Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಬಿ. ಎಲ್. ಡಿ. ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 18 ರಿಂದ 31ರ ವರೆಗೆ ಮುಟ್ಟು ನಿಂತ ಮೇಲಿನ ಸಮಸ್ಯೆ, ಆ ವಯೋಮಾನದಲ್ಲಿ ಉಂಟಾಗುವ ಹಾರ್ಮೋನ್ ವತ್ಯಾಸದ ತಪಾಸಣೆ ಹಾಗೂ ಮೂಳೆ ಸವೆತದ ಪರೀಕ್ಷೆ ಉಚಿತ ಶಿಬಿರ ನಡೆಯಲಿದೆ.ಮಹಾವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ವತಿಯಿಂದ ಆಯೋಜಿಸಲಾಗಿರುವ ಈ ಶಿಬಿರದಲ್ಲಿ ಈ ವ್ಯಾದಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವದು. ಸಾರ್ವಜನಿಕರು ಈ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಆಸಕ್ತರು ಮೋಬೈಲ್ ಸಂಖ್ಯೆ: 9481603060 ಮತ್ತು 9513397413 ಸಂಪರ್ಕಿಸಬಹುದಾಗಿದೆ.
ದೇವರಹಿಪ್ಪರಗಿ: ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ಅಶ್ವಿನಿ ಶಂಕ್ರೆಪ್ಪ ಚಿತ್ತಾಪೂರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸರಪಳಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಎಂ.ಕೆ.ಕುಡಚಿ, ದೈಹಿಕ ಶಿಕ್ಷಕ ಗುರುರಾಜ್ ಕುಳೇಕುಮಟಗಿ, ಅಶೋಕ ಪತ್ತಾರ ಶುಭ ಕೋರಿದ್ದಾರೆ.
ದೇವರ ಹಿಪ್ಪರಗಿ: ಪಡಗಾನೂರ ಗ್ರಾಮದ ಜಿ.ಎಮ್.ಪಿ.ಎಸ್ ಶಾಲೆಯ ವಿದ್ಯಾರ್ಥಿನಿ ಅಮೃತಾ ಹಣಮಂತ ಮುರಾಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿದ್ಯಾರ್ಥಿನೀಯ ಸಾಧನೆಗೆ ಮಲ್ಲಿಕಾರ್ಜುನ ತಳಕೇರಿ, ಎನ್.ಎಸ್.ಹಿರೇಮಠ, ಡಿ.ಎಚ್.ರಾಠೋಡ ಶುಭ ಕೋರಿದ್ದಾರೆ.
ದೇವರ ಹಿಪ್ಪರಗಿ: ಪಡಗಾನೂರ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಅವಿನಾಶ ಮಲ್ಲಿಕಾರ್ಜುನ ತಳಕೇರಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಮುಖ್ಯಗುರು ಎಮ್.ಎಸ್.ದಿನ್ನಿ, ದೈಹಿಕ ಶಿಕ್ಷಕ ಎಸ್.ಐ.ಹಿರೇಮಠ, ಎ.ಎಸ್.ಪತ್ತಾರ, ಎಸ್.ಎನ್.ಪೂಜಾರಿ, ಹಾಜೀಲಾಲ್, ಶಂಕರ ಕೆಂಭೋಗಿ ಶುಭ ಹಾರೈಸಿದ್ದಾರೆ.
ಯಡ್ರಾಮಿ: ಪಟ್ಟಣದ ಗ್ರಾಮದೇವತೆ ಮಹಿಳಾ ಮಂಡಳಿಯ ಸದಸ್ಯರು ನವರಾತ್ರೋತ್ಸವದ ಎರಡನೆಯ ದಿನವಾದ ಸೋಮವಾರ ಶ್ವೇತವರ್ಣದ ಸೀರೆಯನ್ನುಟ್ಟು ಸಂಭ್ರಮಿಸಿದರು.ಮಂಡಳಿಯ ಪ್ರಮುಖರಾದ ಜಯಶ್ರಿ ಬೆಲ್ಲದ, ಗಿರಿಜಾ ಪುರಾಣಿಕ, ಹರಿನಿತಾ ಡಂಬಳ, ಪವಿತ್ರಾ ಡಂಬಳ, ಮಂಗಳಾ ಭಾವಿಕಟ್ಟಿ, ಕವಿತಾ ದೇಸಾಯಿ ಸೇರಿದಂತೆ ಹಲವರಿದ್ದರು.
ಕಲಕೇರಿ: ಸಮೀಪದ ಬೆಕಿನಾಳ ಗ್ರಾಮದಲ್ಲಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಲಾಯಿತು.ಈ ವೇಳೆ ಊರಿನ ಹಿರಿಯರಾದ ಶರಣಪ್ಪ ಛಲವಾದಿ, ಬಸಪ್ಪ ಕಟ್ಟಿಮನಿ, ಚನ್ನಪ್ಪ ಕಟ್ಟಿಮನಿ, ಬಸಪ್ಪ ಲಿಂಗದಳ್ಳಿ, ಯಮನಪ್ಪ ನಾಟಿಕಾರ, ಮುಖಂಡರಾದ ಶ್ರೀಶೈಲ್ ವಾಲಿಕಾರ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕಪ್ಪ ಬಡಿಗೇರ, ರಾಜಶೇಖರ ಹೊಸಮನಿ, ಚಂದ್ರಕಾಂತ್ ಬಡಿಗೇರ, ಮಲ್ಲು ನಾವಿ ಪರಶುರಾಮ್ ಬಡಿಗೇರ ಹಾಗೂ ಊರಿನ ಯುವ ಮುಖಂಡರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ಜಲಾಶಯದಲ್ಲಿ ಒಳಹರಿವು ಸ್ಥಗಿತಗೊಂಡ ನಂತರ ೧೪ ಚಾಲೂ ಮತ್ತು ೧೦ ದಿನ ಬಂದ್ ಪದ್ಧತಿ ಮೂಲಕ ನೀರು ಹರಿಸಲು ಮುಂಗಾರು ಹಂಗಾಮಿನ ನಿರಾವರಿ ಸಲಹಾ ಸಮಿತಿ ಸಭೆಯ ನಿರ್ಣಯವನ್ನು ಪರಿಷ್ಕರಿಸಿ ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಚಾಲೂ-ಬಂದ್ ಪದ್ಧತಿಯನ್ನು ಪರಿಷ್ಕರಿಸಿ ೧೪ ದಿನ ಚಾಲೂ ಮತ್ತು ೮ ದಿನ ಬಂದ್ ಪದ್ಧತಿ ಅನುಸರಿಸಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗದಮ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.ದಿನಾಂಕ : ೧೭-೧೦-೨೦೨೩ರಿಂದ ಚಾಲೂ ಮಾಡುವ ಬದಲು ದಿನಾಂಕ : ೧೪-೧೦-೨೦೨೩ರಿಂದ ಚಾಲೂ ಮಾಡಿ ಹಾಗೂ ಮುಂಗಾರು ಹಂಗಾಮಿಗೆ ದಿನಾಂಕ : ೨೩-೧೧-೨೦೨೩ರವರೆಗೆ ನೀರಾವರಿಗೆ ನೀರು ಹರಿಸಲು ತೆಗೆದುಕೊಂಡ ನಿರ್ಣಯವನ್ನು ಸಹ ದಿನಾಂಕ : ೧೦-೧೨-೨೦೨೩ರವರೆಗೆ ವಿಸ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿಗಾಗಿ ನೀರು ಹರಿಸುವುದನ್ನು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶದ ರೈತರ ಹಿತಕಾಪಾಡಲು ಕ್ರಮ ಕೈಗೊಳ್ಳಲಾಗಿರುವುದಾಗಿ ನೀರಾವರಿ ಸಲಹಾ…
ಮುದ್ದೇಬಿಹಾಳ: ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ತೀವ್ರ ಬರಗಾಲದಿಂದ ರೈತರು ತೊಂದರೆ ಅನಿಭವಿಸುವಂತಾಗಿದ್ದು, ಸೂಕ್ತವಾದ ಬರ ಪರಿಹಾರ ನೀಡಬೇಕು, ರೈತರ ಖುಷ್ಕಿ ಬೆಳೆಗೆ ಎಕರೆಗೆ ಕನಿಷ್ಠ ೧೦ಸಾವಿರ ಹಾಗೂ ನೀರಾವರಿ ಬೆಳೆಗೆ ಎಕರೆಗೆ ಕನಿಷ್ಟ ೨೫ಸಾವಿರ ರೂ ಪರಿಹಾರ ಘೋಷಿಸಿ ತುರ್ತು ಬಿಡುಗಡೆಗೆ ಕ್ರಮ ವಹಿಸಬೇಕು ಹಾಗೂ ದನಕರುಗಳಿಗೆ ಮೇವಿನ ಅಭಾವ ಇರುವದರಿಂದ ಮೇವು ಬ್ಯಾಂಕ್ ಆರಂಭಿಸಬೇಕು ಮತ್ತು ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಕೃಷಿ ಕಾರ್ಮಿಕರನ್ನು ಒದಗಿಸಬೇಕು, ಹಗಲಿನಲ್ಲಿ ನಿರಂತರವಾಗಿ ೭ತಾಸು ೩ಫೇಸ್ ವಿದ್ಯತ್ ನ್ನು ನೀರಾವರಿಗೆ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ, ತಹಶೀಲ್ದಾರ ಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಲ್ಲ ರೈತಸಂಘಟನೆಗಳು ಸೇರಿ ಅಲ್ಲಿಂದ ಬಸವೇಶ್ವರ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೂ ಸಾಗಿದರು. ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ವಿಜಯಪುರ ರಸ್ತೆಯನ್ನು ಬಂದ್ ಮಾಡಿ ಕೆಲ ಕಾಲ ಪ್ರತಿಭಟಿಸಿದರು.ತಹಶೀಲ್ದಾರ…
ವಿಜಯಪುರ: ಲಚ್ಯಾಣ – ತಡವಾಳ ರೈಲು ನಿಲ್ದಾಣಗಳ ಮದ್ಯ ಕಿ ಮೀ ನಂ ೨೫೭/೭೦೦-೮೦೦ ರಲ್ಲಿ ಭೀಮಾ ನದಿ ರೈಲ್ವೆ ಬ್ರಿಡ್ಜ್ ಅಪ್ ಲೈನ್ ರೈಲು ಹಳೆಯ ಕೆಳಗೆ ಅನಾಮದೇವ್ ಶವ ಪತ್ತೆಯಾಗಿರುವ ಕುರಿತು ವಿಜಯಪುರ ರೇಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ ಮಾಡಿಕೊಳ್ಳಲಾಗಿದೆ.ಮೃತನು ವ್ಯಕ್ತಿ ಅಂದಾಜು ೪೦ ರಿಂದ ೪೫ ವರ್ಷದವನಾಗಿದ್ದು, ಸಾಧಾರಣ ಮೈಕಟ್ಟಿನವನಾಗಿದ್ದು ೫.೬” ಅಡಿ ಎತ್ತರ. ಕೋಲು ಮುಖ ಸಾದಗಪ್ಪ ಮೈಬಣ್ಣ. ನೆಟ್ಟನೆಯ ಮೂಗು. ತಲೆಯಲ್ಲಿ ಕಪ್ಪು. ಬಿಳಿ ಕೂದಲು ಇದ್ದು. ಒಂದು ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಅಂಗಿ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಅಥವಾ ವಾರಸುದಾರರು ಪತ್ತೆಯಾದಲ್ಲಿ ಆರಕ್ಷಕ ಉಪನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ೦೮೩೫೨-೨೫೦೮೮೩ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ವಿಜಯಪುರ ೦೮೦-೨೨೮೭೧೨೯೧ ಗೆ ಸಂಪರ್ಕಿಸುವಂತೆ ರೇಲ್ವೆ ಪೋಲಿಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಜಯಪುರ: ಪದವಿ ಮಹಾವಿದ್ಯಾಲಯಗಳಿಗೆ ಮಾತ್ರ ಸೀಮಿತವಾದ ಘಟಿಕೋತ್ಸಗಳು ಐಟಿಐದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಐಟಿಐ ಪದವಿಧರರೆಂದು ಪರಿಗಣಿಸಿ ಘಟಿಕೋತ್ಸವ ಮೂಲಕ ಪ್ರಮಾಣ ಪತ್ರ ವಿತರಿಸಲು ಭಾರತ ಸರ್ಕಾರ ನಿರ್ದೇಶಿಸಿದ್ದು, ಐಟಿಐ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೀಳರಿಮೆಯನ್ನು ಬಿಟ್ಟು ತಾವೂ ಕೂಡ ಪದವೀಧರರೆಂಬ ಮನೋಭಾವನೆ ಬೆಳಿಸಿಕೊಂಡು, ಪಡೆದಿರುವ ಕೌಶಲ್ಯದ ಸದ್ಭಳಕೆ ಮಾಡಿಕೊಂಡು ಉದ್ಯೋಗಿಗಳಾಗುವಂತೆ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆ ಪ್ರಾಚಾರ್ಯ ರಮೇಶ ದೇಸಾಯಿ ಕರೆ ನೀಡಿದರು.ಇತ್ತೀಚೆಗೆ ವಿಜಯಪುರ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ನಡೆದ ಐಟಿಐ ಪದವಿದರರ ಘಟಿಕೋತ್ಸವ ಕಾರ್ಯಕ್ರಮದಲ್ಲಿ ೨೦೨೩ನೇ ಶೈಕ್ಷಣಿಕ ಸಾಲಿನಲ್ಲಿ ಐಟಿಐ ತರಬೇತಿ ಪಡೆದು ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರುಡಸೆಟ್ ಸಂಸ್ಥೆ ನಿರ್ದೇಶಕ ಮುತ್ತಣ್ಣ ಧನಗರ ಅವರು ಭಾಗವಹಿಸಿ ಮಾತನಾಡಿದರು. ಉಪ ಪ್ರಾಚಾರ್ಯ ಪಿ.ಎಚ್.ಮಸೂತಿ, ಕಚೇರಿ ಅಧೀಕ್ಷಕರಾದ ಶ್ರೀಮತಿ ಶಶಿಕಲಾ ನಾಯ್ಕೋಡಿ, ಸಂಪನ್ಮೂಲ ವ್ಯಕ್ತಿಗಳು, ಐಟಿಐ ಪದವೀಧರರು ಮತ್ತು ಪಾಲಕರು…
