ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಯಾವದೇ ಒಂದು ಸಹಕಾರಿ ಬ್ಯಾಂಕ್ ಬೆಳವಣಿಗೆಯತ್ತ ಸಾಗಬೇಕಾದರೆ ಅದು ಸಹಕಾರ ತತ್ವವನ್ನು ಅನುಸರಿಸುತ್ತಾ ಸಾಗಿದರೆ ಮಾತ್ರ ಬೆಳವಣಿಗೆ ಹೊಂದಲಿದೆ ಅದರೊಂದಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅವರ ಸೇವೆಯೂ ಪ್ರಾಮಾಣಿಕವಾಗಿರುವದು ಮುಖ್ಯ ಕಾರಣವಾಗಿರುತ್ತೆಂದು ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಸೋಮವಾರ ಸ್ಥಳೀಯ ಶ್ರೀ ತಾಳಿಕೋಟೆ ಸಹಕಾರಿ ಬ್ಯಾಂಕ್ ನಿ.ದ ೨೦೨೫/೨೬ ನೇ ಸಾಲಿನ ೬೭ ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಳಿಕೋಟೆಯ ಈ ಬ್ಯಾಂಕು ಕೋಟಿ ಲಾಭ ಗಳಿಸಿರುವದನ್ನು ನೋಡಿದರೆ ಲಾಭದಾಯಕ ಬ್ಯಾಂಕ್ ಎಂಬುದನ್ನು ಎತ್ತಿ ತೋರಿಸುತ್ತದೆ. ಸುಮಾರು ೩ ಶಾಖೆಗಳನ್ನು ಪ್ರಾರಂಭಿಸಿದ ಈ ಬ್ಯಾಂಕು ಗ್ರಾಹಕರಿಗೆ ಹಾಗೂ ಶೇರುದಾರರಿಗೆ ಅನುಕೂಲ ಕಲ್ಪಿಸಿರುವದು ಶ್ಲಾಘನೀಯ ಎಂದು ಶ್ರೀಗಳು ನುಡಿದರು.
ಇನ್ನೋರ್ವ ಬಿಡಿಸಿಸಿ ಬ್ಯಾಂಕ್ನ ನಿರ್ಧೇಶಕ ಬಿ.ಎಸ್. ಪಾಟೀಲ(ಯಾಳಗಿ) ಅವರು ಸಹಕಾರಿ ತತ್ವದ ಕೆಲವು ನಿಯಮಗಳನ್ನು ತಿಳಿಹೇಳಿದರಲ್ಲದೇ ಈಗಾಗಲೇ ತಾಳಿಕೋಟೆಯ ಸಹಕಾರಿ ಬ್ಯಾಂಕ್ ವತಿಯಿಂದ ತೀರಿ ಹೋದಂತಹ ಶೇರುದಾರರಿಗೆ ಸದಸ್ಯರ ಕುಟುಂಬಕ್ಕೆ ೨೦೦೦ ರೂ. ಯನ್ನು ಕೊಡುತ್ತಾ ಸಾಗಿಬಂದಿರುವದನ್ನು ಹೆಚ್ಚಿಸಿ ೫೦೦೦ ವರೆಗೆ ಮಾಡಿದರೆ ಒಳಿತಾಗುತ್ತದೆ ಇದು ಅಲ್ಲದೇ ಪ್ರತೀ ವರ್ಷ ಎಸ್ಎಸ್ಎಲ್ಸಿ/ ಪಿಯುಸಿ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ನೀಡುವಂತಹ ಗೌರವಧನದಂತೆ ಒಳ್ಳೆಯ ಕ್ರೀಡಾಪಟುಗಳಿಗೂ ಮುಂಬರುವ ದಿನಮಾನಗಳಲ್ಲಿ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡುವ ಕಾರ್ಯ ಮಾಡಿದರೆ ಒಳಿತಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಕಾಶೀನಾಥ ಸಜ್ಜನ ಮಾತನಾಡಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಶ್ರೀಮತಿ ಬಿ.ಕೆ. ಮಣೂರ ವಾರ್ಷಿಕ ವರದಿ ವಾಚಿಸಿದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವರಿ ಮುರುಘೇಶ ವಿರಕ್ತಮಠ ಸಾನಿಧ್ಯ ವಹಿಸಿದ್ದರು.
ಇದೇ ಸಮಯದಲ್ಲಿ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗಣ್ಯರಾದ ಅಶೋಕ ಶೆಟ್ಟಿ, ದಶರಥಸಿಂಗ್ ಮನಗೂಳಿ, ಬ್ಯಾಂಕ್ ಉಪಾಧ್ಯಕ್ಷರಾದ ಸಿ.ಎಸ್. ಯಾಳಗಿ, ನಿರ್ದೇಶಕರಾದ ಆಯ್.ಬಿ. ಬಿಳೇಬಾವಿ, ಎಂ.ಎಸ್. ಸರಶೆಟ್ಟಿ, ಬಿ.ಎಸ್. ಹೆಬಸೂರ, ಎ.ವ್ಹಿ. ಹಜೇರಿ, ಡಿ.ಕೆ. ಪಾಟೀಲ, ಪಿ.ವ್ಹಿ. ಹಜೇರಿ, ಶ್ರೀಮತಿ ಜಿ.ಬಿ. ಕೊಡಗಾನೂರ, ಎಸ್.ವ್ಹಿ. ಬಡದಾಳಿ, ಆರ್.ಬಿ. ಕಟ್ಟಿಮನಿ, ಎಸ್.ವಾಯ್. ಬರದೇನಾಳ, ವೃತ್ತಿಪರ ನಿರ್ಧೇಶಕರಾದ ಎಂ.ಬಿ. ಕೊಣ್ಣುರ, ಹಾಗೂ ಬ್ಯಾಂಕಿನ ತಾಳಿಕೋಟೆ, ಮಿಣಜಗಿ, ಬಶೆಟ್ಟಿಹಾಳ, ಶಾಖೆಗಳ ವ್ಯವಸ್ಥಾಪಕ ಸಮೀತಿಯವರು ಉಪಸ್ಥಿತರಿದ್ದರು.
ಶಿಕ್ಷಕಿ ವಿಶಾಲಾಕ್ಷಿ ಬಡಿಗೇರ ಸಂಗೀತಸೇವೆ ಸಲ್ಲಿಸಿದರು. ಸಹಾಯಕ ವ್ಯವಸ್ಥಾಪಕಿ ಶ್ರೀಮತಿ ಎಸ್.ಬಿ.ದೇಸಾಯಿ ಸ್ವಾಗತಿಸಿದರು. ಆರ್.ಎಸ್. ಬಿರಾದಾರ ನಿರೂಪಿಸಿದರು. ಬಿ.ಎಸ್.ಕನಕಗಿರಿ ವಂದಿಸಿದರು.

