Author: editor.udayarashmi@gmail.com

ಯಕ್ಕುಂಡಿಯಲ್ಲಿ ನಡೆದ ಜಲ ರತ್ನಾಕರ ಪ್ರಶಸ್ತಿ ಪ್ರದಾನ ಸಮಾರಂಭ | 3ಕೃತಿಗಳ ಲೋಕಾರ್ಪಣೆ ವಿಜಯಪುರ: ಜಿಲ್ಲೆಯ ಜನ ನೆಮ್ಮದಿಯ ಬದುಕು ಸಾಗಿಸುವ ಕೆಲಸ ಮಾಡಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಡೆದ ಜಲ ರತ್ನಾಕರ ಪ್ರಶಸ್ತಿ ಪ್ರಧಾನ ಮತ್ತು ಮೂರು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಲಸಂಪನ್ಮೂಲ ಸಚಿವನಾಗಿದ್ದಾಗ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ಈ ಬಾಗದಲ್ಲಿ ರೂ. 14000 ಕೋ. ವೆಚ್ಚದಲ್ಲಿ ನಾನಾ ನೀರಾವರಿ ಯೋಜನೆಗಳನ್ನು ಮಾಡಿದ್ದೇನೆ. ಇದರಿಂದಾಗಿ ರೈತರು ತೋಟಗಾರಿಕೆ ಬೆಳೆಗಳ ರಕ್ಷಣೆಗಾಗಿ ಪ್ರತಿವರ್ಷ ಟ್ಯಾಂಕರ್ ಮೂಲಕ ನೀರು ಖರೀದಿಸುವ ಅನಿವಾರ್ಯತೆ ತಪ್ಪಿದೆ. ಶ್ರೀಗಳು ನನಗೆ ಜಲನಾಯಕ ಎಂದು ಬಿರುದು ನೀಡಿರುವುದು ವಿಶ್ವಶ್ರೇಷ್ಠ ಪ್ರಶಸ್ತಿಯಾಗಿದೆ ಎಂದು ಅವರು ತಿಳಿಸಿದರು.ನಮ್ಮ ಜನ ಶ್ರೀಮಂತರಾಗಿ ನೆಮ್ಮದಿಯ ಜೀವನ ಸಾಗಿಸಲು ಕ್ರಮ ಕೈಗೊಂಡಿದ್ದೆ. ಜೀವನಕ್ಕೆ ಅಗತ್ಯವಾಗಿರುವ ಜಲ, ವೃಕ್ಷ, ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.ಮಮದಾಪುರದ ವಿರಕ್ತಮಠದ ಅಭಿನವ…

Read More

ಕೊನೆಯ ಘಳಿಗೆಯಲ್ಲಿ ತಪ್ಪಿದ ಟಿಕೆಟ್ | ಸ್ವಾಮೀಜಿ ಒತ್ತಡ | ಕುಮಾರಸ್ವಾಮಿಯವರಿಂದ ಅನ್ಯಾಯ ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಶೂನ್ಯದಿಂದ ಸಂಘಟನೆ ಮಾಡಿ ಇಂದು ಗೆಲ್ಲುವ ಹಂತಕ್ಕೆ ತಂದು ನಿಲ್ಲಿಸಿದ ನನಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷದ ಬಿಫಾರಂ ತಪ್ಪಿಸಿ ಅವಕಾಶವಾದ ರಾಜಕಾರಣ ಮಾಡಿದ್ದಾರೆ ಎಂದು ಜೆಡಿಎಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಪರಮಾನಂದ ಟಣಕೇದಾರ ಆರೋಪಿಸಿದರು.ಗುರುವಾರ ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವನಬಾಗೇವಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಲು ನಾನು ಲಕ್ಷಾಂತರ ರೂ ಸಂಬಳದ ಸರಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಹಲವು ತಿಂಗಳುಗಳಿAದ ಪಕ್ಷ ಸಂಘಟನೆ ಮಾಡಿದ್ದೆ. ಪಕ್ಷದ ಟಿಕೆಟ್ ಕುರಿತು ನಮ್ಮ ನಾಯಕರಾದ ಕುಮಾರಸ್ವಾಮಿ ಮತ್ತು ಬಂಡೆಪ್ಪ ಕಾಶಂಪೂರ ಅವರೊಂದಿಗೆ ಮಾತನಾಡಿ ಖಚಿತ ಪಡಿಸಿಕೊಂಡಿದ್ದೆ. ಅವರೂ ಸಹ ಯಾವ ಕಾರಣಕ್ಕೂ ಕೊನೆಯ ಹಂತದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಭರವಸೆಯನ್ನೂ ಸಹ ಕೊಟ್ಟಿದ್ದರು. ಆದರೀಗ ಭಿಫಾರಂ ಕೊಡುವುದಾಗಿ ಹೇಳಿ ನನ್ನನ್ನು ಬೆಂಗಳೂರಿಗೆ…

Read More

ಮುಳವಾಡದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಕೊಲ್ಹಾರ: ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಖಿಲಗೌಡ ಪಾಟೀಲ್, ಸಂಗನಗೌಡ ಯಂಕಂಚಿ, ಪ್ರವೀಣ ಬುಟೆ, ಬಸವರಾಜ ಬಾಗೇವಾಡಿ, ಸಂಗಮೇಶ ಬಾಟಿ ಸೇರಿದಂತೆ 16 ಹಳ್ಳಿಗಳ ನೂರಾರು ಯುವಕರು ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕಾಂಗ್ರೆಸ್ ದುರಾಡಳಿತ ಮತ್ತು ಜವಾಬ್ದಾರಿ ಮರೆತ ಶಾಸಕ ಶಿವಾನಂದ ಪಾಟೀಲರ ಸರ್ವಾಧಿಕಾರಿ ಧೋರಣೆಗೆ ಬೇಸತ್ತು ಇಂದು ಸಾವಿರಾರು ಜನ ಯುವಕರು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು ಬಿಜೆಪಿ ಅಧಿಕಾರವಧಿಯಲ್ಲಿ. ಈ ಬಾರಿ ಮತಕ್ಷೇತ್ರದ ಜನ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳಿಗೆ ನೀಡಿದ್ದ ವಚನದಂತೆ ಮೂರನೇ ಹಂತದ ನೀರು ರೈತರ ಜಮೀನುಗಳಿಗೆ ಹರಿಸುವವರೆಗೂ ವಿಶ್ರಾಂತಿ…

Read More

ಶಿಗಣಾಪುರ(ಚಡಚಣ): ನಾನು ಅಭಿವೃದ್ಧಿ ಪರ ಶಾಸಕನಾಗಿ ನಿಮ್ಮ ನೆನಪಲ್ಲಿ ಉಳಿಯಬೇಕು ಎಂದು ಕೊಂಡವನಾದ್ದರಿಂದ ನಿಮ್ಮ ಎಲ್ಲ ಅನಾನುಕೂಲಗಳನ್ನು ಅನುಕೂಲಗಳನ್ನಾಗಿ ಬದಲಿಸುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಹೇಳಿದರು.ಗುರುವಾರ ಗ್ರಾಮದಲ್ಲಿ ನಡೆದ ಚುನಾಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಮತದಾರರು ಕೆಟ್ಟಿಲ್ಲ, ನಾಯಕರು ಕೆಟ್ಟಿದ್ದಾರೆ. ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ, ಸಮಗ್ರ ಅಭಿವೃದ್ಧಿಯೇ ನನ್ನ ಗುರಿ. ಶಿಗಣಾಪುರ ಗ್ರಾಮದ ಯಾರೇ ಬಂದರೂ ಅವರ ಕಾರ್ಯ ಮಾಡಿಕೊಡುವೆ. ಸಬ್ಸಿಡಿ, ಕೃಷಿ ಹೊಂಡ, ಅನೇಕ ಸೌಲಭ್ಯಗಳನ್ನು ನಿಮಗೆ ನೀಡುತ್ತೇನೆ. ಸಾಮಾನ್ಯನೇ ಬಂದರೂ ಅವರ ಕೆಲಸ ಮಾಡಿಕೊಡುವೆ ಎಂದು ಕಟಕದೊಂಡ ಹೇಳಿದರು.’ನೀವು ಶಾಸಕರಾದರೆ ಗ್ರಾಮದ ಕೆರೆ ಹೂಳೆತ್ತುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಬೇಕು’ ಎಂದು ಸಾಮಾಜಿಕ ತಾಣದ ಜಿಲ್ಲಾ ಮುಖ್ಯಸ್ಥ ಹಾಗೂ ಗ್ರಾಮದ ಮುಖಂಡ ಪ್ರಕಾಶ ಪಾಟೀಲ ಪ್ರಾಸ್ತಾವಿಕ ಮಾತನಾಡುತ್ತ ಮನವಿ ಮಾಡಿದರು.ಬಿಜೆಪಿ ಅತಿ ಭ್ರಷ್ಟ, ಕೋಮುವಾದಿ ಪಕ್ಷವಾಗಿದೆ. ಜೆಡಿಎಸ್‌ನ ಸದ್ಯದ ಶಾಸಕರೂ ನಿರುಪಯೋಗಿಯಾಗಿದ್ದಾರೆ. ಇದಕ್ಕೆ ಬೇಸತ್ತು ಎಂ.ಆರ್.ಪಾಟೀಲರು ಅವರನ್ನು ತೊರೆದು ಕಾಂಗ್ರೆಸ್ ಸೇರಿದ್ದು ಬಲ ಬಂದಿದೆ.…

Read More

ಇಂಡಿ: ದೇಶದ ಹಿತಕ್ಕಾಗಿ, ರಾಜ್ಯ ಮತ್ತು ಇಂಡಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ಲಿಂಬೆ ನಾಡಿನ ಬದಲಾವಣೆಗಾಗಿ, ಜನಪರ ಸರಕಾರ ರಚಿಸಲು, ಮೋದಿಜಿ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಮನವಿ ಮಾಡಿದರು. ತಾಲ್ಲೂಕಿನ ಹಿರೇಬೇವನೂರ, ಸಾತಲಗಾಂವ ಪಿ.ಐ, ಲಾಳಸಂಗಿ ಹಾಗೂ ಕೆಸರಾಳ ತಾಂಡಾಕ್ಕೆ ಗುರುವಾರ ಬೇಟಿ ನೀಡಿ ಮತಯಾಚನೆ ಮಾಡಿ ಅವರು ಮಾತನಾಡಿದರು. ನರೇಂದ್ರಮೋದಿಯವರ ಪ್ರತಿಯೊಂದು ಯೋಜನೆಗಳು ಪ್ರತಿ ಹಳ್ಳಿಗೂ ತಲುಪುವಲ್ಲಿ ಕೇಂದ್ರದಲ್ಲೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಇರುವ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದಿಂದ 6000 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4000 ಸಾವಿರ ಡಬಲ್ ಎಂಜಿನ್ ಸರಕಾರವಿದ್ದ ಕಾರಣದಿಂದಾಗಿ ನೇರವಾಗಿ ರೈತರ ಖಾತೆಗೆ ಒಟ್ಟು10000 ಸಾವಿರ ರೂಗಳು ತಲುಪುತ್ತಿದೆ. ದೇಶದಲ್ಲಿ 70ವರ್ಷ ಆಡಳಿತ ನಡೆಸಿದರೂ ಹೈವೆ, ರೈಲ್ವೆ ಲೈನ್ ಅಲ್ಲ ಶೌಚಾಲಯಗಳನ್ನೂ ನಿರ್ಮಾಣ ಮಾಡದ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್ ನೀಡಲು…

Read More

ಇ0ಡಿ: ನನ್ನ ಎರಡು ಅಧಿಕಾರದ ಅವಧಿಯಲ್ಲಿ ಇಂಡಿ ಕ್ಷೇತ್ರದಲ್ಲಿ ಅಗಾಧವಾದ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ ಜಿಲ್ಲಾ ಕೇಂದ್ರವನ್ನು ಮಾಡುವ ಉತ್ಸುಕತೆ ನನ್ನಲ್ಲಿದ ಇಂಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ-ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಇಂಡಿ ಕ್ಷೇತ್ರದ ಕಾಂಗೈ ಅಭ್ಯರ್ಥಿ ಯತಮತ್ರಾಯಗೌಡ ಪಾಟೀಲ ಅವರು ಭುಂಯ್ಯಾರ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದರು.ಭುಯ್ಯಾರ ಗ್ರಾಮದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಭುಂಯ್ಯಾರ, ನಾಗರಹಳ್ಳಿ, ರೋಡಗಿ, ಖೇಡಗಿ, ಹಿರೇಬೇವನೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಜನರ ಬೇಡಿಕೆಗೆ ತಕ್ಕಂತೆ ರಸ್ತೆ, ಕುಡಿಯುವ ನೀರು, ಸಹಕಾರ ತತ್ವದಡಿ ರೈತರಿಗೆ ಅನೂಕೂಲವಾಗುಮತ ನೆನೆಗುದಿಗೆ ಬಿದ್ದ ಮರಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದು, ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿ, ಸಾಕಷ್ಟು ಕ್ಷೇತ್ರಕ್ಕೆ ಅನುದಾನ ತಂದ ತೃಪ್ತಿ ನನಗಿದೆ ಎಂದರು.ಭುಯ್ಯಾರ ಗ್ರಾಮದಿಂದಲೂ ೨-೩ ಬಾರಿ ವಿಧಾನಸಭೆ ಪ್ರವೇಶ ಸಿಕ್ಕಿದ್ದು, ಅದು ಕಾಂಗ್ರೆಸ್‌ಕ್ಕೆ ಶಿಂಗಪ್ಪ ಗೋಳಸಾರ, ಬಿದಾಚಾರ್ಯ ಜಹಾಗೀರದಾರ, ಲಾಳಸಂಗಿ, ಹೊನವಾಡ ಅವರ ಆಡಳಿತ ವೈಖರಿ…

Read More

– ಗುರುರಾಜ ಕೆ.ಪಟ್ಟಣಶೆಟ್ಟಿಯಾದಗೀರ: ಮೊದಲೆಲ್ಲ ಜನರೇ ಚಿತ್ರ ಮಂದಿರ ಹುಡುಕಿಕೊಂಡು ಹೋಗುತಿದ್ದರು. ಈಗ ಬದಲಾದ ಕಾಲದಲ್ಲಿ ಮೊಬೈಲ ಇಂಟರನೆಟ್ ಸಹಾಯದಿಂದ ಕ್ಷಣಾರ್ಧದಲ್ಲಿ ಜಗತ್ತನ್ನೇ ನೋಡುವ ಕಾಲಘಟದಲ್ಲಿ ಜನ ಚಿತ್ರಮಂದಿರಕ್ಕೆ ಹೋಗುವುದೇ ಕಡಿಮೆಯಾಗಿದೆ. ಚಿತ್ರಮಂದಿರವೇ ಜನರ ಬಳಿಗೆ ತೆಗೆದುಕೊಂಡು ಬರುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ ಪ್ರಶಾಂತ ಶೆಟ್ಟಿಯವರು. ಸುಮಾರು ಹದಿನಾಲ್ಕುನೂರು ಚದುರಡಿ ಅಳತೆಯಲ್ಲಿ ಇನ್ನೂರು ಜನ ಆಸನವುಳ್ಳ ಕಬ್ಬಿಣ, ಪ್ಲೈವುಡ್ ಹಾಗೂ ಅಧುನಿಕ ತಂತ್ರಜ್ಞಾನ ಬಳಸಿ ನೊಡುಗರಿಗೆ ಬೆರಗಾಗುವ ಹಾಗೆ ಟೂರಿಂಗ ಟಾಕೀಜ್ ನಿರ್ಮಿಸಿದ್ದಾರೆ. ಇದಕ್ಕೆ ಸರಿ ಸುಮಾರು ಇಪ್ಪತ್ತೆರಡು ಲಕ್ಷ ರೂ ತಗುಲಿದ್ದು, ಇದು ನಾಲ್ಕು ಎ.ಸಿ ಹೊಂದಿದೆ. ವಿದ್ಯುತ್ ಕೈ ಕೊಟ್ಟಾಗ ಜನರೇಟರ್ ಸೌಲಭ್ಯ ಹಾಗೂ ಉತ್ತಮ ಗುಣಮಟ್ಟದ ಡಿ ಟಿ ಎಚ್ ಸೌಂಡ್ ಸಿಸ್ಟಂ ಹೊಂದಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಾಗಿಸುವಂತಿದ್ದು ಜೋಡಣೆಯೂ ಸುಲಭವಾಗಿದೆ. ಜೋಡಣೆಗೆ ಸರಿ ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಹಣ ಕೆಲಸಗಾರರಿಗೇ ಬೇಕಾಗುವುದಂತೆ.ಇಂತಹ ಸುಸಜ್ಜಿತವಾದ ಟೂರಿಂಗ್ ಟಾಕೀಜ ಭಾರತದ ಚಿತ್ರರಂಗದಲ್ಲೇ…

Read More

ವಿಜಯಪುರ: ಶ್ರೀ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಉತ್ನಾಳ, ಮಲ್ಲಸರ್ಜ ದೇಸಾಯಿ ಅಂತಾರಾಷ್ಟಿçÃಯ ಕ್ರೀಡಾ ತರಬೇತಿ ಕೇಂದ್ರ ಮತ್ತು ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್ತು ಅಖಿಲ ಭಾರತಿಯ ಪಂಚಮಸಾಲಿ ಪರಿಷತ ವತಿಯಿಂದ ಏ.೧೬ ಇಂದಿರಾ ಪ್ರಾಥಮಿಕ ಹಾಗೂ ವಿದ್ಯಾ ಗಣೇಶ ಪ್ರೌಢಶಾಲೆಯಲ್ಲಿ ಮಲ್ಲಸರ್ಜ ದೇಸಾಯಿ ಪ್ರಶಸ್ತಿ, ಪ್ರಧಾನ ಸಮಾರಂಭ ಕಾರ್ಯಕ್ರಮ ಜರುಗಿತು.ಅಧ್ಯಕ್ಷತೆಯನ್ನು ಪ್ರೇಮಾನಂದ ಬಿರಾದಾರ ಮಹಾನಗರ ಪಾಲಿಕೆ ಸದಸ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವಿಜಯಲಕ್ಷ್ಮಿ ಬಾಳಿ, ವಿದ್ಯಾ ಗಣೇಶ್ ಸಂಸ್ಥೆಯ ಅದ್ಯಕ್ಷರು ವಿಜಯಪುರ, ಬಸವರಾಜ ಬಾಗೇವಾಡಿ, ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರು ಉತ್ನಾಳ, ಡಿ. ಎಸ್. ಬಸನಗೌಡ್ರು ರಾಣಿ ಚನ್ನಮ್ಮ ದೂರ ಶಿಕ್ಷಣ ಕೇಂದ್ರದ ಅಧ್ಯಕ್ಷರು ರಾಮದುರ್ಗ ಮತ್ತು ಧಾರವಾಡ. ಶ್ರೀಮತಿ ಸುರೇಖಾ. ಬ. ಬಾಗಲಕೋಟ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉತ್ನಾಳ ವಹಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಂತೇಶ್.ಮ.ರಾಜಗೋಳಿ (ಮಾಧ್ಯಮ ಕ್ಷೇತ್ರ), ವೀಭಾ.ವಿ.ಕುಂಬಾರ (ಕ್ರೀಡಾ ಕ್ಷೇತ್ರ), ಗುರವ್ವಾ.ಸುರೇಶ.ಉಕ್ಕಲಿ (ಪೌರಕಾರ್ಮಿಕ), ಕುಸಪ್ಪ.ರಾಮಣ್ಣ.ಹಂಚಿನಾಳ(ಘನ ತ್ಯಾಜ್ಯ ವಿಲೇವಾರಿ),…

Read More

ವಿಜಯಪುರ: ಅತೀ ಹೆಚ್ಚು ಮತದಾರರನ್ನು ಹೊಂದಿರುವ ಜಿಲ್ಲೆಯ ನಾಗಠಾಣ ಮೀಸಲು (ಎಸ್.ಸಿ) ಮತಕ್ಷೇತ್ರವು ಮಾತ್ರ ಅಭಿವೃದ್ದಿಯಿಂದ ವಂಚಿತಗೊAಡಿದ್ದು, ಇಲ್ಲಿಯವರೆಗೆ ಈ ಕ್ಷೇತ್ರಕ್ಕೆ ಆರಿಸಿ ಬಂದಿರುವ ಯಾವೊಬ್ಬ ಶಾಸಕರು ಅಭಿವೃದ್ದಿ ಕೆಲಸವನ್ನು ಮಾಡಿಲ್ಲ. ಈ ಬಾರಿಯಾದರೂ ಸಹ ನಾಗಠಾಣ ಮತಕ್ಷೇತ್ರಕ್ಕೆ ಒಬ್ಬ ಪ್ರಜ್ಞಾವಂತ ಜನಪ್ರತಿನಿಧಿಯನ್ನು ಆರಿಸುವ ಜವಾಬ್ದಾರಿ ಎಲ್ಲ ನಾಗಠಾಣ ಮತಕ್ಷೇತ್ರದ ಮತದಾರರ ಮೇಲೆ ಇದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಕೃಷಿಗೆ ಒತ್ತು ನೀಡಬೇಕು. ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡಬೇಕು. ಇಲ್ಲಿ ವಿದ್ಯಾವಂತ ನಿರುದ್ಯೋಗ ಯುವಕರು ಬಹಳಷ್ಟಿದ್ದು, ಅವರಿಗೆ ಉದ್ಯೋಗ ಒದಗಿಸುವಂತಾಗಬೇಕು. ಇಲ್ಲಿಯವರೆಗೆ ಈ ಮತಕ್ಷೇತ್ರಕ್ಕೆ ಸ್ಪರ್ಧೆ ಬಯಸಿದ ಜನಪ್ರತಿನಿಧಿಗಳು ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆಯೇ ಹೊರತು ಮತಕ್ಷೇತ್ರದ ಜನರ ಅಭಿವೃದ್ದಿ ಕಡೆಗೆ ಕಿಂಚಿತ್ತು ಜವಾಬ್ದಾರಿಯುತ ಕೆಲಸವನ್ನು ಮಾಡಿರುವದಿಲ್ಲ.ಆದ್ದರಿAದ ಈ ಬಾರಿಯ ಚುನಾವಣೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಯುವಕರ ಪರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಮತದಾರರು ಆರಿಸಿ ಕ್ಷೇತ್ರವು ಅಭಿವೃದ್ದಿಗೊಳ್ಳುವಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ಹಾಗೂ ಮತದಾನದ…

Read More

ಸಿಂದಗಿ: ಮತಕ್ಷೇತ್ರದ ಎಎಪಿ ಪಕ್ಷದ ಅಧಿಕೃತ ಅಭ್ಯರ್ಥಿ ಮುರಿಗೆಪ್ಪಗೌಡ ಸಿದ್ದನಗೌಡ ರದ್ದೇವಾಡಗಿ ಅವರು ಬುಧವಾರ ಚುನಾವಣಾ ಅಧಿಕಾರಿ ಸಿದ್ರಾಮ ಮಾರಿಹಾಳರವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಅಕ್ಬರ ಖಾಜಾಸಾಬ ಮುಲ್ಲಾ ಅವರೂ ಸಹ ಬುಧವಾರ ಚುನಾವಣಾ ಅಧಿಕಾರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

Read More