Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಜ.೪ ರಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆಯ ಟ್ಯಾಲೆಂಟ್ ಡೆವಲಪ್ಮೆಂಟ್ ಸೆಂಟರ್ (ಭಾರತೀಯ ವಿಜ್ಞಾನ ಸಂಸ್ಥೆ) ನಲ್ಲಿ ನಡೆಯುವ ೧೦ ದಿನಗಳ ವಿಜ್ಞಾನ ತರಬೇತಿಗೆ ತಾಲೂಕಿನಿಂದ ಮುದ್ದೇಬಿಹಾಳ ಸರ್ಕಾರಿ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಎ.ಎಸ್.ಬಾಗವಾನ ಆಯ್ಕೆಯಾಗಿದ್ದಾರೆ.
ಮುದ್ದೇಬಿಹಾಳ: ಪಟ್ಟಣದ ಮೆಹಬೂಬ ನಗರದ ಸರಕಾರಿ ರ್ದು ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಅವರ ೧೯೩ ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಈ ವೇಳೆ ಮುಖ್ಯೋಪಾಧ್ಯಾಯ ಎ.ಸಿ.ಕೆರೂರ ಮಾತನಾಡಿ, ಮದುವೆಯ ಸಮಯದಲ್ಲಿ ಸಾವಿತ್ರಿಬಾಯಿ ಅನಕ್ಷರಸ್ಥರಾಗಿದ್ದರು. ತೋಟದಲ್ಲಿ ಕೆಲಸ ಮಾಡುತ್ತ ಶಿಕ್ಷಣ ಪಡೆದು ಮೊದಲ ಭಾರತೀಯ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯನಿಯಾಗಿ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದವರು. ಅವರ ಆರ್ಶಗಳನ್ನು ಇಂದಿನ ವಿದ್ಯರ್ಥಿಗಳು ಪಾಲಿಸಬೇಕು ಎಂದರು.ಕರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಎಲ್.ಎಮ್.ನಾಯ್ಕೋಡಿ ವಹಿಸಿದ್ದರು. ರೇಣುಕವ್ವ ಎಸ್.ಬಿ, ತಬಸ್ಸುಮ್ ಖಾಜಿ, ಯಾಸ್ಮೀನ ಮುಲ್ಲಾ, ವಿದ್ಯರ್ಥಿಗಳು ಸೇರಿದಂತೆ ಮತ್ತೀತರರು ಇದ್ದರು. ಕೆ.ಎಸ್.ಚಟ್ಟಿ ಸ್ವಾಗತಿಸಿದರು. ಸಂತೋಷ ಕುಮಾರ ವಂದಿಸಿದರು.
ಮುದ್ದೇಬಿಹಾಳ: ಸಿದ್ದೇಶ್ವರ ಶ್ರೀ ಗಳು ತಮ್ಮ ಜೀವನವನ್ನು ಸರಳವಾಗಿ ನಡೆಸುವ ಮೂಲಕ ಇಡೀ ಜಗತ್ತಿಗೇ ಮಾದರಿಯಾದರು ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರೀಗಳು ಜಗತ್ತಿನ ದೊಡ್ಡ ದಾರ್ಶನಿಕರು. ಮುದ್ದೇಬಿಹಾಳದೊಂದಿಗೆ ಅವರು ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.ಸಾಹಿತಿ ಚಂದ್ರಶೇಖರ ಇಟಗಿ, ವಚನ ಸಾಹಿತಿ ಆರ್.ಜಿ.ಕಿತ್ತೂರ, ಉಪನ್ಯಾಸಕ ಪರಶುರಾಮ ಚೌಡಕೇರ, ಬಳಗದ ಅಧ್ಯಕ್ಷ ರವಿ ಗೂಳಿ ಮಾತನಾಡಿ, ಶ್ರೀಗಳ ಜೀವನವೇ ನಮಗೆ ಮಾದರಿ. ಅವರು ಮಾತಿಗಿಂತ ಕೃತಿ ಲೇಸೆಂದು ಬದುಕಿದವರು. ಬುದ್ಧನ ಜ್ಞಾನ, ಮಹಾತ್ಮಾ ಗಾಂಧಿಯವರ ಸರಳತೆ, ಮಾನವ ಜೀವನ ಪ್ರೀತಿ ಅಳವಡಿಸಿಕೊಂಡಿದ್ದರು. ಜನಸಾಮಾನ್ಯರ ಅರಿವಿನ ಮಿತಿಗೆ ಸಿಗದ ಶ್ರೇಷ್ಠ ಯತಿಗಳಾಗಿದ್ದರು. ಆಧ್ಯಾತ್ಮಿಕ ಸಂದೇಶದೊಂದಿಗೆ ಪ್ರಕೃತಿ, ಕಲೆ, ಸಾಹಿತ್ಯ ಕುರಿತು ಅಪಾರ ಜ್ಞಾನದ ಆಗರವಾಗಿದ್ದರು. ನಾವು…
ಆಲಮಟ್ಟಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಬುಧವಾರ ರಾತ್ರಿ ರೈಲೊಂದರ ಆಗಮನದ ಕುರಿತಾಗಿ ಪ್ರಕಟಿಸಿದ ದ್ವನಿ ಮುದ್ರಿತ ಆನೌನ್ಸ್ ಗೊಂದಲಮಯದಿಂದ ಸಾಕಷ್ಟು ರೈಲ್ವೆ ಪ್ರಯಾಣಿಕರು ಗಲಿಬಿಲಿಗೊಂಡು ಕಕ್ಕಾಬಿಕ್ಕಯಾದ ಘಟನೆ ನಡೆಯಿತು. ರೈಲು ಯಾವ ಪ್ಲಾಟ್ ಫಾರ್ಮ್ ದಲ್ಲಿ ಬರುತ್ತದೆ ಎಂದು ಪ್ರಯಾಣಿಕರು ಪರಸ್ಪರ ವಿಚಾರಿಸುತ್ತಿದ್ದಾಗಲೇ ಕತ್ತಲೆಯಲ್ಲಿ ಆ ರೈಲು ಹೆಡ್ ಲೈಟ್ ಬೆಳಕಿನೊಂದಿಗೆ ಹಾನ್೯ದ ಕರ್ಕಶ್ ಶಬ್ದ ಕೂಕಾಕುತ್ತಾ ಪ್ಲಾಟ್ ಫಾರ್ಮ್ ಒಳಗೆ ಏಂಟ್ರಿ ಕೊಟ್ಟಿತ್ತು. ರೈಲು ಆಗಮಿಸುತ್ತಿರುವ ದೃಶ್ಯ ಕಂಡು ಪ್ರಯಾಣಿಕರು ಹೌಹಾರಿದರು. ಗಾಬರಿಗೊಂಡು ಅತ್ತಂದಿತ್ತ ರೈಲ್ವೆ ಮೇಲ್ಸೇತುವೆ ಏರಿಳಿದು ಸುಸ್ತಾದರು. ಸಖತ್ ಹೈರಾಣಕ್ಕಿಡಾಗಿ ಫಜೀತಿಗೊಂಡರು.ಹುಬ್ಬಳ್ಳಿಯಿಂದ ಗದಗ, ಬಾಗಲಕೋಟ, ಮೂಲಕ ಆಲಮಟ್ಟಿ ಮಾರ್ಗವಾಗಿ ವಿಜಯಪುರ ಹಾಗೂ ಸೋಲಾಪೂರಕ್ಕೆ ಹೊರಟಿದ್ದ ಎಸ್.ಎಸ್. ಹುಬ್ಬಳ್ಳಿ-ಸೋಲಾಪುರ ಈ ರೈಲು ಆಲಮಟ್ಟಿ ರೈಲ್ವೆ ಸ್ಟೇಷನ್ ನಲ್ಲಿ ಆಗಮನದ ಕುರಿತಾದ ಆನೌನ್ಸ್ ಪ್ರಯಾಣಿಕರಿಗೆ ಭಾರೀ ಕಿರಿಕಿರಿ,ತಲೆನೋವು ಉಂಟು ಮಾಡಿತು. ಮಧ್ಯದ ಹಳಿಯಲ್ಲಿ ಗೂಡ್ಸ್ ರೈಲೊಂದು ಇದೇ ಸಮಯದಲ್ಲಿ ಬಂದು ನಿಂತಿದ್ದರಿಂದ ಮತ್ತಷ್ಟು ಪ್ರಯಾಣಿಕರಿಗೆ ತೊಂದರೆವಾಗಿತ್ತು.ವಯೋವೃದರು,ಚಿಕ್ಕಮಕ್ಕಳು, ಮಹಿಳೆಯರು ತೊಂದರೆ ಪಟ್ಟರು.…
ತ್ರಿಕಾಲಜ್ಞಾನಿ, ಭವರೋಗ ವೈದ್ಯ, ಮಡಿವಾಳಪ್ಪನವರ ೨೦೧ನೇ ಅನುಭಾವ ಜಾತ್ರೆ ತನ್ನಿಮಿತ್ತ ವಿಶೇಷ ಲೇಖನ – ಡಾ.ಸಂತೋಷ ನವಲಗುಂದ, ಮಳ್ಳಿ “ಎಂಥಾ ಕಂಡಾಬಟ್ಟೆ ಸೂಳೆ ಮಕ್ಕಳಿವರೋಸಾಧು ಸಂತರ ಕಂಡರೆ ನಿಂದೆನಾಡ್ತಿಹರೋಅಂಥ ಇಂಥ ಮಾತಿಗೆ ಹಾಯ್ ಹಾಯ್ ಎಂಬುವರೋಇವರ ಅಂತ ತಿಳಿಯದೆ ಸುಳ್ಳೆ ಸತ್ತು ಹೋಗುವರೊ || ದೊಡ್ಡ ಕಾಮಧೇನು ಸ್ನೇಹ ಮಾಡವಲ್ಲರೋ ಖಾಲಿಗೊಡ್ಡಾಕಳ ಹಿಂಡಿ ಕೈ ಮುರಿದು ಕೊಂಬುವರೊಗುಡ್ಡದ ಮಹಾಂತನ ಗುರ್ತು ಅರಿಯಲ್ಲರೋ | ಇಂಥದಡ್ಡ ಸೂಳೆ ಮಕ್ಕಳನ್ನು ಯಾರು ಕೇಳುವರೋ”ಸಾಧು-ಸತ್ಪುರುಷರಿಗೆ ಸಮಾಜದಲ್ಲಿನ ಕುಹಕಿಗಳು ನಿಂದೆಯನಾಡುವ ಪರಿಗೆ ಕಡಕೋಳದ ಮಡಿವಾಳಪ್ಪನವರು ಕೊಡುವ ತತ್ವದುತ್ತರ ಕನ್ನಡದ ಇನ್ನಾವ ಸಾಹಿತ್ಯದಲ್ಲಿ ಕಾಣುವುದು ವಿರಳ. ಕನ್ನಡ ನಾಡು ಆಯಾ ಕಾಲಘಟ್ಟದಲ್ಲಿ ಭಿನ್ನ ಪ್ರದೇಶ, ಭಿನ್ನ ಸನ್ನಿವೇಶಗಳಲ್ಲಿ ಸಾಹಿತ್ಯದ ಹುಟ್ಟು ಪಡೆದುಕೊಂಡಿದೆ. ಅಂತೆಯೇ, ೧೮ನೇ ಶತಮಾನದಲ್ಲಿ ರಚನೆಯಾದ ತತ್ವಪದ ಸಾಹಿತ್ಯ ಕನ್ನಡ ಸಾಹಿತ್ಯದ ಸಿರಿವಂತಿಕೆ ಹೆಚ್ಚಿಸುವುದಷ್ಟೇ ಅಲ್ಲದೇ; ಗಟ್ಟಿ ನೆಲೆಯೂ ಒದಗಿಸಿದೆ.ಢಾಂಬಿಕತನಕ್ಕೆ ಬಲುಬೇಗ ನೆಚ್ಚುವ ಜನರು ನಿಜದ ಅರಿವು ಹೊಂದದೇ ವ್ಯರ್ಥ ಕಾಲಹರಣ ನಡೆದಿದೆ ಎಂಬುದು ಮಡಿವಾಳಪ್ಪನವರು ಸೂಚ್ಯವಾಗಿ…
Udayarashmi kannada daily newspaper
ಇಂದು ಸಾವಿತ್ರಿಬಾಯಿ ಫುಲೆ ಜನ್ಮದಿನದ ವಿಶೇಷ ಲೇಖನ – ಕಬೂಲ್ ಕೊಕಟನೂರಶಿಕ್ಷಕರು, ದೇವರಹಿಪ್ಪರಗಿ ಮೊ.೯೯೭೨೧೧೫೫೦೨ ನಹೀಜ್ಞಾನೇನ ಸದೃಶಂ ಎನ್ನುವಂತೆ ಜ್ಞಾನಕ್ಕಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಾಣಿಯಂತೆ ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು, ಪರುಷ ಸಮಾಜದಲ್ಲಿ ಸರಿಸಮಾನವಾಗಿ ಬೆಳೆಯಲು ಶಿಕ್ಷಣದಿಂದಲೇ ಮಾತ್ರ ಸಾಧ್ಯವೆಂದು ಸಾರಿದ ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಶಿಕ್ಷಕಿಯಾಗಿದ್ದಾರೆ. ಇಂಡಿಯಾಸ್ ಫಸ್ಟ್ ಲೆಡಿಸ್ ಟೀಚರ್ ಎಂದು ಬ್ರೀಟಿಷರಿಂದ ಬಿರುದು ಪಡೆದು ಸ್ತ್ರೀಯರ ಶಿಕ್ಷಣಕ್ಕಾಗಿ ಇಡೀ ಜೀವಮಾನ ಸವೆಸಿದವರಲ್ಲಿ ಅಗ್ರಜರಾಗಿದ್ದಾರೆ. ಜನೇವರಿ ೦೩ ಇವರ ಜಯಂತಿಯಂದು ನಾವೆಲ್ಲ ಸ್ಮರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ.*ಸಾವಿತ್ರಿಬಾಯಿ ಪುಲೆಯವರ ಬಾಲ್ಯ ಜೀವನ*ಮಹಿಳಾ ಲೋಕದ ಮಾಣಿಕ್ಯವೆಂದೆನಿಸಿಕೊಂಡ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಹತ್ತೊಂಬತ್ತನೇ ಶತಮಾನದ ಭಾರತದ ಪ್ರಸಿದ್ಧ ಸಮಾಜ ಸುಧಾರಕಿ, ಕವಿ ಮತ್ತು ಶಿಕ್ಷಣತಜ್ಞರಾಗಿದ್ದರು. ಮಹಿಳಾ ಶಿಕ್ಷಣ, ಲಿಂಗ ಮತ್ತು ಜಾತಿ ಸಮಸ್ಯೆಗಳ ವಿರುದ್ಧ ಹೋರಾಡುವ ಅಪಾರ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದರು. ಪುರುಷ ಸಮಾಜದಲ್ಲಿ ಮೆಟ್ಟಿ ನಿಂತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಭಾರತೀಯ…
ಕೊಲ್ಹಾರ: ವಿದ್ಯಾರ್ಥಿಗಳ ಹಾಗೂ ಮನುಷ್ಯನ ಜೀವನದಲ್ಲಿ ಅವಕಾಶಗಳು ಪದೇ ಪದೇ ಬರುವದಿಲ್ಲ. ಸಿಕ್ಕ ಅವಕಾಶ, ದೊರೆತ ಸ್ಪೂರ್ತಿಯನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಂಡು ಸಮಾಜದಲ್ಲಿ ಪ್ರತಿಭಾನ್ವಿತ ಪ್ರತಿಭೆಗಳಾಗಿ ಬದುಕುವದನ್ನು ನಾವು ಎಂದೂ ಕಳೆದುಕೊಳ್ಳಬಾರದು ಎಂದು ನಿವೃತ್ತ ಮುಖ್ಯಗುರು ಬಿ.ಎಸ್. ಹಂಗರಗಿಸಂಸ್ಕಾರ, ಸಂಸ್ಕೃತಿ, ಹೇಳಿದರು.ಪಟ್ಟಣದ ಸಮೀಪದ ಗಡ್ಡಿ ರಾಚೋಟೇಶ್ವರ ದೇವಸ್ಥಾನದಲ್ಲಿ ಕೊಲ್ಹಾರ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.ಸಮಾಜದಲ್ಲಿ ಬೆಳೆಯುವ ಮಕ್ಕಳಿಗೆ ಒಳ್ಳೆಯ ಪರಿಸರವನ್ನು ಆಧುನಿಕ ತಂತ್ರಜ್ಞಾನದ ಶಿಕ್ಷಣ ಕಲಿಕಾ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿ, ನಡೆ-ನುಡಿ, ಆಚಾರಗಳನ್ನು ನಾವು ಮಕ್ಕಳಲ್ಲಿ ಬೆಳೆಸಬೇಕು ಎಂದರು.ಪಟ್ಟಣದ ವೈದ್ಯ ಅರುಣ ಗಾಣಿಗೇರ ಮಾತನಾಡಿದರುತಾಲೂಕಿನಿಂದ ಗಾಣಿಗ ಸಮಾಜದ ಒಟ್ಟು ೧೧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಾನಿಧ್ಯವನ್ನು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ವಹಿಸಿದ್ದರು. ನೌಕರರ ಸಂಘದ ತಾಲೂಕಾ ಅಧ್ಯಕ್ಷ ಪುಂಡಲಿಕ ಬಸರಕೋಡ…
ಇಂಡಿ: ರಿಪಬ್ಲಿಕನ ಪಾರ್ಟಿ ಆಪ್ ಇಂಡಿಯಾ(ಅಂಬೇಡ್ಕರ) ಘಟಕದ ಇಂಡಿ ತಾಲ್ಲೂಕಿನ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇಂಡಿ ಜಿಲ್ಲೆ ಆಗಬೇಕೆಂದು ಪ್ರತಿಭಟನೆ ನಡೆಸಿ ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳರವರಿಗೆ ಮನವಿ ಸಲ್ಲಿಸಿದರು.ಈ ವೇಳೆ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ ಮಾತನಾಡಿ, ಇಂಡಿ ತಾಲೂಕು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ತೀರ ಹಿಂದುಳಿದ ಪ್ರದೇಶಗಳಲ್ಲೊಂದಾಗಿದ್ದು, ಇಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಇನ್ನು ಪ್ರಗತಿ ಕಾಣಬೇಕಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆಗೆ ಸಂಬಂದಿಸಿದಂತೆ ಜಿಲ್ಲೆಗೆ ಬೇಕಾಗಿರುವ ಪೂರಕ ಅಂಶಗಳು ಸಾಕಷ್ಟು ಇರುತ್ತವೆ, ಅದರಂತೆ ಹಲವಾರು ವರ್ಷಗಳಿಂದ ಅಭಿವೃದಿ ಕಾಣದೆ ತೀರ ಹಿಂದುಳಿದ ಗಡಿ ಭಾಗವಾಗಿದ್ದು ಅಭಿವೃದ್ಧಿಗಾಗಿ ಸದರ ಇಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು. ಸಂವಿಧಾನ ವಿಧಿ ೩೭೧ (ಜೆ) ಗೆ ಸೇರ್ಪಡೆ ಹಕ್ಕೋತಾಯ ಮಾಡುತ್ತಾ ಸೂಕ್ತ ನಿರ್ಣಯ ಕೈಗೊಂಡು ಇಂಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.ರಾಮಚಂದ್ರ ಕಾಂಬಳೆ, ವಿಶ್ವನಾಥ ವಾಘ್ಮೋರೆ, ಸುರೇಶ ಕಾಂಬಳೆ, ಪರಶುರಾಮ ಭಾವಿಕಟ್ಟಿ,…
ಇಂಡಿ: ಭಾರತೀಯ ಶಿಲ್ಪಕಲೆಗೆ ಜಕಣಾಚಾರಿ ಅವರ ಕೊಡುಗೆ ಅನನ್ಯ. ಕನ್ನಡ ಶಿಲ್ಪಕಲೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬೇಲೂರು ಹಳೆಬೀಡಿನಲ್ಲಿ ಕಲ್ಲಿನಿಂದ ಶಿಲ್ಪಕಲೆಯನ್ನು ಕೆತ್ತಿ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.ಕರ್ನಾಟಕವು ಶಿಲ್ಪಕಲೆಯ ತವರೂರು. ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಅಮರಶಿಲ್ಪಿ ಜಕಣಾಚಾರಿ ಅವರ ಶ್ರೇಷ್ಠ ಕೆತ್ತನೆಗಳೇ ಇದಕ್ಕೆ ಸಾಕ್ಷಿ. ಸಾಹಿತ್ಯ, ಸಂಗೀತ, ನಾಟ್ಯ, ವಾಸ್ತುಶಿಲ್ಪವು ಭಾರತೀಯ ಸಂಸ್ಕೃತಿಯ ಪ್ರತೀಕ. ವಾಸ್ತುಶಿಲ್ಪ ಕಲೆಯನ್ನು ಅಜರಾಮರಗೊಳಿಸಿದ ಕೀರ್ತಿ ಜಕಣಾಚಾರಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಸ್ಮರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಶಿಕ್ಷಕ ಎಸ್.ಎಸ್. ಅರಬ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕ ಎ.ಎಂ. ಬೆದ್ರೇಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಶಿಕ್ಷಕಿ ಎಸ್.ಪಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು.
