ಬ್ರಹ್ಮದೇವನಮಡು: ಸಿಂದಗಿ ಮತಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ಕಾಯ೯ಕತ೯ರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎಂ.ಪಿ.ರಾಠೋಡ(ಡಂಬಳ) ಆರೋಪಿಸಿದ್ದಾರೆ.
ಈ ಕುರಿತು ಮಂಗಳವಾರ ಪತ್ರಿಕೆ ಹೇಳಿಕೆ ನೀಡಿರುವ ಅವರು, ತಾಲೂಕಿನಲ್ಲಿ ಮೂಲ ಕಾಂಗ್ರೆಸೀಗರಿಗೆ ಯಾವುದೇ ರೀತಿಯ ಕಿಮ್ಮತ್ತಿಲ್ಲ. ಸಕಾ೯ರದ ನಾಮ ನಿದೇ೯ಶನ ಮಾಡುವುಲ್ಲಿ ಮೂಲ ಮತ್ತು ನಿಷ್ಠಾವಂತ ಕಾಂಗ್ರೆಸೀಗರಿಗೆ ಬೆಲೆ ಇಲ್ಲದಂತಾಗಿದೆ. ತಮ್ಮ ಹಿಂಬಾಲಕರನ್ನೇ ನಾಮನಿದೇ೯ಶನ ಮಾಡಿದ್ದಾರೆ. ಅಲ್ಲದೇ,ಲಂಬಾಣಿ ಸಮಾಜದ ಅಭಿವೃದ್ದಿಗೆ ಬಗ್ಗೆ ಸ್ವಲ್ಪವು ಕಾಳಜಿ ಮಾಡುತ್ತಿಲ್ಲ. ಸಿಂದಗಿಯಲ್ಲಿ ಶಾಸಕ ಅಶೋಕ ಮನಗೂಳಿ ಶಾಸಕರಾಗಲು ಕೇವಲ ಜೆಡಿಎಸ್ ನಿಂದ ವಲಸೆ ಬಂದವರು ಮಾತ್ರ ಮತ ಹಾಕಿದ್ದಾರೆಯೇ ? ಹಿಂದುಳಿದವರು – ಮುಸ್ಲಿಂ, ದಲಿತರು, ಲಂಬಾಣಿಗರು ಸೇರಿದಂತೆ ಎಲ್ಲ ಜಾತಿ ಜನಾಂಗದ ಜನತೆ ತಮಗೆ ಮತ ಹಾಕಿದ್ದನ್ನು ಮರೆಯಬಾರದು. ಪಕ್ಷದ ಕಾಯ೯ಕತ೯ರನ್ನು ವಿಶ್ವಾಸಕ್ಕೆ ತಗೆದುಕೊಂಡು ಅಧಿಕಾರ ಮಾಡುಬೇಕು. ಇಲ್ಲದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತೆ ಎಂದು ರಾಠೋಡ ಎಚ್ಚರಿಕೆ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

