ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ಮೇ.೩೦ ಹಾಗೂ ೩೧ ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ೯೬೫/೯೦೦ಎಂ.ಎA ವ್ಯಾಸದ ಎಂ.ಎಸ್/ಪಿ.ಎಸ್.ಸಿ ಮುಖ್ಯ ಏರು ಕೊಳವೆ ಮಾರ್ಗದ ಕೊಲ್ಹಾರ ಜಾಕವೆಲ್, ಕೊಲ್ಲಾರ ಡಬ್ಲ್ಯೂ.ಟಿ.ಪಿ, ಚೈನೇಜ್ ೧.೯೦೭ಕಿ.ಮೀ ಹೊನ್ಯಾಳ ಕೆರೆ,ಚೈನೇಜ್ ೨.೪೦೬ ಕಿ.ಮೀ ಈರಣ್ಣ ಗುಡಿ, ಚೈನೇಜ್ ೬.೨೦೦ಕಿ.ಮೀ ಗರಸಂಗಿ ಹಳ್ಳದ ಹತ್ತಿರ, ಚೈನೇಜ್ ೯.೯೬೦ಕಿ.ಮೀ, ಚೈನೇಜ್ ೧೧.೯೦೦ಕಿ.ಮೀ ಜಗದಾಳ ತೋಟದ ಹತ್ತಿರ, ಸಾಯಿಬಾಬಾ ಗುಡಿ ಹತ್ತಿರ ೪ ಸ್ಥಳಗಳಲ್ಲಿ, ಜಿಯೋ ಪೆಟ್ರೋಲ್ ಪಂಪ್ ಹತ್ತಿರ, ಇಂಡಿಯನ್ ಆಯಿಲ್ ಪಂಪ್ ಹತ್ತಿರ,ಪ್ರಾರ್ಥನಾ ಶಾಲೆ ಹತ್ತಿರ, ಜುಮನಾಳ ಕ್ರಾಸ್ ಹತ್ತಿರ,ಸುತಳಿ ತೋಟ ಕರ್ಮಾ ಕೆಫೆ ಹತ್ತಿರ, ಕರ್ಮಾ ಕೆಫೆ ಮಸೀದಿ ಹತ್ತಿರ ಮತ್ತು ಆಯುರಗ್ರಾಮ ಆಸ್ಪತ್ರೆ ಹತ್ತಿರದ ಸ್ಥಳಗಳಲ್ಲಿ ನೀರು ಸೋರುವಿಕೆ ದುರಸ್ತಿ ಕಾಮಗಾರಿ ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು,ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
