Author: editor.udayarashmi@gmail.com

ಸಿಂದಗಿ: ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ, ಇದು ವಿಶ್ವದಾದ್ಯಂತ ವರ್ಷಕ್ಕೆ ೮ ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಸಿಂದಗಿ ತಾಲೂಕು ಆರೋಗ್ಯ ಇಲಾಖೆ, ಸಿ.ಎಂ.ಮನಗೂಳಿ ಪದವಿ ಕಾಲೇಜು ಮತ್ತು ಜಿ.ಪಿ.ಪೋರವಾಲ್ ಕಾಲೇಜು ಎನ್.ಸಿ.ಸಿ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಗುಲಾಬಿ ಆಂದೋಲನ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಂಬಾಕು ಸಾಂಕ್ರಾಮಿಕವು ಭಾರತದಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಮತ್ತು ಕ್ಯಾನ್ಸರ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಸಾಮಾನ್ಯ ಅಪಾಯಕಾರಿ ಅಂಶಗಳಾಗಿವೆ. ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನು ಮಾಡುವ ಬದಲಾಗಿ ತಂಬಾಕಿಗೆ ಖರ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ.ಈ ವೇಳೆ ತಾಲೂಕಾ ಆರೋಗ್ಯಾಧಿಕಾರಿ…

Read More

ಸಿಂದಗಿ: ಶಹಾಪುರದ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನದಿಂದ ಪ್ರತಿ ವರ್ಷದಂತೆ ಕೊಡಮಾಡುವ ಕರದಳ್ಳಿ ಸದ್ಭಾವನಾ ಪುರಸ್ಕಾರಕ್ಕೆ ೨೦೨೩ನೇ ಸಾಲಿಗೆ ಸಿಂದಗಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಕರದಳ್ಳಿ ತಿಳಿಸಿದ್ದಾರೆ.ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಸಿ.ಎಸ್. ಭೀಮರಾಯ, ಸಾಹಿತಿ ದೊಡ್ಡಬಸಪ್ಪ ಬಳೂರಗಿ ಹಾಗೂ ಪತ್ರಕರ್ತ ರವಿ ಹಿರೇಮಠ ಇದ್ದರು. ಜ.೧೯ ರಂದು ಶಹಾಪುರ ಪಟ್ಟಣದಲ್ಲಿ ಜರಗುವ ಲಿಂ.ಚಂದ್ರಕಾಂತ ಕರದಳ್ಳಿ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುವುದು. ಪ್ರಶಸ್ತಿ ಪತ್ರ, ಸ್ಮರಣಿಕೆ ಜತೆ ನಗದು ೫೦೦೦ ರೂ. ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಧರ್ಮದ ರಕ್ಷಣೆ ಒಬ್ಬರಿಗೆ ಸೀಮಿತವಾಗಿಲ್ಲ. ಸನಾತನ ಸಂಸ್ಕೃತಿ ಬೆಳೆಸಿ, ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬನ ಜವಾಬ್ದಾರಿ ಅಡಕವಾಗಿದೆಯೆಂದು ಬಸವೇಶ್ವರ ಪತ್ತಿನ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಎಸ್. ಪಟ್ಟಣದ ಹೇಳಿದರು.ಪಟ್ಟಣದ ಸಂಗಮೇಶ್ವರ ನಗರದಲ್ಲಿರುವ ಸಂತ ಕನಕದಾಸ ಪ್ರಾಥಮಿಕ ಶಾಲೆಯಲ್ಲಿ ನಡೆದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯತಿವರೇಣ್ಯರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೩ರ ತಾಲೂಕು ಮಟ್ಟದ ಸಪ್ತಾಹದ ೪ನೇ ದಿನದ ಉಪನ್ಯಾಸಮಾಲಿಕೆ ಕಾರ್ಯಕ್ರಮದಲ್ಲಿ ಸುಂದರ ಬದುಕಿಗೆ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಅವರು ಉಪನ್ಯಾಸ ನೀಡಿದರು.ಹಿಂದಿನ ಕಾಲ ಘಟ್ಟದಲ್ಲಿ ಭಾರತೀಯ ಋಷಿಮುನಿಗಳು ತಾವು ತಪಸ್ಸು ಮಾಡಿ ಅದರ ಫಲವನ್ನು ಜಗತ್ತಿಗೆ ನೀಡುತ್ತಾ ಬಂದ ನಿದರ್ಶನಗಳಿವೆ. ಮಹಾಭಾರತ ಕಥೆಗೆ ವೇದ ವ್ಯಾಸರ ಕೊಡುಗೆ ಅಪಾರ. ಆದುದರಿಂದಲೇ ಜಗತ್ತಿಗೆ ೫ನೇ ವೇದವಾಗಿ ಹೊರಹೊಮ್ಮಿದೆ. ಭಾರತ ನೆಲದಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು. ಅಂತಹ ಭಾಗ್ಯಶಾಲಿಗಳಾದ ನಾವು ಯಾವತ್ತೂ ನಮ್ಮ ನೆಲ ಮತ್ತು ದೇಶಕ್ಕೆ ಧಕ್ಕೆಬಾರದಂತೆ…

Read More

ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೧೮೨ ಬಾಕಿ ಇರುವ ಪ್ರಕರಣಗಳಲ್ಲಿ ೧೯೦೫ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದರಿ ಪ್ರಕರಣಗಳಲ್ಲಿ ಒಟ್ಟು ೬೯೩ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ ಇಪಿ ಪ್ರಕರಣಗಳು, ಎಮ್‌ವಿಸಿ ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು, ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬ್ಯಾಂಕಿನ ಪ್ರಕರಣಗಳು, ಬಿ ಎಸ್‌ಏನ್‌ಎಲ್ ಪ್ರಕರಣಗಳು, ಅರಣ್ಯ ಇಲಾಖೆಯ ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳು ಸೇರಿ ಒಟ್ಟು ೩೨೬೧ ಪ್ರಕರಣಗಳಲ್ಲಿ ೫೫೯ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಸದರಿ ಮೇಲ್ಕಾಣಿಸಿದ ಪ್ರಕರಣಗಳನ್ನು ತಾಲೂಕು ಕಾನೂನು…

Read More

ಮುದ್ದೇಬಿಹಾಳ: ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಬೇಕಾಗುವ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ಉನ್ನತ ದರ್ಜೆಯ ತರಬೇತಿ ಕಲ್ಪಿಸಲು ಜಂಟಿಯಾಗಿ ಶ್ರಮಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಎಸ್.ಡಿ.ಎಂ.ಸಿಯವರ ಕಾರ್ಯ ನಾಡಿಗೆ ಮಾದರಿಯಾಗಿದೆ ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಪ್ಲೇ ಸ್ಕೂಲ್ ಮಾದರಿಯ ನಲಿಕಲಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರುಕಾರ್ಪೋರೇಟ್ ಮಾದರಿಯಲ್ಲಿ ಸರಕಾರಿ ಶಾಲೆಯನ್ನು ಕಟ್ಟಿ ಬೆಳೆಸಲು ಬಸರಕೋಡದಲ್ಲಿ ನಡೆದ ಆಂದೋಲನ ರಾಜ್ಯಕ್ಕೆ ಮಾದರಿಯಾಗಿದ್ದು ಹಳೆಯ ವಿದ್ಯಾರ್ಥಿಗಳ ಪಾಲುದಾರಿಕೆಯಿಂದ ಉತ್ಕೃಷ್ಠ ಮಾನವ ಸಂಪನ್ಮೂಲ ನಿರ್ಮಿಸಲು ಸಾಧ್ಯ ಎಂದರು.ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಸಮಾಜ ಕಲ್ಯಾಣಾಧಿಕಾರಿ ಆರ್.ಬಿ.ಪಂಪಾಗೋಳ ಮಾತನಾಡಿ, ಆಧುನಿಕತೆಯ ಪ್ರಭಾವ ಮತ್ತು ಆಂಗ್ಲ ವ್ಯಾಮೋಹದ ಹೊಡೆತಕ್ಕೆ ಸಿಲುಕಿ ತನ್ನ ಗತವೈಭವ ಕಳೆದುಕೊಂಡ ಸರ್ಕಾರಿ ಶಾಲೆಗಳಿಗೆ ಮರುಜೀವ ಕೊಡಲು ಹಳೆ ವಿದ್ಯಾರ್ಥಿಗಳು ಮನಪೂರ್ವಕ ಕೈಜೋಡಿಸುವುದು ಸಧ್ಯ ಅಗತ್ಯ ಎಂದರು.ನಿವೃತ್ತ ಉಪ ತಹಶಿಲ್ದಾರ ಡಿ.ಬಿ.ಬೇಲಾಳ,ಚಿಂತಕ ಅರವಿಂದ ಕೊಪ್ಪ ಮಾತನಾಡಿದರು.ವಿಶ್ರಾಂತ ವೈಧ್ಯಾಧಿಕಾರಿ ಡಾ. ಎಸ್.ವ್ಹಿ…

Read More

ದೇವರಹಿಪ್ಪರಗಿ: ಸಾಂಪ್ರದಾಯಿಕ ಛಟ್ಟಿ ಜಾತ್ರೆಯ ಅಂಗವಾಗಿ ರಾವುರಾಯನು ಪಲ್ಲಕ್ಕಿ ಉತ್ಸವದ ಮೂಲಕ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಿದನು.ಪಟ್ಟಣದಲ್ಲಿ ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ನಂತರ ಜರುಗುವ ರಾವುತರಾಯನ ಪಲ್ಲಕ್ಕಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಬೇಗನೆ ಆರಂಭಗೊಳ್ಳಬೇಕಾಗಿದ್ದ ಉತ್ಸವ ಕೆಲವು ಕಾರಣಗಳಿಂದ ವಿಳಂಬವಾಗಿ ಆರಂಭಗೊAಡಿತು. ಮಧ್ಯಾನ್ಹ ತಡವಾಗಿ ಮಲ್ಲಯ್ಯನ ದೇವಸ್ಥಾನ ತಲುಪಿದ ರಾವುತರಾಯನು ಪಲ್ಲಕ್ಕಿ ಉತ್ಸವ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳ ನಂತರ ದೇವಸ್ಥಾನದಲ್ಲಿ ಆಸೀನನಾದನು.ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಷಷ್ಠಿಯವರೆಗೆ ಅಂದರೆ ಆರು ದಿನಗಳವರೆಗೆ ಇದ್ದು ನಂತರ ಮಂಗಳವಾರ ಮರಳಿ ತನ್ನ ಮೂಲದೇವಸ್ಥಾನಕ್ಕೆ ಮರಳುವನು. ಈ ಛಟ್ಟಿ ಜಾತ್ರೆಯ ಅಂಗವಾಗಿ ದಿ:೨೦ ಬುಧವಾರದವರೆಗೆ ಜಾನುವಾರಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರತಿವರ್ಷದಂತೆ ನಡೆಯಲಿದ್ದು, ಈ ಬಾರಿ ವಿಜಯಪುರ ರಸ್ತೆಯಲಿರುವ ಗುರುಬಾಳಪ್ಪ ಯರಗಲ್ ಇವರ ಜಮೀನಿನಲ್ಲಿ ಜರುಗಲಿದೆ.*ಕಾರಣಿಕರ ಹೇಳಿಕೆಗಳು:*ಪ್ರತಿವರ್ಷವು ಛಟ್ಟಿ ಜಾತ್ರೆಯ ಸಂದರ್ಭದಲ್ಲಿ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಹೇಳಿಕೆಗಳನ್ನು ಹೇಳುವ ಪದ್ಧತಿಯಿದ್ದು, ಈ ವರ್ಷ ಅವರು ಹೇಳಿದಂತೆ, “ಬಿಳಿ ಕಾಳು ಮೇಲಾಯಿತು, ನಂತರ…

Read More

ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ತರಗತಿಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಬೃಹತ್ ಪ್ರತಿಭಟನೆ ಇಂಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಂಘಟನೆಯ ಪದಾಧಿಕಾರಿಗಳೊಂದಿಗೆ ಕಳೆದ ೨೨ ದಿನಗಳಿಂದ ಅತಿಥಿ ಉಪನ್ಯಾಸಕರ ಮುಷ್ಕರದಿಂದಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲವೆಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದ ವರೆಗೆ ಪಾದಯಾತ್ರ ಮೂಲಕ ತೆರಳಿ ಇಂಡಿ ಉಪವಿಭಾಗಾಧಿಕಾರಿ ಅಭಿದ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.ನಂತರ ಎಬಿವಿಪಿ ನಗರ ಉಪಾಧ್ಯಕ್ಷ ಬಿ.ಎಚ್.ಬಗಲಿ ಮಾತನಾಡಿ, “ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಅದರಲ್ಲೂ ಬಡಕುಟುಂಬದಿಂದ ಶಿಕ್ಷಣ ಕಲಿಯಲು ಬರುತ್ತಿದ್ದು, ಅವರಿಗೆ ಸರಿಯಾಗಿ ಪಾಠ ನಡೆಯುತ್ತಿಲ್ಲ ಇದರಿಂದ ಶೈಕ್ಷಣಿಕ ತೊಂದರೆಯಾಗುತ್ತಿದೆ, ಆದಷ್ಟು ಬೇಗ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಿ ತರಗತಿಗಳು ನಡೆಯುವಂತೆ ಆಗಬೇಕು ತನ್ನ ಹಠಮಾರಿ ಧೋರಣೆ ಬಿಟ್ಟು ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು ಎಂದರು.ವಿದ್ಯಾರ್ಥಿನಿ ಪೂಜಾ ಸಾರವಾಡ ಮಾತನಾಡಿದರು.ಮನವಿ ಸ್ವೀಕರಿಸಿ ಮಾತನಾಡಿದ ಇಂಡಿ…

Read More

ಜಯ್ ನುಡಿ- ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಹದಿ ಹರೆಯದ ವಯಸ್ಸಿನಲ್ಲಿ ನಡೆದಾಡೋ ನೆಲ ಕಾಣೊಲ್ಲ ಅಂತಾರೆ. ಅಂಥ ವಯಸ್ಸಿನಲ್ಲಿ ಹಿರಿಯರ ಮಾತು ಕಿವಿಗೆ ಬೀಳುವುದೂ ಅಷ್ಟಕ್ಕಷ್ಟೆ. ಓದಿನಲ್ಲಿ ಗಮನವಿಲ್ಲದ್ದಕ್ಕೆ ಪಿಯುಸಿ ಅರ್ಧಂಬರ್ಧ. ಗೋತಾ ಹೊಡೆದ ವಿಷಯ ಕಟ್ಟಿ ಪಾಸೋಗೋಕೆ ಮನಸ್ಸಿಲ್ಲ. ಕೆಲಸಕ್ಕೆ ಅಂತ ಅಲ್ಲಿ ಇಲ್ಲಿ ಅಲೆದರೆ ಅನುಭವವೂ ಇಲ್ಲ, ಕೆಲಸಕ್ಕೆ ಅಗತ್ಯವಿರುವ ಶಿಕ್ಷಣವೂ ಇಲ್ಲ ಅಂತ ಯಾರೂ ಕೆಲಸ ಕೊಡುವುದಿಲ್ಲ. ಒಂದುವೇಳೆ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಅವು ಮನಸ್ಸಿಗೆ ಹಿಡಿಸಲ್ಲ. ಕಲಿತಿದ್ದೇ ಕಡಿಮೆ ಅಂದ ಮೇಲೆ ಒಳ್ಳೆಯ ಸಂಬಳವನ್ನು ನಿರೀಕ್ಷಿಸುವ ಹಾಗಿಲ್ಲ. ಹೋಗಲಿ ಏನಾದರೂ ವ್ಯಾಪಾರ ಮಾಡೋಣ ಅಂದರೆ ಮೂರು ಹೊತ್ತಿನ ಊಟಕ್ಕೆ ಲಾಟರಿ ಹೊಡೆಯುವ ಸ್ಥಿತಿಯಲ್ಲಿ ಅದು ಸಾಧ್ಯವಿರದ ಮಾತು. ಆರಕ್ಕೇರದ ಮೂರಕ್ಕಿಳಿಯದ ಆರ್ಥಿಕ ಸ್ಥಿತಿಯಲ್ಲಿ ಬಂಡವಾಳ ಹೊಂದಿಸುವುದು ಕಷ್ಟ. ಹೀಗೆ ದಿಕ್ಕು ತಪ್ಪಿದ ಮನೋ ಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚದೇ ದುಡ್ಡಿನ ಹಿಂದೆ ಅಲೆಯುತ್ತ ಇಸ್ಪಿಟ್ ಕ್ರಿಕೆಟ್ ಬೆಟ್ಟಿಂಗ್‌ನಂಥ ದಂಧೆಯಲ್ಲಿ ಸಿಲುಕಿಕೊಂಡು ನರಳುವುದು.…

Read More

ವ್ಯಂಗೋತ್ಸವ- ಶ್ರೀನಿವಾಸ ಜಾಲವಾದಿ, ಸುರಪುರ ‘ಬಾರಯ್ಯ ಗುಂಡಯ್ಯ, ಈಗಿನ ಬಾತ್ಮಿ ಬೋಲ’ ಅಂತ ಬಾಶಾ ಕರೆದ’ಏನು ಬಾತ್ಮಿನೋ ಏನೊ, ಎಲ್ಲಾ ಬರೇ ನೋಟಿಂದೇ ಸುದ್ದಿ ಆಗೇತಿ’ ಅಂದ ಗುಂಡ್ಯಾ’ಏನಲೇ ತಮ್ಮಾ ಅದು? ನೋಟು ಪ್ರಿಂಟ ಮಾಡೂ ಮಶೀನ ಕೊಟ್ಟಾರೆನು ಎಲ್ಲಾರಿಗೆ?’ ಅಂದ ಕಾಕಾ’ಏ ಇಲ್ಲೋ ಯಪ್ಪಾ ತಂದೆ, ಒಬ್ಬಂವಾ ಸಾಹು ಅಂತ ಎಂಪಿ ಮನ್ಯಾಗ 300 ಕೋಟಿಕ್ಕಿಂತ ಹೆಚ್ಚಿಗಿ ಸಿಕ್ಕಾವಂತ ರೊಕ್ಕಾ’ ಅಂದಳು ರಾಣಿ’ಯಾರಿಗಿ?’ ಅಂದ ಶೌರಿ’ಅದೇ, ಮತ್ಯಾರಿಗಿ ಇಡಿ ಅವರಿಗಿ’ ಅಂದ ಗುಡುಮ್ಯಾ’ಹಂಗಾರ ನಾವು ಅಲ್ಲಿಗೆ ಹೋಗಿ ಒಂದೀಟು ಬಳಕೊಂಡ ಬರಾಮೇನು?’ ಕೇಳಿದ ಆಸೆಯಿಂದ ರಬಡ್ಯಾ’ಅಲ್ಲಿ ಹ್ವಾದೆಂದ್ರs, ನಿನ್ನೂ ಒಳಗ ಹಾಕ್ಕಾರು’ ಅಂತ ಬೆದರಿಕೆ ಹಾಕಿದ ಗುಂಡ್ಯಾ’ಏ, ನಾವೇನ ತಪ್ಪ ಮಾಡೇವಿ ಅಂತ ಒಳಗ ಹಾಕ್ತಾರ?’ ಅಂತಂದ ರಬಡ್ಯಾ’ಏನಪಾ ತಿಳ್ಕ ನೀ, ಏನರೇ ತಪ್ಪ ಮಾಡಿದ್ರs ಅಷ್ಟ ಒಳಗ ಹಾಕಬೇಕಂತ ಏನಿಲ್ಲಾ’ ಅಂತ ನಕ್ಕ ಗುಂಡ್ಯಾ’ಹಂಗಾರ ಈಗ ಒಳಗ ಇದ್ದವ್ರು ತಪ್ಪ ಮಾಡೇ ಇಲ್ಲೇನ?’ ಅಂದಳು ರಾಶಿ’ಅವರು ಸ್ವಲ್ಪ ಮಾಡಿರ್ತಾರು,…

Read More

ವೃಕ್ಷಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತ ಕೋರ್ ಕಮೀಟಿ ಸಭೆ ವಿಜಯಪುರ: ಡಿ.24 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2023ಕ್ಕೆ ತಾಂತ್ರಿಕ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, 5 ಕಿ.ಮೀ, 10 ಕಿ.ಮೀ ಮತ್ತು 21 ಕಿ.ಮೀ ಓಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಓಟದ ಭಾವಚಿತ್ರಗಳು ನೇರವಾಗಿ ಅವರ ಇ-ಮೇಲ್‌ಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಇಂದು ಬುಧವಾರ ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ನಡೆದ ಕೋರ್ ಕಮೀಟಿ ಸಭೆಯಲ್ಲಿ ಅವರು ಮಾತನಾಡಿದರು.ಈ ಓಟದಲ್ಲಿ ಪಾಲ್ಗೊಳ್ಳುತ್ತಿರುವ ಫೇಸರ್, ಅಂಬಾಸೀಡರ್ ಮತ್ತು ಪ್ರಮುಖ ಕ್ರೀಡಾಪಟುಗಳು ಈ ಬಾರಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ. ಅಲ್ಲದೇ, ಕ್ರೀಡಾಪಟುಗಳು ಓಡುವ ಮಾರ್ಗದಲ್ಲಿ ಅಲ್ಲಲ್ಲಿ ನಾನಾ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಸಂಗೀತ ಮತ್ತು ನೃತ್ಯ ಪ್ರದರ್ಶನ ಮೂಲಕ ಓಟಗಾರರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಕೋರ್ ಕಮೀಟಿಯ ಎಲ್ಲ ಪದಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಹೆರಿಟೇಜ್ ರನ್‌ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.…

Read More