Author: editor.udayarashmi@gmail.com

ದೇವರಹಿಪ್ಪರಗಿ: 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಪ್ರಾರಂಭವಾಗಿದ್ದು, ಮೊದಲದಿನ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಯಡಹಳ್ಳಿ ದೇವರಹಿಪ್ಪರಗಿ ಮತಕ್ಷೇತ್ರದ ಚುನಾವಣಾಧಿಕಾರಿ ಡಾ. ದುರುಗೇಶ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯುಬಿ, ಪ್ರವೀಣ್ ಕನಸೆ, ರಾಘವೇಂದ್ರ ಚಲವಾದಿ, ಮೈಬೂಬ್ ತಾಂಬೋಳಿ, ರಾಕೇಶ್ ಇಂಗಳಗಿ, ಪ್ರವೀಣ್ ರಾಯಗೊಂಡ, ನರೇಂದ್ರ ರಾಠೋಡ, ಮಾಂತೇಶ ಮರ್ನೂರ, ಸುರೇಶ ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.ಮೊದಲ ದಿನ ಕೇವಲ ಒಬ್ಬರೆ ನಾಮಪತ್ರ ಸಲ್ಲಿಸಿದ್ದಾರೆ.

Read More

ದೇವರಹಿಪ್ಪರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಪಕ್ಷವೇ ವಿನಹಃÀ ವ್ಯಕ್ತಿಯಲ್ಲ. ಆದ್ದರಿಂದ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಉತ್ತರಖಂಡದ ಆರೋಗ್ಯ, ಶಿಕ್ಷಣ ಹಾಗೂ ಸಹಕಾರ ಸಚಿವ ಡಾ.ಧನಸಿಂಗ್ ರಾವತಜೀ ಹೇಳಿದರು.ಅವರು ಪಟ್ಟಣಕ್ಕೆ ಗುರುವಾರ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.ಅಸಮಾಧಾನ ಏನೇ ಇದ್ದರೂ ಅದು ವ್ಯಕ್ತಿಗೆ ಸೀಮಿತವಾಗಿರಲಿ. ಪಕ್ಷ ದೊಡ್ಡದು, ಅದುವೇ ಕೊನೆಗೆ ಅಧಿಕಾರಕ್ಕೆ ಏರುವುದು. ಆದ್ದರಿಂದ ತಮ್ಮ ಮುನಿಸು ಇಂದಿಗೆ ಕೊನೆಗೊಳ್ಳಲಿ. ಪಕ್ಷದ ಗೆಲುವಿಗೆ ಶ್ರಮವಹಿಸಿ ಕನಿಷ್ಠ ಹತ್ತು ಸಾವಿರ ಮತಗಳ ಅಂತರದ ವಿಜಯಕ್ಕೆ ಕಾರಣರಾಗಿರಿ ಎಂದರು.ರಾಜ್ಯಸಭೆ ಸದಸ್ಯ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಉಸ್ತುವಾರಿ ವಹಿಸಿದ ಬನ್ಸಲ್ ಸಾಹೇಬ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಎಲ್ಲ ಸಮುದಾಯಗಳ ಹಿತ ಕಾಪಾಡಿ ಯಶಸ್ವಿಯಾಗಿದ್ದು, ಬಲಿಷ್ಠವಾಗಿದೆ. ಅದಕ್ಕೆ ಈಗ ಕಾರ್ಯಕರ್ತರ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಮಾತ್ರ ಅಗತ್ಯವಾಗಿದೆ ಎಂದರು.ಇAಡಿ ಮತಕ್ಷೇತ್ರದ ಕ್ಷೇತ್ರ ಸಂಚಾಲಕ ಬಿ.ಎಸ್.ಪಾಟೀಲ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಮಂಜುನಾಥ ಮಲ್ಲಿಕಾರ್ಜುನಮಠ, ಹುಸೇನ್ ಗೌಂಡಿ, ಈರಣ್ಣ ವಸ್ತçದ, ಸೋಮು ದೇವೂರ, ಸತೀಶ ಬೂದಿಹಾಳ,…

Read More

ಢವಳಗಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಸಮೀಪದ ಬಸರಕೋಡ ಗ್ರಾಮದಲ್ಲಿ 30ಕ್ಕೂ ಅಧಿಕ ಯುವಕರು ಬುಧವಾರ ಸಂಜೆ ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಯುವ ಮುಖಂಡ ನಾಗರಾಜ ಕಮತರ ಸೇರಿದಂತೆ 30ಕ್ಕೂ ಹೆಚ್ಚು ಜನರು ಬಿಜೆಪಿ ಪಕ್ಷಕ್ಕೆ ಸೇರಿದರು.ಈ ಸಂದರ್ಭದಲ್ಲಿ ತಾಲೂಕಾ ಭಾಜಪಾ ಯುವ ಮೋರ್ಚಾ ಅಧ್ಯಕ್ಷ ಪುನೀತ ಹಿಪ್ಪರಗಿ, ಉಪಾಧ್ಯಕ್ಷ ಬಸವರಾಜ ಮಂಕಣಿ, ಸಂಗಮೇಶ ಬಿರಾದಾರ, ಬಾಜಪಾ ಯುವ ಮೋರ್ಚಾ ಕಾರ್ಯದರ್ಶಿ ಗುರು ರಾಯಗೊಂಡ, ಚೇತನ ಕುಮಾರ್ ಬಿರಾದಾರ, ಚಂದ್ರು ವಡ್ಡರ, ಪ್ರತಾಪ್ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.

Read More

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಡಿ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿ.ಜಿ ಪಾಟೀಲ ಹಲಸಂಗಿ, ರವೀಂದ್ರ ಪೂಜಾರಿ, ಮರೆಪ್ಪ ಗಿರಣಿವಡ್ಡರ, ಬಾಳು ರಾಠೋಡ ಇದ್ದರು.ಅದೇ ರೀತಿ ಕೆ.ಆರ್.ಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಅಶೋಕ ಜಾಧವ ಅವರೂ ಸಹ ಬೆಂಬಲಿಗರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಗಣಪತಿ ಲಾಲಸಿಂಗ್ ರಾಠೋಡ, ಸುರೇಂದ್ರ ಕುಸನಾಳೆ, ನಬಿರಸುಲ್ ಜಮಾದಾರ, ಭೀಮಾಶಂಕರ ಕಾಂಬಳೆ, ಮಲ್ಲಿಕಾರ್ಜುನ ಬಿರಾದಾರ, ಈರಣ್ಣ ತೇಲಿ ಇದ್ದರು.

Read More

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ ಬಿರಾದಾರ, ಧರ್ಮರಾಜ ವಾಲಿಕಾರ ಜಟ್ಟಪ್ಪ ರವಳಿ, ಶಿವಾನಂದ ನಿಂಬಾಳ, ಹುಚ್ಚಪ್ಪ ತಳವಾರ ಇದ್ದರು.

Read More

ವಿಜಯಪುರ: ನಗರದಲ್ಲಿ ಎನ್‌ಎಚ್‌ಎಆಯ್ ಇವರಿಂದ ನಡೆಯುತ್ತಿರುವ ಸರ್ವಿಸ್ ರೋಡನಿಂದ ಸಾರ್ವಜನಕರಿಗಾಗುವ ತೊಂದರೆ ಬಗೆಹರಿಸಲು ಆಗ್ರಹಿಸಿ ಹಂಚಿನಾಳ ಹೌಸಿಂಗ್ ಬೋರ್ಡ, ಉದಯ ನಗರ, ಹಾಗೂ ಉಮರಾಣಿ ಕಾಲೋನಿ, ಪಾರೇಖ ನಗರ, ಹಂಚಿನಾಳ ತಾಂಡೆ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಸದರಿ ಬಡಾವಣೆಗಳ ಜನರಿಗೆ ಸಂಬAಧಪಟ್ಟAತೆ ಎನ್‌ಎಚ್‌ಎಆಯ್ ಇವರು ಸರ್ವಿಸ್ ರೋಡ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಆಶ್ರಮಕ್ಕೆ ಮಾರುಕಟ್ಟೆ, ಶಾಲೆಗೆ ಹೋಗಲು ಝಿಬ್ರಾ ಕ್ರಾಸ್ ಮಾಡಿ ಹೋಗಲು ಅನುಕೂಲ ಮಾಡಿಕೊಡಬೇಕು. ಹಾಗೂ ಈ ಸರ್ವಿಸ್ ರೋಡ ನಿರ್ಮಾಣದಿಂದ ಶಾಲೆಗೆ, ಆಸ್ಪತ್ರೆಗೆ ಸುತ್ತು ಹಾಕಿ ಹೋಗುವುದರಿಂದ ಸಮಯ ಹಾಗೂ ತೀವ್ರ ತರಹದ ತೊಂದರೆಯಾಗುತ್ತದೆ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಎನ್‌ಎಚ್‌ಎಆಯ್ ಇವರಿಗೆ ದಿ.೦೬-೦೨-೨೦೨೨ ರಂದು ಮನವಿ ಸಹ ಸಲ್ಲಿಸಲಾಗಿತ್ತು. ಹಾಗೂ ಸಂಸದರಿಗೂ ಸಹ ಮನವಿ ಸಲ್ಲಿಸಲಾಗಿತ್ತು. ಸಂಸದರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಈವರೆಗೂ ಭರವಸೆಯಾಗಿಯೇ ಉಳಿದಿದೆ.ಕಾರಣ ಈ ಸಮಸ್ಯೆಯನ್ನು ಈ ಚುನಾವಣೆಯೊಳಗೆ ಬಗೆಹರಿಸಬೇಕು. ಇಲ್ಲದೇ ಹೋದಲ್ಲಿ ಈ ಚುನಾವಣೆಯನ್ನು ಎಲ್ಲ ಬಡಾವಣೆಯ…

Read More

ಮುದ್ದೇಬಿಹಾಳ: ಹೊಲದಲ್ಲಿ ಬೆಳೆದ ಬೆಳೆಗಳಿಗೆ ನೀರು ಕೊಡಲು ಸರಿಯಾಗಿ ವಿದ್ಯುತ್ ಇಲ್ಲದ ಕಾರಣ ಬೆಳೆಗಳು ಒಣಗಿ ಹೋಗುತ್ತಿದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಸರೂರ ಗ್ರಾಮದ ರೈತರು ಹೆಸ್ಕಾಂ ಎಇಇಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಹೆಸ್ಕಾಂ ಕಚೇರಿಗೆ ಆಗಮಿಸಿದ್ದ ರೈತರು, ಎಇಇ ಪರವಾಗಿ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರಿಗೆ ಮನವಿ ಸಲ್ಲಿಸಿದರು.ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ತೋಟದ ಪಂಪಸೆಟ್‌ಗಳಿಗೆ ಹೊಲದಲ್ಲಿ ಬೆಳೆಗಳಿಗೆ ನೀರು ಸಮರ್ಪಕವಾಗಿ ಪೂರೈಸಲು ಆಗುತ್ತಿಲ್ಲ. ದಿನಕ್ಕೆ ಒಂದು ತಾಸು ಸರಿಯಾಗಿ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಬೇಸಿಗೆ ಸಮಯದಲ್ಲಿ ಬೆಳೆಗಳಿಗೆ ಏಳು ತಾಸು ವಿದ್ಯುತ್ ಸರಬರಾಜು ಮಾಡಿದರೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಲೈನಮನ್‌ಗೆ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಹೇಳಿದರೂ ಪರಿಹಾರ ದೊರೆತಿಲ್ಲ. ಬಿಸಿಲಿನ ತಾಪಕ್ಕೆ ಬೆಳೆಗಳು ಒಣಗಿ ಹೋಗುತ್ತಿವೆ ಎಂದು ತಿಳಿಸಲಾಗಿದೆ.ಮನವಿಗೆ ರೈತರಾದ ಸಿ.ಎಸ್.ಪಾಟೀಲ್, ಆರ್.ಎನ್.ಪಾಟೀಲ್, ಎಸ್.ಬಿ.ಬಿಜ್ಜೂರ, ಎಂ.ಬಿ.ಬಿಜ್ಜೂರ, ಎಸ್.ಎಂ.ಗುರುವಿನ, ಬಿ.ಎಸ್.ಗುರುವಿನ, ಶಿವಯ್ಯ ಗುರುವಿನ, ರಾಮನಗೌಡ ಬಿರಾದಾರ, ಮಲ್ಲಪ್ಪ ಬಾದವಾಡಗಿ, ಪ್ರಶಾಂತ ಪೂಜಾರಿ, ಪರಶುರಾಮ ಬಯ್ಯಾಪೂರ, ಡಿ.ಬಿ.ವಾಲೀಕಾರ…

Read More

ಚೈತ್ರವೇ ಕೇಳು ಈ ಮೊರೆಯನನ್ನವಳು ಬರುವ ಆ ಸಮಯಸುರಿಯೋ ಹೂವಿನ ಮಳೆಯಕೋಗಿಲೆಯೆ ಹಾಡು ನೀನೀಗನನ್ನವಳು ನಲಿದು ಬರುವಾಗಶುಭವ ಕೋರಿ ಹೊಸರಾಗ ನನ್ನೆದೆಯ ಸ್ವರವೀಣೆನೀ ನುಡಿಸು ಓ ಜಾಣೆ.ಪ್ರತಿಸ್ವರವು ಮಿಡಿದಿಹುದುನಿನ್ನ ಹೆಸರ ನೀ ಕಾಣೆತಾವರೆಯ ಮೊಗದೊಳಗೆಮುಗುಳುನಗೆ ಮಲ್ಲಿಗೆಯಕಾಣಲು ಕಾದಿದೇ ಹೃದಯ ಲೋಕಕೆಲ್ಲ ಹುಣ್ಣಿಮೆಯುಒಂದು ತಿಂಗಳಿಗೊಮ್ಮೆನನ್ನವಳ ನಗುವಿಂದಅನುದಿನವೂ ಹುಣ್ಣಿಮೆದುಂಬಿಗಳೇ ಹೊರಡಿ ಇಲ್ಲಿಂದಹೂವಲ್ಲ ಈ ಚೆಲುವುನನ್ನ ಪ್ರೇಯಸಿಯ ಮೊಗವು ಗಿರಿನವಿಲು ಗರಿಬಿಚ್ಚಿಕಾಯುತಿದೆ ನಿನಗಾಗಿಹೊಸದೊಂದು ಬಿನ್ನಾಣಕಲಿಯುವ ಸಲುವಾಗಿನೀ ಬರುವ ಸೂಚನೆಗೆಧರೆಯೆಲ್ಲ ಹಸಿರಾಯ್ತುಸಂತಸ ಹೊನಲಾಯ್ತು

Read More

ಸಾಯುವುದು ಅಷ್ಟು ಸುಲಭವಾ…? ಪ್ರತಿ ಸಲ ಆತ್ಮಹತ್ಯೆ ವಿಷಯ ಕಿವಿಗೆ ಬಿದ್ದಾಗ ನನ್ನ ಮನದಲ್ಲಿ ಮೂಡುವ ಪ್ರಶ್ನೆ ಇದು.. ನೀವು ಹೇಳ್ತಿರಾ. ಅಂತಹ ಪರಿಸ್ಥಿತಿ ಒತ್ತಡದಲ್ಲಿ ಸಿಲುಕಿದಾಗ ಬೇರೆ ದಾರಿ ಕಾಣದೆ ಸಾವಿನ ಹಾದಿ ಹಿಡಿತಾರೆ ಅಂತಾ, ಸರಿ ಒಪ್ಪುವೆ ಹಾಗಂತ ಅವರಂತ ಕಷ್ಟ ಬೇರೆ ಯಾರು ಅನುಭವಿಸಿಯೇ ಇಲ್ವಾ ..? ಈ ವಿಶಾಲವಾದ ಪ್ರಪಂಚದಲ್ಲಿ ಸಂಪೂರ್ಣ ಸುಖಿಗಳು ಕೋಟಿಗೊಬ್ಬರು ಸಿಗಬಹುದು, ಉಳಿದಂತೆ ಎಲ್ಲರಿಗೂ ಒಂದಲ್ಲ ಒಂದು ಕಷ್ಟ ನೋವು ಇದ್ದೇ ಇರುತ್ತೆ. ಆ ದೇವರು ಮಹಾನ್ ಸ್ವಾರ್ಥಿ ಅನ್ನಬಹುದು ಏಕೆಂದರೆ ಎಲ್ಲರಿಗೂ ಸಂಪೂರ್ಣ ಸುಖ ಕೊಟ್ಟರೆ ನನ್ನ ಪೂಜೆ ಮಾಡುವವರು ಯಾರು ಎಂಬ ಯೋಚನೆ ಇರಬಹುದು. ಅವನ ಯೋಚನೆ ಸರಿಯಾಗಿದೆ ಅಲ್ವಾ ಏಕೆಂದರೆ ನಾವೆಲ್ಲಾ ಸಂಕಟ ಬಂದಾಗ ಮಾತ್ರ ದೇವರ ಮೊರೆ ಹೋಗ್ತಿವಿ, ಸುಖದಲ್ಲಿ ದೇವರ ಮನಸಾರೆ ಪೂಜಿಸಿ ಸ್ಮರಿಸುವದು ಕಡಿಮೆ ಎಂದೇ ಹೇಳಬಹುದು. ಸಂಪೂರ್ಣ ಸಂತೋಷ ಕೊಟ್ಟರೆ ಮನುಷ್ಯನ ಅಹಂಕಾರ ಗರ್ವ ಮೀತಿ ಮೀರಬಹುದು ಅನ್ನೋ ಉದ್ದೇಶ ಕೂಡ…

Read More