Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭಯ
(ರಾಜ್ಯ ) ಜಿಲ್ಲೆ

ಭಯ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿದ್ಯಾರ್ಥಿ ನಿಧಿ

  • ಮಂಡ್ಯ ಮ.ನಾ.ಉಡುಪ

ರಾಮಾಪುರವೆಂಬ ಊರಿನ ಮಧ್ಯೆ ಭಾಗದಲ್ಲಿ ವಿಶಾಲವಾಗುವಂತಹ ಮಾವಿನಮರ ಬೆಳೆದಿತ್ತು. ಆ ಮರದ ಕೆಳಗೆ ಆ ಊರಿನ ಗ್ರಾಮಸ್ಥರು ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅಕ್ಕಪಕ್ಕದ ಊರುಗಳಿಗೆ ಹೋಗುವಂತಹ ಗ್ರಾಮಸ್ಥರು ಮಾರ್ಗಯಾಸ ಪರಿಹಾರ ಮಾಡಿಕೊಳ್ಳಲು ಇದೇ ಮರದ ಕೆಳಗೆ ಕೆಲಕಾಲತಂಗಿ ಮುಂದೆ ಹೋಗುತ್ತಿದ್ದರು. ಹೀಗೆ ಈ ವಿಶಾಲವಾದಂತಹ ಮಾವಿನಮರ ನೂರಾರು ಪಕ್ಷಿಗಳಿಗೆ ಜಾನುವಾರುಗಳಿಗೆ, ಜನರಿಗೆ ಆಶ್ರಯ ತಾಣವಾಗಿ ನಿಂತಿತ್ತು. ಹೀಗಿರಲು ಒಂದು ದಿನ ಆ ಮರದ ಕೆಳಗಿನ ಹುತ್ತದೊಳಗೆ ದೂರದ ಕಾಡಿನಿಂದ ಬಂದಂತಹ ಕರಿನಾಗರ ಆಶ್ರಯ ಪಡೆದಿತ್ತು. ಹೀಗೆ ಸೇರಿಕೊಂಡ ಹಾವು ಆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಬರುತ್ತಿದ್ದ ಜನರಿಗೆ ಕಚ್ಚಿ ಉಪಟಳ ಕೊಡುತ್ತಿತ್ತು. ಹೀಗೆ ಕಚ್ಚಿ ಹಲವಷ್ಟು ಜನ ಪ್ರಾಣವನ್ನೇ ಕಳೆದುಕೊಂಡಿದ್ದರು . ಹೀಗಾಗಿ ಮಾವಿನ ಮರದ ಕೆಳಗೆ ಹೋಗಲು ಜನ ಭಯಪಡಬೇಕಾದಂತಹ ವಾತಾವರಣ ನಿರ್ಮಾಣವಾಯಿತು. ಈ ಹಾವಿನ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆ ಮರದ ಹತ್ತಿರ ಬರುವುದನ್ನು ನಿಲ್ಲಿಸಿಬಿಟ್ಟರು.
ಕಾಲ ಕಳೆಯುತ್ತಿರಲು ಒಂದು ದಿನ ಆ ಮರದ ಕೆಳಗೆ ಒಬ್ಬ ಸನ್ಯಾಸಿ ಹೋಗುತ್ತಿದ್ದ. ಬಹಳ ಕಾಲದಿಂದ ಮನುಷ್ಯರ ಓಡಾಟವೇ ನಿಂತಿದ್ದ ಆ ದಾರಿಯಲ್ಲಿ ಬರುತ್ತಿರುವಂತಹ ಸನ್ಯಾಸಿಯ ಬಳಿಗೆ ಹಾವು ಸರಸರನೆ ಹೋಯಿತು. ಸನ್ಯಾಸಿ ತನ್ನ ತಪಶಕ್ತಿಯಿಂದ ಹಾವನ್ನು ಅಲ್ಲಿಯೇ ನಿಲ್ಲುವಂತೆ ಮಾಡಿದ. ಅವನ ದೃಷ್ಟಿ ಬಿದ್ದಂತಹ ಹಾವು ತನ್ನ ಮೂಲ ದುಷ್ಟಗುಣಗಳನ್ನು ತ್ಯಜಿಸಿತು.
“ವಿನಾ ಕಾರಣ ಯಾರಿಗೂ ತೊಂದರೆ ಕೊಡಬೇಡ” ಎನ್ನುವಂಥ ಉಪದೇಶವನ್ನು ನೀಡಿ ಸನ್ಯಾಸಿ ಹೊರಟು ಹೋದ.
ಹೀಗಿರಲು ಹಲವಾರು ದಿನ ಹಾವು ಹುತ್ತದಿಂದ ಬರದೇ ಇರುವುದನ್ನು ನೋಡಿದಂತಹ ಆ ಊರಿನ ದನಗಾಹಿಗಳು ಹಾವು ಸತ್ತೇ ಹೋಗಿರಬೇಕೆಂದು ತಿಳಿದು ಮತ್ತೆ ಮರದ ಕಡೆ ಬರಲು ಆರಂಭಿಸಿದರು. ಅವರು ಆ ಮರದ ಕಡೆ ನಿತ್ಯವೂ ಬಂದು ಕೂರುವುದು. ಆಟ ಆಡುವುದು ಮತ್ತೆ ಮಾಮೂಲಿನಂತೆ ನಡೆಯತೊಡಗಿತು. ಹಾವು ಯಥಾಪ್ರಕಾರ ಹೊರಗೆ ಬಂದರೂ ಯಾರಿಗೂ ಕಚ್ಚದೇ ಯಾರಿಗೂ ನೋವು ಕೊಡದೇ ಅಲ್ಲಿಲ್ಲಿ ಓಡಾಡಿ ಬಿಲ ಸೇರುತ್ತಿತ್ತು.
ಹೀಗೆ ಹಲವು ದಿನ ಕಳೆದರೂ ಆ ಹಾವು ಯಾರಿಗೂ ಏನೂ ಮಾಡದೇ ಅಲ್ಲಲ್ಲಿ ಓಡಾಡುತ್ತಿರುವುದನ್ನು ನೋಡಿದಂತಹ ಈ ದನಗಾಹಿಗಳು ಹಾವನ್ನು ಹಿಡಿದು ಆಡಿಸುವುದು, ಕತ್ತಿಗೆ ಸುತ್ತಿಕೊಳ್ಳುವುದು, ಕಲ್ಲು ಹೊಡೆಯುವುದು ಹೀಗೆ ನಾನಾ ರೀತಿಯ ಹಿಂಸೆ ಕೊಡಲು ಆರಂಭಿಸಿದರು. ಆದರೂ ಹಾವು ಯಾರಿಗೂ ಏನನ್ನೂ ಮಾಡದೆ ಸುಮ್ಮನಿರುತ್ತಿತ್ತು. ದಷ್ಟಪುಷ್ಟವಾಗಿದ್ದ ಹಾವು ಕೃಷವಾಗಿ ಮಾರ್ಪಟ್ಟಿತ್ತು.
ಹೀಗೆ ಹಲವಾರು ದಿನ ಕಳೆದ ನಂತರ ಆ ಸನ್ಯಾಸಿ ಅದೇ ಮಾರ್ಗವಾಗಿ ಹೋಗುತ್ತಿದ್ದ. ಅವನು ಆ ಗೋಪಾಲಕರ ಕುತ್ತಿಗೆಯಲ್ಲಿ ಸುತ್ತಿ ಕೊಂಡಿದ್ದಂತಹ ಹಾವನ್ನು ನೋಡಿ ಅವನಿಗೆ ಕನಿಕರ ಉಂಟಾಯಿತು. ಅವನು ಗೋಪಾಲಕರಿಂದ ಆ ಹಾವನ್ನು ಬಿಡಿಸಿ ಹಾವಿಗೆ ಹೇಳಿದ
“ಅವರಿವರಿಗೆ ಹೆದರಿಸಿ ಓಡಾಡಿಕೊಂಡು ಇದ್ದಂತಹ ನಿನಗೇಕೆ ಇಂತಹ ಪರಿಸ್ಥಿತಿ ಬಂತು?” ಎಂದು ಕೇಳಿದಾಗ ಹಾವು ಹೇಳಿತು,
“ಸ್ವಾಮಿ ತಾವು ಹೇಳಿದಂತೆ ನಾನು ಶಿರಸಾವಹಿಸಿ ಪಾಲಿಸುತ್ತಿದ್ದೇನೆ. ನಾನು ಯಾರಿಗೂ ನನ್ನಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ.”
ಆಗ ಸನ್ಯಾಸಿ ಹೇಳಿದ
“ನೋಡು ನಾನು ನಿನಗೆ ಹೇಳಿದ್ದು ಯಾರಿಗೂ ಸುಮ್ಮನೆ ತೊಂದರೆ ಕೊಡಬೇಡವೆಂದು ಮಾತ್ರ. ಆದರೆ ನಾನು ನಿನಗೆ ಎಂದೂ ಬುಸುಗುಟ್ಟಬೇಡವೆಂದು ಹೇಳಿಲ್ಲ. ಬಸುಗುಟ್ಟುವುದು ನಿನ್ನ ಮೂಲ ಗುಣ. ನೀನು ಸುಮ್ಮನೆ ಯಾರಿಗೂ ತೊಂದರೆ ಕೊಡುಬೇಡ. ಆದರೆ ನೀನು ನಿನ್ನ ರಕ್ಷಿಸಿಕೊಳ್ಳುವ ಹಕ್ಕು ನಿನಗಿದೆ. ನಿನ್ನ ರಕ್ಷಣೆಗದು ಅನಿವಾರ್ಯ ಸಹ ಹೌದು.” ಎಂದು ತಿಳಿಹೇಳಿದ.
ನಂತರ ಹಾವು ತನ್ನ ಬಳಿ ಬಂದವರಿಗೆ ಬುಸುಗುಡಲಾರಂಭಿಸಿತು. ಇದರಿಂದ ಹೆದರಿದ ಜನರು ಆ ಹಾವಿಗೆ ಉಪಟಳ ಕೊಡುವುದನ್ನು ನಿಲ್ಲಿಸಿದರು. ಬಳಿಕ ಮುಂದೆಂದೂ ಅದರ ಸಮೀಪವೂ ಸುಳಿಯದಾದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.