ಕಲಕೇರಿಯಲ್ಲಿ ಹೆಚ್ಐವಿ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಇಂದಿನ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಯುಗದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಆರೋಗ್ಯ ಇಲಾಖೆಯು ಜಾರಿಗೆ ತಂದಿರುವ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿಶೇಷವಾಗಿ ಯುವಕ ಯುವತಿಯರು ಆರೋಗ್ಯ ಇಲಾಖೆಯ ಸ್ಕ್ಯಾನರ್ ಬಳಸಿ ತಮ್ಮ ಆರೋಗ್ಯದ ಸ್ಥಿತಿಗತಿಯನ್ನು ತಾವೇ ಸ್ವಯಂ ದೃಢೀಕರಿಸಿಕೊಳ್ಳುವ ಮತ್ತು ಅವಶ್ಯಕ ಆರೋಗ್ಯ ಸೇವೆ ಹಾಗೂ ಪರಿಹಾರ ಪಡೆಯುವ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲಕೇರಿಯ ಸಮುದಾಯ ಆರೋಗ್ಯ ಕೇಂದ್ರ ಆಪ್ತ ಸಮಾಲೋಚಕರಾದ ಡಾ. ಸಂತೋಷ ಟೆಂಗಳಿ ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಮಾರ್ಗದರ್ಶನದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಆದರ್ಶ ಪ್ರಥಮದರ್ಜೆ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ನಡೆದ ಊIಗಿ/ಂIಆS ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಊIಗಿ/ಂIಆS ಹರಡುವಿಕೆ, ತಡೆಗಟ್ಟುವ ಕ್ರಮಗಳು, ಊIಗಿ ಪರೀಕ್ಷೆ, ಚಿಕಿತ್ಸೆ ಹಾಗೂ ಂಖಖಿ ಸೇವೆಗಳ ಹಾಗೂ ‘ಬ್ರೇಕ್ ಫ್ರೀ ಇಂಡಿಯಾ’ ಕಿಖ ಅoಜe ಸ್ಕ್ಯಾನ್ ಮಾಡುವ ಮೂಲಕ ಊIಗಿ/ಂIಆS ಹಾಗೂ ಲೈಂಗಿಕ ಆರೋಗ್ಯಕ್ಕೆ ಸಂಬAಧಿಸಿದ ವಿಶ್ವಾಸಾರ್ಹ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು ಮತ್ತು ಊIಗಿ ಸೋಂಕಿತ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ ತಾರತಮ್ಯ ಮಾಡದೆ, ಅವರಿಗೆ ಬೆಂಬಲ ಮತ್ತು ಗೌರವ ನೀಡಬೇಕು, “ಜ್ಞಾನವೇ ಊIಗಿ/ಂIಆS ತಡೆಗಟ್ಟುವ ಪ್ರಮುಖ ಶಕ್ತಿ–ಸರಿಯಾದ ಮಾಹಿತಿ ಪಡೆಯಿರಿ, ತಪ್ಪು ಕಲ್ಪನೆಗಳನ್ನು ತೊಡೆದುಹಾಕಿರಿ.” ಎಂದರು.
ಆರ್ಕೆಎಸ್ಕೆ ಆಪ್ತ ಸಮಾಲೋಚಕರಾದ ಅಪ್ಪಾಸಾಬ ಮಾಂಗ ಅವರು ಹದಿಹರೆಯದವರ ಆರೋಗ್ಯ ಮತ್ತು ಅದರಿಂದಾಗುವ ಸಮಸ್ಯೆಗಳು ಮತ್ತು ಮುಟ್ಟಿನ, ಲೈಂಗಿಕ ಮತ್ತು ಸಂತಾನೋತ್ಪತಿ, ಆರೋಗ್ಯದ ಕುರಿತು ಸಲಹೆ ನೀಡಿ “ಹಲೋ ಮೈತ್ರಿ” ಆರೋಗ್ಯ ಸಹಾಯವಾಣಿಯ ಉದ್ದೇಶ, ಉಪಯೋಗ ಮತ್ತು ಲಭ್ಯವಿರುವ ಆರೋಗ್ಯ ಸೇವೆಗಳ ಕುರಿತು ವಿಶೇಷವಾಗಿ ಕಿಶೋರಾವಸ್ಥೆಯಲ್ಲಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ, ಮಾಸಿಕ ಋತುಚಕ್ರದ ಆರೋಗ್ಯ, ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಂಬಂಧಿತ ಅನುಮಾನಗಳ ಕುರಿತು ಸೂಕ್ತ ಮಾರ್ಗದರ್ಶನ ಪಡೆಯುವ ಕುರಿತು ಹಲ್ಲೋ ಮೈತ್ರಿ ಸಹಾಯವಾಣಿ ಸಂಖ್ಯೆ ೦೮೦೪-೭೧೦೪-೨೩೪ ಗೆ ಹೇಗೆ ಕರೆಮಾಡಿ ಮಾತನಾಡಬೇಕು ಎಂದು ತಿಳಿಸಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಲವು ಪ್ರಶ್ನೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯರಾದ ಎಸ್.ಎಮ್.ಸಜ್ಜನ ಅವರು ವಿದ್ಯಾರ್ಥಿಗಳು ತಮ್ಮ ಆರೋಗ್ಯ ಸಮಸ್ಯೆಗಳು ಮತ್ತು ಸಂದೇಹಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಆರೋಗ್ಯ ಸೇವೆ ಮತ್ತು ಸಲಹೆಯನ್ನು ಪಡೆಯುವ ಮೂಲಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಿಯು ಕಾಲೇಜಿನ ಪ್ರಾಚಾರ್ಯರಾದ ಅಜಯ್ ಬರಗಾಲಿ, ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಎಚ್.ಎ.ಮೋಮಿನ, ಉಪನ್ಯಾಸಕರಾದ ಆಬೀದ ಸಾಲೋಡಗಿ, ರುಕ್ಷಾನಾಬೇಗಂ ಹಿಪ್ಪರಗಿ, ಸಂಗೀತಾ ಟೆಂಗಳಿ, ಸದ್ದಾಮ್ ಬಡೇಘರ, ವಿನೋದ ನಂದಿಮಠ, ಮಲ್ಲಿಕಾರ್ಜುನ ಸಜ್ಜನ, ನಬಿಲಾಲ ದೊಡಮನಿ ಸೇರಿದಂತೆ ಇತರರು ಇದ್ದರು.

