ ಆರೋಗ್ಯ ಇಲಾಖೆ ಸಲಕರಣೆಗಳು, ಶಿಕ್ಷಣ ಇಲಾಖೆಗೆ ೨೫೦೦ ಮೇಜುಗಳ ವಿತರಣೆ ಸೇರಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಕ್ಕೆ ವಿದ್ಯುತ್ ವ್ಯವಸ್ಥೆ ಅಳವಡಿಕೆ, ಪ್ರವಾಸೋದ್ಯಮ ಇಲಾಖೆ ಎಸ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಕನ್ನೂರ ಸವಾಯಿ ವಸ್ತಿ ತೋಟದಲ್ಲಿರುವ ಅಸಂಖ್ಯಾತ ಭಕ್ತರ ಆರಾಧ್ಯದೈವ ಹಜರತಪೀರ ದಗಾ೯ದ ಶಾಹನೂರವಲಿ ಬಾಬಾ ದೇವರ ಜಾತ್ರಾ ಮಹೋತ್ಸವ ಇದೇ ಎಪ್ರಿಲ್ 9 ರಂದು ಗುರುವಾರ ವೈಭವದಿಂದ ಜರುಗಲಿದೆ.ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಲಿರುವ ಶಾಹನೂರವಲಿ ಬಾಬಾ ದೇವರ ಜಾತ್ರಾ ಉತ್ಸವ ದೇವರ ಪೂಜಾರಿಯಾಗಿರುವ ಶ್ರೀಮತಿ ಶಾರದಾಬಾಯಿ ಮೋಹನ ರಾಠೋಡ ಹಾಗೂ ಸಕಲ ಸದ್ಭಕ್ತರ ಸಹಾಯ, ಸಹಕಾರದಿಂದ ಆಯೋಜಿಸಲಾಗಿದೆ.ಈ ಭಾಗದ ಎಲ್ಲ ಸಮಾಜದವರು ಶ್ರದ್ಧಾಭಕ್ತಿಯಿಂದ ಶಾಹನೂರವಲಿ ಬಾಬಾ ದೇವರನ್ನು ಪೂಜ್ಯ ಭಾವನೆಯಿಂದ ಆರಾಧಿಸಿ ಗೌರವಿಸುತ್ತಾರೆ. ತಮ್ಮ ಸನ್ನಿಧಿಯಲ್ಲಿ ಬಂದ ಭಕ್ತರಿಗೆ ಎದುರಾಗಿರುವ ಸಂಕಷ್ಟಗಳನ್ನು ನಿವಾರಿಸಿ ಜೀವನದಲ್ಲಿ ನೆಮ್ಮದಿ ಕರುಣಿಸುತ್ತಾರೆಂಬ ಆಚಲ ನಂಬಿಕೆ ಭಕ್ತ ವಲಯದಲ್ಲಿ ಇರುವುದರಿಂದ ಬಾಬಾ ಜಾಗೃತ ದೇವರಾಗಿ ಇಲ್ಲಿ ನೆಲೆಗೊಂಡಿದ್ದಾರೆ. ಬಾಬಾರ ಪವಾಡಗಳನ್ನು ಪೂಜಾರಿಣಿ ಶ್ರೀಮತಿ ಶಾರದಾಬಾಯಿ ಮೋಹನ ಚವ್ಹಾಣ ಭಕ್ತರಿಗೆ ಮನದಟ್ಟು ಮಾಡಿಕೊಟ್ಟು ಭಕ್ತಿಯ ರಸಭಾವವನ್ನು ಸೃಜೀಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇವರ ನೇತೃತ್ವದಲ್ಲಿ ಹಾಗೂ ಭಕ್ತರ ಸಹಕಾರದಲ್ಲಿ ಗುರುವಾರ ದಗಾ೯ದ…
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮದಲ್ಲಿ ಶ್ರೀ ಕಾಳಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಕಾಳಮ್ಮ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೀದಿಗಳನ್ನು ವಿದ್ಯುತ್ ದೀಪಗಳಿಂದ, ಹೂಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ದೇವಿಯ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾಕ್ಷಿಯಾದರು.ಇತಿಹಾಸ ಹಿನ್ನೆಲೆಯುಳ್ಳ ಕಾಳಮ್ಮ ದೇವಸ್ಥಾನಕ್ಕೆ ಶುಕ್ರವಾರ ಹಿರೇಹಳ್ಳಿ ಗ್ರಾಮಸ್ಥರು ಸೊಪ್ಪು ತಂದು ಚಪ್ಪರ ಹಾಕಿದರು. ಶನಿವಾರ ಸೋನಹಳ್ಳಿ ಕೆರೆಯಲ್ಲಿ ಕಾಳಮ್ಮ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸತ್ತಿಗೆ, ಡೊಳ್ಳು ಕುಣಿತ, ವಾದ್ಯಗೋಷ್ಠಿ ಸೇರಿದಂತೆ ಕಲಾತಂಡಗಳೊಂದಿಗೆ ಕೆರೆಯಿಂದ ಕಾಳಮ್ಮ ದೇವಸ್ಥಾನದವರೆಗೂ ತಾಯಿಯ ಮೆರವಣಿಗೆ ಮಾಡಿ ದೇವಸ್ಥಾನದಲ್ಲಿ ಪೂಜಿಸಲಾಯಿತು. ಭಾನುವಾರ ಮುಂಜಾನೆ ಮತ್ತೆ ಕೆರೆಯಲ್ಲಿ ಕಾಳಮ್ಮ ತಾಯಿ ವಿಗ್ರಹವನ್ನು ಶುದ್ಧಗೊಳಿಸಿ, ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಬಳಿಕ ಕೆರೆಯಿಂದ ದೇವಸ್ಥಾನದವರೆಗೂ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಾಡಲಾಯಿತು. ಈ ವೇಳೆ ಸಾವಿರಾರು ಮಹಿಳಾ ಭಕ್ತಾದಿಗಳು ತಂಬಿಟ್ಟು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಈ ದೃಶ್ಯವನ್ನು ನೋಡುವುದಕ್ಕೆ…
