Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಕಲಬುರ್ಗಿಯ ಶ್ರೀ ವಿ.ಜಿ.ಮಹಿಳಾ ಕಾಲೇಜು ಜ.೧೩ರಂದು ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನದ ಆಧಾರದ ಮೇಲೆ ಸಿಂದಗಿ ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿಗಳಾದ ಜಯಶ್ರೀ ಕೂಚಬಾಳ ಹಾಗೂ ಸಮೃದ್ಧಿ ಕೋಟ್ಯಾಳ ಅವರನ್ನು ಕರಾಅ ಮಹಿಳಾ ವಿವಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿ ವಿಶ್ವವಿದ್ಯಾಲಯ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಹಿಳಾ ಸಬಲೀಕರಣ, ಮಹಿಳೆಯನ್ನು ಸಮಾಜಮುಖಿಯನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಅತ್ಯಂತ ಶ್ಲಾಘನೀಯವಾದದು ಎಂದು ಸಮಾಜ ಸೇವಕಿ ನಾಗರತ್ನ ಮನಗೂಳಿ ಹೇಳಿದರು.ಪಟ್ಟಣದ ಹೊಸನಗರದ ಶ್ರೀವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಾಲವಾದ ವಲಯ ಮಟ್ಟದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಹಾಗೂ ಧಾರ್ಮಿಕಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಜೀವನದ ಕಷ್ಟಕಾರ್ಪಣ್ಯಗಳಿಗೆ ಪರಿಹಾರವಾಗಿ ಶ್ರೀಸತ್ಯನಾರಾಯಣ ಪೂಜೆ ಕೈಗೊಳ್ಳುವುದು ಹಿಂದಿನಿAದಲೂ ಬಂದಿದೆ. ಈಗ ಸಮಾಜದಲ್ಲಿ ಸಾಮೂಹಿಕ ಪೂಜೆ ಕೈಗೊಂಡು ಉತ್ತಮ ಕಾರ್ಯ ಮಾಡಿದೆ ಎಂದರು.ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ಪಾಟೀಲ ಮಾತನಾಡಿದರು.ಸಾನಿಧ್ಯ ವಹಿಸಿದ ಅವೋಗೇಶ್ವರ ತಪೋಧಾಮದಶ್ರೀ ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯಲ್ಲಿ ಭಕ್ತರು ದಂಪತಿಗಳ ಸಹಿತ ಪಾಲ್ಗೊಂಡು, ಅಶೋಕ ಜೋಷಿ ಮೂಲಕ ಪೂಜೆ ಸಲ್ಲಿಸಿದರು.ಪಟ್ಟಣ ಪಂಚಾಯಿತಿ…

Read More

ಕಬಿನಿ ಜಲಾಶಯದೊಳಗೆ ಅಡಗಿದೆಯಾ ರಹಸ್ಯ? | ಅಂದು ಕಿತ್ತೂರು, ಇಂದು ಯಾವ ಊರು ಪತ್ತೆ? ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಹೆಚ್ ಡಿ ಕೋಟೆ: ಮಳೆಗಾಲದಲ್ಲಿ ನೀರಿನಿಂದ ತುಂಬಿ ತುಳುಕುವ ಜಲಾಶಯ ನೋಡುವುದೇ ಚೆಂದ. ಜಲಾಶಯ ಭರ್ತಿಗೆ ಇನ್ನು ಎರಡು-ಮೂರು ಅಡಿ ಬಾಕಿ ಇದ್ದಾಗ ರೈತರು ಮತ್ತು ಸ್ಥಳೀಯರು ಸಂತಸ ಪಡುತ್ತಾರೆ, ಏಕೆಂದರೆ ಇದು ನೀರಾವರಿ ಮತ್ತು ಕುಡಿಯುವ ನೀರಿನ ಭರವಸೆ ನೀಡುತ್ತದೆ. ನಾಡಿನ ಸಮೃದ್ಧಿಯ ಸಂಕೇತ ಪ್ರತಿಬಿಂಬಿಸುತ್ತೆ. ಆದರೆ ಕೆಲವೊಮ್ಮೆ ಮಳೆಯ ಕೊರತೆಯಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ಖಾಲಿಯಾಗುತ್ತಾ ಹೋಗುತ್ತಿದ್ದಂತೆಯೇ ಜಲಾಶಯ ತನ್ನೊಡಲಲ್ಲಿ ಹುದುಗಿಟ್ಟ ರಹಸ್ಯವನ್ನು ಹೊರಹಾಕಿ ಬಿಡುತ್ತದೆ. ಈ ವೇಳೆ ಕಂಡು ಬರುವ ದೃಶ್ಯಗಳು ವಿಜ್ಞಾನ ಲೋಕವನ್ನೇ ವಿಸ್ಮಯಗೊಳಿಸುತ್ತೆ.ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಇನ್ನಿತರ ಪಳೆಯುಳಿಕೆಗಳು ಪತ್ತೆಯಾಗುತ್ತೆ. ಅದೇ ರೀತಿ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತ ಹೋದರೆ ಕಂಡು ಕೇಳರಿಯದ ಅಚ್ಚರಿಗಳು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮೀಣ ಭಾಗದಲ್ಲಿ ತಯಾರಿಸಲ್ಪಡುವ ವಿವಿಧ ಆಹಾರ ಪದಾರ್ಥಗಳಾದ ಸಜ್ಜಿರೊಟ್ಟಿ ಶೇಂಗಾ ಹೋಳಿಗೆ, ಉದರಬ್ಯಾಳಿ, ದಪಾಟಿ, ಹುಳಬಾನ, ಪುಂಡಿಪಲ್ಲೆ, ಬಜ್ಜಿ, ಮಡಿಕೆಕಾಳು, ಶೇಂಗಾ ಹಿಂಡಿ, ಅಗಸಿ ಹಿಂಡಿ ಕಾರ್ಯಾಳ ಹಿಂಡಿ, ಜಿಲೇಬಿ, ಲಾಡು, ಚಕ್ಕಲಿ, ಚೂಡಾ ತಯಾರಿಸಿ ಪ್ರದರ್ಶಿಸಿ ನಂತರ ಎಲ್ಲರೂ ಸಾಮೂಹಿಕ ಭೋಜನ ಮಾಡಿದರು.ನಗರದ ಶಾಂತಿನಿಕೇತನ ನಗರದ ಜೆ.ಸಿ.ಗಾರ್ಢನ ನಲ್ಲಿ ಮಹಿಳಾ ಸಂಘದಿಂದ ಗ್ರಾಮೀಣ ಜಾನಪದ ಸೊಡಗಿನ ಕಾರ್ಯಕ್ರಮ ಮಾಡಿ ಭೋಜನ ಮಾಡಿದರು.ಈ ಹಿಂದೆ ಆಚರಿಸಲ್ಪಡುತ್ತಿದ್ದ ಬಿಸಿಕಲ್ಲಿನಿಂದ ಬೀಸುವದು, ರುಬ್ಬುವ ಕಲ್ಲಿನಿಂದ ಹೂರಣ ರುಬ್ಬುವದು, ವನಿಕೆಯಿಂದ ಕುಟ್ಟುವದು, ಜಾನಪದ ಪ್ರದರ್ಶನ ಮಾಡಿದರು.ಸುಟ್ಟಿರುವ ಸಿತ್ನಿ ಸುಲಗಾಯಿ ಕಬ್ಬು ಬಾಳೆಗೊನಿ, ಆಹಾರ ಪದಾರ್ಥಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.ರೈತರು ಜಮೀನಿನಲ್ಲಿ ಬೆಳೆದ ಎಲ್ಲ ಪದಾರ್ಥಗಳು ಪ್ರದರ್ಶನಕ್ಕೆ ಇಟ್ಟಿದ್ದರು. ಎತ್ತಿನ ಗಾಡಿ ಮೂಲಕ ಪ್ರಯಾಣ, ಜೋಕಾಲಿ ಆಡುವದು ಪ್ರದರ್ಶಿಸಿ ಮನರಂಜಿಸಿದರು.ಮಹಿಳಾ ಬಳಗದ ರಾಜಶ್ರೀ ಜೈನ, ಶೈಲಾ ಕಂಬಾರ, ಶಾಂತಲಾ ಮಹೀಂದ್ರಕರ, ಸುಶೀಲಾ ಪಾಟೀಲ, ಸುರೇಖಾ ಪೊದ್ದಾರ, ಭಾರತಿ ಬಗಲಿ, ದ್ರಾಕ್ಷಾಯಿಣಿ ಮಸಳಿ, ಗೀತಾ ಹಿರೇಮಾಳ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಶೈಕ್ಷಣಿಕ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ ಹಾಗೂ ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ೬ನೇ ತರಗತಿ ಪ್ರವೇಶಾತಿಗಾಗಿ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಸೇವಾ ಸಿಂಧು ಪೋರ್ಟಲ್ ಮೂಲಕ ದಿನಾಂಕ:೧೦-೦೨-೨೦೨೬ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. ೭೫% ರಷ್ಟು ಹಾಗೂ ಇತರೆ ವರ್ಗಕ್ಕೆ ಶೇ.೨೫% ರಷ್ಟು ವಿದ್ಯಾರ್ಥಿಗಳಿಗೆ ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.ಈ ವಸತಿ ಶಾಲೆಗಳಲ್ಲಿ ಶೇ. ೫೦% ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರಿಸಿದೆ. ಪೋಷಕರ ಆದಾಯ ರೂ.೨.೫೦ ಲಕ್ಷಗಳಿಗಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳು ಸೇವಾಸಿಂಧುಪೋರ್ಟಲ್ ನೇರವಾಗಿ ವೆಬ್ಸೈಟ್ hಣಣಠಿs://sevಚಿsiಟಿಜhuseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ ಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿಯ ದೂರವಾಣಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ೨೦೨೫–೨೬ನೇ ಸಾಲಿಗೆ ಬೆಂಗಳೂರಿನ ಆಶೀರ್ವಾದ ನಿಯಮಿತ ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ಪಡೆಯಲು ಅರ್ಹ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಈ ತರಬೇತಿಗೆ ಅರ್ಜಿಯನ್ನು ದಿನಾಂಕ ೩೧-೦೧-೨೦೨೬ರ ಒಳಗಾಗಿ ಸಲ್ಲಿಸಬಹುದಾಗಿದೆ.ಅರ್ಜಿದಾರರು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು ಹಾಗೂ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. ೮ನೇ ತರಗತಿ, ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ, ಪಿಯುಸಿ ಉತ್ತೀರ್ಣರಾದ ಅಥವಾ ಪದವಿ ಉತ್ತೀರ್ಣ-ಅನುತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಕನಿಷ್ಠ ೧೮ ವರ್ಷ ಹಾಗೂ ಗರಿಷ್ಠ ೩೫ ವರ್ಷಗಳೊಳಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿ ಇರುವವರು ಈ ತರಬೇತಿಗೆ ಅರ್ಹರಲ್ಲ.ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ ಭವನ, ಕನಕದಾಸ ಬಡಾವಣೆ, ಜಿಲ್ಲಾ ಪಂಚಾಯತ ರಸ್ತೆ ವಿಜಯಪುರ–೫೮೬೧೦೯ ಇಲ್ಲಿಗೆ ಸಂಪರ್ಕಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಖ್ಯಾತ ಉದ್ಯಮಿ ಡಿ. ವೈ. ಉಪ್ಪಾರ ಅವರ ನಿಧನಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಂಬನಿ ಮಿಡಿದಿದ್ದಾರೆ.ಬಸವನ ಬಾಗೇವಾಡಿ ತಾಲೂಕಿನ ಯಾಳವಾರ ಗ್ರಾಮದ ಸಾಮಾನ್ಯ ಕುಟುಂಬದಿಂದ ಬಂದ ಅವರು, ಗುತ್ತಿಗೆ ಕಾಮಗಾರಿಗಳ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳ ಮೂಲಕ ಹೆಸರು ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ನಾಡಿನಲ್ಲಿ ಹೆಸರಾಂತ ಕಾಮಗಾರಿಗಳನ್ನು ಮಾಡಿ ಅವರು ಯುವ ಗುತ್ತಿಗೆದಾರರಿಗೆ ಮಾದರಿಯಾಗಿದ್ದರು.ಶೈಕ್ಷಣಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಅಪಾರ ಕೊಡುಗೆ ನೀಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದ ಅವರು, ಬಡವರಿಗೂ ಸಾಕಷ್ಟು ನೆರವು ನೀಡಿದ್ದರು. ತಮ್ಮ ಜನಪ ಕೆಲಸಗಳ ಮೂಲಕ ಹೆಸರು ಮಾಡಿದ್ದಾರೆ. ಯಂಕಂಚಿ ದಾವಲಮಲಿಕ ಭಕ್ತರಾಗಿದ್ದ ಅವರು, ವಿನಮ್ರತೆ, ಶಿಸ್ತು, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ದೂರದೃಷ್ಠಿಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ನನಗೂ ಆತ್ಮೀಯರಾಗಿದ್ದ ಅವರ ವ್ಯಕ್ತಿತ್ವ ಸದಾ ಸ್ಮರಣೀಯವಾಗಿರಲಿದೆ.ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಸೈಕ್ಲಿಂಗ್ ಗ್ರುಪ್ ನ 17 ಜನ ಸದಸ್ಯರು ಭಾರತದಲ್ಲಿಯೇ ಅತ್ಯಂತ ಕಠಿಣ ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ 42ಕಿ.ಮೀ ವಿಭಾಗದಲ್ಲಿ ಭಾಗವಹಿಸಿ, ಪೂರ್ಣಗೊಳಿಸಿರುವುದು ವಿಜಯಪುರದ ಕ್ರೀಡಾ ಇತಿಹಾಸದಲ್ಲಿಯೇ ವಿಶೇಷ ದಾಖಲೆಯ ಕ್ಷಣ ಎಂದು ಗ್ರುಪ್ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಹೇಳಿದರು.ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ 42ಕಿ.ಮೀ ವಿಭಾಗದಲ್ಲಿ ಭಾಗವಹಿಸಿದ ಸದಸ್ಯರನ್ನು ಸನ್ಮಾನಿಸಿ, ಮಾತನಾಡಿದ ಅವರು, ಈ ಹಿಂದೆ 70 ಮತ್ತು 80ರ ದಶಕದಲ್ಲಿ ನಗರದಲ್ಲಿ ಪುಟ್ ಬಾಲ್ ಪ್ರಖ್ಯಾತ ಕ್ರೀಡೆ ಆಗಿತ್ತು. ಕ್ರಮೇಣ ಪುಟ್ ಬಾಲ್ ಆಸಕ್ತಿ ಕಳೆದುಕೊಂಡು ಕ್ರಿಕೆಟ್ ಬೆಳೆದು ನಿಂತಿತ್ತು. ಇತ್ತಿಚೇಗೆ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಓಟದ ಮೂಲಕ ಯುವಕರು ಹೆಚ್ಚು ಹೆಚ್ಚು ಆಕರ್ಷಣೆಯಲ್ಲಿ ತೊಡಗಿ ಓಟಗಳಲ್ಲಿ ಭಾಗವಹಿಸುವುದು ಮತ್ತು ಪರಿಸರ ರಕ್ಷಣೆಯಲ್ಲಿ ಮುಂದಾಗಿರುವುದು ವಿಶೇಷವಾಗಿದೆ ಎಂದರು.ಪ್ರೋಕ್ಯಾಂ ಸ್ಲ್ಯಾಂ ಎಂದರೆ, ಬೆಂಗಳೂರಿನಲ್ಲಿ ಟಿಸಿಎಚ್ 10ಕಿ.ಮೀ, ದೆಹಲಿಯ ವೇದಾಂತ ಹಾಫ್ ಮ್ಯಾರಥಾನ್ 21ಕಿ.ಮೀ ಕಲ್ಕತ್ತಾದ ಟಾಟಾ ಸ್ಟೀಲ್ 25ಕಿ.ಮೀ ಓಟವನ್ನು ನಿಗದಿತ ಅವಧಿಯಲ್ಲಿ ಓಡಿದಾಗ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹೇ ಲೈಲಾ,ಮೊದಲೇ ನಾನು ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ಹಳ್ಳಿ ಹೈದ. ನಿನ್ನಂತಹ ಕಡಲ ತೀರದ ಬಟ್ಟಲುಗಣ್ಣಿನ ಚೆಲುವಿ ಕಣ್ಣಿಗೆ ಬಿದ್ದಾಗ ಬೆರಳುಗಳು ಗೀಚಿದ ಕವಿತೆಗಳಿಗಳಿಗೆ ಲೆಕ್ಕವಿಲ್ಲ. ನಮ್ಮೀರ್ವರ ನವಿರಾದ ಪ್ರೇಮ ಕತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ನನ್ನಂತಹ ಒರಟನಿಗೆ ತುಸು ಕಷ್ಟವೇ ಅನ್ನು. ಮೊದಲ ಸಲದ ಪ್ರೀತಿಯೇ ಅಂಥದ್ದು ಏನೋ ವಿನೂತನ.ನಮ್ಮಲ್ಲೆಲ್ಲ ಹೋಳಿ ಹಬ್ಬವೆಂದರೆ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಎರಚಿ ಸಂಭ್ರಮಿಸುವುದು ಸಾಮಾನ್ಯ. ನಿಮ್ಮಲ್ಲಿ ಪುರುಷರು ಮೇಳವನ್ನು ಕಟ್ಟಿಕೊಂಡು ಬಣ್ಣ ಬಣ್ಣದ ಧಿರಿಸು ಧರಿಸಿ ಹಾಡು ನರ್ತನದ ಮೂಲಕ ಆಚರಿಸುವ ಹಬ್ಬ ನನಗೆ ಎಲ್ಲಿಲ್ಲದ ಕುತೂಹಲ ಮೂಡಿಸಿತ್ತು. ಅಂದೇ ಮನಸ್ಸಿನಲ್ಲಿ ನಿನ್ನೊಲವು ಸುತ್ತಿ ಸುಳಿದು. ಪ್ರೀತಿಯೆಂಬ ಬಣ್ಣದ ಓಕುಳಿಯಾಟ ಆರಂಭವಾಗಿತ್ತು. ಬಣ್ಣದಾಟದಲ್ಲಿ ಕಣ್ಣಿಗೆ ಬಿದ್ದವಳು ಪ್ರಥಮ ನೋಟದಲ್ಲೇ ಹೃದಯ ಗೆದ್ದವಳು ನಿದಿರೆ ಕದ್ದವಳು ಎಂದು ಆಶು ಕವನವನ್ನು ಹೇಳುತ್ತ ಮೃದುವಾದ ಕೈ ಸವರಿ ಸಪೂರ ಗಲ್ಲವನು ಸವರಿದ್ದು ಇನ್ನೂ ನೆನಪಿದೆ.ಆಗ ಕಡುಬಡತನದ…

Read More

ಲೇಖನ- ರಶ್ಮಿ ಕೆ. ವಿಶ್ವನಾಥ್ಮೈಸೂರು ಉದಯರಶ್ಮಿ ದಿನಪತ್ರಿಕೆ ಹಣವಿರುವ ಶ್ರೀಮಂತರಿಗೆ ಚಿನ್ನ ಅಥವಾ ಬೆಳ್ಳಿ ಖರೀದಿಸುವುದು ದೊಡ್ಡ ವಿಷಯವೇ ಅಲ್ಲ. ಹೂಡಿಕೆ ಮಾಡಬೇಕು ಅಥವಾ ತಾವು ಧರಿಸಬೇಕು ಎಂದಾಗಲೆಲ್ಲ ವಡವೆ ಕೊಂಡುಕೊಳ್ಳುತ್ತಾರೆ.ಬಡವರಿಗೆ ಅದೇ ಒಂದು ದೊಡ್ಡ ವಿಷಯ. ಯಾವುದೋ ಕಾಲಕ್ಕೆ ಅಬ್ಬಬ್ಬಾ ಎಂದರೆ 3-4 ಗ್ರಾಂ ತೆಗೆದುಕೊಂಡು ಅದಕ್ಕೆ ಉಬ್ಬಿಹೋಗುತ್ತಾರೆ.ಆದರೆ ಮಧ್ಯಮ ವರ್ಗದ ತೋಳಲಾಟ ಇದೆಯಲ್ಲ, ಅದು ಹೇಳತೀರದು. ಸಮಾಜದ ಮುಂದೆ ತಮ್ಮ ಬಡತನವನ್ನು ತೋರಿಸಿಕೊಳ್ಳಲು ತಮ್ಮ ಅಹಂ ಬಿಡುವುದಿಲ್ಲ. ಬೇರೆಯವರು ಹಾಕಿರುವುದನ್ನು ನೋಡಿ ತಮಗೂ ಆ ರೀತಿಯ ಒಡವೆ ಬೇಕೆಂದು ಮನಸು ಕೇಳದೆ ಇರುವುದಿಲ್ಲ. ಆದರೆ ಕೊಂಡುಕೊಳ್ಳಲು ಹಣವಿರುವುದಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ಅಲ್ಪ ಸ್ವಲ್ಪ ಹಣ ಉಳಿಸುತ್ತಾ 100 ಗ್ರಾಂ 200 ಗ್ರಾಂಗಳಷ್ಟೇ ಮಾಡಿಸಿಕೊಂಡುಬಿಟ್ಟಿರುತ್ತಾರೆ. ಹತ್ತಿರದವರ ವಿಶೇಷ ದಿನಗಳಲ್ಲಿ ಉಡುಗೊರೆಕೊಡಬೇಕೆಂದಾಗಲೆಲ್ಲಾ, ಹಾಗೋ ಹೀಗೋ ಮಾಡಿ 5-10 ಗ್ರಾಂ ಒಡವೆ ಕೊಟ್ಟುಬಿಡುತ್ತಿದ್ದರು. ಆದರೆ ಈವಾಗ ಹಣ ಕೊಟ್ಟು ಸುಮ್ಮನಾಗಿಬಿಡೋಣ ಎಂಬ ಮನಸ್ಥಿತಿ ಉಂಟಾಗಿದೆ.ಹಾಗಾಗುತ್ತಿರುವುದು ಏಕೆ? ಈ ಚಿನ್ನ ಬೆಳ್ಳಿಯ…

Read More