ಉದಯರಶ್ಮಿ ದಿನಪತ್ರಿಕೆ
ಕನ್ನಡ ನಾಡು ನುಡಿ ರಕ್ಷಣೆಗಾಗಿ ಕಲೆ, ಸಾಹಿತ್ಯ, ಸಂಗೀತ, ಬೆಳವಣೆಗಾಗಿ, ಕಲಾವಿದರ ಕ್ಷೇಮಾಭಿವೃದ್ದಿಯ ಸಂಕಲ್ಪದೊಂದಿಗೆ ಕನ್ನಡ ಫಿಲಂ ಚೇಂಬರ್ (ರಿ ) ರಾಜ್ಯವ್ಯಾಪ್ತಿ ವಿಸ್ತರಿಸುವ ಸದಾಶಯದೊಂದಿಗೆ ಜಿಲ್ಲಾ, /ತಾಲೂಕು ಘಟಕಗಳನ್ನು ರಚಿಸುವ ಕಾರ್ಯವು ಕೈಗೆತ್ತಿಕೊಂಡಿದ್ದು. ಅದರ ಒಂದು ಭಾಗವಾಗಿ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ, ಯುವ ಸಾಹಿತಿ, ಕಲಾವಿದ, ಸಂಘಟಕರಾದ, ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ. ಮತ್ತು ಗೌರವಾಧ್ಯಕ್ಷರಾಗಿ ಹೆಸರಾಂತ ಸಾಹಿತಿಗಳು, ಚಿತ್ರನಟರು, ಕಲಬುರ್ಗಿ ಮಾಜಿ ಕಸಾಪ ಜಿಲ್ಲಾದ್ಯಕ್ಷರಾಗಿದ್ದ ಮಹಿಪಾಲರಡ್ಡಿ ಮುನ್ನೂರ ಅವರನ್ನು ರಾಜ್ಯ ಸಮಿತಿಯು ಆಯ್ಕೆ ಮಾಡಿದೆ.
ಇನ್ನುಳಿದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು:
ಅಮೃತ ದೊಡಮನಿ, ಪ್ರಧಾನ ಕಾರ್ಯದರ್ಶಿಗಳು:
ಖಾಜಅಜ್ಮಿರ ( ಕೆ. ಕೆ. ದೇಸಾಯಿ), ಖಜಾಂಚಿ:
ಚಿಂತನಗೌಡ ಪಾಟೀಲ, ನಿರ್ದೇಶಕರು: ಕು. ಭಾಗಮ್ಮ ಸಿ ಸುಂಬಡ, ವೀರೇಶ ಎಸ್ ಕುಂಬಾರ, ರಮೇಶ ಎಂ ತುಪ್ಪದ, ಕರಲಿಂಗ( ಕರೆಪ್ಪ )ಹೊಸಮನಿ, ಗೊಲ್ಲಾಳಪ್ಪ ಗೊಂದಳಿ, ಶಿವಶರಣಪ್ಪ ಶಾಖಾಪುರ, ನಿಂಗರಾಜ್ ತಳಗೇರ, ಮಲ್ಲಪ್ಪ ಹೊಸಮನಿ, ದೇವೇಂದ್ರ ಗೊಂದಳಿ ಅವರನ್ನು ಕಲಬುರ್ಗಿ ಜಿಲ್ಲಾ ಘಟಕ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಫಿಲಂ ಚೇಂಬರ್ ರಾಜ್ಯಾಧ್ಯಕ್ಷ ಡಾ. ಎಂ.ಎಸ್. ರವೀಂದ್ರ ತಿಳಿಸಿದ್ದಾರೆ.

